

ಜನನುಡಿ ಸುದ್ದಿ – ಕುಂದಾಪುರ; (ಜುಲೈ 30, 2026 ರ ರಾತ್ರಿ ಆರ೦ಭವಾದ ಮಾತಿನ ಚಕಮಕಿ, ಜುಲೈ 31ರ ಮು೦ಜಾನೆ ಕುಂದಾಪುರ ಹೋಲಿ ರೋಜರಿ ಚರ್ಚಿನ ಮುಂದೆ ದಾರುಣ ಅಂತ್ಯ ಕಂಡಿದೆ. ಇದೀಗ ಹಲವು ವೀಷಯಗಳು ಬೆಳಕಿಗೆ ಬರುತಿದ್ದು, ಹಣಕಾಸಿನ ವ್ಯವಹಾರದ ವಿಚಾರವಾಗಿ ಡೆರಿಕ್ ಕ್ರಾಸ್ತಾ ಮತ್ತು ಐವನ್ ರಿಚರ್ಡ್ ಮಸ್ಕರೇನಸ್ ನಡುವೆ ಗಲಾಟೆ ನಡೆದಿದ್ದು, ಬಳಿಕ ಡೆರಿಕ್ ಕೆರಳಿಸುವ ಮಾತನ್ನಾಡಿ ಲೊಕೇಶನ್ ಕಳುಹಿಸಿ ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರಿಗೆ ಬರಲು ಸೂಚಿಸಿದ್ದಾನೆ ಎನ್ನಲಾಗಿದೆ. ದಮ್ ಇದ್ದರೆ ಒಬ್ಬನೇ ಕು೦ದಾಪುರಕ್ಕೆ ಬಾ’ ಎ೦ದು ಐವನ್ ರಿಚರ್ಡ್ ಮಸ್ಕರೇನಸ್ ರಿಗೆ ಆರೋಪಿ ಡೆರಿಕ್ ಮೆಸೇಜ್ ಹಾಕಿ ಲೊಕೇಶನ್ ಕಳುಸಿದ್ದನೆನ್ನಲಾಗಿದೆ. ಅದರ೦ತೆ ಲೊಕೇಶನ್ ಆಧರಿಸಿ ಐವನ್ ತನ್ನ ಜೊತೆಗೆ ಏಳು ವರ್ಷದಿ೦ದ ಜೊತೆಯಿದ್ದ ಮಹಿಳೆ ಲಲಿತಾ (ಇವಳು ಹೇಳುವ ಪ್ರಕಾರ ಎರಡನೆ ಪತ್ನಿ) ಜೊತೆ ಇ೦ದು ಮುಂಜಾನೆ ಕಾರಿನಲ್ಲಿ ಕುಂದಾಪುರಕ್ಕೆ ಆಗಮಿಸಿ ಇಲ್ಲಿನ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರಿನ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದರು. ಮು೦ಜಾನೆ ಸುಮಾರು 3.15 ಕ್ಕೆ ಕೈಕೋವಿಯಿಂದ ಸೊ೦ಟ ಹಾಗೂ ಕಾಲಿನ ಭಾಗಕ್ಕೆ ಡೆರಿಕ್ ಕ್ರಾಸ್ತಾ ಶೂಟ್ ಮಾಡಿದ್ದಾನೆ, ಗ೦ಭೀರವಾಗಿ ಗಾಯಗೊಂಡಿದ್ದ ಐವನ್ ರಸ್ತೆಯಲ್ಲೆ ಕುಸಿದು ಬಿದ್ದು, ರಕ್ತ ಹರಿದು ಮೃತಪಟ್ಟಿದ್ದಾನೆ.
ಗುಂಡು ಹೊಡೆದಿದ್ದು ಕುಂದಾಪುರದಲ್ಲಿ ವಾಸಿಸುವ ಡೆರಿಕ್ ಕ್ರಾಸ್ತಾ ಎಂದು ಲಲಿತಾ ನೇರವಾಗಿ ಮಾಧ್ಯಮಕ್ಕೆ ತಿಳಿಸಿದ್ದಾಳೆ. ಐವನ್ ಯಾನೆ ಮುನ್ನಾ, ಇವನನು ಹೆಚ್ಚಿನವರು ಮುನ್ನಾ ಎಂದೆ ಪರಿಚಯ, ಈ ಹಿ೦ದೆ ಮುನ್ನಾ ಕುಕ್ಕಿಕಟ್ಟೆಯ ರೌಡಿ ಪಿಟ್ಟಿ ನಾಗೇಶ ಕೂಲೆ ಕೇಸ್ ನಲ್ಲಿ ಆರೋಪಿಯಾಗಿದ್ದ. ಈತನ ಮೇಲೆ ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟ್ ಇತ್ತು. ಮುನ್ನಾ ಮೊದಲು ಪಿಟ್ಟಿ ನಾಗೇಶ್ ನ ಡೈವರ್ ಆಗಿದ್ದ. ಯಾವುದೋ ದ್ವೇಷದಿ೦ದ ಪಿಟ್ಟಿ ನಾಗೇಶ್ ಕೊಲೆಯಲ್ಲಿ ಭಾಗಿಯಾಗಿದ್ದ. ಪಿಟ್ಟಿ ನಾಗೇಶ್ ನ ತಂಡ ಈತನ ಹತ್ಯೆಗಾಗಿ ಹಲವು ಬಾರಿ ಸ೦ಚು ರೂಪಿಸಿತ್ತು.ಆ ಕಾರಣ ಇವನು ಹೆಚ್ಚು ಕಾಲ ಎಲ್ಲಿಯೂ ಬಾಡಿಗೆಗೆ ನಿಲ್ಲುತಿರಲಿಲ್ಲ ಎಂದು ಇವನನ್ನು ಬಲ್ಲವರಿಂದ ತಿಳಿದು ಬಂದಿದೆ, ಹತ್ಯೆಯಾಗುವ ಮುಂಚೆ ಬಾರ್ಕೂರು ಹಾಳೆಕೋಡಿಯ ಕಚ್ಚುರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಇದ್ದ. ಈತ ಮೊದಲನೇಯ ಹೆಂಡತಿಯನ್ನು ತೊರೆದಿದ್ದ, ಮೊದಲ ಪತ್ನಿಯ ಮಗಳು, ಅಜ್ಜಿ ಜೊತೆ ಹೆಬ್ರಿಯಲ್ಲಿ ವಾಸಿಸುತಿದ್ದರು. ಇವರೆಲ್ಲಾ ಕೊಲೆಯಾದ ಜಾಗಕ್ಕೆ ಬಂದಿದ್ದು, ಮಾಧ್ಯಮ ಅವರನ್ನು ಸಂಪರ್ಕಿಸಿದೆ.
ಐವನ್ ಮುನ್ನಾ ಪಿಟ್ಟಿ ನಾಗೇಶ್ ಕೊಲೆಯ ನಂತರ ಪಿಟ್ಟಿ ನಾಗೇಶ್ ತಂಡ ಈತನ ಹತ್ಯೆಗಾಗಿ ಹಲವು ಬಾರಿ ಸ೦ಚು ರೂಪಿಸಿತ್ತು, ಐವನ್ ಮುನ್ನಾ ಇದೀಗ ಕು೦ದಾಪುರದಲ್ಲಿ ಕೊಲೆಯಾಗಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗಾಗಿ ಮೂರು ವಿಶೇಷ ತ೦ಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎ೦ದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಕೊಲೆಯಾದ ಐವನ್ ಮುನ್ನಾ

ಆರೋಪಿ ಡೆರಿಕ್ ಕ್ರಾಸ್ತಾ

ಕೊಲೆಯಾದಾಗ ಜೊತೆಗಿದ್ದು, ಶೂಟೌಟ್ ಕಣ್ಣಾರೆ ಕಂಡ ಲಲಿತಾ

ಕೊಲೆಯಾದ ಮುನ್ನಾ ಐವನ್ ಅವರ ತಾಯಿ


