MCC Bank’s 12th ATM inaugurated at Kinnigoli branch – Achievements felicitated ಕಿನ್ನಿಗೋಳಿ ; ಎಂಸಿಸಿ ಬ್ಯಾಂಕ್, ಮಂಗಳೂರು ತನ್ನ 12 ನೇ ಎಟಿಎಂ ಅನ್ನು ಸೆಪ್ಟೆಂಬರ್ 13, 2025 ರ ಶನಿವಾರ ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟಿಸಿತು.ಈ ಎಟಿಎಂ ಅನ್ನು ಎಂಆರ್ಪಿಎಲ್ನ ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ಸ್ನ ಚೀಫ್ ಜನರಲ್ ಮ್ಯಾನೇಜರ್ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ ಅವರು ಉದ್ಘಾಟಿಸಿದರು. ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚಿನ ಧರ್ಮಗುರು ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ […]
ಕುಂದಾಪುರ : ಲಯನ್ಸ್ ಜಿಲ್ಲೆ 317C ಇದರ ವಾರ್ಷಿಕ ಜಿಲ್ಲಾ ಕ್ರೀಡಾಕೂಟದ ಚಾಂಪಿಯನ್ ಟ್ರೋಫಿ ಮತ್ತು ರನ್ನರ್ ಟ್ರೋಫಿ ಹಾಗೂ ಕ್ರೀಡಾಕೂಟದ ಸುತ್ತೋಲೆ ಬಿಡುಗಡೆ ಸಮಾರಂಭವು ಕುಂದಾಪುರದ ಸಹನ ಕನ್ವೆನ್ಷನ್ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್ ಕ್ರೀಡಾಕೂಟದ ಟ್ರೋಫಿ ಅನಾವರಣಗೊಳಿಸಿದರು. ಮಾತ್ರವಲ್ಲದೆ ಕ್ರೀಡಾಕೂಟದ ಸುತ್ತೋಲೆ, ನಿಯಮಗಳು ಮತ್ತು ಕ್ರೀಡಾಕೂಟದ ಸಂಬಂಧಿತ ಪರಿಕರಣಗಳನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ಕ್ರೀಡಾಕೂಟವು ಜಿಲ್ಲೆಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು, ಎಲ್ಲಾ ಕ್ಲಬ್ ಗಳು […]
ಕುಂದಾಪುರ: ಭವಿಷ್ಯದ ಭವ್ಯ ಭಾರತವನ್ನು ಕಟ್ಟುವ ಕೆಲಸ ಇಂದಿನ ಯುವಜನತೆಯ ಮೇಲಿದೆ. ದೇಶವನ್ನು ಸುಪರ್ ಪವರ್ ಆಗಬೇಕು ಅಂದರೆ ಮೊದಲು ಇಂದಿನ ಯುವಜನತೆ ಆ ನಿಟ್ಟಿನಲ್ಲಿ ಕನಸು ಕಾಣಬೇಕು ಎಂದು ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಕರೆ ನೀಡಿದರು.ಅವರು ಸೆಪ್ಟೆಂಬರ್ 10ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಜೆಸಿಐ ಸಹಯೋಗದಲ್ಲಿ ಕಾಲೇಜಿನ ಭರವಸೆ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯೂಥ್ ರೆಡ್ ಕ್ರಾಸ್ ಮತ್ತು ಎನ್.ಸಿ.ಸಿ ನೇವಿ ಮತ್ತು ಆರ್ಮಿ ಘಟಕಗಳು […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಪ್ರಥಮ ಬಿ.ಎಸ್.ಸಿ. ವಿದ್ಯಾರ್ಥಿನಿ ಆರ್ಯಶ್ರೀ ಅವರು ಸೆಪ್ಟೆಂಬರ್ 3 ಮತ್ತು 4 ರಂದು ಗೋವಾದಲ್ಲಿ ಇಂಡಿಯಾಸ್ ಟರ್ನ್ಸ್ ಮತ್ತು ಟ್ವಿರ್ಲ್ಸ್ ಅವರು ನಡೆಸಿದ ಸೀಸನ್ -1 ಅಖಿಲ ಭಾರತ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ, ಆಡಳಿತ ಮಂಡಳಿ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದೆ.
ಕುಂದಾಪುರ; ಆಸ್ಕರ್ ಫೆರ್ನಾಂಡಿಸ್ ರವರ ಸರಳ ವ್ಯಕ್ತಿತ್ವ ,ಸೇವಾ ಮನೋಭಾವನೆ , ಪ್ರಾಮಾಣಿಕ ಪಕ್ಷ ನಿಷ್ಠೆ ,ದೂರ ದೃಷ್ಟಿಯ ನಾಯಕತ್ವ , ಅವರನ್ನು ಸಾಮಾನ್ಯ ವ್ಯಕ್ತಿಯಿಂದ ಬೆಳೆದು ಕರಾವಳಿ ಭಾಗದ ಧೀಮಂತ ನಾಯಕರಾಗಿ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಹೆಸರು ತಂದರು. ಕೇಂದ್ರ ಸಚಿವರಾದ ಅವರು ಬಿಟ್ಟು ಹೋಗಿರುವ ಹೆಜ್ಜೆ ಗುರುತು ಗುರುತು ಯಾರು ಮರೆಯುವಂತಿಲ್ಲ , ಸದಾ ಅಧ್ಯಯನಶೀಲರಾದ ಅವರು ಸಾಕಷ್ಟು ಜನಾನುರಾಗಿಯಾಗಿದ್ದರು ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು. ಬ್ಲಾಕ್ ಕಾಂಗ್ರೆಸ್ […]
ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ವತಿಯಿಂದ ರೋಟೋರಿಯ ಜಿಲ್ಲಾ ಕಾರ್ಯಕ್ರಮದ ಭಾಗವಾಗಿ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು .ಸಾರ್ವಜನಿಕ ವಾಹನಗಳಿಗೆ ಸ್ಟಿಕ್ಕರ್ ಹಚ್ಚುವ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಮಾರುತಿ ನಾಯಕ್ ಹಾಗೂ ಮೋಟಾರು ವಾಹನ ನಿರೀಕ್ಷಕರಾದ ತೇಜಸ್ ಇವರು ಉದ್ಘಾಟಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ರೋಟರಿ ರಿವರ್ ಸೈಡ್ ಅಧ್ಯಕ್ಷರಾದ ಸದಾನಂದ ಉಡುಪ ಅವರು ಮತನಾಡುತ್ತಾ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುವ […]
ಬಸ್ರೂರು ಮಾರ್ಗೋಳಿಯಲ್ಲಿ ಕುಂದಾಪುರ ರೋಟರಿ ಕ್ಲಬ್ ರಿವರ್ಸ್ ಸೈಡ್ ನಿಂದ ನಿರ್ಮಾಣಗೊಂಡ ನೂತನ ಬಸ್ ತಂಗುದಾಣವನ್ನು ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಮಾತುಗಳನ್ನಾಡುತ್ತಾ ಶಾಲಾ ಪರಿಸರ ಮತ್ತು ಧಾರ್ಮಿಕ ಕ್ಷೇತ್ರದ ಸಮೀಪ ಭಕ್ತರಿಗೆ ಮತ್ತು ಶಾಲಾ ವಿದ್ಯಾರ್ಥಿ ಗಳಿಗೆ ಹಾಗೂ ಸಾರ್ವಜನಿಕ ಉಪಯೋಗ ಆಗುವ ಸ್ಥಳದಲ್ಲಿ ಈ ತಂಗುದಾಣ ನಿರ್ಮಿಸಿರುವುದು ಅಭಿನಂದನಾರ್ಹ ಎಂದು ಶ್ಲಾಘಿಸಿದರು .ರೋಟರಿ ಕ್ಲಬ್ಬಿನ ಅಧ್ಯಕ್ಷ ಯು .ಸದಾನಂದ ಉಡುಪ ಇವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ […]
ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣದಲ್ಲಿ ವಿದ್ಯಾರ್ಥಿಗಳಿಗೆ ಐಟಿ ಚಾಂಪ್ ಸ್ಪರ್ಧೆ ನಡೆಸಲಾಯಿತು. ಇದು ವಿದ್ಯಾರ್ಥಿಗಳ ತಂತ್ರಜ್ಞಾನ ಕೌಶಲ್ಯಗಳನ್ನು ಪರೀಕ್ಷಿಸುವ ಉದ್ದೇಶ ಹೊಂದಿತ್ತು. ಸ್ಪರ್ಧೆಯ ಆರಂಭದಲ್ಲಿ ಪ್ರಾಥಮಿಕ ಸುತ್ತನ್ನು ನಡೆಸಿ ಅದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ : “ಕೀಯನ್ನು ಹುಡುಕಿ”, “ಹಾರ್ಡ್ವೇರ್ ಹಂಟ್”, ” ವಿಸ್ತರಿಸಿ”, ” ಗುರುತಿಸಿ” ಮತ್ತು “ಔಟ್ಪುಟ್ ಹುಡುಕಿ” ಎಂಬ ವಿಶಿಷ್ಟವಾದ ಐದು ಸುತ್ತುಗಳ ಮೂಲಕ ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನು […]
Athena Nursing College “Excellence for Empowerment: Nursing Skills in the Digital Age – Professional Regional Conference ಅಥೇನಾ ಕಾಲೇಜ್ ಆಫ್ ನರ್ಸಿಂಗ್ ಸೆಪ್ಟೆಂಬರ್ 11, 2025 ರಂದು “ಸಬಲೀಕರಣಕ್ಕೆ ಶ್ರೇಷ್ಠತೆ: ಡಿಜಿಟಲ್ ಯುಗದಲ್ಲಿ ನರ್ಸಿಂಗ್ ಕೌಶಲ್ಯಗಳು” ಎಂಬ ಪ್ರಾದೇಶಿಕ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿತು. ಡಿಜಿಟಲ್ ಪರಿಕರಗಳ ಮೂಲಕ ನರ್ಸಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸುವುದು, ವಿಕಸಿಸುತ್ತಿರುವ ಆರೋಗ್ಯ ರಕ್ಷಣಾ ಭೂದೃಶ್ಯಕ್ಕೆ ವೃತ್ತಿಪರರನ್ನು ಸಿದ್ಧಪಡಿಸುವುದು ಈ ಸಮ್ಮೇಳನದ ಗುರಿಯಾಗಿದೆ. ಪ್ರೊ. ಸಾಂಡ್ರಾ ಜೆ ಸಲ್ಡಾನ್ಹಾ ಅವರಿಂದ […]

