ಶ್ರೀನಿವಾಸಪುರ : ಕೆಂಪೇಗೌಡರು ಬೆಂಗಳೂರು ನಿರ್ಮಾಣಕರ್ತೃ, ಬೆಂಗಳೂರನ್ನು ಎಲ್ಲ ಸಮುದಾಯಗಳ ಸಹಕಾರ ದೊಂದಿಗೆ ಬೆಳಸಿ ಇಂದು ದೇಶದಲ್ಲೆ ಬೆಂಗಳೂರು ಹೆಚ್ಚು ಬೆಳೆಯುತ್ತಿರುವ ನಗರವಾಗಿ ಬಿಂಬಿಸುತ್ತಿದೆ. ಎಲ್ಲಾ ಜಾತಿ ಜನಾಂಗದವರು ಕೆಂಪೇಗೌಡರನ್ನ ನೆನೆಯಬೇಕು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಂದರು.ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗು ಒಕ್ಕಲಿಗ ಸಮುದಾಯವತಿಯಿಂದ ಹಮ್ಮಿಕೊಳ್ಳಲಾದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.ಕ್ಷೇತ್ರದ ಜನತೆಯ ಋಣವನ್ನು ತೀರಿಸಿಕೊಳ್ಳುವ ಸಲುವಾಗಿ ಹಗಲಿರಲು ನಿಮ್ಮ ಸೇವೆ ಮಾಡಲು ಸಿದ್ದನಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ […]
ಶ್ರೀನಿವಾಸಪುರ : ಈಗಾಗಲೇ ಕೇಂದ್ರ, ರಾಜ್ಯ ಸರ್ಕಾರದ ಸಹಮತದೊಂದಿಗೆ 4 ರೂ ಬೆಂಬಲ ಬೆಲೆ ನೀಡಿದ್ದು, ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಮಾರುಕಟ್ಟೆಯಲ್ಲಿ ಮಾವಿನ ಬೆಲೆಯು ಏತಕ್ಕಾಗಿ ಕುಸಿದಿದೆ ಎಷ್ಟು ಉತ್ಪಾದನೆ ಆಗಿದೆ, ಎಷ್ಟು ಪೂರೈಕೆ ಆಗಿದೆ ಎಂಬುದನ್ನ ಕುಲಂಕುಶವಾಗಿ ಪರಿಶೀಲಿಸಬೇಕಾಗಿತ್ತು. ಎಂದು ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮರಡಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕೆಪಿಆರ್ಎಸ್ವತಿಯಿಂದ ಮಾವು ಬೆಳೆಯ ವಿಚಾರವಾಗಿ ನಡೆದ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.ಮಾರುಕಟ್ಟೆಯಲ್ಲಿ ಬೇಡಿಕೆ, […]
ಶ್ರೀನಿವಾಸಪುರ, ಜೂನ್ 26: ಮಾವು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಅವರು ಜಿಲ್ಲಾಧಿಕಾರಿ ಎಂ.ಆರ್. ರವಿಯವರೊಂದಿಗೆ ಮಾತನಾಡುತ್ತಾ, ರಾಜ್ಯ ಸರ್ಕಾರ ಪ್ರಸ್ತುತ ಘೋಷಿಸಿರುವ ಬೆಂಬಲ ಬೆಲೆಗೆ ಸ್ವಾಗತ ವ್ಯಕ್ತಪಡಿಸಿದರು. ಆದರೆ, ಬೆಂಬಲ ಬೆಲೆಗೆ ವಿಧಿಸಿರುವ ನಿಬಂಧನೆಗಳು ಕೇವಲ ಕೆಲವು ರೈತರಿಗೆ ಮಾತ್ರ ಪ್ರಯೋಜನವಾಗುವಂತಹವುಗಳಾಗಿದ್ದು, ಇವುಗಳನ್ನು ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು. ಸದ್ಯದ ಮಾವು ಉತ್ಪಾದನೆಯ ಪ್ರಮಾಣ ಕಡಿಮೆ ಇದೆ. ೧೦ ಟನ್ ಅಥವಾ ೨ ಹೆಕ್ಟರ್ ಹೊಂದಿರುವ ರೈತರಿಗೆ ಮಾತ್ರ ಬೆಂಬಲ ಬೆಲೆ […]
ಶ್ರೀನಿವಾಸಪುರ : ಯುವಕರು ಪೋನ್ ಬಳಕೆಯಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದ್ದು, ಯುವಕರು ದುಶ್ಟಗಳಿಂದ ದೂರ ಇದ್ದು ನಿಮ್ಮ ತಂದೆತಾಯಿಯ ಆಶಯದಂತೆ ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆದು ಅವರ ಕನಸು ನನಸು ಮಾಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಕರೆ ನೀಡಿದರು.ತಾಲೂಕಿನ ರೋಣೂರು ಕ್ರಾಸ್ನ ವಿಐಪಿ ಶಾಲೆಯಲ್ಲಿ ಗುರುವಾರ ಮಾದಕ ದ್ರವ್ಯ ವಸ್ತು ವಿರೋಧಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.112ಗೆ ಪೋನ್ ಮಾಡಿದರೆ ನೀವು ಯಾವ ಜಾಗದಲ್ಲಿ ತೊಂದರೆ ಒಳಪಟ್ಟಿದ್ದೀರಿ ಅಲ್ಲಿನ ಲೊಕೇಶನ್ ಪತ್ತೆ ಹಚ್ಚಿ […]
ಶ್ರೀನಿವಾಸಪುರ, ಜೂನ್ 25: ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಕೊರತೆಯಿಂದ ವಿದ್ಯಾರ್ಥಿಗಳು ಪ್ರತಿದಿನವೂ ತೀವ್ರ ತೊಂದರೆಗಳನ್ನು ಅನುಭವಿಸುತ್ತಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪ್ರಧಾನಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯರಾದ ಶಬ್ಬಿರ್ ಅಹ್ಮದ್ ಪಾಷಾ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪತ್ರದಲ್ಲಿ ಅವರು, “ಶಾಲೆಯಲ್ಲಿ […]
ಶ್ರೀನಿವಾಸಪುರ : ಕೋಮುಲ್ ಚುನಾವಣೆಯಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಬೆಂಬಲಿಗರಾದ ಅಡ್ಡಗಲ್ ಕ್ಷೇತ್ರದಿಂದ ಕೆ.ಕೆ.ಮಂಜುನಾಥರೆಡ್ಡಿ, ಯಲ್ದೂರು ಕ್ಷೇತ್ರದಿಂದ ಎನ್. ಹನುಮೇಶ್ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ರವರ ಕೈ ಬಲಡಿಸಿದ್ದಾರೆ. ಕಾರ್ಯಕರ್ತರ ಜೊತೆ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡ ಕೆ. ಆರ್. ಹರ್ಷ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭಾ ಅಧ್ಯಕ್ಷ ಬಿ. ಆರ್ .ಭಾಸ್ಕರ್, ಸಹಸರಾದ ಸಂಜಯ್ ಸಿಂಗ್, ಎನ್. ಎನ್. ಆರ್. ನಾಗರಾಜ್, ನಾಮನಿ ಸದಸ್ಯರಾದ ಶಿವರಾಜ್, […]
ಶ್ರೀನಿವಾಸಪುರ, ಜೂನ್ 24: “ಆರ್ಯವೈಶ್ಯ ಸಮುದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವದ ವಾಸವಿ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲು ನಾವು ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಈ ಬಾರಿ ಆದರೂ ಸರ್ಕಾರ ಇದಕ್ಕೆ ಸ್ಪಂದಿಸಬೇಕೆಂದು ನಿರೀಕ್ಷಿಸುತ್ತೇವೆ,” ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಕುಮಾರ್ ಹೇಳಿದರು.ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕನ್ಯಕಾಪರಮೇಶ್ವರಿ ದೇವಾಲಯದ ೩೪ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಮುದಾಯದ ಮೇಲುಕ್ವೆದ […]
ಶ್ರೀನಿವಾಸಪುರ: ಪಾಕೇಟ್ ಮತ್ತು ಪತ್ರ ತಲುಪಿಸುವಲ್ಲಿ ಪರಿಣತಿ ಪಡೆದಿರುವ ದಿ ಪ್ರೊಫೆಷನಲ್ ಕೊರಿಯರ್ ಸಂಸ್ಥೆ, ಈಗ ಕಾಲಚಕ್ರದ ಬದಲಾವಣೆಗೆ ಅನುಗುಣವಾಗಿ ಪಾರ್ಸಲ್ ಹಾಗೂ ಕಾರ್ಗೋ ಸೇವೆಗಳತ್ತ ಸುವ್ಯವಸ್ಥಿತ ಹೆಜ್ಜೆ ಇಡುತ್ತಿದೆ ಎಂದು ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಮನೋಜ್ ಕುಮಾರ್ ತಿಳಿಸಿದ್ದಾರೆ.ಪಟ್ಟಣದ ಕಿಟ್ ಕಂಪ್ಯೂಟರ್ ಸಂಸ್ಥೆ ಸಭಾಂಗಣದಲ್ಲಿ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ದಿ ಪ್ರೊಫೆಷನಲ್ ಕೊರಿಯರ್ ಭಾರತದಲ್ಲಿ ಅತಿದೊಡ್ಡ ಕೊರಿಯರ್ ಮತ್ತು ಕಾರ್ಗೋ ಸಂಸ್ಥೆಗಳಲ್ಲಿ ಒಂದು. ಇದು ರಾಷ್ಟ್ರೀಯ ಹಾಗೂ […]
ಕೋಲಾರ: ಪ್ರಧಾನಮಂತ್ರಿ ಅವರ ಹೊಸ 15 ಅಂಶಗಳ ಕಾರ್ಯಕ್ರಮದ ಭಾಗವಾಗಿ, ಜಿಲ್ಲಾ ಮಟ್ಟದ ಸಮಿತಿ (DLC)ಯಿಂದ ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ, ಉದ್ಯೋಗ ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಕೋಲಾರದ ಮೌಲಾನಾ ಆಜಾದ್ ಭವನದಲ್ಲಿ ಜಾಗೃತಿ ಸಭೆಯನ್ನು ಆಯೋಜಿಸಲಾಯಿತು. ಸಭೆಯಲ್ಲಿ ಕೆಎಂಡಿಸಿ ವ್ಯವಸ್ಥಾಪಕಿ ಶ್ರೀಮತಿ ಶೆರೀನ್ ತಾಜ್ ಅವರು ನಿಗಮದ ವಿವಿಧ ಯೋಜನೆಗಳ ವಿವರ […]

