ಬೆಂಗಳೂರು: ಜೂ. 4ರಂದೇ ಮುಂಗಾರು ಪ್ರವೇಶ ಸಾಧ್ಯತೆ ಎಂದು ಹೇಳಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ವರುಣಾರ್ಭಟ ಜೋರಾಗಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರಮುಖ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಚಾಮರಾಜನಗರ, ಹಾಸನ, ಕೊಡಗು, […]
ಮೈಸೂರು; ಮೈಸೂರು ವೈದ್ಯಕೀಯ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ (ರಿ) ಇವರಿಂದ 30 ಮೇ 2026 ರಂದು ನಡೆಸ್ಪಟ್ಟ “ಮಾ ಉತ್ಸವ 2026” ಈ ಉತ್ಸವದಂದು ಮೈಸೂರು ವೈದ್ಯಕೀಯ ಕಾಲೇಜು ಹಳೆಯ ವಿದ್ಯಾರ್ಥಿಯಾದ ಡಾ.ಎಕ್ಸ್ ಎ ಡಿಸೋಜಾ ರವರಿಗೆ “ವಿಶಿಷ್ಟ ಹಳೆಯ ವಿದ್ಯಾರ್ಥಿ” (ಭಿನ್ನವತ್ತಳೆ) ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಸಮಾಜ ಮತ್ತು ವೈದ್ಯಕೀಯ ವೃತ್ತಿಗೆ ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಮತ್ತು ಅವರ ಸಾಧನೆಗಳ ಮೂಲಕ ಮೈಸೂರು ವೈದ್ಯಕೀಯ ಕಾಲೇಜಿಗೆ ಗೌರವ ಮತ್ತು ಮನ್ನಣೆಯನ್ನು ತಂದಿದ್ದಾರೆ, ಅಲ್ಲದೆ […]
ಬಾರ್ಕೂರು; ಈಕೆ ಕುಮಾರಿ ಗಾಯತ್ರಿ ಶೆಟ್ಟಿಗಾರ್, ರಂಗನಕೇರಿಯ ಶೆಟ್ಟಿಗಾರ ಇಂಡಸ್ಟ್ರೀಸ್ ಇದರ ಮಾಲೀಕರಾದ ಶ್ರೀನಿವಾಸ್ ಶೆಟ್ಟಿಗಾರ್ ರವರ ಸಹೋದರರಾದ ಜಯ ಶೆಟ್ಟಿಗಾರ್ ಮತ್ತು ಪದ್ಮಿನಿ ಶೆಟ್ಟಿಗಾರ್ ದಂಪತಿಗಳ ಮಗಳು, ನೇಶನಲ್ ಹೈಸ್ಕೂಲ್ ಬಾರ್ಕೂರು ಇದರ 10ನೇ ತರಗತಿ ವಿದ್ಯಾರ್ಥಿನಿ. ಈಕೆ 8ನೇ ತರಗತಿಯಲ್ಲಿರುವಾಗ ರಾಷ್ಟ್ರಮಟ್ಟದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಅಂದಿನ ದಿನಗಳಲ್ಲಿ ಗುರುತಿಸಿಕೊಂಡವಳು. ಇಂದು 10ನೇ ತರ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಇನ್ನೊಮ್ಮೆ ಗುರುತಿಸಿಕೊಂಡಿದ್ದಾಳೆ. ಇದು ಅವಳ […]
ಬಸ್ರೂರು: ಸಂತ ಫಿಲಿಪ್ ನೇರಿ ಇಗರ್ಜಿಯಲ್ಲಿ ಧರ್ಮಗುರು ವಂ। ರೋಯ್ ಲೋಬೊ ಇವರ ಮುಂದಾಳತ್ವದಲ್ಲಿ ಭಾನುವಾರದ ಕ್ರೈಸ್ತ ಆಧ್ಯಾತ್ಮಿಕ ಶಿಕ್ಷಣದ ಆರಂಭೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮೂಡುಬೆಳ್ಳೆ ಕರ್ನಾಟಕ ರೀಜನ್ ಮೈನರ್ ಸೆಮಿನರಿಯ ಬಾಪ್ ಸಿರಿಲ್ ಲೋಬೊ ಇವರು ಭಾವಾರ್ಥಿ ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ಮಹತ್ವ ತಿಳಿಸಿ , ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚರಿರಬೇಕು’ ಎಂದು ತಿಳಿಸಿ ಪವಿತ್ರ ಪ್ರಸಾದದ ಆರಾಧನೆಯನ್ನು ನಡೆಸಿ. ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಕೈ ಪಿಡಿ ಪುಸ್ತಕಗಳನ್ನು ವಿತರಿಸಿ […]
ದೋರ್ನಹಳ್ಳಿಯ ಸಂತ ಅಂತೋನಿ ಬೆಸಿಲಿಕಾ ವಾರ್ಷಿಕ ಹಬ್ಬವನ್ನು ಭವ್ಯವಾಗಿ ಆಚರಿಸಲಿದೆ ಮೈಸೂರು ಧರ್ಮಪ್ರಾಂತ್ಯದ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾದ ಡೋರ್ನಹಳ್ಳಿಯ ಸಂತ ಅಂತೋನಿ ಬೆಸಿಲಿಕಾದ ವಾರ್ಷಿಕ ಹಬ್ಬವನ್ನು ಜೂನ್ 4 ರಿಂದ ಜೂನ್ 13, 2026 ರವರೆಗೆ ಬಹಳ ಭಕ್ತಿ ಮತ್ತು ಧಾರ್ಮಿಕ ಉತ್ಸಾಹದಿಂದ ಆಚರಿಸಲಾಗುವುದು. ಜೂನ್ 4, 2026 ರಂದು ಗುರುವಾರ ಸಂಜೆ 5:30 ಕ್ಕೆ ಮೈಸೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವ್ ಎಸ್ ಜೆ ಅವರು ವಿಧ್ಯುಕ್ತ ಧ್ವಜಾರೋಹಣದೊಂದಿಗೆ ಆಚರಣೆಗಳು […]
ಶ್ರೀನಿವಾಸಪುರ : ತ್ಯಾಗ, ಸಮರ್ಪಣೆ ಮತ್ತು ಬಲಿದಾನದ ಪ್ರತೀಕವಾಗಿರುವ ಈದ್ – ಉಲ್ – ಅಝಾ (ಬಕ್ರೀದ್) ಹಬ್ಬವನ್ನು ಶ್ರೀನಿವಾಸಪುರ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಚಾರ್ಮಿನಾರ್ ಈದ್ಗಾ ಮೈದಾನ ಹಾಗೂ ಜಾಮಿಯಾ ಮಸೀದಿ ಈದ್ಗಾ ಮೈದಾನಗಳಲ್ಲಿ ನಡೆದ ಸಾಮೂಹಿಕ ನಮಾಜ್ನಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇಶದ ಶಾಂತಿ, ಸಮೃದ್ಧಿ, ಸೌಹಾರ್ದತೆ ಮತ್ತು ವಿಶ್ವದಲ್ಲಿ ನೆಮ್ಮದಿ ನೆಲೆಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗಿನಿಂದಲೇ ಹೊಸ ಬಟ್ಟೆ ಧರಿಸಿದ ಭಕ್ತರು ಕುಟುಂಬ […]
ಮಂಗಳೂರು, ಮೇ 29: ಜೂನ್ 1 ರಂದು ಹೊಸ ಶೈಕ್ಷಣಿಕ ವರ್ಷಕ್ಕಾಗಿ ಶಾಲೆಗಳು ಪುನರಾರಂಭಗೊಳ್ಳಲು ಸಜ್ಜಾಗುತ್ತಿರುವಂತೆಯೇ, ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮೇ 29 ರಂದು ವಿದ್ಯಾರ್ಥಿಗಳಿಗಾಗಿ ವಿಶೇಷ ಬಲಿಪೂಜೆ ಮತ್ತು ದಿವ್ಯ ಸತ್ಪ್ರಸಾದದ ಆರಾಧನೆಯನ್ನು ಆಯೋಜಿಸಲಾಯಿತು. ಈ ಮೂಲಕ ಮಕ್ಕಳು, ಪೋಷಕರು, ಶಿಕ್ಷಕರು ಹಾಗೂ ಮುಂಬರುವ ಇಡೀ ಶೈಕ್ಷಣಿಕ ವರ್ಷಕ್ಕೆ ದೇವರ ಆಶೀರ್ವಾದವನ್ನು ಕೋರಲಾಯಿತು. ಈ ಸಮಾರಂಭದಲ್ಲಿ ಸುಮಾರು 500 ಮಕ್ಕಳು ತಮ್ಮ ಪೋಷಕರೊಂದಿಗೆ ಭಾಗವಹಿಸಿದ್ದರು. ಇದು ಹೊಸ ಶಾಲಾ ಅವಧಿಯ ಆರಂಭಕ್ಕೂ ಮುನ್ನ ನಡೆದ […]
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ತೀವ್ರ ಕುತೂಹಲ ಮತ್ತು ಹೈಡ್ರಾಮಾಗೆ ಕೊನೆಗೂ ಭಾವುಕ ತೆರೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕಾರವನ್ನು ಬಿಟ್ಟುಕೊಟ್ಟಿದ್ದಾರೆ. ರಾಜೀನಾಮೆ ಸಲ್ಲಿಕೆಗೂ ಮುನ್ನ ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರ ಕೊನೆಯ ‘ಬ್ರೇಕ್ಫಾಸ್ಟ್ ಮೀಟಿಂಗ್’ ನಡೆಯಿತು. ಕಾವೇರಿ ನಿವಾಸದ ಅಂಗಳ ಸದಾ ಜನಸಾಗರದಿಂದ, ಅಧಿಕಾರದ ಗಿಜಿಗುಡುವಿಕೆಯಿಂದ ತುಂಬಿರುತ್ತಿತ್ತು. ಆದರೆ ಇಂದು ಅಲ್ಲಿ ಆವರಿಸಿದ್ದ ಮೌನವೇ ಆವರಿಸಿತ್ತು. ಉಪಹಾರ […]
ಬೆಂಗಳೂರು; ಮುಖ್ಯಮಂತ್ರಿ ಸ್ಮಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ನಿರ್ಧಾರ ಕೈಗೊ೦ಡ ಬೆನ್ನಲ್ಲೇ, ಇ೦ದು ಅವರ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ಆಯೋಜಿಸಲಾಗಿದ್ದ ಆಪ್ತ ಸಚಿವರು ಹಾಗೂ ಶಾಸಕರ ಉಪಹಾರ ಕೂಟದಲ್ಲಿ ಭಾವುಕ ಘಟನೆ ನಡೆದಿದ್ದು, ಸಭೆಗೆ ಆಗಮಿಸುತ್ತಿದ್ದ೦ತೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಕಾವೇರಿ ನಿವಾಸಕ್ಕೆ ಎ೦ಟ್ರಿ ಕೊಟ್ಟ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಸಿದ್ದರಾಮಯ್ಯ ಅವರ ಬಳಿ ತೆರಳಿ, ಅತ್ಯ೦ತ ಗೌರವದಿ೦ದ ಅವರ ಕಾಲಿಗೆ ನಮಸ್ಕರಿಸಿದರು. […]

