ಕುಂದಾಪುರ, ಜೂ.28 : ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 28 ರಂದು ಶಾಲಾ ಶಿಕ್ಷಕ ರಕ್ಷಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿರುವ ಅತೀ ವಂದನೀಯ ಗುರು ಪೌಲ್ ರೆಗೋರವರು ಇಂದಿನ ಮಕ್ಕಳು ನಾಳಿನ ಪ್ರಜೆಗಳು, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಸಮಯವನ್ನು ನೀಡಿ ಎಂದು ಪೋಷಕರಿಗೆ ಅಧ್ಯಕ್ಷೀಯ ನುಡಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿರುವ […]
ಕುಂದಾಪುರ ; ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಜೂನ್ 27 ರಂದು ನಡೆಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಇವರು ಸಂಸತ್ತಿನ ಸದಸ್ಯರುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ ಶಾಲಾ ಜಂಟಿ ಕಾರ್ಯದರ್ಶಿಗಳಾಗಿರುವ ಸಿಸ್ಟರ್ ಸುಪ್ರಿಯ ಇವರು ಶಾಲಾ ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಗುಣಗಳನ್ನು ಬಳಸುವಲ್ಲಿ ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಶಾಲಾ ಆಡಳಿತದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನು ಬೆಳೆಸಲು ಅನುಕೂಲವಾಗುತ್ತದೆ. ಶಾಲಾ […]
ಜೆಪ್ಪು, ಜೂನ್ 28: ‘ವಿದ್ಯಾರ್ಥಿಗಳ ಜೀವನದಲ್ಲಿ ಹೆತ್ತವರ ಪಾತ್ರ ಯಾವ ರೀತಿ ಇರಬೇಕು’ ಎಂದು ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕರಾದ ವಂದನೀಯ ಗುರು ಎರಿಕ್ ಕ್ರಾಸ್ತಾ ಹೇಳಿದರು. ಸೈಂಟ್ ರೀಟಾ ಶಾಲಾ ಸಭಾಂಗಣದಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಾದುವಾ ಸಂಸ್ಥೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಅರುಣ್ ವಿಲ್ಸನ್ ಲೋಬೋರವರು ಮಕ್ಕಳ ಶಿಸ್ತು, ಮೌಲ್ಯಗಳ ಬಗ್ಗೆ ಹೆತ್ತವರ ಪಾತ್ರ ಹೇಗಿರಬೇಕು ಎಂದು ಆಗಮಿಸಿದ ವಿದ್ಯಾರ್ಥಿಗಳ […]
ಮಂಗಳೂರು; “ಜೀವನವು ಪ್ರಕೃತಿ ಮತ್ತು ವಿಕೃತಿಯ ನಡುವಿನ ನಿರಂತರ ಸಂಘರ್ಷವಾಗಿದೆ. ಈ ಹೋರಾಟವು ಹೌದು ಮತ್ತು ಇಲ್ಲ ಎಂಬ ಆಯ್ಕೆಗಳಿಂದ ತುಂಬಿದೆ. ಪ್ರತಿಯೊಬ್ಬ ಮನುಷ್ಯನೂ ಈ ನಿರ್ಧಾರಗಳ ಮೂಲಕ ತಮ್ಮ ದಾರಿಯನ್ನು ಕಂಡುಕೊಳ್ಳುತ್ತಾನೆ. ಸಾಹಿತ್ಯದ ಪಾತ್ರವು ಈ ಗೊಂದಲದ ಮೂಲಕ ಅವರಿಗೆ ಮಾರ್ಗದರ್ಶನ ನೀಡುವುದು” ಎಂದು ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ದಾಮೋದರ ಮಾವ್ಜೊ ಅಭಿಪ್ರಾಯಪಟ್ಟರು. ಅವರು ಶುಕ್ರವಾರ, ಜೂನ್ 27 ರಂದು ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕವಿ / ವಿಮರ್ಶಕ ಎಚ್. ಎಂ. ಪೆರ್ನಾಲ್ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 2025- 26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ನ ಪದಗ್ರಹಣ ಸಮಾರಂಭವು ಇತ್ತೀಚೆಗೆ ಜರುಗಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗ್ರತಿ ಮೂಡಿಸಲು ಸಂಸ್ಥೆಯು ‘ಗೋ ಗ್ರೀನ್’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅರವಿಂದ ಮೋಟಾರ್ಸ್ ನ ನಿರ್ದೇಶಕರಾದ ಆರೂರ್ ಅರ್ಜುನ್ ರಾವ್ ಅವರು ವಿದ್ಯಾರ್ಥಿ ಪರಿಷತ್ ಗೆ ನೂತನವಾಗಿ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ಅವರ ಯಶಸ್ಸಿನ ಗುಟ್ಟನ್ನು ತಿಳಿಸಿ, ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬೇಡಿ, ಯಶಸ್ಸು ನಿಧಾನವಾಗಿಯಾದರೂ […]
ಉಡುಪಿ: ಕ್ರೈಸ್ತ ಸಮುದಾಯದ ಮಕ್ಕಳು ಹೆಚ್ಚು ಹೆಚ್ಚು ಸರಕಾರಿ ಹುದ್ದೆಗಳನ್ನು ಪಡೆಯುವತ್ತ ಗಮನ ಹರಿಸಿದಾಗ ಸಮುದಾಯದ ಜೊತೆಗೆ ಜಿಲ್ಲೆಗೆ ಕೂಡ ಗೌರವ ತಂದು ಕೊಟ್ಟಂತೆ ಆಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಶುಕ್ರವಾರ ತಮ್ಮ ನಿವಾಸದ ಕಚೇರಿಯಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 372 ನೇ ರ್ಯಾಂಕ್ ಪಡೆದು ಸಾಧನೆ ತೋರಿದ ಉಡುಪಿ ಚರ್ಚಿನ ಶ್ರೇಯಾಂಸ್ ಗೋಮ್ಸ್ ಅವರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿ ಮಾತನಾಡಿದರು.ಧರ್ಮಪ್ರಾಂತ್ಯದಲ್ಲಿ ಕನಿಷ್ಠ 25 ಮಂದಿ ಮಕ್ಕಳು ಸರಕಾರದ ಅತ್ಯುನ್ನತ […]
ಉಡುಪಿ;ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಸಿಲ್ವಿಯಾ ಸುವಾರೆಸ್, ಈಗ ಮಹಿಳಾ ಆಯೋಗದ ನಿರ್ದೇಶಕಿಯಾಗಿ ಶ್ರೀಮತಿ ಸಿಲ್ವಿಯಾ ಸುವಾರೆಸ್ ಅಧಿಕಾರ ವಹಿಸಿಕೊಂಡಿದ್ದಾರೆ 2025 ರ ಜೂನ್ 24 ರಂದು ಬಿಷಪ್ ಚಾಪೆಲ್ನಲ್ಲಿ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಜೆರಾಲ್ಡ್ ಐಸಾಕ್ ಲೋಬೊ ಅವರು ಪ್ರಾರ್ಥನೆ ವಿಧಿಯನ್ನು ನಡೆಸಿದ ಬಳಿಕ ಸಿಲ್ವಿಯಾ ಸುವಾರೆಸ್ ಅವರು ನಿರ್ದೇಶಕಿಯ ಅಧಿಕಾರವನ್ನು ವಹಿಸಿಕೊಂಡರು. ಬಿಷಪ್ ಚಾಪೆಲ್ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪ್ಯಾರಿಷ್ನ ಶ್ರೀಮತಿ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಗೆ ಪ್ರತಿಷ್ಠಿತ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಅರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇನ್ಟಾಕ್) ಸಂಘಟಿಸಿದ 2024-25 ಸಾಲಿನ ಪ್ರತಿಷ್ಠಿತ ಅತ್ಯುತ್ತಮ ಹೆರಿಟೇಜ್ ಕ್ಲಬ್ ಪ್ರಶಸ್ತಿಯಲ್ಲಿ ಮೂರನೇ ಸ್ಥಾನ ಗಳಿಸಿ ಹೆಮ್ಮೆಯ ಸಾಧನೆಗೈದಿದೆ. ಇಂಟಾಕ್, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ- ಬೆಳೆಸಲು ಉತ್ತೇಜಿಸುತ್ತದೆ .ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಮೂರು ಸಲ ಈ ಪ್ರಶಸ್ತಿಯನ್ನು ಗಳಿಸಿದೆ. ಕಲಾ ಶಿಕ್ಷಕರಾದ ಶ್ರೀ ಜೀವನ್ ಸಾಲಿಯಾನ್ ಹಾಗೂ […]
ಕುಂದಾಪುರ,ಜೂ.27; ಯುಬಿಎಂಸಿ ಮತ್ತು ಸಿಎಸ್ಐ ಕೃಪಾ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಇಂದು 26/06/2025 ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ತಿಳಿ ಹೇಳಿದರು. ಸಹ ಶಿಕ್ಷಕಿ ಶ್ರೀಮತಿ ವಿಲ್ಮಾ ಇವರು ಕಂಪ್ಯೂಟರ್ ಪರದೆಯ ಮೂಲಕ ತೋರಿಸಿ, ವಿವರಿಸಿ ಅರ್ಥೈಸಿದರು. ಅಂತೆಯೇ ಸಹ ಶಿಕ್ಷಕಿ ಪವಿತ್ರ ಮಾದಕ ವಸ್ತುಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಎಂದಿಗೂ ಬಳಸದಂತೆ ಪ್ರತಿಜ್ಞಾವಿಧಿಯನ್ನು […]

