ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಕೊಡಮಾಡುವ ಈ ವರ್ಷದ ಡಾ . ಶಾಂತಾರಾಮ ಸಾಹಿತ್ಯ ಪ್ರಶಸ್ತಿ ಶ್ರೀಧರ ಬಳಗಾರ ಅವರ ‘ ಮಾರ ಮಿಂದನು’ ಕಥಾ ಸಂಕಲಕ್ಕೆ ಬಂದಿದೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಗಾರಿನಲ್ಲಿ ಜನಿಸಿದ ಶ್ರೀಧರ ಬಳಗಾರ ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಟೀಚರ್ ಎಜುಕೇಟೆರ್ ಆಗಿ ಪಾಠ ಮಾಡುತ್ತ ಸದ್ಯ ಕುಮಟಾದಲ್ಲಿ ನೆಲೆಸಿದ್ದಾರೆ. ‘ಅಧೋಮುಖ'(1995), ‘ಮುಖಾಂತರ'(1998), ‘ಇಳೆ ಎಂಬ ಕನಸು’ (2003), ಒಂದು ಫೋಟೋದ ನೆಗೆಟಿವ್”(2008), ‘ಈಸಾಡತಾವ ಜೀವ'(2015), ‘ಮಾಲತಿ ಮಾತಾಡಿದಳು'(2023), ‘ಮಾರ ಮಿಂದನು'(2025), […]

Read More

ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಅರ್ಥಪೂರ್ಣ ಗುರು ಪೂರ್ಣಿಮೆ ಆಚರಣೆ ಕುಂದಾಪುರ, ಜುಲೈ 29, 2026: “ಗುರು ಪೂರ್ಣಿಮೆ ಬರುವುದು ಆಷಾಢ ಮಾಸದ ಹುಣ್ಣಿಮೆಯಂದು. ಆಯುರ್ವೇದದ ಪ್ರಕಾರ ಈ ಅವಧಿಯಲ್ಲಿ ವಾತಾವರಣದ ಬದಲಾವಣೆಯಿಂದ ಜಠರಾಗ್ನಿ (ಜೀರ್ಣಶಕ್ತಿ) ಮಂದವಾಗುತ್ತದೆ ಮತ್ತು ದೇಹದಲ್ಲಿ ವಾತ-ಪಿತ್ತ ದೋಷಗಳು ಏರುಪೇರಾಗುತ್ತವೆ. ಇದರಿಂದ ಮೈಕೈ ನೋವು, ಅಜೀರ್ಣ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಇದನ್ನು ಶಮನಗೊಳಿಸಲು ಆಷಾಢದಲ್ಲಿ ಹಗುರವಾದ ಬಿಸಿ ಆಹಾರ, ಕಷಾಯ ಮತ್ತು ಸಾತ್ವಿಕ ಉಪವಾಸದ ಅಗತ್ಯವಿದೆ” ಎಂದು ತಜ್ಞ ಆಯುರ್ವೇದ ವೈದ್ಯರಾದ ಡಾ. […]

Read More

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಸೆಂಟೆನಿಯಲ್‌ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಕದ್ರಿ ಪಾರ್ಕ್ ಸಮೀಪದ ಲಯನ್ಸ್ ಅಶೋಕ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಲಯನ್ ಅಮಲ್ ಮರಿಯಾ ಇಸಬೆಲ್ಲಾ ಕ್ವಾಡ್ರೋಸ್ (PMJF) ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಲಯನ್ ಸ್ವರೂಪ್ ಎನ್. ಶೆಟ್ಟಿ (PMJF) ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪ್ರಮಾಣವಚನ ಬೋಧಿಸಿ, ಐವರು ನೂತನ ಸದಸ್ಯರನ್ನು ಲಯನ್ಸ್ ಕುಟುಂಬಕ್ಕೆ ಸೇರ್ಪಡೆಗೊಳಿಸಿದರು. ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಮುಂದೆಯೂ […]

Read More

ಕುಂದಾಪುರ, ಆ. 1: “ಸೇವೆ ಎಂಬುದು ವೃತ್ತಿಯಲ್ಲ; ಅದು ಬದುಕಿನ ತಪಸ್ಸು.” ಈ ಮಾತಿಗೆ ಜೀವಂತ ಸಾಕ್ಷಿಯಾಗಿರುವ ಕುಂದಾಪುರದ ಹಿರಿಯ ವೈದ್ಯ ಡಾ. ಎಚ್. ರಾಮಮೋಹನ್ ಅವರು ವೈದ್ಯಕೀಯ ಸೇವೆ ಆರಂಭಿಸಿ ಐವತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸುವರ್ಣ ಕ್ಷಣವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ಅವರ ನಿವಾಸ ಹಾಗೂ ಸೇವಾ ಕೇಂದ್ರದಲ್ಲಿಯೇ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. 1976ರಲ್ಲಿ ಆರಂಭವಾದ ಅವರ ವೈದ್ಯಕೀಯ […]

Read More

ಕುಂದಾಪುರ : ಕುಂದಾಪುರ ತಾಲೂಕಿನ ಚರ್ಚ್‌ ರಸ್ತೆಯಲ್ಲಿ ಜು.31 ಶುಕ್ರವಾರ ನಸುಕಿನ ವೇಳೆ ನಡೆದ ಗುಂಡಿಕ್ಕಿ ಐವನ್‌ ರಿಚರ್ಡ್‌ ಮಸ್ಕರೇನಸ್‌ ಯಾನೆ ಮುನ್ನಾ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂದಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು12 ಗಂಟೆಯ ಒಳಗೆ ಉಡುಪಿ ಜಿಲ್ಲಾಎಸ್ಪಿ ನೇತೃತ್ವದಲ್ಲಿ ರಚಿಸಿದ ಪೊಲೀಸರ ವಿಶೇಷ ತಂಡ ಬಂಧಿಸಿದೆ. ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ ಪ್ರಸ್ತುತ ಕುಂದಾಪುರದ ಫ್ಲಾಟ್‌ವೊಂದರಲ್ಲಿ ವಾಸವಿರುವ ಡೆರಿಕ್‌ ಕ್ರಾಸ್ತಾ (55) ಬಂಧಿತ ಆರೋಪಿ. ಅಜೆಕಾರು ಮೂಲದ, ನಂತರ ಹೆಬ್ರಿ ವಾಸಿಸಲು ತೊಡಗಿದ್ದ, ಪ್ರಸ್ತುತ ಬಾರ್ಕೂರು […]

Read More

ಕೆ.ಜಿ ಜಗನ್ನಾಥ್ ರಾವ್ ಸರಕಾರಿ ಪ್ರೌಢಶಾಲೆ ಕೋಣೆಯಲ್ಲಿ ದಿನಾಂಕ 29 /7/ 2026ರಂದು ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯ ಯೋಗಾಸನ ಸ್ಪರ್ಧಿಯು ಯಶಸ್ವಿಯಾಗಿ ನಡೆಯಿತು. ಈ ಸ್ಪರ್ಧೆಯಲ್ಲಿ ತುಳಸಿ ವಿದ್ಯಾಮಂದಿರದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದರು.ವಿದ್ಯಾರ್ಥಿ ಸಾಕ್ಷರ ಆರ್ ಶೆಟ್ಟಿ 9ನೇ ತರಗತಿ ಇವರು ಟ್ರೆಡಿಷನಲ್ ಯೋಗಾಸನದಲ್ಲಿ ಪ್ರಥಮ ಸ್ಥಾನ ಹಾಗೂ ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಸಾಕ್ಷರ ಆರ್ ಶೆಟ್ಟಿ( 9ನೇ) ಸೃಷ್ಟಿ ಶೆಟ್ಟಿ ( 8ನೇ […]

Read More

ಜುಲೈ  31  ರಂದು  ಶಾಲಾ ಸಭಾಂಗಣದಲ್ಲಿ ,   ಸಂಸ್ಥೆಯ  ಸ್ಥಾಪಕರಾದ  ಸಂತ ಇಗ್ನೇಶಿಯಸ್  ಲೊಯೋಲಾ ರವರ  ಸ್ಮರಣೆಗೈದು  ಸ್ಥಾಪಕರ ದಿನವನ್ನು ಸಡಗರದಿಂದ ಆಚರಿಸಲಾಯಿತು.ಶಾಲಾ ಕೊಯರ್ ತಂಡದ ಸದಸ್ಯರು  ಪ್ರಾರ್ಥನೆಯಲ್ಲಿ ಸಹಕರಿಸಿದರು. ಶಿಕ್ಷಕಿ  ಆಶಿಕಾ  ವಿವಿಧ   ಸ್ಪರ್ಧೆಗಳಲ್ಲಿ ವಿಜೇತರಾದ  ವಿದ್ಯಾರ್ಥಿಗಳ   ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಹಕರಿಸಿದರು.  ಕಾರ್ಯಕ್ರಮದ ಮೆರುಗು ಎಂಬಂತೆ, 1974 ನೇ  ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿಗಳಾದ  ಶ್ರೀ ಎಡ್ವರ್ಡ್  ಮಚಾದೊ ಹಾಗೂ ಸಂಗಡಿಗರು ಕಾರ್ಯಕ್ರಮದಲ್ಲಿ  ಹಾಜರಿದ್ದು,  ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ತಮ್ಮ  ಉದಾರಮನದ […]

Read More

ಮಂಗಳೂರು: ಪ್ರೀತಿ ಮತ್ತು ಸೇವೆಯ ಸಣ್ಣ ಕಾರ್ಯಗಳ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲನು. ದೊಡ್ಡ ಕನಸುಗಳನ್ನು ಕಾಣುವವರಾಗಿರಿ, ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತಾಗಿ ಎಂದು ಬೆಂಗಳೂರು ಸಂತ ಜೋಸೆಫರ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕ್ಲೆಮೆಂಟ್‌ ಡಿಸೋಜಾ ಅಭಿಪ್ರಾಯಪಟ್ಟರು. ಅವರು “ಹೃದಯಗಳಿಗೆ ಪ್ರೇರಣೆ – ಬದುಕುಗಳಿಗೆ ಪರಿವರ್ತನೆ” ಎಂಬ ಧ್ಯೇಯದಡಿ  ಸಂತ ಅಲೋಶಿಯಸ್‌ ಗೊನ್ಝಾಗ ಶಾಲೆಯಲ್ಲಿ ಜರುಗಿದ ಸಂತ ಇಗ್ನೇಷಿಯಸ್‌ ಲೊಯಲಾ ಅವರ  ಹಬ್ಬದ ಆಚರಣೆಯಲ್ಲಿ  “ಸಂತ ಇಗ್ನೇಷಿಯಸ್ ಇಂದಿನ ಯುಗದಲ್ಲಿ  ಗೊನ್ಝಾಗ ಶಾಲೆಗೆ […]

Read More

ಮಂಗಳೂರು: ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ, ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಮರ್ಪಣೆಯೊಂದಿಗೆ ಬೆಳೆಸಿದ ಪೋಷಕರ ದೃಷ್ಟಿಕೋನವು ಮಕ್ಕಳ ಸಾಧನೆಗೆ ಪ್ರಮುಖ ಕಾರಣವಾಗಿದೆ. ಮಿಥ್ಯ ಚಿತ್ರದಲ್ಲಿ ನಟಿಸಿ ಅತ್ಯುತ್ತಮ ಬಾಲನಟ ಪುರಸ್ಕಾರ ಪಡೆದ   ಸಂತ ಅಲೋಶಿಯಸ್‌ ಗೊನ್ಝಾಗ ಶಾಲೆಯ ವಿದ್ಯಾರ್ಥಿ ಅವಿಶ್‌ ಶೆಟ್ಟಿ ಹಾಗೂ ಅವರ ಸಹೋದರ ಪ್ರತಿಭಾನ್ವಿತರು ಎಂದು ಸೇಂಟ್ ಅಲೋಶಿಯಸ್ ಗೊನ್ಜಾಗಾ ಶಾಲೆಯ ಪ್ರಾಂಶುಪಾಲರಾದ ರೆ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ.  ಅಭಿಪ್ರಾಯಪಟ್ಟರು. ಶಾಲೆಯಲ್ಲಿ  ಹಮ್ಮಿಕೊಂಡಿದ್ದ ಸಂತ ಇಗ್ನೇಷಿಯಸ್ ಲೊಯೊಲಾ ಅವರ ಹಬ್ಬದ ಆಚರಣೆಯಲ್ಲಿ  […]

Read More
1 2 3 568