ಉಡುಪಿ : ಕಳೆದ ಮೂರು ವರ್ಷಗಳಿಂದ ಉಡುಪಿಯ ಎಂಜಿಎಂ ಕಾಲೇಜು ಬಳಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಗೆ ನೂತನ ನಿರ್ದೇಶಕರನ್ನಾಗಿ ಸ್ಟೀವನ್ ಕುಲಾಸೊ ಉದ್ಯಾವರ ಇವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಅಧ್ಯಕ್ಷ, ಉಪಾಧ್ಯಕ್ಷ ಸಹಿತ 11 ನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿರುವ ಸ್ಟೀವನ್ ಕುಲಾಸೊ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಾರ್ಯನಿರೂಪಕರಾಗಿರುವ ಇವರು, ಕಲಾ ಸಂಸ್ಥೆಯಾದ ನಿರಂತರ್ ಉದ್ಯಾವರ ಇದರ ಸ್ಥಾಪಕರಾಗಿದ್ದಾರೆ.
ಕುಂದಾಪುರ. ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಪ್ರಾಣಾಯಾಮ, ಸೂರ್ಯ ನಮಸ್ಕಾರ, ಮತ್ತು ಧ್ಯಾನ ಮಾಡಲಾಯಿತು. ವಿಧ್ಯಾರ್ಥಿಗಳು ಯೋಗದ ಕುರಿತು ಭಾಷಣ ಹಾಗೂ ಚಿತ್ರಗಳನ್ನು ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಿ ರಾಣಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನಗಳನ್ನು ಅಭ್ಯಾಸ ಮಾಡಿದರು. ಶಿಕ್ಷಕಿಯರಾದ ಗೀತಾ ನೊರೊನ್ಹ, ಪ್ರೀತಿ, ಆಶಾ, ಸುರೇಖಾ ಉಪಸ್ಥಿತರಿದ್ದರು.
ಮಂಗಳೂರು; “ದೈನಂದಿನ ಚಟುವಟಿಕೆಗಳಲ್ಲಿ ಯೋಗ ಅಭ್ಯಾಸವನ್ನು ಅಳವಡಿಸಿಕೊಂಡು ಆರೋಗ್ಯಯುತ ಜೀವನ ಶೈಲಿಯನ್ನು ರೂಡಿಸಿಕೊಳ್ಳಿ” ಎಂಬುವುದಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಅಲೋಶಿಯಸ್ ಡಿಸೋಜರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಪ್ರಮೊದ್ ಅರಿಗ ಮತ್ತು ಹಿರಿಯ ಶಿಕ್ಷಕಿ ಲವೀನ ಡಿಕುನ್ಹಾ , ವೇದಿಕೆಯಲ್ಲಿದ್ದರು. ಹಾಗೂ ಶಾಲಾ ನಾಯಕ ಹರ್ಷವರ್ಧನ್ , ಶಾಲಾ ಉಪನಾಯಕಿ ಜೇನ್ […]
ಕುಂದಾಪುರ; ದಿನಾಂಕ 22-06-2026 : ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಫಾ. ರೊಲ್ವಿನ್ ಫೆರ್ನಾಂಡೀಸ್ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಕೆ. ವಿವೇಕ್ ಪೈ ಇವರು ಅತಿಥಿಗಳಾಗಿ ಆಗಮಿಸಿ ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯೋಗಭ್ಯಾಸವನ್ನು ರೂಡಿಸಿಕೊಳ್ಳಬೇಕೆಂದು ಹೇಳಿದರು.ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಚಿದಾನಂದರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಮಾಡುವುದರ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಮೆರುಗನ್ನು ನೀಡಿದರು. ಈ ಸಭೆಯಲ್ಲಿ […]
ಕುಂದಾಪುರ: ವಜ್ರ ಮಹೋತ್ಸವವದ ಸಂಭ್ರಮದಲ್ಲಿರುವ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಸಾಮೂಹಿಕ ಯೋಗಾಭ್ಯಾಸ ಮಾಡುವುದರ ಮೂಲಕ 12ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.ಸಾಮಾನ್ಯ ಯೋಗಕ್ಕೆ ಅನುಗುಣವಾಗಿ ನಾನಾ ವ್ಯಾಯಾಮ,ಆಸನ,ಪ್ರಾಣಾಯಾಮ ಮತ್ತು ಧ್ಯಾನ ಅಭ್ಯಾಸ ಮಾಡಲಾಯಿತು. ಶಿಕ್ಷಕಿಯರಾದ ಸಿಸ್ಟರ್ ಚೇತನಾ,ಪ್ರೀತಿ ಪಾಯಸ್,ಸ್ಮಿತಾ ಡಿ ಸೋಜಾ,ಸುಶೀಲಾ ಖಾರ್ವಿ,ಡೀನಾ ಪಾಯಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶೈನಾ ಸ್ವಾಗತಿಸಿ,ಜೀವಿತಾ ವಂದಿಸಿದರು.ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.
ಬೈಂದೂರು : ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಮೊಬೈಲ್ ಇ ವಿ ಎಂ ಮೂಲಕ ಡಿಜಿಟಲ್ ಮಾದರಿಯಲ್ಲಿ ನಡೆಯಿತು. ಮಕ್ಕಳಲ್ಲಿ ಮತದಾನದ ಜಾಗೃತಿ ಮತ್ತು ಮಹತ್ವ ತಿಳಿಯುವ ಉದ್ದೇಶ, ಪ್ರಜಾಪ್ರಭುತ್ವದ ಮೌಲ್ಯಗಳು,ನಾಯಕತ್ವದ ಗುಣಗಳು ಹಾಗೂ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ನಾಯಕ ಉಪನಾಯಕ ಹಾಗೂ ವಿವಿಧ ಕ್ಲಬ್ ಗಳ ಪದಾಧಿಕಾರಿಗಳ ಆಯ್ಕೆ ಪಾರದರ್ಶಕವಾಗಿ ನಡೆಯಿತು. ವಿದ್ಯಾರ್ಥಿಗಳುಸಕ್ರೀಯವಾಗಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತ ಎಣಿಕೆಯ ಬಳಿಕ […]
ಕುಂದಾಪುರ; ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವು ಯಶಸ್ವಿ 9 ಸಂವತ್ಸರಗಳನ್ನು ಮುಗಿಸಿ, ಹತ್ತನೇ ವರ್ಷಕ್ಕೆ ಪಾದಾರ್ಪಣೆಯ ಸಂಭ್ರಮಕ್ಕಾಗಿ ಉಚಿತ ಪ್ರೋಟಿನ್ ಪೌಡರ್, ಡಯಪರ್ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯ ಸಲುವಾಗಿ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ. ಕೆ ಪ್ರೇಮಾನಂದ ದೀಪ ಬೆಳಗಿಸಿ, ಜನ ಸ್ನೇಹಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ರೆಡ್ ಕ್ರಾಸನ್ನು ಶ್ಲಾಘಿಸಿದರು. ಕಡಿಮೆ […]
ಮಂಗಳೂರು, ಜೂನ್ 20: ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಶನಿವಾರ ಸಂಜೆ ಬೆಂದೋರ್ನ ಸೇಂಟ್ ಸೆಬಾಸ್ಟಿಯನ್ ಚರ್ಚ್ ಕಮ್ಯುನಿಟಿ ಹಾಲ್ನಲ್ಲಿ ತನ್ನ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹೊಸ ಆದಾಯ ತೆರಿಗೆ ಕಾಯ್ದೆ 2025 ರ ಕುರಿತು ಮಾಹಿತಿಯುಕ್ತ ಅಧಿವೇಶನವನ್ನು ನಡೆಸಲಾಯಿತು ಮತ್ತು ಸದಸ್ಯರು, ವೃತ್ತಿಪರರು ಮತ್ತು ಅತಿಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿದ್ದ ಗಣ್ಯರಲ್ಲಿ ರಚನಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಯ್ ಕ್ಯಾಸ್ಟೆಲಿನೊ; ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಶ್ರೀ ರುಡಾಲ್ಫ್ ರೊಡ್ರಿಗಸ್, ಮಂಗಳೂರು […]
ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಅವರ ಹಬ್ಬದ ಸಂಭ್ರಮದಲ್ಲಿ ತನ್ನ ನೂತನ ರೆಕ್ಟರ್ ವಂ. ಫಾ. ಬ್ರಾಯೆನ್ ಪಿರೇರಾ ಎಸ್.ಜೆ ಅವರನ್ನು ಶಾಲಾ ಪ್ರಾಂಶುಪಾಲರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು ಜೀವನದಲ್ಲಿ ಯಶಸ್ಸಿಗೆ ಕನಸು, ಸಮರ್ಪಣೆ ಮತ್ತು ಶಿಸ್ತು ಎಂಬ ಮೂರು ‘ಡಿ’ ಗಳನ್ನು ಮಾರ್ಗದರ್ಶಿ ತತ್ವಗಳಾಗಿ ಅನುಸರಿಸಿ ಎಂದು ಸಲಹೆ ನೀಡಿದರು. ಮಂಗಳೂರಿನ ಅತ್ಯುತ್ತಮ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಒಂದಾಗಿರುವ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯನ್ನು ಶ್ಲಾಘಿಸಿ, ಸಂಸ್ಥೆಯ ಯಶಸ್ಸಿಗೆ ಶಿಕ್ಷಕರ […]

