ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ 12 ಚರ್ಚುಗಳನ್ನು ಒಳಗೊಂಡ ಕೆಥೋಲಿಕ್ ಸಭಾ ವಲಯ ಸಮಿತಿಯ 2026 – 2027 ನೇ ಅವಧಿಯ ಪದಾಧಿಕಾರಿಗಳ ಚುನಾವಣೆ ಸೇಂಟ್ ಮೇರಿಸ್ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷರಾಗಿ ಹೋಲಿ ರೋಜರಿ ಚರ್ಚ್ ಕುಂದಾಪುರದ ಶಿಕ್ಷಕಿ ಶೈಲಾ ಅಲ್ಮೆಡ ರವರು ಸರ್ವಾನುಮತಿಯಿಂದ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷರಾಗಿ ರೇಮಿ ಫೆರ್ನಾಡಿಸ್ ಹಂಗಳೂರು , ನಿಯೋಜಿತ ಅಧ್ಯಕ್ಷರಾಗಿ ಅಲೆಕ್ಸಾಂಡರ್ ಲೂಯಿಸ್ ಹಂಗಳೂರು , ಉಪಾಧ್ಯಕ್ಷರಾಗಿ ಜಾನ್ ಅಲ್ಮೇಡಾ ತ್ರಾಸಿ , ಪ್ರಧಾನ ಕಾರ್ಯದರ್ಶಿಯಾಗಿ ಮರಿಯ ಡಿಸಿಲ್ವಾ […]
ಕಥೋಲಿಕ್ ಸಭಾ ಕುಂದಾಪುರ ಘಟಕ ಸಮಿತಿಯ 2026-2027 ನೇ ಸಾಲಿನ ಪದಾಧಿಕಾರಿಗಳ ಚುನಾವಣೆ ಹೋಲಿ ರೋಜರಿ ಚರ್ಚ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಆಶಾ ಕರ್ವಾಲ್ಲೊ ರವರು ಸರ್ವಾನುಮತಿಯಿಂದ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷರಾಗಿ ವಿಲ್ಸನ್ ಅಲ್ಮೇಡಾ, ಉಪಾಧ್ಯಕ್ಷರಾಗಿ ಡಾ. ಸೋನಿ ಡಿಕೋಸ್ತ, ನಿಯೋಜಿತ ಅಧ್ಯಕ್ಷರಾಗಿ ಪ್ರೇಮಾ ಡಿಕುನ್ಹಾ, ಕಾರ್ಯದರ್ಶಿಯಾಗಿ ಶಾಂತಿ ಬರೆಟ್ಟೊ, ಸಹ ಕಾರ್ಯದರ್ಶಿಯಾಗಿ ವಾಲ್ಟರ್ ಡಿಸೋಜ, ಕೋಶಾಧಿಕಾರಿಯಾಗಿ ಶೈಲಾ ಅಲ್ಮೇಡಾ, ಸಹ ಕೋಶಾಧಿಕಾರಿಯಾಗಿ ಆಲ್ವೀನ್ ಅಲ್ಮೇಡಾ, ಸಂದೇಶ ಪತ್ರಿಕೆ ಸಂಯೋಜಕರಾಗಿ ವೈಲೆಟ್ ಡಿಸೋಜ, ರಾಜಕೀಯ ಸಂಚಾಲಕರಾಗಿ […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಣ್ ಎಸ್.ಜೆ. ಅವರು ಮಂಡಿಸಿದ “ವಸಾಹತುಕಾಲೀನ ಬುಡಕಟ್ಟು ಅಧ್ಯಯನಗಳ ಸ್ವರೂಪ (ವಸಾಹತುಕಾಲೀನ ದಕ್ಷಿಣ ಭಾರತದ ಆಯ್ದ ಅಧ್ಯಯನಕಾರರನ್ನು ಪರಿಗಣಿಸಿ)” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.ಇವರು ಹಂಪಿಯ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎ.ಎಸ್.ಪ್ರಭಾಕರ ಹಾಗೂ ಧಾರವಾಡ ಸ್ನಾತಕೋತ್ತರ ವಿಭಾಗದ ಆಂಗ್ಲ ಭಾಷಾ ವಿಭಾಗ ಪ್ರಾಚಾರ್ಯರು ಹಾಗೂ ವಿಭಾಗ […]
ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನಲ್ಲಿ ಕ್ರೈಸ್ತ ನೀತಿ ಶಿಕ್ಷಣ ದಿನಾಚರಣೆ ಪ್ರಯುಕ್ತ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಫಾದರ್ ರೋಯ್ ಲೋಬೊ ಬಲಿ ಪೂಜೆ ನಡೆಸಿ ಕ್ರೈಸ್ತ ನೀತಿ ಶಿಕ್ಷಣದ ಮಹತ್ವ ಹಾಗೂ ಈ ಶಿಕ್ಷಣ ಮುಂದಿನ ಜೀವನಕ್ಕೆ ದಾರಿ ಆಗಲಿ ಎಂದರು. ಮುಖ್ಯ ಅತಿಥಿಯಾಗಿ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಒಳ್ಳೆಯ ಮನಸ್ಸಿನಿಂದ ಕರ್ತವ್ಯ ನಿರ್ವಹಿಸಿದಾಗ ಭಗವಂತ ಒಲಿಯುತ್ತಾನೆ ಆದ್ದರಿಂದ ದೇವರನ್ನು ಪರೀಕ್ಷಿಸಬಾರದು ಎಂದು ನುಡಿದರು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು […]
ಪಡುಕೋಣೆ : ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆಯಲ್ಲಿ ದಿನಾಂಕ 21.2.2026 ರಂದು ಬೆಂಕಿ ಇಲ್ಲದೆ ಅಡುಗೆ ತಯಾರಿ ಎಂಬ ಸ್ಫರ್ಧೆಯನ್ನು ಅಯೋಜಿಸಲಾಗಿತ್ತು. ಎಲ್ಲಾ ಮಕ್ಕಳು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಒಂಬತ್ತು ತಂಡಗಳನ್ನು ರಚಿಸಿ ಸ್ಪರ್ಧೆಯನ್ನು ನಡೆಸಲಾಗಿತ್ತು. ಹಸಿ ತರಕಾರಿ, ಹಣ್ಣು ಮತ್ತು ಇತರೆ ಪದಾರ್ಥಗಳನ್ನು ಬಳಸಿ ಆರೋಗ್ಯಕರ ಖಾದ್ಯಗಳಾದ ಸಲಾಡಗಳು, ಪ್ರುಟ್ ಸಲಾಡ್ ಗಳು, ಲಸ್ಸಿ, ಚರಮುರಿ, ಕೇಕ್, ವಿವಿಧ ರೀತಿಯ ಲಡ್ಡು, ಬರ್ಫಿ, ಖಟ್ಟಾಮಿಟ್ಟಾ ಕ್ಯಾಂಡಿ, ಗೊಜ್ಜು, ಉಪ್ಪಿನಕಾಯಿ ಇನ್ನೂ ಹಲವಾರು ಖಾದ್ಯಗಳನ್ನು […]
ದಿನಾಂಕ 22.2.2026 ರ಼ಂದು ಪಡುಕೋಣೆ ಚರ್ಚ್ಚನಲ್ಲಿ ಕ್ರೆಸ್ತ ಧಾರ್ಮಿಕ ಶಿಕ್ಷಣ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.. ಚರ್ಚನ ಧರ್ಮ ಗುರುಗಳಾದ ವಂದನೀಯ ಫಾ!ಪ್ರಾನ್ಸಿಸ್ ಕರ್ನೆಲಿಯೊ ಮತ್ತು ಡೊನ್ ಬೊಸ್ಕೊ ಸಂಸ್ಥೆಯ ಆಡಳಿತಾಧಿಕಾರಿಯವರಾದ ವಂದನೀಯ ಫಾ! ಅರ್ನೊಲ್ಡ್ ಮಥಾಯಸ್, ದೇವ ಪೀಠದಮಕ್ಕಳು, ಕ್ರೖಸ್ತ ಶಿಕ್ಷಣದ ಮಕ್ಕಳು, ಶಿಕ್ಷಕರು ಹಾಗೂ ಸುಮಾರು 400 ಮಂದಿ ಭಕ್ತರ ಜೊತೆ ಗೂಡಿ ಪವಿತ್ರ್ ಬಲಿ ಪೂಜೆಯನ್ನು ಅರ್ಪಿಸಿದರು,ಫಾ!ಅರ್ನೊಲ್ಡ್ ರವರು ಬಲಿಪೂಜೆಯ ತಮ್ಮ ಸಂದೇಶ ದಲ್ಲಿ ನಾವು ಒಳ್ಳೆ ಯದನ್ನು ಮಾಡುವಾಗ, ಹಾಗೆಯೇ ಪ್ರಾರ್ಥನೆ […]
The Annual Catechism Day was celebrated with great devotion, enthusiasm and joy at Mount Rosary Church Reported by Archibald Furtado Photographs arranged by Praveen Cutinho ಮೌಂಟ್ ರೋಸರಿ ಚರ್ಚ್ನಲ್ಲಿ ವಾರ್ಷಿಕ ಧಾರ್ಮಿಕ ಶಿಕ್ಷಣ ದಿನಾಚರಣೆಯನ್ನು ಭಕ್ತಿ, ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಯಿತು, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಕ್ಯಾಟೆಕಿಸಂ ಮಕ್ಕಳನ್ನು ನಂಬಿಕೆ ಮತ್ತು ಸಹಭಾಗಿತ್ವದ ರೋಮಾಂಚಕ ಅಭಿವ್ಯಕ್ತಿಯಲ್ಲಿ ಒಟ್ಟುಗೂಡಿಸಲಾಯಿತು. ಬೆಳಿಗ್ಗೆ 8.00 ಗಂಟೆಗೆ ಪವಿತ್ರ ಯೂಕರಿಸ್ಟ್ನೊಂದಿಗೆ ಆಚರಣೆ […]
ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಕೈಸ್ತ ಧಾರ್ಮಿಕ ಶಿಕ್ಶಣ್(Catechism) ದಿನವನ್ನು ಫೆಬ್ರವರಿ 22 ಭಾನುವಾರದಂದು ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಕ್ರಿಸ್ತ ಶಿಕ್ಶಣ ಪರೀಕ್ಶೆಯಲ್ಲಿ ಉತೀರ್ಣರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮದರ್ ತೆರೆಸಾ ಶಾಲೆಯಲ್ಲಿ ದಿನಾಂಕ 14/2/2026ರಂದು ಹಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಕು. ಗ್ರೇಸಿ ಇವರು ನೆರವೇರಿಸಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಸಲುವಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಕುಮಾರಿ ಶಮಿತಾ ರಾವ್ ಹಾಗೂ ರೇನಿಟಾ ಲೋಬೋ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳು,ತೀರ್ಪುಗಾರರೂ ಆಗಿರುವ ಶ್ರೀಮತಿ ಸಂಧ್ಯಾ ರಾವ್( ಕಂಟ್ರಿ ಮ್ಯಾನೇಜರ್ ಅಮೇರಿಕನ್ ಏರ್ ಲೈನ್ಸ್ ) ಶ್ರೀ ಯಶ್ ಆರ್ಯನ್ […]

