ಶ್ರೀನಿವಾಸಪುರ, ಏ.27: ಮಹಿಳಾ ಸಬಲೀಕರಣದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪಟ್ಟಣದ ಇಂದಿರಾ ಭವನ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ವೇಣುಗೋಪಾಲ್, ಕಾಂಗ್ರೆಸ್ ಪಕ್ಷವು ದೇಶದಲ್ಲಿ ಹಲವು ದಶಕಗಳ ಆಡಳಿತ ನಡೆಸಿದರೂ ಮಹಿಳೆಯರ ಸಬಲೀಕರಣಕ್ಕಾಗಿ ಶಾಶ್ವತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು. ಮಹಿಳಾ ಮೀಸಲಾತಿ ಸಂಬಂಧ ಸಂಸತ್ತಿನಲ್ಲಿ ಮಂಡನೆಯಾದ ನಾರಿ ಶಕ್ತಿ ಅಧಿನಿಯಮಕ್ಕೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸಿದೆ. […]

Read More

(ವರದಿ: ಶಬ್ಬಿರ್ ಅಹ್ಮದ್) ಬಿಸಿಗಾಳಿ–ಜಾಗತಿಕ ಉದ್ವಿಗ್ನತೆ ಡಬಲ್ ಹೊಡೆತ : ಶ್ರೀನಿವಾಸಪುರ ಮಾವು ಸುಗ್ಗಿಗೆ ಆತಂಕದ ನೆರಳು ,ಇಳುವರಿ ಶೇ.30ರಷ್ಟೇ ಸಾಧ್ಯತೆ ಬೆಲೆ, ರಫ್ತು, ಪಲ್ಪ್ ಉದ್ಯಮಕ್ಕೂ ಸಂಕಷ್ಟ ಪಶ್ಚಿಮ ಏಷ್ಯಾ ಉದ್ವಿಗ್ನತೆ ಪರಿಣಾಮದ ಭೀತಿ ಉಂಟಾಗಿದೆ ಶ್ರೀನಿವಾಸಪುರ ರಾಜ್ಯದ ಮಾವುನಾಡು ಎಂದೇ ಖ್ಯಾತಿ ಪಡೆದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಈ ಬಾರಿಯ ಮಾವು ಸುಗ್ಗಿ ಆರಂಭಕ್ಕೂ ಮುನ್ನವೇ ಆತಂಕದ ವಾತಾವರಣ ನಿರ್ಮಾಣವಾಗಿದೆ. ತೀವ್ರ ಬಿಸಿಗಾಳಿ, ಇಳುವರಿ ಕುಸಿತ, ಮಾರುಕಟ್ಟೆ ಅನಿಶ್ಚಿತತೆ, ಪಲ್ಪ್ ಉದ್ಯಮದ ಸಂಕಷ್ಟ […]

Read More

ಶ್ರೀನಿವಾಸಪುರ : ಪಟ್ಟಣದ ನೌಕರರ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶ್ರೀನಿವಾಸಪುರ ತಾಲ್ಲೂಕು ಮಹಿಳಾ ಘಟಕದ ಸಮಿತಿ ಪದಾಧಿಕಾರಿಗಳನು ರಾಜ್ಯ ಕಾರ್ಯಾಧ್ಯಕ್ಷ ಹಬ್ಬನಿ ಶಿವಪ್ಪ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷೆ ಉಪ್ಪರಪಲ್ಲಿ ಶ್ಯಾಮಲ, ಉಪಾಧ್ಯಕ್ಷೆಯರು ಸಂದ್ಯಾರಾಣಿ, ವಿಜಯಮ್ಮ, ರಾಮಲಕ್ಷö್ಮಮ್ಮ ಕಾರ್ಯಾಧ್ಯಕ್ಷೆ ಉಮಾದೇವಿ, ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಕಾರ್ಯದರ್ಶಿ ಸುಗುಣ, ಶಿವಮ್ಮ,ರಮಾದೇವಿ, ಖಜಾಂಚಿ ವಿನೋದ, ಸರೋಜಮ್ಮ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

Read More

ಕೋಲಾರ:- ಅನುಭವ ಮಂಟಪ ಆರಂಭಿಸುವ ಮೂಲಕ ಹನ್ನೊಂದನೇ ಶತಮಾನದಲ್ಲಿ ಭಾರತದ ಪಾರ್ಲಿಮೆಂಟ್ ಪರಿಕಲ್ಪನೆಗೆ ಬುನಾದಿ ಹಾಕಿಕೊಟ್ಟವರು ಬಸವಣ್ಣನವರು ಎಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.ಸಮ ಸಮಾಜದ ಪ್ರತಿಪಾದಕರಾಗಿದ್ದ ಬಸವಣ್ಣನವರು ಸಮಾನತೆ ಕೇವಲ ಸಾಮಾಜಿಕವಾಗಿ ಮಾತ್ರವೇ ಇರಬಾರದು, ಆಡಳಿತ ಯಂತ್ರಾಂಗದಲ್ಲಿಯೂ ಸಮಪಾಲು ಇರಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಭಾರತ ಸೇವಾದಳ […]

Read More

ಕೋಲಾರ:- ಸಮಾಜಕ್ಕೆ ಸಮಾನತೆಯ ಸಂದೇಶ ನೀಡಿ, ಮಹಿಳೆಯರು ಪುರುಷರಷ್ಟೆ ಸಮಾನರು ಎಂದು ೧೨ನೇ ಶತಮಾನದಲ್ಲೇ ಸಾರಿ, ತಮ್ಮ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಬಸವಣ್ಣನವರ ಆದರ್ಶ ಪಾಲಿಸುವ ಮೂಲಕ ಸುಂದರ ಸಮಾಜ ನಿರ್ಮಿಸೋಣ ಎಂದು ಬೆಂಗಳೂರಿನ ಡಿಐಜಿಪಿ ಡಿ.ದೇವರಾಜ್ ಕರೆ ನೀಡಿದರು.ನಗರದ ಡೂಂಲೈಟ್ ವೃತ್ತದಲ್ಲಿ ಡೂಂಲೈಟ್ ವೃತ್ತದ ಗೆಳಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪಾನಕ,ಕೋಸಂಬರಿ ವಿತರಿಸಿ ಅವರು ಮಾತನಾಡುತ್ತಿದ್ದರು.ವಚನಗಳು ತುಂಬಾ ಸರಳವಾಗಿದ್ದು ಎಲ್ಲರಿಗೂ ಅರ್ಥವಾಗುತ್ತದೆ. […]

Read More

ಶ್ರೀನಿವಾಸಪುರ: ತಾಲ್ಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ನಂದಗೋಕುಲ ಆಶ್ರಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಮಕ್ಕಳ ವಸಂತ ಶಿಬಿರದಲ್ಲಿ, ಶಿಬಿರಾರ್ಥಿಗಳಿಗೆ ಕಥೆ ಹೇಳುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಸಾಹಿತಿ ಎನ್.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕತೆಗಳ ಮೂಲಕ ಮಕ್ಕಳನ್ನು ತಿದ್ದುವ, ಮನರಂಜನೆ ಒದಗಿಸುವ ಹಾಗೂ ಅವರ ಕಾಲ್ಪನಿಕ ಜಗತ್ತನ್ನು ವಿಸ್ತರಿಸುವ ಭಾರತೀಯ ಪರಂಪರೆ ಮುಂದುವರಿಯಬೇಕು ಎಂದು ಹೇಳಿದರು. ಅಜ್ಜಿಯಿಂದ ಕತೆ ಕೇಳಿ, ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಂಡು, ಮುಂದಿನ ತಲೆಮಾರಿಗೆ ವರ್ಗಾಯಿಸುವ ಕಾಲವೊಂದಿತ್ತು. […]

Read More

ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿಗಳ ಅನುಷ್ಠಾನ ಕುರಿತು ಅನುಷ್ಠಾನ ಸಮಿತಿ ಸಭೆ ಏರ್ಪಡಿಸಲಾಗಿತ್ತು. ಪಂಚ ಗ್ಯಾರಂಟಿಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ವಿ.ಮನೋಹರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಸಾರ್ವಜನಿಕರಿಂದ ದೂರಗಳು ಬರಂದತೆ ಎಚ್ಚರವಹಿಸಬೇಕು ಎಂದು ಹೇಳಿದರು. ಫಲಾನುಭವಿಗಳ ಹಿತ ಕಾಯುವುದು ಪಂಚ ಗ್ಯಾರಂಟಿ ಅನುಷ್ಠಾನ ಸಮತಿಯ ಉದ್ದೇಶವಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಸಮಸ್ಯೆ ಕಂಡುಬAದಲ್ಲಿ ತಕ್ಷಣ ಪರಿಹರಿಸಲು ಮುಂದಾಗಬೇಕು. ಪ್ರತಿ […]

Read More

ಕೋಲಾರ : ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ ಯೋಜನೆಗಳು ಕೇವಲ ಕಡತಕ್ಕೆ ಸೀಮಿತವಾಗದೆ, ಜನಸಾಮಾನ್ಯರಿಗೆ ತಲುಪಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ “ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ’ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಬಲ ನೀಡುವ ಉದ್ದೇಶದಿಂದ ಹೊಸದಾಗಿ ‘ವಕ್ಸ್ ಮಹಿಳಾ ಪಿಯು ಕಾಲೇಜು’ ಪ್ರಾರಂಭಿಸಲು ಸಭೆಯಲ್ಲಿ […]

Read More

ಶ್ರೀನಿವಾಸಪುರ : ಪಟ್ಟಣದ ಹೊರವಲಯದ ಮ್ಯಾಂಗೋವ್ಯಾಲಿ ಶಾಲೆಯಲ್ಲಿ ಗುರುವಾರ ಸಿಬಿಎಸ್‌ಸಿ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಕುರಿತು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಮ್ಯಾಂಗೋವ್ಯಾಲಿ ಆಡಳಿತ ಮಂಡಲಿ ಅಧ್ಯಕ್ಷ ಎಸ್.ಎ.ಅಮರನಾಥ್ ಮಾತನಾಡಿ ಶ್ರೀಧರ್ ಎಂಬ ವಿದ್ಯಾರ್ಥಿಯು 485 (97%) ಅಂಕಗಳನ್ನು ಪಡೆದು ಜಿಲ್ಲೆಗೆ ಎರಡನೇ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯು ನಮ್ಮ ಶಾಲೆ ಕೀರ್ತಿಯನ್ನ ಹೆಚ್ಚಿಸಿದ್ದಾನೆ. ತಾಲೂಕಿಗೆ ಈ ವಿದ್ಯಾರ್ಥಿಯು ಮೊದಲನೇ ಸ್ಥಾನ ಪಡೆದಿದ್ದಾನೆ . ಅದೇ ರೀತಿಯಲ್ಲಿ ತಾಲೂಕಿಗೆ ದ್ವಿತೀಯ […]

Read More
1 2 3 381