ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದ್ರಸ ಬಂಟ್ವಾಳದ ಇರಾ ಮೂಲೆ ಯಲ್ಲಿ ಅತೀ ಪ್ರೌಢವಾಗಿ 29/03/26 ಭಾನುವಾರದಂದು ನಡೆಯಿತು. ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು.ಬದ್ರ್ ಶುಹದಾಗಳನ್ನು ಸ್ಮರಿಸಿ ದುಆ ಕ್ಕೆ ನೇತೃತ್ವ ನೀಡಿದ ಖತೀಬ್ ಉಸ್ತಾದ್ ಯಾಕೂಬ್ ಲತೀಫಿ ಸಭೆಯನ್ನು ಉದ್ಘಾಟನೆ ನಿರ್ವಹಿಸಿ,ಇಲ್ಮಿನ ಶ್ರೇಷ್ಠತೆ, ಪ್ರಾಧಾನ್ಯತೆಯ ಬಗ್ಗೆ ಅರಿವು ಮೂಡಿಸಿದರು.ನಂತರ ಮಾತಾಡಿದ ಸದರ್ ಉಸ್ತಾದ್ ಝೈನುಲ್ ಆಬಿದ್ ನಈಮಿ ಮದ್ರಸಾ ನಿಯಮಾವಳಿಗಳನ್ನು ರಕ್ಷಕರಿಗೂ ಮಕ್ಕಳಿಗೂ ಜಾಗೃತಿ ಮೂಡಿಸಿದರು.ಜೊತೆಗೆ ಸ್ವಾಗತ ಭಾಷಣದಲ್ಲಿ ಮಾತಾಡಿದ ಮುಅಲ್ಲಿಂ ನುಅ್-ಮಾನ್ ಸಅದಿ ಉಸ್ತಾದ್ […]
ಬೆಂಗಳೂರು; ರಾಜ್ಯದಲ್ಲಿ ಬಿಸಿಲಿನ ಝಳದಿ೦ದ ಕ೦ಗಾಲಾಗಿದ್ದ ಜನತೆಗೆ ಹವಾಮಾನ ಇಲಾಖೆಯಪ್ರಕಾರ ಮಾರ್ಚ್ 30 ರಿ೦ದ ಏಪ್ರಿಲ್ 5 ರವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತಮಳೆಯಾಗುವ ಸಾಧ್ಯತೆಯಿದೆ ಎ೦ದು ಮುನ್ಸೂಚನೆ ನೀಡಲಾಗಿದೆ. ಬ೦ಗಾಳಕೊಲ್ಲಿಯ ಮೇಲ್ಮೈ ಸುಳಿಗಾಳಿ ದುಬ್ಬಲಗೊಳ್ಳುತ್ತಿರುವ ಪರಿಣಾಮವಾಗಿ ರಾಜ್ಯದ ವಿವಿಧೆಡೆಹವಾಮಾನದಲ್ಲಿ ಏರುಪೇರಾಗಲಿದ್ದು, ವರುಣನ ಆಗಮನವಾಗಲಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ರಾಜ್ಯದ ಈ ಕೆಳಗಿನ ಭಾಗಗಳಲ್ಲಿ ಮಳೆಯ ಆರ್ಭಟ ಇರಲಿದೆ,ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇ೦ದು ಸ೦ಜಿ ವೇಳೆಗೆ ಮಳೆ ಸುರಿಯುವ […]
ಉಡುಪಿ, ಮಾರ್ಚ್ 29: ಉಡುಪಿ ಡಯಾಸಿಸ್ನ ಕಲ್ಯಾಣಪುರದ ಮಿಲಾಗ್ರೆಸ್ ಕ್ಯಾಥೆಡ್ರಲ್ನಲ್ಲಿ ಮಾರ್ಚ್ 29, 2026 ರ ಭಾನುವಾರದಂದು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾದ ಪಾಸ್ಚಲ್ ರಹಸ್ಯವನ್ನು ಪೂರ್ಣಗೊಳಿಸಲು ಕ್ರಿಸ್ತನ ಜೆರುಸಲೆಮ್ಗೆ ಪ್ರವೇಶವನ್ನು ಸ್ಮರಿಸುವ ಗರಿಗಳ ಭಾನುವಾರ ಆಚರಿಸಲಾಯಿತು. ಗರಿಗಳ ಭಾನುವಾರ ಸೇವೆ ಪ್ರಾರಂಭವಾಗುವ ಮೊದಲು, ಅಲ್ಲಿ ಉಡುಪಿ ಡಯಾಸಿಸ್ನ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ, ರೆಕ್ಟರ್ ವೆರಿ ರೆವ್. ಮೊನ್ಸಿಂಝ್ಹೊರ್ ಫರ್ಡಿನಾಂಡ್ ಗೊನ್ಸಾಲ್ವೆಸ್ ಮತ್ತು ಸಹಾಯಕ ಪ್ಯಾರಿಷ್ ರೆವ್. ಫಾದರ್ […]
ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ವಂದನೀಯ ಧರ್ಮಗುರು ವಿನ್ಸೆಂಟ್ ಕುವೆಲ್ಲೋ ಮತ್ತು ಸಹಾಯಕ ಧರ್ಮಗುರು ಪ್ರಥ್ವಿ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಗರಿಗಳ ಭಾನುವಾರದ ಆಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.
ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಯಲ್ಲಿ U. ಏ.ಉ ತರಗತಿ ಗೆ ಗ್ರಾಜುಯೇಷನ್ ಡೇ ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿದ ನಿವೃತ್ತ ಮುಖ್ಯೋ ಪಾಧ್ಯಾಯಿನಿ ರಾದ ಶ್ರೀಮತಿ ಗೌರಿ ಇವರು ವಿದ್ಯಾರ್ಥಿ ಗಳಿಗೆ ಸರ್ಟಿಫಿಕೇಟ್ ನೀಡಿ ” ಮಕ್ಕಳು ಮಣ್ಣಿನ ಮುದ್ದೆ, ಸುಂದರ ಕಲಾಕೃತಿ ಮಾಡುವುದು ಶಿಕ್ಷಕರ ಜವಾಬ್ದಾರಿ ” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ್ ಶೆಟ್ಟಿ […]
ಶ್ರೀನಿವಾಸಪುರ : ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಸರ್ವೇಶ್ ಪರಿಶೀಲಿಸಿದರು. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಒಟ್ಟು 245 ಶುದ್ಧ ಕುಡಿಯುವ ನೀರು ಘಟಕಗಳಿದ್ದು, ಅವುಗಳಲ್ಲಿ 216 ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ 29 ಘಟಕಗಳಿಗೆ ದುರಸ್ತಿ ಅಗತ್ಯವಿದ್ದು, […]
ಕೋಲಾರ: ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ದೀಪಕ್ ಕುಂದಾಪುರ ಮತ್ತು ವೈಶಾಲಿ ದಂಪತಿಯ ಒಂದುವರೆ ವರ್ಷದ ಮಗಳು ಆದ್ಯ ಕುಂದಾಪುರ ಪ್ರಾಣಿ ಪಕ್ಷಿ, ತರಕಾರಿ, ವಾಹನ ಮುಂತಾದವುಗಳನ್ನು ತ್ವರಿತವಾಗಿ ಗುರುತಿಸಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ `ಐಬಿಆರ್ ಅಚೀವರ್’ ಸಾಧನೆ ಮಾಡಿದ್ದಾಳೆ.ಆದ್ಯ 30 ಪ್ರಾಣಿ, 31 ತರಕಾರಿ, 15 ಆಕಾರ, 18 ವಾಹನ, 12 ಅಡುಗೆ ವಸ್ತು, ದೇಹದ 12 ಅಂಗಾಂಗ, 17 ಹಕ್ಕಿ, 11 ಹಣ್ಣು, 16 ಇಲೆಕ್ಟಾçನಿಕ್ ಸಾಧನ ಹಾಗೂ ಇತರೆ 33 […]
ಶ್ರೀನಿವಾಸಪುರ : ತಾಲೂಕಿನಲ್ಲಿ ಕೆರೆಗಳಿಗೆ ಕೆಸಿ ವ್ಯಾಲಿ ನೀರನ್ನು ಹರಿಸುವ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಎಲ್ಲಾ ಕೆರೆಗಳಿಗೆ ನೀರು ಹರಿಸುವಂತೆ ವಿವಿಧ ಮುಖಂಡರು ಆಗ್ರಹಿಸಿದ್ದಾರೆ. ಮಂಗಳವಾರ ಪಟ್ಟಣದ ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ರಮೇಶ್ಕುಮಾರ್ ಅಭಿಮಾನಿ ಬಳಗದ ವತಿಯಿಂದ ನೀರಾಗಿ ನಮ್ಮ ಹಕ್ಕು ಕಾರ್ಯಕ್ರಮದಡಿ ಶ್ರೀನಿವಾಸಪುರದಿಂದ ಮುದುವಾಡಿ ಕೆರೆ ಹಾಗೂ ನರಸಾಪುರದ ಲಕ್ಷ್ಮಿಸಾಗರದವರೆಗೆ ಕಾರುಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮಾಜಿ ಶಾಸಕ ಕೆ.ಆರ್. ರಮೇಶ್ಕುಮಾರ್ ಅವರ ಕಾಳಜಿಯಿಂದ […]
Women’s Cell of St. Joseph’s University Organises Inspiring Talk on Women Empowerment ಬೆಂಗಳೂರು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಹಿಳಾ ಘಟಕವು, ಸಂಸ್ಥೆಯ ಇನ್ನೋವೇಶನ್ ಕೌನ್ಸಿಲ್ (IIC) ಸಹಯೋಗದೊಂದಿಗೆ, 2026ರ ಮಾರ್ಚ್ 17ರಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ‘ಮಹಿಳಾ ಸಬಲೀಕರಣ’ ಕುರಿತು ಚಿಂತನಶೀಲ ಉಪನ್ಯಾಸವನ್ನು ಆಯೋಜಿಸಿತ್ತು. ಭಾರತೀಯ ರಕ್ಷಣಾ ಇಂಜಿನಿಯರಿಂಗ್ ಸೇವೆಯ (IDSE) ಪ್ರತಿಷ್ಠಿತ ಅಧಿಕಾರಿ ಶ್ರೀಮತಿ ನಾಜ್ನೀನ್ ಬಾನು ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಹಿರಿಯ ನಾಯಕರನ್ನು […]

