ಬುಧವಾರ (ಆ.12) ಮುಂಬೈಯಲ್ಲಿ ಸತತ ಭಾರಿ ಮಳೆಯಿಂದಾಗಿ ಮುಂಬೈನ ಕುರ್ಲಾ-ಫಾಟ್ಕೋಪರ್ ಗಡಿಯ ಚಿರಾಗ್ ನಗರದ ಗೌಸಿಯಾ ಚಾಲ್ನಲ್ಲಿ ಭೀಕರ ಗುಡ್ಡಕುಸಿತವಾಗಿ ಇಬ್ಬರು ಸಾವನ್ನಪ್ಪಿದ್ದಾರೆ, ಇನ್ನೂ ಐವರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮುಂಜಾನೆ 3:48ರ ಸುಮಾರಿಗೆ ಬೆಟ್ಟದ ಒ೦ದು ಭಾಗ ಕುಸಿದು 2-3 ಮನೆಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 4 ರಿಂದ 5 ಜನರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಈ ದುರಂತದಲ್ಲಿ ಗಾಯಗೊಂಡಿರುವ ಸೊಹೇಲ್ ಅನ್ಸಾರಿ (18) ಮತ್ತು ಮೊಹಮ್ಮದ್ ಅನ್ಸಾರಿ (14) […]
ನವದೆಹಲಿ: ಅಲಹಾಬಾದ್ ಮತ್ತು ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಯಶವಂ೦ತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಪತ್ತೆಯಾದ ಲೆಕ್ಕಕ್ಕೆ ಸಿಗದ ಅಪಾರ ಪ್ರಮಾಣದ ನಗದು ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ, ಅವರ ವಿರುದ್ಧದ ಎಲ್ಲಾ ಮೂರು ಆರೋಪಗಳು ಸಾಬೀತಾಗಿವೆ ಎ೦ದು ಲೋಕಸಭಾ ವಿಚಾರಣಾ ಸಮಿತಿಯು ತೀರ್ಮಾನಿಸಿದೆ. “ನ್ಯಾಯಮೂರ್ತಿಗಳ (ವಿಚಾರಣೆ) ಕಾಯ್ದೆ 1968′ ರ ಅಡಿ ರಚಿಸಲಾಗಿದ್ದ ಈ ಸಮಿತಿಯ ವರದಿಯನ್ನು ಬುಧವಾರ (ಆಗಸ್ಟ್ 12 ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿ೦ದ್ ಕುಮಾರ್ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು […]
Shiny Asma Saldanha becomes the first woman pilot in Udupi district ಕಾರ್ಕಳ,ಅಗಸ್ಟ್ 12; ಕೌಡೂರಿನ ಶೈನಿ ಅಸ್ಮಾ ಸಲ್ಡಾನ್ಹಾ ಅವರು ಪೈಲಟ್ ತರಬೇತಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಳ್ಳುವುದರೊಂದಿಗೆ ಉಡುಪಿ ಜಿಲ್ಲೆಗೆ ಪ್ರಥಮ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೈನಿ ಅಸ್ಮಾ ಸಲ್ವಾನ ಅವರು ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ಡಾನ್ಹಾ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ್ಹಾ ದಂಪತಿಯ ಪುತ್ರಿ. ಪಿಯುಸಿಯವರೆಗಿನ ಶಿಕ್ಷಣವನ್ನು ಕಾರ್ಕಳ ಕೈಸ್ಟ್ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪೂರೈಸಿ. ಬಳಿಕ […]
Panaji; ‘Friends of 3L’ distributes raincoats and school kits to primary school children by students ಪಣಜಿ: ಇಲ್ಲಿನ ಫಾರ್ಮಸಿ ಕಾಲೇಜು ಹತ್ತಿರದ ರಾಮದಾಸ್ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ‘ಫ್ರೆಂಡ್ಸ್ ಆಫ್ 3L’ (ಕನಿಷ್ಠ 3 ಸೌಲಭ್ಯ ವಂಚಿತರಿಗೆ ಸಹಾಯ ಹಸ್ತ ನೀಡುವ ಸ್ನೇಹಿತರು)ಸಂಘಟನೆಯ ವತಿಯಿಂದ ವಿದ್ಯಾರ್ಥಿಗಳಿಗೆ ಶನಿವಾರ ಅಗತ್ಯ ಶಾಲಾ ಪರಿಕರಗಳು ಹಾಗೂ ರೇನ್ಕೋಟ್ಗಳನ್ನು ವಿತರಿಸಲಾಯಿತು. ಸಂಘಟನೆಯ ಪರವಾಗಿ ಉಪಸ್ಥಿತರಿದ್ದ ಶ್ರೀ ಡೆಲ್ಫಿಮ್ ಗ್ರಾಸಿಯಸ್ ಅವರು ವಿದ್ಯಾರ್ಥಿಗಳಿಗೆ ಈ ಸಾಮಗ್ರಿಗಳನ್ನು […]
ಬ್ಯಾಂಕ್ ಆಫ್ ಬರೋಡಾವು 2026ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಬಲಿಷ್ಠ ಆಸ್ತಿ ಗುಣಮಟ್ಟದೊಂದಿಗೆ ತನ್ನ ನಿರಂತರ ಸದೃಢ ಬೆಳವಣಿಗೆಯನ್ನು ಯಶಸ್ವಿಯಾಗಿ ಮುಂದುವರೆಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಬ್ಯಾಂಕ್ನ ಜಾಗತಿಕ ವ್ಯವಹಾರವು ಗಣನೀಯವಾಗಿ ಏರಿಕೆಯಾಗಿ ₹30,50,457 ಕೋಟಿಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ (YoY) 15.4 ಪ್ರತಿಶತದಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕ್ನ ಒಟ್ಟು ಜಾಗತಿಕ ಮುಂಗಡಗಳು 17.4 ಪ್ರತಿಶತ ಹಾಗೂ ದೇಶೀಯ ಮುಂಗಡಗಳು 16.1 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿವೆ. ಪ್ರಮುಖವಾಗಿ ಆಟೋ […]
ನವದೆಹಲಿ: ನೀಟ್-ಯುಜಿ 2026 ಪರೀಕ್ಷೆಯ ಸುತ್ತ ನಡೆಯುತ್ತಿರುವ ವಿವಾದದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನೀಟ್ ವಿವಾದ ವಿದ್ಯಾರ್ಥಿಗಳ ಹೋರಾಟಕ್ಕೆ, ಮತ್ತು ಈ ವಿಷಯಕ್ಕಾಗಿ ಹೋರಾಟ ಮಾಡಿದ ಸಂಘ ಸಂಸ್ಥೆಗಳಿಗೆ ಜಯ ಸಿಕ್ಕಿದೆ. ರಾಜಿನಾಮೆ ನೀಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ದೇಶದ ಯುವಜನರನ್ನು ಉದ್ದೇಶಿಸಿ ನೀಡಿದ ವಿವರವಾದ ಹೇಳಿಕೆಯಲ್ಲಿ, ಮೇ 3 ರಂದು ನಡೆದ ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ನಂತರ […]
NewsBank of Baroda Marks its 119th Foundation Day with a Comprehensive Suite of Digital, Retail and MSME Initiatives ಮಂಗಳೂರು, ಜುಲೈ 20, 2026: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ವಿಶ್ವಾಸ, ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಯೆಡೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ ತನ್ನ 119 ನೇ ಸಂಸ್ಥಾಪನಾ ದಿನವನ್ನು ಆಚರಿಸಿತು. ಬ್ಯಾಂಕಿನ 119 ನೇ ವರ್ಷದ ಥೀಮ್ ಆದ ‘ಲೀಡಿಂಗ್ ವಿತ್ ಟ್ರಸ್ಟ್’ […]
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕಿ ಎಸ್ ಜಾನಕಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್ ಜಾನಕಿ ಇಂದು (ಜುಲೈ 11) ವಿಧಿವಶರಾಗಿದ್ದಾರೆ. ಎಸ್ ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಜನವರಿ ತಿಂಗಳಲ್ಲಿ ಮಗ ಮುರಳಿಕೃಷ್ಣ ಸಾವನ್ನಪ್ಪಿದ್ದರು. ಮಗ ಮೃತಪಟ್ಟ ಬಳಿಕ ಮೈಸೂರಿನ ಬೋಗಾದಿಯಲ್ಲಿರುವ ತಮ್ಮ ಆಪ್ತರ ಮನೆಯಲ್ಲಿ ಎಸ್ ಜಾನಕಿ ವಾಸವಿದ್ದರು. ಯಾರ ಸಂಪರ್ಕಕ್ಕೂ ಎಸ್ ಜಾನಕಿ ಸಿಗುತ್ತಿರಲಿಲ್ಲ. ಇಂದು ಎಸ್ ಜಾನಕಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಅವರನ್ನ ಮೈಸೂರಿನ ಅಪೋಲೋ ಆಸ್ಪತ್ರೆಗೆ […]
ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕ ತರುವ ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಕ್ರೈಸ್ತ ಒಕ್ಕೂಟ (AICU) ಕರ್ನಾಟಕ ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಇ೦ದು ಜುಲಾಯ್ 9ರಂದು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಯೇಸು ಕ್ರಿಸ್ತರು ಕೇವಲ ಚರ್ಚ್ ಗೋಡೆಗಳಲ್ಲಿ ಮಾತ್ರವಲ್ಲ, ಜನರ ಹೃದಯಗಳಲ್ಲಿ, […]

