ಶ್ರೀನಿವಾಸಪುರ, ಜೂನ್ 24: “ಆರ್ಯವೈಶ್ಯ ಸಮುದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವದ ವಾಸವಿ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲು ನಾವು ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಈ ಬಾರಿ ಆದರೂ ಸರ್ಕಾರ ಇದಕ್ಕೆ ಸ್ಪಂದಿಸಬೇಕೆಂದು ನಿರೀಕ್ಷಿಸುತ್ತೇವೆ,” ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಕುಮಾರ್ ಹೇಳಿದರು.ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕನ್ಯಕಾಪರಮೇಶ್ವರಿ ದೇವಾಲಯದ ೩೪ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಮುದಾಯದ ಮೇಲುಕ್ವೆದ […]
ಶ್ರೀನಿವಾಸಪುರ: ಪಾಕೇಟ್ ಮತ್ತು ಪತ್ರ ತಲುಪಿಸುವಲ್ಲಿ ಪರಿಣತಿ ಪಡೆದಿರುವ ದಿ ಪ್ರೊಫೆಷನಲ್ ಕೊರಿಯರ್ ಸಂಸ್ಥೆ, ಈಗ ಕಾಲಚಕ್ರದ ಬದಲಾವಣೆಗೆ ಅನುಗುಣವಾಗಿ ಪಾರ್ಸಲ್ ಹಾಗೂ ಕಾರ್ಗೋ ಸೇವೆಗಳತ್ತ ಸುವ್ಯವಸ್ಥಿತ ಹೆಜ್ಜೆ ಇಡುತ್ತಿದೆ ಎಂದು ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಮನೋಜ್ ಕುಮಾರ್ ತಿಳಿಸಿದ್ದಾರೆ.ಪಟ್ಟಣದ ಕಿಟ್ ಕಂಪ್ಯೂಟರ್ ಸಂಸ್ಥೆ ಸಭಾಂಗಣದಲ್ಲಿ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ದಿ ಪ್ರೊಫೆಷನಲ್ ಕೊರಿಯರ್ ಭಾರತದಲ್ಲಿ ಅತಿದೊಡ್ಡ ಕೊರಿಯರ್ ಮತ್ತು ಕಾರ್ಗೋ ಸಂಸ್ಥೆಗಳಲ್ಲಿ ಒಂದು. ಇದು ರಾಷ್ಟ್ರೀಯ ಹಾಗೂ […]
ಕೋಲಾರ: ಪ್ರಧಾನಮಂತ್ರಿ ಅವರ ಹೊಸ 15 ಅಂಶಗಳ ಕಾರ್ಯಕ್ರಮದ ಭಾಗವಾಗಿ, ಜಿಲ್ಲಾ ಮಟ್ಟದ ಸಮಿತಿ (DLC)ಯಿಂದ ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ, ಉದ್ಯೋಗ ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಕೋಲಾರದ ಮೌಲಾನಾ ಆಜಾದ್ ಭವನದಲ್ಲಿ ಜಾಗೃತಿ ಸಭೆಯನ್ನು ಆಯೋಜಿಸಲಾಯಿತು. ಸಭೆಯಲ್ಲಿ ಕೆಎಂಡಿಸಿ ವ್ಯವಸ್ಥಾಪಕಿ ಶ್ರೀಮತಿ ಶೆರೀನ್ ತಾಜ್ ಅವರು ನಿಗಮದ ವಿವಿಧ ಯೋಜನೆಗಳ ವಿವರ […]
ಶ್ರೀನಿವಾಸಪುರ : ಮೊಬೈಲ್ ಅಪ್ಲಿಕೇಷನ್ ಮೂಲಕ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬಹುದು. ಕಡಿಮೆ ಕಾಲಾವಕಾಶ ತೆಗೆದುಕೊಂಡು ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಸಂಗ್ರಹಿಸಿದ ಮಾಹಿತಿಯನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿ ಪರೀಕ್ಷಿಸಿ ಅಂತಿಮಗೊಳಿಸಬಹುದು ಎಂದು ಎಡಿಸಿ ಎಸ್.ಎಂ.ಮಂಗಳ ತಿಳಿಸಿದರು.ಶುಕ್ರವಾರ ಪಟ್ಟಣದ ಸಂತೆ ಮೈದಾನದ ಮನೆ ಮನೆಗೆ ಬೇಟಿ ನೀಡಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಮೇಲ್ವಿಚಾರಣೆ ನಡೆಸಿ ಪರಿಶೀಲಿಸಿ ಮಾತನಾಡಿದರು.ಪಟ್ಟಣದಲ್ಲಿನ ಸಂತೆ ಮೈದಾನ, ಅಂಬೇಡ್ಕರ್ ಪಾಳ್ಯ , ಜಗಜೀವನಪಾಳ್ಯದಲ್ಲಿ ಮನೆಗಳಿಗೆ ಬೇಟಿ ನೀಡಿ ಸಮೀಕ್ಷೆ ಮೇಲ್ವಿಚಾರಿಸಿಕೊಂಡು ಒಟ್ಟು 97% ಸಮೀಕ್ಷೆ ನಡದಿದೆ […]
ಕೋಲಾರ,ಜೂ.19: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವೃತ್ತಿನಿರತ ಸದಸ್ಯರು ಆಕಸ್ಮಿಕವಾಗಿ ನಿಧನ ಹೊಂದಿದರೆ, ಅವರ ಕುಟುಂಬಕ್ಕೆ ಈವರೆಗೂ ನೀಡಲಾಗುತ್ತಿದ್ದ ತಕ್ಷಣದ ನೆರವಿನ ಮೊತ್ತವನ್ನು 20 ಸಾವಿರ ರೂಗಳಿಂದ 25 ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ. ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ಕುಮಾರ್ ತಿಳಿಸಿದ್ದಾರೆ. ಪತ್ರಕರ್ತರ ತಂದೆ, ತಾಯಿ, ಪತಿ ಅಥವಾ ಪತ್ನಿ ನಿಧನರಾದ ಸಮಯದಲ್ಲಿ ನೀಡುತ್ತಿದ್ದ ನೆರವಿನ […]
ಶ್ರೀನಿವಾಸಪುರ : ಶ್ರೀನಿವಾಸಪುರ,ಚಿಂತಾಮಣಿ, ಮುಳಬಾಗಿಲು, ಕೋಲಾರದ ಮಾವು ಬೆಳೆಗಾರರು ಮಾವು ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂದು ರೈತರು ಸಂಕಷ್ಟದಲ್ಲಿ ಇದ್ದು ಅವರಿಗೆ ನಾವು ರಕ್ಷಣೆ ಕೊಡುವುದು ನಮ್ಮ ಕರ್ತವ್ಯವಾಗಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬೇಟಿ ನೀಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.ಪಟ್ಟಣದ ಎಪಿಎಂಸಿ ಕೃಷಿ ಮಾರುಕಟ್ಟೆಯ ಸಭಾಂಗಣದಲ್ಲಿ ಬುಧವಾರ ಪ್ರತಿಕಾ ಗೋಷ್ಟಿ ನಡೆಸಿ ಮಾತನಾಡಿದರು.ರಾಜ್ಯದಲ್ಲಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯವಾಗಿ ರಾಜ್ಯದಲ್ಲಿ ಬೆಳೆಯುವ ಮಾವು ಶೇಕಡ 60% ರಷ್ಟು ಬೆಳೆಯನ್ನು ಶ್ರೀನಿವಾಸಪುರ ತಾಲೂಕಿನಲ್ಲಿ ಬೆಳೆಯುತ್ತಾರೆ. […]
ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಲ್ಲಿ ಮಾವಿನ ಬೆಳೆಯಲ್ಲಿ ಹೆಚ್ಚಿನ ಹಾಗೂ ಗುಣಮಟ್ಟದ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ ಕೆ. ಎಸ್. ತಿಳಿಸಿದರು. ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರದ ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿಯರಿಂದ ಬೆಗ್ಲಿ ಹೊಸಳ್ಳಿ ಹಾಗೂ ಮಂಗಸಂದ್ರ ಗ್ರಾಮದಲ್ಲಿ ಏರ್ಪಡಿಸಿರುವ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರವನ್ನು ಉದ್ದೇಶಿಸಿ ರೈತರಿಗೆ ಮಾಹಿತಿ ನೀಡಿದರು.ಮಾವು ಕಟಾವು ಸಾಧನ ಬಳಸಿ ಒಂದು ಗಂಟೆಗೆ 100 ಕೆಜಿ ಮಾವು ಕಟಾವು ಮಾಡಬಹುದು ಹಾಗು ಇದರ ಬಳಕೆಯಿಂದ ಕೂಲಿಯಾಳುಗಳ […]
ಶ್ರೀನಿವಾಸಪುರ: ತಾಲ್ಲೂಕಿನ ಸರ್ಕಾರಿ ಮೌಲಾನಾ ಅಜಾದ್ ಉರ್ದು ಪ್ರಾಥಮಿಕ ಶಾಲೆಯಲ್ಲಿ ಉರ್ದು ಮಾಧ್ಯಮದ ಶಾಲೆಗಳ ಶೈಕ್ಷಣಿಕ ಪರಿಶೀಲನಾ ಸಭೆ ಜರುಗಿತು. ಈ ಸಭೆಯಲ್ಲಿ ಇ ಸಿ ಒ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು (ಸಿಆರ್ಪಿ) ಹಾಗೂ ಎಲ್ಲಾ ಉರ್ದು ಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು. ಸಭೆಯ ವಿಶೇಷ ಆಕರ್ಷಣೆಯಾಗಿ ಪ್ರಧಾನಮಂತ್ರಿ ಹೊಸ 15 ಅಂಶಗಳ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮದಡಿ ರಚಿಸಲಾದ ಜಿಲ್ಲಾ ಮಟ್ಟದ ಸಮಿತಿಯ (DLC) ಸದಸ್ಯರಾದ ಶಬ್ಬೀರ್ ಅಹ್ಮದ್ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ಶಬ್ಬೀರ್ ಅಹ್ಮದ್ ಅವರು, […]
ಶ್ರೀನಿವಾಸಪುರ : ಪಟ್ಟಣದ ಬೇಕರಿಗಳು , ಹೋಟೆಲ್ಗಳು , ದಿನಸಿ ಅಂಗಡಿಗಳ ಮೇಲೆ ಆಹಾರ ಸುರಕ್ಷಿತ ಮತ್ತು ನಿಯಂತ್ರಣ ಇಲಾಖೆ ಹಾಗು ಪುರಸಭೆ ವತಿಯಿಂದ ನಡೆದ ಜಂಟಿ ಕಾರ್ಯಚರಣೆ ಜಿಲ್ಲಾ ಅಂಕಿತ, ಆಹಾರ ಸುರಕ್ಷಿತ ಮತ್ತು ಔಷಧಿ ಆಡಳಿತ ಅಧಿಕಾರಿ ಡಾ|| ರಾಕೇಶ್ ನಡೆಸಿ ಮಾತನಾಡಿದರು.ಪಟ್ಟಣದಲ್ಲಿ 9 ಕಡೆ ಕಾರ್ಯಾಚರಣೆ ನಡೆಸಿ, ಕೆಲವಡೆ ಲಿಮ್ರರಾ ಫ್ರೆಷ್ ,ಎಂಪಿ ಕಂಪನಿಗಳ ಮಿನಿರಲ್ ಬಾಟಲ್ಗಳು ಕುಡಿಯಲು ಯೋಗ್ಯವಿಲ್ಲದಿರುವ ನಮಗೆ ದೂರಬಂದಿದ್ದು, ಎರಡು ಕಂಪನಿಗಳ ಬಾಟಲ್ಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ನೋಟಿಸ್ […]

