

ಕುಂದಾಪುರ; ಶ್ರೀ ನಾರಾಯಣಗುರು ಯುವಕ ಮಂಡಲ (ರಿ.) ಕುಂದಾಪುರ ದಿವಂಗತ ಸುರೇಶ್ .ಎಸ್ ಪೂಜಾರಿ ಪಡುಕೋಣೆಯವರ ಸ್ಮರಣಾರ್ಥ ಸಂತ ಜೋಸೆಫರ ಅನಾಥಾಲಯದ ಮಕ್ಕಳಿಗೆ
ಆಹಾರ ವಿತರಣೆ.
ಈ ಸಂದರ್ಭದಲ್ಲಿ ಅನಾಥಾಲಯದ ಮೇಲ್ವಿಚಾರಕರಾದ ಸಿಸ್ಟರ್ ನಂದಿಕಾ ನಾರಾಯಣಗುರು ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸ್ವಾಗತಿಸಿ ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.
ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಮಾತನಾಡಿ ‘ ನಾವು ಮಕ್ಕಳನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ಮಾಡಲು ಅವರಿಗೆ ಉತ್ತಮ ಶಿಕ್ಷಣದ ಜೊತೆ ಸಕಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ.ಅನೇಕ ಸಂಘ ಸಂಸ್ಥೆಗಳು ನಮ್ಮ ಮಕ್ಕಳಿಗೆ ಬೇಕಾದ ಸಹಾಯವನ್ನು ಉದಾರ ಮನಸ್ಸಿನಿಂದ ನೀಡುತ್ತಿದ್ದಾರೆ.ನಾರಾಯಣ ಗುರು ಸಂಘದಿಂದ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವೆ ಸಿಗಲಿ’ ಎಂದು ಹಾರೈಸಿದರು.
ಬಿಲ್ಲವ ಸಮಾಜ ಸೇವಾ ಸಂಘ(ರಿ.)ಕುಂದಾಪುರ ಇದರ ಗೌರವಾಧ್ಯಕ್ಷರು ಮತ್ತು ಶ್ರೀ ನಾರಾಯಣಗುರು ಶೈಕ್ಷಣಿಕ & ಸಾಂಸ್ಕೃತಿಕ ದತ್ತಿ ಸಂಸ್ಥೆ(ರಿ.)ಕುಂದಾಪುರ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೊಡುಗೈ ದಾನಿ ಸಮಾಜ ಸೇವಕ ಸುಖ್ ಸಾಗರ್ ಹೊಟೇಲ್ ಮಾಲೀಕರಾದ ಸುರೇಶ್ .ಎಸ್ ಪೂಜಾರಿ ಪಡುಕೋಣೆ ಇವರ ಸ್ಮರಣಾರ್ಥವಾಗಿ ಶ್ರೀ ನಾರಾಯಣಗುರು ಯುವಕ ಮಂಡಲ (ರಿ.) ಕುಂದಾಪುರ ಇವರ ವತಿಯಿಂದ ಕುಂದಾಪುರದ ಸಂತ ಜೋಸೆಫ್ ಆಶ್ರಯ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ಆಹಾರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನಾರಾಯಣಗುರುಯುವಕ ಮಂಡಲದ ಅಧ್ಯಕ್ಷರಾದ ರವೀಂದ್ರ ಪೂಜಾರಿ ಹಂಗಳೂರು, ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುಂದಾಪುರ ಅಧ್ಯಕ್ಷರಾದ ಅಶೋಕ ಪೂಜಾರಿ ಬೀಜಾಡಿ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಕೆ ಪ್ರೇಮಾನಂದ, ಯುವಕ ಮಂಡಲದ ನಿದೇಶಕರುಗಳಾದ ಸತೀಶ್ ಕೋಟ್ಯಾನ್, ಕೆ.ಟಿ ಗಣೇಶ್ ಅಮೀನ್, ದಿವಾಕರ ಕಡ್ಗಿಮನೆ, ಯುವಕ ಮಂಡಲದ ನಿಕಟ ಪೂರ್ವಾಧ್ಯಕ್ಷರಾದ ಸಂದೇಶ ಪೂಜಾರಿ ಬೀಜಾಡಿ, ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ಬೀಜಾಡಿ, ಕುಂದಾಪುರ ನಗರ ಪ್ರಾಧಿಕಾರದ ಸದಸ್ಯರಾದ ಚಂದ್ರ ಅಮೀನ್ , ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ, ಯುವಕ ಮಂಡಲ ಮತ್ತು ಬಿಲ್ಲವ ಸಂಘದ ನಿರ್ದೆಶಕರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರ ಜೊತೆ ಸ್ಥಳೀಯರಾದ ಆಶಾ ಕರ್ವಾಲ್ಲೊ, ಕ್ಲಿಫರ್ಡ್ ಡಿ’ಸಿಲ್ವಾ,ವಿವೇಕ್ ಚರ್ಚ್ ರಸ್ತೆ ಉಪಸ್ಥಿತಿತರಿದ್ದರು.
ಅನಾಥಾಲಯದ ಮಕ್ಕಳು ಗೀತೆಯ ಮುಖಾಂತರ ಧನ್ಯವಾದ ವ್ಯಕ್ತ ಪಡಿಸಿದರು.




































