Monthi Feast Celebration at Our Lady of Miracles Church, Mangaluru ಮಂಗಳೂರು: ಮಂಗಳೂರಿನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ನಲ್ಲಿ ಮಾಂತಿ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಬಲಿದಾನವನ್ನು ರೆವರೆಂಡ್ ಫಾದರ್ ಬೊನಾವೆಂಚರ್ ನಜರೆತ್ ಮತ್ತು ಇತರ ಪಾದ್ರಿಗಳು ನೇತೃತ್ವ ವಹಿಸಿದ್ದರು.ಬಲಿದಾನಕ್ಕೆ ಮೊದಲು, ಹೊಸ ಬೆಳೆಯ ಆಶೀರ್ವಾದವನ್ನು ಮಾಡಲಾಯಿತು ಮತ್ತು ನಿಷ್ಠಾವಂತರು ಮೇರಿಗೆ ಹೂವುಗಳನ್ನು ಅರ್ಪಿಸಿದರು. ಆಚರಣೆಯು ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು, ಅಲ್ಲಿ ಕುಟುಂಬಗಳು ಮತ್ತು ಮಕ್ಕಳು ಆಳವಾದ ನಂಬಿಕೆ ಮತ್ತು ಭಕ್ತಿಯಿಂದ ಸೇರಿಕೊಂಡರು.ಬಲಿದಾನದ ಸಮಯದಲ್ಲಿ, […]
ಸಂತೆಕಟ್ಟೆ – ಕಲ್ಯಾಣಪುರದ ಮೌಂಟ್ ರೋಸರಿ ಚರ್ಚ್ನಲ್ಲಿ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಯಿತು ಪ್ರೀತಿಯಿಂದ ಮೊಂತಿ ಉತ್ಸವ ಎಂದು ಕರೆಯಲ್ಪಡುವ ಪೂಜ್ಯ ವರ್ಜಿನ್ ಮೇರಿಯ ಜನನ ಹಬ್ಬವನ್ನು ಸೋಮವಾರ, ಸೆಪ್ಟೆಂಬರ್ 8, 2025 ರಂದು ಸಂತೇಕಟ್ಟೆ–ಕಲ್ಲಿಯನ್ಪುರದ ಮೌಂಟ್ ರೋಸರಿ ಚರ್ಚ್ನಲ್ಲಿ ಅತ್ಯಂತ ಧಾರ್ಮಿಕ ಉತ್ಸಾಹ ಮತ್ತು ಸಾಂಪ್ರದಾಯಿಕ ಸಂತೋಷದಿಂದ ಆಚರಿಸಲಾಯಿತು. ಸಾಂಪ್ರದಾಯಿಕ ಹಿತ್ತಾಳೆ ಬ್ಯಾಂಡ್ ಉತ್ಸಾಹಭರಿತ ರಾಗಗಳನ್ನು ನುಡಿಸುತ್ತಾ, ಈ ಕುಟುಂಬ ಹಬ್ಬಕ್ಕೆ ಅಂಟಿಕೊಂಡಿರುವ ಪಾಲಿಸಬೇಕಾದ ಪದ್ಧತಿಗಳು ಮತ್ತು ಪರಂಪರೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಂತೆ ಇಡೀ ಚರ್ಚ್ ಆವರಣವು ಹಬ್ಬದ […]
ಪಡುಕೋಣೆ 8.9.2025, ರಂದು ದೇವರ ಅನುಗ್ರಹದಿಂದ ಜನ್ಮ ಪಾಪವಿಲ್ಲದೇ ಜನಿಸಿದ “ಮಹಾ ಮಾತೆ ಮರಿಯಮ್ಮ” ನ ಜನುಮದಿನವನ್ನು ವೈಭವದಿಂದ ಸಂತ ಅಂತೋನಿ ಚರ್ಚಿನಲ್ಲಿ ಆಚರಿಸಲಾಯಿತು. ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊ,ಅತಿಥಿಗಳಾಗಿ,ದಿವ್ಯ ಬಲಿಪೂಜೆಗೆ ಆಗಮಿಸಿದ, ವಂದನೀಯ ಫಾ! ರೊಬರ್ಟ್ ವಿನ್ಸೆಂಟ್ ಕ್ರಾಸ್ತಾ, ವಂದನೀಯ ಫಾ! ಮ್ಯಾಕ್ಸಿಮ್ ಡಿ’ಸೋಜ ಹಾಗೂ ಮಾತೆ ಮರಿಯಮ್ಮನ ಭಕ್ತರೆಲ್ಲರೂ ಸೇರಿ ಸಂಪ್ರದಾಯದಂತೆ ಬಾಲ ಮರಿಯ ಮಾತೆಯ ಪುಥಳಿಗೆ ಹೂವುಗಳ ಅರ್ಪಣೆ ಮಾಡಿ, ಹೊಸ ಫಲದ ಬತ್ತದ ತೆನೆಗಳನ್ನು ಗುರುಗಳು ಆಶೀರ್ವಾದಿಸಿ,ಮೆರವಣಿಗೆಯ ಮೂಲಕ ಚರ್ಚಿನ ಒಳಗಡೆ […]
ಕೋಟ: ಸಂತ ಜೊಸೆಫರ ಇಗರ್ಜಿಯಲ್ಲಿ ಮಾತೆ ಮರಿಯಮ್ಮನವರ ಜಲ್ಮದಿನಾಚರಣೆ ಹಾಗೂ ತೆನೆಹಬ್ಬವನು ಸಂಭ್ರಮದಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ತೆನೆಗಳನ್ನು ಆಶೀರ್ವಚಿಸಿದರು. ಅತಿಥಿ ಧರ್ಮಗುರುಗಳಾಗಿ ಗೋವಾ ಪಿಲಾರಿನ ಧರ್ಮಗುರು ವಂ। ಹೆಂಡ್ರಿ ಡಿಸೋಜಾ (ಎಫ್ ಎಕ್ಸ್ ಎಸ್) ಬಲಿದಾನದಲ್ಲಿ ಭಾಗಿಯದರು. ಮಾತೆ ಮರಿಯಮ್ಮನವರ ವಿಗ್ರಹವನ್ನು ಮೆರವಣಿಗೆಯಲ್ಲಿ ಚರ್ಚಿಗೆ ಕೊಂಡೊಯ್ಯಲಾಯಿತು. ಮಕ್ಕಳು ಹೂಗಳನ್ನು ಅರ್ಪಿಸಿದರು. ನಂತರ ಪವಿತ್ರ ಬಲಿಪೂಜೆ ನಡೆಯಿತು. ಬಲಿಪೂಜೆಯ ನಂತರ, ಹೊಸ ತೆನೆ ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಸಾಂಪ್ರದಾಯಿಕವಾಗಿ ಕಬ್ಬುಗಳನ್ನು […]
ಬೈಂದೂರೂ; ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ತೆನೆ ಹಬ್ಬ ಮೊಂತಿ ಫೆಸ್ತ್ ನ್ನು ಉಡುಪಿಯ ರೆ. ಫಾ. ಅಶ್ವಿನ್ ಆರಾನ್ಹಾ , ಚರ್ಚಿನ ಧರ್ಮಗುರು ರೆ.ಫಾ. ವಿನ್ಸೆಂಟ್ ಕುವೆಲ್ಲೊ ಮತ್ತು ಬ್ರದರ್ ಪ್ರಥ್ವಿ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಎಲ್ಲಾ ಕುಟುಂಬದವರಿಗೆ ಹೊಸ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಹಬ್ಬದ ಬಲಿದಾನದಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷರು ಕಾರ್ಯದರ್ಶಿ, ಆಯೋಗಗಳ ಸಂಚಾಲಕಿ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದರು.
Pratibha Award from John D’Sliva Foundation and Catholic Sabha Udupi (R) ಉಡುಪಿ; ಬಹುನಿರೀಕ್ಷಿತ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವು ನೋಂದಣಿ ಮತ್ತು ಉಪಹಾರದೊಂದಿಗೆ ಪ್ರಾರಂಭವಾಯಿತು, ನಂತರ ಬೆಳಿಗ್ಗೆ 10.00 ಗಂಟೆಗೆ ಕ್ಯಾಥೋಲಿಕ್ ಸಭಾದ ಸಾಂಪ್ರದಾಯಿಕ ಪ್ರಾರ್ಥನೆಗಳು ನಡೆದವು. ಕಾರ್ಯಕ್ರಮದ ಸಂಚಾಲಕ ಮತ್ತು ಮಂಗಳೂರು ಪ್ರದೇಶದ ಕ್ಯಾಥೋಲಿಕ್ ಸಭಾದ ಮಾಜಿ ಅಧ್ಯಕ್ಷರಾದ ಡಾ. ಜೆರಾಲ್ಡ್ ಪಿಂಟೊ ಅವರು ಸಭೆಗೆ ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ದಿನದ ಮಹತ್ವದ ಕುರಿತು ಚಿಂತನಶೀಲ ಪರಿಚಯವನ್ನು […]
ಕೋಟ ಸಂತ ಜೊಸೆಫರ ಇಗರ್ಜಿಯಲ್ಲಿ ಯುವಕರ ದಿನಾಚರಣೆಯನ್ನು ಸೆಪ್ಟೆಂಬರ್ 7 ರಂದು ಆಚರಿಸಲಾಯಿತು. ಪವಿತ್ರ ಬಲಿಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಉಡುಪಿ ಧರ್ಮ ಪ್ರಾಂತ್ಯದ ಯುವ ಸಂಘಟನೆಗಳ ನಿರ್ದೇಶಕರಾದ ವಂದನೀಯ ಫಾದರ್ ಸ್ಟೀವನ್ ಫೆರ್ನಾಂಡಿಸ್ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಬಲಿಪೂಜೆಯಲ್ಲಿ ಸಹಕರಿಸಿದರು. ನಂತರ ಯವಕರಿಗಾಗಿ ವಿಶೇಶ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟಾನಿ ತಾವ್ರೊ ಅವರು ಪ್ರಾಸ್ತವಿಕ ಭಾಶಣ ಮಾಡಿದರು. ವಂದನೀಯ ಸ್ಟೀವನ್ ಫೆರ್ನಾಂಡಿಸ್ ಯುವಕರಿಗೆ […]
ಕುಂದಾಪುರ; ಸಂತ ಜೋಸೆಫ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಪ್ರೇಮಿಕಾ ಇವರಿಗೆ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರ ನಿಷ್ಠಾವಂತ ಸರಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಡುಪಿ ಜಿಲ್ಲೆ ಮತ್ತು ಆದರ್ಶ ಆಸ್ಪತ್ರೆಯವರ ಸಹಯೋಗದಲ್ಲಿ ನೀಡಲಾಗುವ ಉಡುಪಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಇದಾಗಿರುತ್ತದೆ. ಭಗಿನಿ ಶಿಕ್ಷಕಿ ಪ್ರೇಮಿಕಾ ಇವರನ್ನು ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ, ಸಂತ […]
ಶಿರೂರು : ಜ್ಞಾನದಾ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ ನಾಯ್ಕ್ ಇವರು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ ಉತ್ತಮ ಕ್ರೀಡಾಪಟು, ಕಬಡ್ಡಿ ಆಟಗಾರ ಮತ್ತು ತರಬೇತಿದಾರರಾದ ಇವರ ನಿಷ್ಠಾವಂತ, ಸರಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಡುಪಿ ಜಿಲ್ಲೆ ಮತ್ತು ಆದರ್ಶ ಆಸ್ಪತ್ರೆಯವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಶಸ್ತಿ ದಿನಾಂಕ 7/09/2025 ರಂದು ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಯಿತುಶ್ರೀಯುತರನ್ನು […]

