ಶ್ರೀನಿವಾಸಪುರ : ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲಿನಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ ಈಗಿನ ಕಾಲದ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಬಿಟ್ಟು ಮೊಬೈಲ್ ನೋಡುವುದರಲ್ಲಿ ನಿರತರಾಗಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಫಲಿತಾಂಶ ಕುಂಠಿತಗೊಳ್ಳುತ್ತದೆ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಮೊಬೈಲ್ ಭೂತದಿಂದ ಬಿಡಿಸಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಕರೆ ನೀಡಿದರು. ಕೋಮುಲ್ ನೂತನ ನಿರ್ದೇಶಕ ಕೆ ಕೆ ಮಂಜುನಾಥ ರೆಡ್ಡಿ ಮಾತನಾಡುತ್ತಾ ಕ್ರೀಡೆಗಳಿಂದ […]
ಶ್ರೀನಿವಾಸಪುರ : ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಸೋಮವಾರ ಹಾಲು ಉತ್ಪಾದಕರಿಗೆ ರಾಸು ವಿಮಾ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಯಲ್ಲೂರು ಕ್ಷೇತ್ರದ ನಿರ್ದೇಶಕರಾದ ಎನ್. ಹನುಮೇಶ್ ಅವರು ಮಾತನಾಡಿ, “ಎಲ್ಲಾ ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ವಿಮಾ ಪರಿಹಾರ ಪಡೆದ ಫಲಾನುಭವಿಗಳು ಇನ್ನು ಮುಂದೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘಗಳ ಬೆಳವಣಿಗೆಗೆ ಸಹಕಾರ […]
ಶ್ರೀನಿವಾಸಪುರ : ಇಂಜನೀಯರ್ಗೆ, ಡಾಕ್ಟರ್ಗೆ ಅವರದೇ ಆದ ಗುರಿ ಇರುತ್ತದೆ ಹಾಗೆ ನಿಮ್ಮಲ್ಲೂ ಒಂದು ಗುರಿ ಇರಬೇಕು ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಂದು ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ. ಆರ್.ಕುಲಕರ್ಣಿ ಹೇಳಿದರು.ಪಟ್ಟಣದ ಎಲ್ಐಸಿ ಉಪಶಾಖೆಯಲ್ಲಿ ಗುರುವಂದನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.ಭವಿಷ್ಯದ ದೃಷ್ಟಿಯಿಂದ ಎಲ್ಐಸಿ ಪ್ರತಿನಿಧಿಗಳು ಜೀವ ವಿಮೆ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಪಾಲಸಿದಾರರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಅವರ ವಿಶ್ವಾಸ ಗಳಿಸಬೇಕು.ಎಲ್ಐಸಿ ಉಪಶಾಖ ವ್ಯವಸ್ಥಾಪಕಿ ಡಿ.ಎಂ.ವಿಜಯಕುಮಾರಿ ಮಾತನಾಡಿ ನಮ್ಮ ದೇಶದ ಸಂಸ್ಕøತಿಯಲ್ಲಿ ತಾಯಿ, […]
ಶ್ರೀನಿವಾಸಪುರ: ಚುಂಚದೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ, ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸಲಕರಣೆ ವಿತರಣಾ ಸಮಾರಂಭವನ್ನು ಬಿಆರ್ಪಿ ರಶ್ಮಿ ಹಾಗೂ ಸೀಗೆಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ಉದ್ಘಾಟಿಸಿದರು.ಚುಂಚದೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಸೀಗೆಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯ ವಿತರಿಸಿದರು.ಉತ್ತಮ ಅಂಕದೊಂದಿಗೆ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಿ ವಿದ್ಯಾರ್ಥಿಗಳು ಅಧಿಕ ಅಂಕ […]
ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಉರ್ದು ಮತ್ತು ಇಂಗ್ಲಿಷ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ವತಿಯಿಂದ ಸುಮಾರು 200 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ಗಳು ಹಾಗೂ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಎಂ.ಪಿ ಫ್ರೂಟ್ಸ್ ಮಾವು ಮಂಡಿ ಮಾಲೀಕ ಅಬ್ದುಲ್ ಮಜೀದ್ ಉರ್ಫ್ ಅಫ್ಸರ್ ಪಾಷಾ ಅವರು ಮಾತನಾಡುತ್ತಾ, ಈ ಶಾಲೆಯನ್ನು ‘ಮೌಲಾನಾ ಆಜಾದ್ ಪಬ್ಲಿಕ್ ಶಾಲೆ’ಯಾಗಿ ಉನ್ನತೀಕರಿಸುವ ಕುರಿತು ಸಂಬಂಧಪಟ್ಟ […]
ಮೌಲಾನಾ ಆಜಾದ್ ಮಾದರಿ ಶಾಲೆಯಾಗಿ ಘೋಷಿಸಲು ಮನವಿ; ಶಿಕ್ಷಕರ ಕೊರತೆ, ಮೂಲಸೌಕರ್ಯ ದುರಸ್ಥಿ ಅಗತ್ಯ ಶ್ರೀನಿವಾಸಪುರದಲ್ಲಿ ಉರ್ದು ಶಾಲೆಯ ಉನ್ನತೀಕರಣಕ್ಕೆ ಪೋಷಕರ ಜೋರಾದ ಆಗ್ರಹ ಮೌಲಾನಾ ಆಜಾದ್ ಮಾದರಿ ಶಾಲೆಯಾಗಿ ಘೋಷಿಸಲು ಮನವಿ; ಶಿಕ್ಷಕರ ಕೊರತೆ, ಮೂಲಸೌಕರ್ಯ ದುರಸ್ಥಿ ಅಗತ್ಯ ಶ್ರೀನಿವಾಸಪುರ : ಪಟ್ಟಣದಲ್ಲಿನ ಡಾ. ಜಾಕಿರ್ ಹುಸೇನ್ ಮೊಹಲ್ಲಾ ಪ್ರದೇಶದಲ್ಲಿರುವ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹಿರಿದು ಪ್ರಾಥಮಿಕ ಶಾಲೆಯನ್ನು ಮೌಲಾನಾ ಆಜಾದ್ ಮಾದರಿ ಶಾಲೆಯಾಗಿ ಉನ್ನತೀಕರಿಸಲು ಸ್ಥಳೀಯ ಪೋಷಕರು, ಸಮುದಾಯದ ಮುಖಂಡರು ಹಾಗೂ […]
ಶ್ರೀನಿವಾಸಪುರ : ಇಲ್ಲಿ ಅನೇಕ ದಲಿತರು , ಕಡುಬಡ ರೈತರು ಇದ್ದು, ಭೂಮಿ ಸರ್ಕಾರಕ್ಕೆ ನೀಡಿದರೆ ನಿರ್ಗತಿಕರು ಆಗುವುದು ಖಚಿತವಾಗಿದೆ. ಈ ಹಿಂದೆ ನಡೆದ ಸಭೆಯಲ್ಲಿ ರೈತರು ನಾನು ಭೂಮಿಯನ್ನ ಕೊಡುವುದಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಈವತ್ತು ಸಹ ಅಷ್ಟೆ. ನಾವು ಯಾರು ಬ್ರೋಕರ್ಸ್ ಅಲ್ಲ. ಇಲ್ಲಿಗೆ ರಾಜಕಾರಣ ಮಾಡಲು ಬಂದಿಲ್ಲ. ನಾನು ಎರಡು ವರ್ಷ ಮೂರು ತಿಂಗಳಿನಿಂದ ಹೊರ ಬಂದಿಲ್ಲ. ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು .ತಾಲೂಕಿನ ಯದರೂರು ಗ್ರಾಮದಲ್ಲಿ ಶುಕ್ರವಾರ ಕೈಗಾರಿಕಾ ವಲಯ ಸ್ಥಾಪಿಸಲು […]
ಕೋಲಾರ.ಜು.16: ಜಿಲ್ಲೆಯಲ್ಲಿನ ಸಣ್ಣ, ಅತಿ ಸಣ್ಣ ಮತ್ತು ದಲಿತ ರೈತರು ಅನಧಿಕೃತವಾಗಿ ರೆವಿನ್ಯೂ ಇಲಾಖೆಯಿಂದ ಮಂಜೂರಾಗಿರುವ ಜಮೀನುಗಳ ಮೇಲೆ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿರುವ ಹಣವನ್ನು ಬಂಡವಾಳ ಹಾಕಿ ಅಭಿವೃದ್ಧಿ ಪಡಿಸುತ್ತಾರೆ. ಒಂದಲ್ಲ ಒಂದು ದಿನ ಆ ಜಮೀನು ಅವರದಲ್ಲ ಎಂದು ಗೊತ್ತಾದಾಗ ಅವರನ್ನು ಯಾರೂ ಉಳಿಸಲಿಕ್ಕಾಗುವುದಿಲ್ಲ. ಇದು ನಾವು ಅವರಿಗೆ ಮಾಡುವ ದೊಡ್ಡ ದ್ರೋಹವಾಗುತ್ತದೆ. ಇದನ್ನು ಮನಗಂಡು ಈ ಒಂದು ಹೆಮ್ಮರವಾಗಿ ಬೆಳೆದಿರುವ ಸಮಸ್ಯೆಗೆ ಸಮಗ್ರ ಪರಿಹಾರ ದೊರಕಿಸುವ ಜವಾಬ್ದಾರಿ ಶಾಸಕರುಗಳು, ಅಧಿಕಾರಿಗಳು ಸೇರಿದಂತೆ […]
ಶ್ರೀನಿವಾಸಪುರ : ಕಚೇರಿಯಲ್ಲಿ ಮಾಡುವ ಸಿಬ್ಬಂದಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾಗಿ ನೆಮ್ಮದಿ ಇಲ್ಲದೆ ಇರುತ್ತದೆ. ಆ ಸಮಯದಲ್ಲಿ ದೇವರ ಧ್ಯಾನ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗುಳ್ಳುವುದರಿಂದ ಒಂದಿಷ್ಟು ನೆಮ್ಮದಿ ಸಿಗುತ್ತದೆ ಎಂದು ಆಗಮಿಕ ಕುರುಮಾಕಲಪಲ್ಲಿ ಪ್ರಕಾಶ್ ತಿಳಿಸಿದರು.ಪಟ್ಟಣ ಬೆಸ್ಕಾಂ ಕಚೇರಿ ಆವರಣದಲ್ಲಿ ಇರುವ ಮಹಾ ಗಣಪತಿ ದೇವಾಲಯದಲ್ಲಿ ಮಂಗಳವಾರ 41 ನೇ ವಾರ್ಷಿಕೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹನ್ಯಾಸ ಪೂರ್ವಕವಾಗಿ ಏಕವಾರ ರುದ್ರಾಭಿಷೇಕ, […]

