ಹೋಮಿಯೋಪಥಿ ಜನಕ ಡಾಕ್ಟರ್ ಸ್ಯಾಮ್ಯುಯೆಲ್ ಹಾನ್ನಿಮನ್ನರ 269ನೇ ಜನ್ಮ ದಿನದ ನೆನಪಿಗಾಗಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ದಿನಾಂಕ 30.04.2024 ರಂದು ವಿಶ್ವ ಹೋಮಿಯೋಪಥಿ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ 9.30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ರಾಹುಲ್ ಪಿ. BHMS, (IAAS), Senior Deputy Accountant General, CAG of India,ಗೌರವಾನ್ವಿತ ಅತಿಥಿಗಳಾಗಿ, 1999ನೇ ಬ್ಯಾಚ್‍ನ ಹಳೆಯ ವಿದ್ಯಾರ್ಥಿ, ಕೇರಳ ಸರಕಾರ, ಹೋಮಿಯೋಪಥಿ ವಿಭಾಗದ ವೈದ್ಯಕೀಯ […]

Read More

ಕುಂದಾಪುರದ ಗೆಳೆಯರ ಬಳಗ ಸ್ವಾವಲಂಬನ ಕೇಂದ್ರಕ್ಕೆ ಬಟ್ಟೆ ಚೀಲ ಹೊಲಿದು ಕೊಡಲು ಬಯಸುವವರಿಗೆ ಹೊಲಿಗೆ ಯಂತ್ರ ಒದಗಿಸಿಕೊಟ್ಟು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿ ಕೊಡಲಾಗುತ್ತದೆ ಎಂದು ಕೇಂದ್ರದ ಸ್ಥಾಪಕರಾದ ವೆಂಕಟೇಶ ಪೈ ತಿಳಿಸಿದ್ದು, ಈಗ ಕೆಲವು ಹೊಲಿಗೆ ಯಂತ್ರಗಳು ಮಾತ್ರ ಇದ್ದು, ಆಸಕ್ತರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ ಎಂದಿದ್ದಾರೆ. ಉಚಿತ ಪ್ರಾಥಮಿಕ ಹೊಲಿಗೆ ತರಬೇತಿ ನೀಡುತ್ತಾ ಬಂದಿರುವ ಕೇಂದ್ರದಲ್ಲಿ ಹಲವು ವಿನ್ಯಾಸಗಳ ಬಟ್ಟೆಯ ಚೀಲ ಹೊಲಿಯಲು ಅವಕಾಶವಿದೆ.ಆಸಕ್ತರು ಕುಂದಾಪುರದ ಬಸ್ ಸ್ಟ್ಯಾಂಡ್ ಬಳಿ, ರಾಮ ಮಂದಿರ […]

Read More

ಉಡುಪಿ: ಮಾತೆತ್ತಿದರೆ ಮಾತೆಯರೇ ಎಂದು ಭಾಷಣ ಬಿಗಿಯುವ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ರವರ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ ಗಾಢ ಮೌನಕ್ಕೆ ಜಾರಿದ್ದನ್ನು ಕಾರ್ಕಳ ಬ್ಲಾಕ್ ‌ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಬೆಲ್ಮಣ್ ಪ್ರಶ್ನಿಸಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳಿಗೆ ಆದ ಅನ್ಯಾಯ ಆಗಿರಬಹುದು, ಅಥವಾ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದ ಪ್ರಕರಣ ಆಗಿರಬಹುದು, ಈಗ ಸಹಸ್ರಾರು ಮಹಿಳೆಯರನ್ನು ಶೋಷಣೆ‌ಮಾಡಿ ತನ್ನ ಲೈಂಗಿಕ ತೃಷೆ ತೀರಿಸಿಕೊಂಡದ್ದಲ್ಲದೇ ಅವನ್ನೆಲ್ಲಾ ವೀಡಿಯೋ ‌ಮಾಡಿದ ಆರೋಪ ಹೊತ್ತ […]

Read More

ಕುಂದಾಪುರ: ತೆಕ್ಕಟ್ಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ಗುಡ್ಡೆಅಂಗಡಿಯ ಕೊಕಾಡಿ ತಿರುವಿನಲ್ಲಿ  ಮರಕ್ಕೆ ಢಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿನ ಕಂಪೆನಿಯ ಉದ್ಯೋಗಿ ಕೀರ್ತಿ (25) ಸ್ಥಳದಲ್ಲಿಯೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಸ್ನೇಹಿತರಾದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಎಂಬವರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಒಂದು ಪಾರ್ಶ್ವ ಸಂಪೂರ್ಣ […]

Read More

ಮಂಗಳೂರು ನಗರದ ಕಪಿತಾನಿಯೊ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮತ ಚಲಾಯಿಸಿ ಹೊರಗೆ ಬಂದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಪದ್ಮರಾಜ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮಾಧ್ಯಮದವರನ್ನು ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಸಂದೀಪ್ ಎಕ್ಕೂರು ಎಂಬಾತ ಎಷ್ಟು ಹೊತ್ತು ಪ್ರತಿಕ್ರಿಯೆ ನೀಡ್ತೀರಾ ಅಂತ ಪ್ರಶ್ನಿಸಿದ್ದಾನೆ. ಈ ವೇಳೆ ಆತನನ್ನು […]

Read More

ಕಾಪು,ಎ.26 : ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹಿರಿಯ ದಂಪತಿ ಮತದಾನಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಂತ ಹಿರಿಯ ದಂಪತಿ ಪಾಸ್ಕಲ್ ಡಿಸೋಜಾ (98 ವರ್ಷ) ಮತ್ತು ಕ್ರಿಸ್ತಿನ್ ಡಿಸೋಜಾ (93 ವರ್ಷ) ತನ್ನ ಪುತ್ರ ಮತ್ತು ಸೊಸೆಯೊಂದಿಗೆ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತವನ್ನು ಚಲಾಯಿಸಿದರು.

Read More

ಬ್ರಿಸ್ಟನ್ ಮಾರಿಯೋ ರೋಡ್ರಿಗಸ್ ಅವರು ಪ್ರಾದೇಶಿಕ ಅಧ್ಯಕ್ಷರಾಗಿ ಯಶಸ್ವಿ ಅವಧಿಯ ನಂತರ YCS YSM ಕರ್ನಾಟಕಕ್ಕೆ ಪ್ರಾದೇಶಿಕ ಸಂಯೋಜಕರಾಗಿ ನೇಮಕಗೊಂಡಿದ್ದಾರೆ. ಅವರ ನೇಮಕಾತಿಯು ಸಂಸ್ಥೆಗೆ ಅನುಭವ ಮತ್ತು ಸಮರ್ಪಣೆಯ ಸಂಪತ್ತನ್ನು ಹೊಂದಿದೆ. ಕಾರ್ಡೆಲ್ ಕುಲಶೇಖರ್ ಹೋಲಿ ಕ್ರಾಸ್ ಚರ್ಚ್‌ನ ಸದಸ್ಯ ಬ್ರಿಸ್ಟನ್ ಮಾರಿಯೋ ರೋಡ್ರಿಗಸ್ ವಾಮಂಜೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ. ಅವರು ತಮ್ಮ ಹೊಸ ಪಾತ್ರಕ್ಕೆ ಯುವ ಅಭಿವೃದ್ಧಿ ಮತ್ತು ಸಮುದಾಯ ಸೇವೆಗೆ ಬಲವಾದ ಬದ್ಧತೆಯನ್ನು ತರುತ್ತಾರೆ. ಸಾಲ್ವಡೋರ್ ಬೇಸಿಲ್ ರೋಡ್ರಿಗಸ್ ಮತ್ತು ಮಾಬೆಲ್ […]

Read More

ಮಂಗಳೂರು: 25.04.2024 ಮಂಗಳೂರಿನ ಬೆಥನಿಯ ಲಿಟ್ಲ್ ಫ್ಲವರ್ ಸಿಸ್ಟರ್ಸ್ ಸಭೆಯ ಹನ್ನೆರಡು ಸಹೋದರಿಯರು, ಅಂದರೆ, ಭಗಿನಿ ದೀಪ್ತಿ, ಭಗಿನಿ ಜಸ್ವಿನಿ, ಭಗಿನಿ ನ್ಯೂಫುಲಾ, ಭಗಿನಿ ರೀನಾ, ಭಗಿನಿ ರೆನಿಟಾ, ಭಗಿನಿ ರೇಷ್ಮಾ, ಭಗಿನಿ ಸ್ವಿನಿ, ಭಗಿನಿ ವಾನ್ ವ್ಯಾಲೆಂಟಿನಾ, ಬೆಳಗ್ಗೆ 9.30ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಡಾ.ಪೀಟರ್ ಪೌಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಭಗಿನಿ ಜ್ಯೋತಿ, ಸೀನಿಯರ್, ಭಗಿನಿ ವಿದ್ಯಾ ಮತ್ತು ಭಗಿನಿ ವಿನಿಶಾ ಅವರು ತಮ್ಮ ಸಾರ್ವಕಾಲಿಕ ವೃತ್ತಿಯನ್ನು ಮಾಡಿದರು. ಬೆಂದೂರು ಸೇಂಟ್ […]

Read More

ಕುಂದಾಪುರ,ಎ.25: ಎಪ್ರಿಲ್ 24 ರ ಸಂಜೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, ಕುಂದಾಪುರದ ನಗರ ಭಾಗದಲ್ಲಿ ತಮ್ಮ ಬೆಂಬಲಿಗರಿಂದ ಬ್ರಹತ್ ಮೆರವಣಿಗೆ ಮಾಡಿದರು. ಅವರು ಶಾಸ್ತ್ರಿ ವ್ರತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಮತ್ತೊಂದು ದಿಕ್ಕಿನ ಮುಖ್ಯ ರಸ್ತೆಯಿಂದ ವಾಪಸು ಬಂದು ಶಾಸ್ತ್ರಿ ಪಾರ್ಕಿನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ನನ್ನ ತವರು ಕುಂದಾಪುರ, ಹುಟ್ಟಿದ್ದು ಕಾರ್ಕಳದಲ್ಲಿ ರಾಜಕೀಯವಾಗಿ ಬೆಳೆದದ್ದು ಬ್ರಹ್ಮಾವರದಲ್ಲಿ, ಅಂದರೆ […]

Read More