ಮಂಗಳೂರು ; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಬಜ್ಜೋಡಿಯ ಸಂದೇಶ ಪ್ರತಿಷ್ಟಾನದಲ್ಲಿ 13, ಜುಲೈ 2025ರಂದು ಪ್ರಖ್ಯಾತ ಸಾಹಿತಿಗಳಾದ ಜೊ.ಸಾ.ಆಲ್ವಾರಿಸ್ರವರು ರಚಿಸಿದ ಕೊಂಕಣಿ ಭಾಷೆಯ ಕನ್ನಡ ಲಿಪಿಯ ಪ್ರಪ್ರಥಮ ಕಾದಂಬರಿ ಪ್ರಕಟವಾಗಿ 75 ವರ್ಷ ತುಂಬುವ ಸಂದರ್ಭದಲ್ಲಿ, ʼಆಂಜೆಲ್-75ʼ ಶೀರ್ಷಿಕೆಯಡಿ ಕಾರ್ಯಗಾರವನ್ನು ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿಕೊಳ್ಳಲಿದ್ದಾರೆ. ಡಾ| ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷರಾದ ಡಾ| ಗಣನಾಥ ಎಕ್ಕಾರ್‌ರವರು ಮುಖ್ಯ ಅತಿಥಿಯಾಗಿ, ಕೊಂಕಣಿ ನಾಟಕ ಸಭೆಯ ಅಧ್ಯಕ್ಷರಾದ […]

Read More

ಕುಂದಾಪುರದ;ಆಷಾಢ ಹುಣ್ಣಿಮೆಯ ಪವಿತ್ರ ದಿನದಂದು ಆಚರಿಸಲ್ಪಡುವ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಆರ್. ಎನ್. ಎಸ್. ಪದವಿ  ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಆರತಿ ಬೆಳಗಿಸಿ ಕಾಲಿಗೆ ನಮಸ್ಕರಿಸುವ ಮೂಲಕ ಶುಭಸಂದರ್ಭವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರು ಭವಿಷ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಗುರು ಸ್ಥಾನದಲ್ಲಿರಬೇಕಾದ ಅವಕಾಶ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಡಿ.ಬಿ.ಕೃಷ್ಣಮೂರ್ತಿಯವರು ಗುರು ಪೂರ್ಣಿಮೆಯ ವಿಶೇಷತೆಯನ್ನು ತಿಳಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈಯವರು ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪುರ, ಜುಲೈ 7, 2025 – ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಒಪ್ಟಮ್ (Optimizing Training and Mentoring) ತರಬೇತಿ ಕಾರ್ಯಕ್ರಮದ ಆರಂಭ ಜುಲೈ 7, 2025 ರಂದು ನಡೆಯಿತು. ಒಟ್ಟು 65 ವಿದ್ಯಾರ್ಥಿಗಳು ಈ 45 ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿಗೆ ಸೇರಿದ್ದು, ಪ್ರಸಿದ್ಧ ತರಬೇತುದಾರರಾದ ಶ್ರೀಮತಿ ವಿನಯಾ ಗೌಡ ಅವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗುತ್ತಿದೆ.ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಶುಭಕರಾಚಾರಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಾಶಯಗಳೊಂದಿಗೆ ತರಬೇತಿಯ ಮಹತ್ವವನ್ನು ವಿವರಿಸಿದರು. ಸ್ಪರ್ಧಾತ್ಮಕ ಉದ್ಯೋಗ ಕ್ಷೇತ್ರದಲ್ಲಿ ಈ […]

Read More

ಭಂಡಾರ್ಕಾರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜ್ ಕುಂದಾಪುರದ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪುರ 89.6 ಎಫ್ಎಂ ನಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರೊಂದಿಗೆ ನಡೆಸಿದ ಫೋನ್ ಇನ್ ಕಾರ್ಯಕ್ರಮ “ನಿಮ್ಮ ಪ್ರಶ್ನೆಗಳಿಗೆ ನಮ್ಮ ಧ್ವನಿ “. ಈ ಕಾರ್ಯಕ್ರಮ ದಲ್ಲಿ ರಸ್ತೆ ದುರಸ್ತಿ,ಕಾಲುಸಂಕ, ಸಮರ್ಪಕ ಸಾರಿಗೆ ಸಂಪರ್ಕ, ಶಿಕ್ಷಣ ಇತ್ಯಾದಿ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದ್ದಾರೆ.ಈ ರೇಡಿಯೋ ಕಾರ್ಯಕ್ರಮದ ಮುದ್ರಿತ ಪ್ರಸಾರ ಜುಲೈ 10ರ ಗುರುವಾರ ಸಂಜೆ 5:00 ಗಂಟೆಗೆ ಬಿತ್ತರಗೊಳ್ಳಲಿದೆ. ಈ ಕಾರ್ಯಕ್ರಮವನ್ನು […]

Read More

ಅಮ್ಮೆಂಬಳ; ಕಥೊಲಿಕ್ ಸಭಾ ,ಅಮ್ಮೆಂಬಳ ಘಟಕ ಹಾಗೂ ಸ್ಪಂದನಾ ಸ್ತ್ರೀ ಸಂಘಟನೆ ಅಮ್ಮೆಂಬಳ ಘಟಕ ಗಳ ಜಂಟಿ ಆಶ್ರಯದಲ್ಲಿ ನೇಜಿ ನೆಡುವ ಕಾರ್ಯಕ್ರಮ ದಿನಾಂಕ 3/07/2025 ರಂದು ಚೇಳೂರಿನ ಶ್ರೀಮತಿ ಸೆಲಿನ್ ಸಿಕ್ವೇರಾ ರವರ ಗದ್ದೆಯಲ್ಲಿ ನಡೆಸಲಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಆಲ್ಬರ್ಟ್ ಡಿ ಸೋಜಾರವರು ಸ್ವಾಗತಿಸಿದರು.ಅಮ್ಮೆಂಬಳ ಚರ್ಚಿನ ಧರ್ಮ್ಮಗುರುಗಳಾದ ವಂ! ಫಾ! ಮೈಕೆಲ್ ಡಿ ಸಿಲ್ವ ರವರು ಉದ್ಘಾಟನೆ ನೆರವೇರಿಸುತ್ತಾ ಭತ್ತದ ಬೇಸಾಯ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ […]

Read More

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯನ್ನು 09-07-2025) ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಭಗಿನಿ ಸುಪ್ರಿಯ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ವಿದ್ಯಾರ್ಥಿಗಳು ತಂದೆ-ತಾಯಿಯರಿಗೆ ವಿಧೇಯರಾಗಿ ಅವರ ಕಷ್ಟಗಳನ್ನು ಅರಿತುಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಲ್ಲಿನ ಸಮನ್ವಯ ಸಂಪನ್ಮೂಲ ಅಧಿಕಾರಿಗಳಾಗಿರುವ ಪ್ರದೀಪ್ ಕುಮಾರ್ ಇವರು ಮಾತನಾಡಿ ಪೋಷಕರ ಸಭೆಗೆ ತಾಯಿ ತಂದೆಯರಿಬ್ಬರೂ […]

Read More

ಕುಂದಾಪುರ; ಸಂತ ಪಿಯುಸ್ ಹತ್ತನೇ ಚರ್ಚ್ ಹಂಗ್ಳೂರಿನಲ್ಲಿ ವೈ.ಸಿ.ಎಸ್ ಸಂಘಟನೆಯವತಿಯಿಂದ ಯುವಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿಯನ್ನು ಉಂಟು ಮಾಡಲು ಸ್ಥಳೀಯ ಗದ್ದೆಯಲ್ಲಿ ಸಸಿಯನ್ನು ಕೀಳುವುದು ಮತ್ತು ನಟ್ಟಿ ಮಾಡುವುದು ಹಾಗೆಯೇ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಜು.6 ರಂದು ಹಮ್ಮಿಕೊಳ್ಳಲಾಗಿತ್ತು. ಧರ್ಮಕೇಂದ್ರದ ವಂ. ಗುರು ಆಲ್ಬರ್ಟ್ ಕ್ರಾಸ್ತಾ,ಪಾಲನಾ ಮಂಡಳಿಯ ಉಪಾಧ್ಯಕ್ಷಾರಾದ ಜೇಮ್ಸ್ ಡಿಮೆಲ್ಲೊ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ರೇಶ್ಮಾ ಡಿಸೋಜಾರವರು ವೈ.ಸಿ.ಎಸ್ ಮಕ್ಕಳಿಗೆ ಗದ್ದೆಯಲ್ಲಿ ಸಸಿಯನ್ನು ಕೀಳುವ ಮತ್ತು ನಡೆಯುವ ತರಬೇತಿ ನೀಡಿದರು. ಸುನೀತಾ […]

Read More

ಮಂಗಳೂರು; ದಿನಾಂಕ: 09/07/2025 ಸೆಂಟ್ ರೀಟಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2025ರ ಜುಲೈ 9 ರಂದು ವನಮಹೋತ್ಸವವನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಮೇಬಲ್ ಪಿಂಟೋ, ಸಂಚಾಲಕರಾದ ಫಾ. ಎರಿಕ್ ಕ್ರಾಸ್ಟಾ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೆಟಲ್ಡಾ ಡಿಕೋಸ್ತಾ ಅವರು ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಪರಿಸರದ ಮಹತ್ವವನ್ನು ವಿವರಿಸುವ ನೃತ್ಯ, ಪರಿಸರ ಸಂರಕ್ಷಣೆಯ ಕುರಿತಾಗಿ ಹಾಡು, ಮತ್ತು ವನಮಹೋತ್ಸವದ ಮಹತ್ವವನ್ನು ತೋರಿಸುವ ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಶಿಕ್ಷಕರು ಮತ್ತು ಮಕ್ಕಳು ಒಟ್ಟಾಗಿ […]

Read More

ಕುಂದಾಪುರ; ಜೆಸಿಯಲ್ಲಿ ಹಲವು ವರ್ಷಗಳಿಂದ ಕ್ರಿಯಾಶೀಲ ರಾಗಿದ್ದು, ತರಬೇತಿ ನೀಡುವಲ್ಲಿ ಗಾಢ ಅನುಭವ ಹೊಂದಿರುವ ಹಿರಿಯ ತರಬೇತುದಾರರ ಉತ್ಸಾಹದಿಂದ ವಿನೂತನವಾಗಿ ಕುಂದಾಪುರದ ಆರ್. ಎನ್. ಎಸ್. ಕಾಲೇಜಿನಲ್ಲಿ ಜಿಲ್ಲೆಯ ಮೊದಲ ಯೂತ್ ವಿಂಗ್ ಆರಂಭವಾಗಿದ್ದು ಸಂತಸದ ವಿಷಯ. ವಿದ್ಯಾರ್ಥಿಗಳು ಪರಿಣಿತ ತರಬೇತುದಾರರು ನೀಡುವ ಮಾರ್ಗದರ್ಶನ ಮತ್ತು ಎಲ್ಲ ತರಹದ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು ‘ ಎಂದು‌ ಸೀನಿಯರ್ ಛೇಂಬರ್ಸ್ ಇಂಟರ್ ನ್ಯಾಶನಲ್ ನ ರಾಷ್ಟ್ರೀಯ ಅಧ್ಯಕ್ಷ SNR PPF ಎಮ್. ಆರ್.  ಜಯೇಶ ರವರುಸೀನಿಯರ್ ಛೇಂಬರ್ಸ್ ಕೋಟಾ ಲೀಜನ್ ನ ಆಶ್ರಯದಲ್ಲಿ ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲೆಯ ಪ್ರಪ್ರಥಮ ‘ ‘ ‘ಯೂತ್ ವಿಂಗ್ ‘ ನ್ನು ಉದ್ಘಾಟಿಸಿ ಯುವ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು. ಜೆಸಿಐ ನ ಪೂರ್ವ ರಾಷ್ಟ್ರೀಯ ಅಧ್ಯಕ್ಷ JFP ಕಾರ್ತಿಕೇಯ ಮಧ್ಯಸ್ಥರವರು ವಿದ್ಯಾರ್ಥಿಗಳು ಇನ್ನೊಬ್ಬರಿಗೆ ಸ್ಪೂರ್ತಿಯಾದಾಗ, ಮತ್ಯಾರಿಗೋ ರೋಲ್ ಮಾಡೆಲ್ ಆದಾಗ ಸಿಗುವ ಸಂತೃಪ್ತಿ –  ಸಾರ್ಥಕತೆ ಅನನ್ಯವಾದುದು ಎಂಬುದನ್ನು ಅರಿತುಕೊಂಡು‌ ಆ ನಿಟ್ಟಿನಲ್ಲಿ  ಕೆಲವು ಸರಳ ಸೂತ್ರಗಳನ್ನು ಅನುಸರಿಸಬೇಕೆಂದು ತಿಳಿಸಿದರು.ಯೂತ್ ವಿಂಗ್ ಉದ್ಘಾಟನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿ‌ ಭರತನಾಟ್ಯ ಪ್ರವೀಣೆ ಗಾರ್ಗಿದೇವಿ ಯ ನೃತ್ಯ ಪ್ರದರ್ಶನ ನಡೆಯಿತು. SCI ನ ಏರಿಯಾ-G ಇದರ ರಾಷ್ಟ್ರೀಯ ಉಪಾಧ್ಯಕ್ಷ SNR PPF ಸಿದ್ಧಗಂಗಯ್ಯ ರವರು ಯೂತ್ ವಿಂಗ್ ನ ಯಶಸ್ಸಿಗೆ ಶುಭ ಹಾರೈಸಿದರು.  SCI ಯ ತರಬೇತಿ ಮತ್ತು ಯುವ ವ್ಯವಹಾರಗಳ ರಾಷ್ಟ್ರೀಯ ನಿರ್ದೇಶಕರಾದ SNR ಹುಸೇನ್ ಹೈಕಾಡಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕೋಟಾ ಲೀಜನ್ ನ ಅಧ್ಯಕ್ಷರಾದ SNR ಕೇಶವ ಆಚಾರ್ ಅತಿಥಿಗಳನ್ನು‌ ಸ್ವಾಗತಿಸಿದರು. ಸೀನಿಯರ್ ಛೇಂಬರ್ಸ್ ಕುಂದಾಪುರದ ಅಧ್ಯಕ್ಷರಾದ SNR ರಾಘವೇಂದ್ರ ಚರಣ್ ನಾವಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ್ ಶೆಟ್ಟಿ, ಯೂತ್ ವಿಂಗ್ ಘಟಕದ ಅಧ್ಯಕ್ಷ YWಕೌಶಿಕ್, ಕಾರ್ಯದರ್ಶಿ YW ಕೃತಿ ದೇವಾಡಿಗ, ಖಜಾಂಚಿ YW ಅಕ್ಷಯಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಧಿ‌ ಪ್ರಾರ್ಥಿಸಿದರು.SCI ಕೋಟಾ ಲೀಜನ್ ನ ಕಾರ್ಯದರ್ಶಿ SNR ವಿನಯಚಂದ್ರ ರವರು ಧನ್ಯವಾದ ಸಲ್ಲಿಸಿದರು. ಯೂತ್ ವಿಂಗ್ ಸಂಯೋಜಕಿ ನಿರೂಪಿಸಿದರು.

Read More