

ಶ್ರೀನಿವಾಸಪುರ: ಪಟ್ಟಣದ ಸಾರ್ವಜನಿಕರ ಸುರಕ್ಷತಿಗಾಗಿ ಪಟ್ಟಣದ ಎಂಟು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ ಅವರು ತಿಳಿಸಿದ್ದಾರೆ.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿಯೂ ಏರಿಕೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ ಸಹಕಾರದಿಂದ ವಿವಿಧ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಳವಡಿಸಲಾದ ಸ್ಥಳಗಳೆಂದರೆ ಇಂದ್ರ ಭವನ್ ವೃತ್ತ , ಮುಳಬಾಗಿಲು ವೃತ್ತ , ವೇಣು ಶಾಲೆ ವೃತ್ತ , ಸಂತೆ ಮೈದಾನದ ಪಂಪುಹೌಸ್, ಚಿಂತಾಮಣಿ ರಸ್ತೆಯ ಮಾವು ಜ್ಯೂಸ್ ಫ್ಯಾಕ್ಟರಿ ಮುಂಭಾಗ , ಮುಳಬಾಗಿಲು ರಸ್ತೆಯ ದರ್ಗಾ ಮುಂಭಾಗ , ಚಿಂತಾಮಣಿ ವೃತ್ತ , ತರಕಾರಿ ಮಾರುಕಟ್ಟೆ ವೃತ್ತ , ಈ ಎಲ್ಲಾ ಕ್ಯಾಮೆರಾಗಳು 360 ಡಿಗ್ರಿ ಸುತ್ತಳತೆಯಲ್ಲಿ ಕಾರ್ಯನಿರ್ವಹಿಸು ತ್ತವೆ. ಜೊತೆಗೆ ಧ್ವನಿಯನ್ನೂ ಸೆರೆಯುವ ಸಾಮರ್ಥ್ಯ ಹೊಂದಿವೆ. ಈ ದೃಶ್ಯಗಳನ್ನು ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ನೇರವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಅಪರಾಧ ನಿಯಂತ್ರಣ ಮತ್ತು ನಿಗಾ ವಹಿಸಲು ಇದು ಅತ್ಯಂತ ಪರಿಣಾಮಕಾರಿ ಸಾಧನವಾಗಲಿದೆ. ಎಲ್ಲಾ ಕ್ಯಾಮೆರಾಗಳು ಸೌರಶಕ್ತಿ ಆಧಾರಿತವಾಗಿದ್ದು, ದಿನದ 24 ಗಂಟೆಯೂ ನಿರಂತರ ಕಾರ್ಯನಿರ್ವಹಿಸುತ್ತವೆ. ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆ ಮತ್ತು ಪುರಸಭೆಯ ಜಂಟಿ ಈ ಪ್ರಯತ್ನ ಪಟ್ಟಣದ ಸುದ್ಧಿಸುಧಾರಣೆಗೆ ಮತ್ತೊಂದು ಹೆಜ್ಜೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

















































