ಕುಂದಾಪುರ; ಎಮ್/ಎಸ್ ಟಿ ಎನ್ ಪ್ರಭು ಎಂಡ್ ಕೋ ಚಾರ್ಟೆಡ್ ಅಕೌಂಟ್ಸ್ ಸಂಸ್ಥೆಯಿಂದ ಹಲವು ವಿದ್ಯಾರ್ಥಿಗಳು ಸಿ ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ವಿವರ ಕೆಳಗಡೆ ಇದೆ.
ಕುಂದಾಪ್ರ : ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕುಂದಾಪ್ರ ಕನ್ನಡ ಸ್ಪರ್ಧೆ ದಿನಾಂಕ 19-07-2025 ರಂದು ಮಧ್ಯಾಹ್ನ 2:30ಕ್ಕೆ ಏರ್ಪಡಿಸಲಾಗಿದೆ.ಕುಂದ ಕನ್ನಡ ಗಾದೆಗಳನ್ನು ಎರಡು ನಿಮಿಷದಲ್ಲಿ ಸ್ಪಷ್ಟವಾಗಿ ಅತಿ ಹೆಚ್ಚು ಬಾರಿ ಹೇಳುವುದು ಹಾಗೂ 15 ನಿಮಿಷದಲ್ಲಿ ಕುಂದ ಕನ್ನಡ ಶಬ್ದಗಳನ್ನು ಅತಿ ಹೆಚ್ಚು ಬರೆಯುವುದು. ಈ ಎರಡು ಸ್ಪರ್ಧೆಗಳು ನಡೆಯುತ್ತವೆ.ಭಾಗವಹಿಸುವವರು ಜ್ಯೋತಿ ಸಾಲಿಗ್ರಾಮ, ರೇಡಿಯೋ ಕುಂದಾಪ್ರ 89.6 ಈಒ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಈ ವಿಳಾಸಕ್ಕೆ […]
ಮಂಗಳೂರು; ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು 2025ರ ಮೇ ತಿಂಗಳಲ್ಲಿ ಏರ್ಪಡಿಸಿದ ಸಿ. ಎ. ಅಂತಿಮ ಪರೀಕ್ಷೆಯಲ್ಲಿ, ಮಂಗಳೂರಿನ ‘ಕಾಮತ್ ಎಂಡ್ ರಾವ್ ಚಾರ್ಟರ್ಡ್ ಅಕೌಂಟೆಂಟ್ಸ್’ ಸಂಸ್ಥೆಯಲ್ಲಿ ಆರ್ಟಿಕಲ್ಶಿಫ್ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಅರವಿಂದ ಶೆಣೈ ತೇರ್ಗಡೆ ಹೊಂದಿರುತ್ತಾರೆ.ಇವರು ಕೆನರಾ ಬ್ಯಾಂಕ್ ಉದ್ಯೋಗಿ ಅಶೋಕ ಶೆಣೈ ಮತ್ತು ದಿ| ಅನಿತಾ ಶೆಣೈ ದಂಪತಿಯ ಪುತ್ರರಾಗಿದ್ದು, ಈಗ ಮಂಗಳೂರಲ್ಲಿ ನೆಲೆಸಿರುತ್ತಾರೆ.
ಕೋಟೇಶ್ವರ; ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು 2025 ಮೇ ತಿಂಗಳಲ್ಲಿ ನಡೆಸಿದ ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿರುವ CA ಎನ್. ಶಾಂತಾರಾಮ ನಾಯಕ್ & ಕೋ, ಲೆಕ್ಕ ಪರಿಶೋಧಕರ ಸಂಸ್ಥೆ ಇದರ ವಿದ್ಯಾರ್ಥಿನಿ ಅಮೃತ ಅವರು ಉತ್ತೀರ್ಣರಾಗಿರುತ್ತಾರೆ. ಇವರು ಕೋಟೇಶ್ವರದ ಹಳೆಅಳಿವೆ ಕುಂಬ್ರಿ ನಿವಾಸಿ ಬೇಬಿ ಮತ್ತು ಚಂದ್ರ ದೇವಾಡಿಗರ ಪುತ್ರಿಯಾಗಿರುತ್ತಾಳೆ.
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಾಚರಣೆಯನ್ನು ದಿನಾಂಕ 3 ಜುಲೈ 2025 ರಂದು ಆಚರಿಸಲಾಯಿತು . ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬ್ಯಾಗಗಳ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಜನರಿಗೆ ತಿಳಿಸಿ ಆದಷ್ಟು ಬಟ್ಟೆ ಬ್ಯಾಗ್ ಗಳನ್ನು ಉಪಯೋಗಿಸಿ ಪರಿಸರದ ಮೇಲಾಗುವ ಹಾನಿಯನ್ನು ಕಡಿಮೆ ಮಾಡಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕೆನ್ನುವ ಉದ್ದೇಶದಿಂದ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಉಚಿತವಾಗಿ […]
ಕುಂದಾಪುರ, ಜು.06 ರoದು, ಹಂಗಳೂರು ಸಂತ ಪಿಯುಸ್ 10 ನೇ ಚರ್ಚಿನಲ್ಲಿ ಕಥೋಲಿಕ ಸಭಾ ಘಟಕದ ವತಿಯಿಂದ ವನಮೋಹೋತ್ಸವ ದಿನಾಚರಣೆ ಮಾಡಲಾಯಿತು. ಸುಮಾರು 185 ಗಿಡ ಗಳ್ನನು, ವಿತರಿಸಲಾಯಿತು. ಚರ್ಚಿನ ಧರ್ಮಗುರು ವಂದನಿಯ ಆಲ್ಬರ್ಟ್ ಕ್ರಾಸ್ಥಾ ಗಿಡ ನೆಟ್ಟು ವನಮೋಹೋತ್ಸವಕ್ಕೆ ಚಾಲನೆ ನೀಡಿದರು. ಕಥೊಲಿಕ್ ಸಭಾ ಅಧ್ಯಕ್ಷ ಅಲೆಕ್ಸಾoಡರ್ ಲುವಿಸ್, ಕಾರ್ಯದರ್ಶಿ ಸಿಂತಿಯಾ ಫೆರ್ನಾಂಡಿಸ್, ವಾರಡೋ ಅಧ್ಯಕ್ಷ ರೆಮಿ ಫೆರ್ನಾಂಡಿಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜೇಮ್ಸ್ ಡಿಮೆಲ್ಲೋ, ಪಾಲನ ಮಂಡಳಿಯ ಕಾರ್ಯದರ್ಶಿ ರೇಷ್ಮಾ ಡಿಸೋಜಾ, ಕಥೋಲಿಕ್ […]
ಕುಂದಾಪುರ : ಕಳೆದ ಮೂವತ್ತು ವರ್ಷಗಳಿಂದ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಅಟೆಂಡರ್ (ಗ್ರೇಡ್ 2)ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮ ಹೆಚ್. ಅವರು ವಯೋನಿವೃತ್ತಿ ಹೊಂದಿದ್ದು ಆಸ್ಪತ್ರೆಯ ವತಿಯಿಂದ ಅವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗೇಶ್ ಅವರು ಕಳೆದ ಮೂವತ್ತು ವರ್ಷಗಳಿಂದ ಎಲ್ಲರಿಗೂ ಬೇಕಾದವರಾಗಿ ಅನನ್ಯ ಸೇವೆ ಸಲ್ಲಿಸಿರುವ ರಾಮ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಅವರ ಮುಂದಿನ ನಿವೃತ್ತಿ ಜೀವನ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರಿಸಿದರು. ತನ್ನ ಸೇವಾವಧಿಯಲ್ಲಿ […]
ಮಂಗಳೂರು, ಜುಲೈ 7, 2025 – ಮಂಗಳೂರಿನ ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಜೂನ್ 29, 2025 ರಂದು ಬೆಂದೋರ್ನ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಹಾಲ್ನಲ್ಲಿ ತನ್ನ “ಅಮ್ಚಿ ಕನೆಕ್ಟ್” ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಿತು. “ನನ್ನ ಸಂಘ, ನನ್ನ ಜವಾಬ್ದಾರಿ” ಎಂಬ ವಿಷಯದ ಅಡಿಯಲ್ಲಿ ನಡೆದ ಈ ಕಾರ್ಯಕ್ರಮವು ಸಂಸ್ಥೆಯ ಧ್ಯೇಯವನ್ನು ಪುನರುಜ್ಜೀವನಗೊಳಿಸುವುದು ಮತ್ತು ಕ್ಯಾಥೋಲಿಕ್ ಸಮುದಾಯದಲ್ಲಿ ಯುವ ಉದ್ಯಮಶೀಲತೆಯನ್ನು ಬೆಳೆಸುವುದರ ಮೇಲೆ ಕೇಂದ್ರೀಕರಿಸಿದೆ. ರಚನಾ ಅಧ್ಯಕ್ಷ ಶ್ರೀ ಜಾನ್ […]
ಕುಂದಾಪುರ; ದಿನಾಂಕ 6/7/25 ರಂದು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್ ಮಂಗಳೂರು ಹಾಗೂ ಸಂತ ಫ್ರಾನ್ಸಿಸ್ ಚರ್ಚಿನ ಸಹಯೋಗದಲ್ಲಿ ‘ಗುಮಟ್ ಗಿನ್ಯಾನ್ ‘ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಸಕ್ತರಿಗೆ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರರಾಗಿ ಮಂಗಳೂರಿನ ಪ್ರತಿಷ್ಠಿತ ಕೊಂಕಣಿ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್ ‘ ಇದರ ಪಿ ಆರ್ ಒ ಹಾಗೂ ಮ್ಯಾನೇಜರ್ ಆಗಿರುವ ವಿಕ್ಟರ್ ಮಥಾಯಸ್ ಹಾಗೂ ಅವರ ಸಂಗಡಿಗರಾದ ಡೆಲ್ಟನ್ ಲೋಬೊ, […]

