

Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/Ev3k8gPa7GoEoPPXlyxtW6 (jananudi news orga)
ಕು೦ದಾಪುರ, ಜು. 19: “ರಕ್ತದಾನ ಮಾಡಿ, ಜೀವ ಉಳಿಸಿ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ನಾಲ್ವರ ಪ್ರಾಣ ಉಳಿಸಬಹುದು. ರಕ್ತದಾನ ಜೀವ ಉಳಿಸುವ ಪುಣ್ಯದ ಕಾರ್ಯ. ಎಲ್ಲರ ರಕ್ತವು ಒಂದೇ. ಆರೋಗ್ಯದಿಂದ ಇರುವ ಎಲ್ಲರೂ ರಕ್ತದಾನ ಮಾಡಬಹುದು” ಎಂದು ಕುಂದಾಪುರ ವಲಯದ ಪ್ರಧಾನ ಧರ್ಮಗುರು, ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ। ವಂ। ಪೌಲ್ ರೇಗೋ ಹೇಳಿದರು. ಅವರು ರವಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕುಂದಾಪುರ ವಲಯ ಸಮಿತಿ ಆಶ್ರಯದಲ್ಲಿ, ಕುಂದಾಪುರ ವಲಯದ ಆರೋಗ್ಯ ಆಯೋಗ, ಭಾರತೀಯ ರೆಡ್ ಕ್ರಾಸ್ ಸಂಸ್ಥ್ರೆ ಜೆಸಿಐ ಕುಂದಾಪುರ ಸಿಟಿ. ಲಯನ್ಸ್ ಕ್ಷಬ್ ಹಂಗಳೂರು ಸಹಯೋಗದಲ್ಲಿನಡೆದ ಬೃಹತ್ ರಕ್ತದಾನ ಶಿಬಿರ ಉದ್ಭಾಟಿಸಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದ ಸಂಘಟನೇಗಳಿಗೆ ಶುಭ ಕೋರಿದರು
ಕುಂದಾಪುರ ವಲಯದ ಅಧ್ಯಕ್ಷೆ ಶೈಲಾ ಲೂವಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ। ಆದರ್ಶ ಹೆಬ್ಬಾರ್ ಮಾತನಾಡಿ ‘ಕುಂದಾಪುರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬ್ಲಡ್ ಬ್ಯಾಂಕ್ ಸ್ಥಾಪಿಸುವ ಮೊದಲು ಇಲ್ಲಿನ ವೈದ್ಯರಿಗೆ ಬಹಳ ಕಶ್ಟ ಕಾಲವಾಗಿತ್ತು, ಸರಿಯಾದ ಸಮಯಕ್ಕೆ ರಕ್ತ ಸಿಗದೆ ಚಿಕಿತ್ಸೆ ಪಡೆಯುವರು ಮರಣ ಹೊಂದುತಿದ್ದರು. ಈಗ ನಿಶ್ವಾರ್ಥ ಸೇವೆ ಮಾಡುವ ಹಿರಿಯರು ಸೇರಿ ಬ್ಲಡ್ ಬ್ಯಾಂಕ್ ಸ್ಥಾಪಿಸಿ ಮತ್ತು ರಕ್ತದಾನ ಮಾಡುವ ಸಂಘಟನೆಗಳಿಂದ ನಮಗೆ ರೋಗಿಗಳನ್ನು ಬದುಕಿಸಲು ಬಹಳ ಸಹಕಾರಿಯಾಗಿದೆ ಎಂದು ತಿಳಿಸಿದರು. ಭಾರತೀಯ ರೆಡ್ ಕ್ರಾಸ್ ಕುಂದಾಪುರ ಘಟಕದ ಸಭಾಪತಿ ಎಸ್. ಜಯಕರ ಶೆಟ್ಟಿ ಮಾತನಾಡಿ ಕಥೊಲಿಕ್ ಸಭಾ ಸಂಘಟನೆಯು ಬಹಳ ಹಿಂದಿನಿಂದ ನಮಗೆ ರಕ್ತಾದಾನ ಶಿಬಿರಗಳನ್ನು ಮಾಡಿ ಸಹಕರಿಸುತ್ತಾ ಬಂದಿದೆ ಎಂದು ಹೇಳುತ್ತಾ ಸಂಘಟನೆಗೆ ಪ್ರಶಂಸ ಪತ್ರ ನೀಡಿದರು.
ವಿನಯಾ ನರ್ಸಿಂಗ್ ಹೋಮ್ ಡಯಾಲಿಸಿಸ್ ವಿಭಾಗದ ಮುಖ್ಯಸ್ಥ ನಾಗರಾಜ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಅವರು ನಾವು ಹೇಗೆ ನಮ್ಮ ಕಿಡ್ನಿಯನ್ನು ಸಂರಕ್ಷಿಸಬಹುದು ಎಂದು ಸಂಕ್ಷಿಪ್ತವಾಗಿ ವಿವರಿಸಿದರು. ಹಂಗಳೂರು ಲಯನ್ಸ್ ಕ್ಹಬ್ ಅಧ್ಯಕ್ಷ ಹಂಸರಾಜ್ ಶೆಟ್ಟ ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಕಿರಣ್ ದೇವಾಡಿಗ, ವಲಯದ ಮಾಜಿ ಅಧ್ಯಕ್ಷೆ ರೇಮಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.ಇದೇ ವೇಳೆ ಶೆವೊಟ್ ಪ್ರತಿಷ್ಠಾನದಿಂದ ಎಸೆಸೆಲ್ತಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಶಂಕರನಾರಾಯಣ ಮದರ್ ಥೆರೆಸಾ ಪ್ರೌಢಶಾಲೆಯ ಪ್ರೀತಮ್ ಜಿ ಪೂಜಾರಿಯನ್ನು ಸಮ್ಮಾನಿಸಲಾಯಿತು, ಹಾಗೇ ಸಹಾಯ ಧನ ವಿತರಿಸಲಾಯಿತು. ಹಾಗೇ ಹೆಚ್ಚು ಭಾರಿ ರಕ್ತದಾನ ಮಾಡಿದವರನ್ನು ಸಮ್ಮಾನಿಸಲಾಯಿತು.
ಈ ಶಿಬಿರದಲ್ಲಿ ಒಟ್ಟು 128 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ರಕ್ತದಾನ ಶಿಬಿರದ ಸಂಚಾಲಕಿ ಡಾ| ಸೋನಿ ಡಿಕೋಸ್ತಾ ಸ್ವಾಗತಿಸಿದರು. ವಲಯದ ಕಾರ್ಯದರ್ಶಿ ಮರಿಯಾ ಡಿ’ಸಿಲ್ವಾವಂದಿಸಿದರು. ಆಶಾ ಕರ್ವಾಲೋ ಕಾರ್ಯಕ್ರಮ ನಿರೂಪಿಸಿದರು.









































































