ಕುಂದಾಪುರ ; ದಿನಾಂಕ 05-6-2026 ರಂದು ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಪ್ರದರ್ಶಿಸಿದರು. ಪರಿಸರಕ್ಕೆ ಸಂಬಂಧಿಸಿದ ಗೀತೆಯನ್ನು ವಿದ್ಯಾರ್ಥಿಗಳು ನೆರವೇರಿಸಿದರು. ಶಾಲಾ ಶಿಕ್ಷಕಿಯಾದ ಶ್ರೀಮತಿ ಶ್ರೀಲತಾ ಇವರು ವಿಶ್ವ ಪರಿಸರ ದಿನದ ಮಹತ್ವದ ಬಗ್ಗೆ ಮಾತನಾಡಿ ಪ್ರತಿಯೊಂದು ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಸುತ್ತಲಿನ ಪರಿಸರ ಎಷ್ಟು ಚೆನ್ನಾಗಿರುತ್ತದೆಯೋ ಅಷ್ಟೇ ನಾವು ಆರೋಗ್ಯವಾಗಿರುತ್ತೇವೆ. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. […]
ಊರಲ್ಲೇ ಇದ್ದು ಅಪರೂಪದ ವ್ಯವಸ್ಥೆ ಕಟ್ಟಿದ ಮಹಾ ಸಾಧಕ ಡಾ. ರಾಜೇಶ್ ಬಾಯರಿ: ಶಾಸಕ ಗುರುರಾಜ್ ಗಂಟಿಹೊಳೆ ಶ್ಲಾಘನೆ ಯಾವುದೇ ಜಾಹೀರಾತಿಲ್ಲದೆ, ಕೇವಲ ಬಾಯಿಮಾತಿನ ಪ್ರಚಾರದಿಂದಲೇ ದೇಶ-ವಿದೇಶಗಳ ರೋಗಿಗಳನ್ನು ಆಕರ್ಷಿಸುತ್ತಿರುವ ಸಂಸ್ಥೆ ಕುಂದಾಪುರ, ಜೂನ್ 5, 2026: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರಾವಳಿಯ ಹೆಮ್ಮೆಯ ಆಯುರ್ವೇದ ಸಂಸ್ಥೆಯಾದ ಕುಂದಾಪುರದ ಆಲೂರು ತಾಲೂಕಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಹಸಿರು ಕ್ರಾಂತಿಯೊಂದಿಗೆ ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಪರಿಸರಕ್ಕೆ ವಿಶೇಷ ಕೊಡುಗೆ ನೀಡುವ ಹಾಗೂ ಮುಂದಿನ ಪೀಳಿಗೆಗೆ ಆಯುರ್ವೇದ […]
ಕುಂದಾಪುರ: ಜೂನ್ 3ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಯು .ಎಸ್ . ಶೆಣೈ ಅಧ್ಯಕ್ಷೀಯ ನುಡಿಗಳನಾಡಿದರು.ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರ ಆಚಾರಿ ವಿದ್ಯಾರ್ಥಿಗಳಿಗೆ ಕಾಲೇಜಿನ ಸವಿವರ ಮಾಹಿತಿಯನ್ನು ನೀಡಿದರು.ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಅಂಕ ಪಡೆದು ರ್ಯಾಂಕ್ ವಿದ್ಯಾರ್ಥಿಗಳಾದ ಸಂಕಲ್ಪ್ ಕುಮಾರ್, ಮನೋಜ್, ಭೂಮಿಕಾ, ಗೌರಿ ಹಾಗೂ ಗಂಗಾ […]
ವಿಶ್ವಪರಿಸರ ದಿನ 2026 ಘೋಷವಾಕ್ಯ “ಹವಾಮಾನ ಕ್ರಮ ಮತ್ತು ಹವಾಮಾನದೊಂದಿಗಿನ ನಮ್ಮ ಸಂಬಂಧವನ್ನು ದುರಸ್ತಿಗೊಳಿಸುವುದು” ಮಂಗಳೂರು; ಜೂನ್ 5, ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ ಕಾಸ್ಸಿಯಾ, ಜೆಪ್ಪು ಶಾಲೆಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ 10ನೇ ತರಗತಿಯ ವಿದ್ಯಾರ್ಥಿಗಳು ಪರಿಸರ ಜಾಗೃತಿಯ ಕುರಿತು ಸುಶ್ರಾವ್ಯ ಗೀತೆಯನ್ನು ಪ್ರಸ್ತುತ ಪಡಿಸಿ ವಿಶ್ವಪರಿಸರ ದಿನಾಚರಣೆಯ ಸಂದೇಶವನ್ನು ಸಾರಿದರು.ಹಂಶಿಕಾ 10ನೇ ತರಗತಿ ಇವರು ವಿಶ್ವಪರಿಸರ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ಈ […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಸರೋಜ ಎಮ್ ಅವರು ಆಯ್ಕೆಗೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ ಆಡಳಿತ ಮಂಡಳಿ ಭೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ತಿಳಿಸಿದ್ದಾರೆ.ಡಾ. ಸರೋಜ ಎಮ್ ಅವರು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 20 ವರ್ಷಗಳಿಂದ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಮತ್ತು ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮಂಗಳೂರು; ಕೊಂಕಣಿ ಲೇಖಕ, ಕವಿ ಹಾಗೂ ಪತ್ರಕರ್ತ ಶ್ರೀ ಆವಿಲ್ ರಸ್ಕೀನ್ಹಾ ಅವರ ಪ್ರಪ್ರಥಮ ಕನ್ನಡ ಕವನ ಸಂಕಲನ ‘ಬಣ್ಣಗಳ ಚಿತ್ತಾರ ‘ ಪುಸ್ತಕದ ಲೊಕಾರ್ಪಣೆ ಸಮಾರಂಭ ಮೇ 31 ರಂದು ಸಂಜೆ 4.30ಕ್ಕೆ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಪುಸ್ತಕ ಲೊಕಾರ್ಪಣೆಗೊಳಿಸಿದ ಕರ್ನಾಟಕ ರಾಜ್ಯೋತ್ಸವ ಕನ್ನಡ ಸಾಹಿತ್ಯ ಪ್ರಶಸ್ತಿ ವಿಜೇತ ವಂ| ಪ್ರಶಾಂತ್ ಮಾಡ್ತ ಅವರು “ಕವಿತೆಗಳನ್ನು ರಚಿಸುವ ವಿಧಾನ ಇಂದು ಬದಲಾಗಿದೆ. ದಶಕಗಳ ಹಿಂದೆ ಪ್ರಾಸ ಮತ್ತು ಅಲಂಕಾರಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. […]
ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಬದುಕಿನಲ್ಲಿ ಜ್ಞಾನದ ಬೆಳಕು ಹರಡಿದ ಕುಂದಾಪುರದಲ್ಲಿನ ಶಿಕ್ಷಕಿ ಜೂಲಿಯಾನ ಡಯಾಸ್ ಅವರು ಮೇ 31 ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದಾರೆ. ತಮ್ಮ ಬೋಧನಾ ಬದುಕಿನ ಆರಂಭವನ್ನುಕುಂದಾಪುರ ಸಂತ ಮೇರಿಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿದರು. ನಂತರ ಸರಕಾರಿ ಶಾಲೆಗೆ ಆಯ್ಕೆಯಾಗಿ ಕೆರಾಡಿಯ ಅಯ್ಯಂಗಾರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಎರಡುವರೆ ವರ್ಷಗಳ ಸೇವೆಯೊಂದಿಗೆ ಆರಂಭಿಸಿದರು ಬಳಿಕ ಜಡ್ಕಲಿನ ಸರಕಾರಿ ಶಾಲೆಯಲ್ಲಿ […]
ಮಂಗಳೂರು; ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ, ಜೆಪ್ಪು ಇಲ್ಲಿ ದಿನಾಂಕ 03-06-2026, ಬುಧವಾರದಂದು ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕ ಹುದ್ದೆಗಳಿಗೆ ಚುನಾವಣೆ ನಡೆಯಿತು.6, 7, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಮತವನ್ನು ಚಲಾಯಿಸಿ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದರು. ಈ ಚುನಾವಣೆಯಲ್ಲಿ 10ನೇ ತರಗತಿಯ ಮೆಕ್ಟಿನ್ ಪ್ರೇಮ್ ಸಿಕ್ವೇರಾ ಅವರು 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದು, 9ನೇ ತರಗತಿಯ ಭುವನ್ ಅವರು ಶಾಲಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.ನೂತನವಾಗಿ ಆಯ್ಕೆಯಾದ […]
Milagres College of Nursing; World No Tobacco Day Observation 2026 ಮಂಗಳೂರು; ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್, ಮಿಲಾಗ್ರೆಸ್ ಚರ್ಚ್ ಯುವಕ ಸಂಘಗಳಾದ (ICYM & YCS) ಸಹಯೋಗದೊಂದಿಗೆ, 2026ರ ಮೇ 31ರಂದು “ತಂಬಾಕು ಮತ್ತು ನಿಕೋಟಿನ್ ವ್ಯಸನದ ಆಕರ್ಷಣೆಯನ್ನು ಬಯಲಿಗೆಳೆಯೋಣ” ಎಂಬ ಧ್ಯೇಯವಾಕ್ಯದಡಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸಿತುಕಾರ್ಯಕ್ರಮವು ಜಾಗೃತಿ ರ್ಯಾಲಿಯೊಂದಿಗೆ ಆರಂಭಗೊಂಡಿತು. ಈ ರ್ಯಾಲಿಗೆ ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್ನ ಕರಸ್ಪಾಂಡೆಂಟ್ ರೆವ. ಫಾ. ಐವನ್ ಮೈಕಲ್ ರೋಡ್ರಿಗಸ್ ಅವರು […]

