

ಬೈಂದೂರು; ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬವು ಸಡಗರ, ಸಂಭ್ರಮದಿಂದ ಜರುಗಿತು.
ಭ್ರಾತೃತ್ವ ದಿನ
ದಿನಾಂಕ 8 ರಂದು ವಂ।ಜೋಕಿಮ್ ಡಿಸೋಜಾ ಇವರ ನೇತ್ರತ್ವದಲ್ಲಿ ಭ್ರಾತೃತ್ವ ದಿನ (ಕೊಂಪ್ರಿ ಆಯ್ತಾರ್) ಸಂಭ್ರಮ ನಡೆಯಿತು.












ದೇವವರ ವಾಕ್ಯದ (ವೆಸ್ಪರ್) ಸಂಭ್ರಮ
ದಿನಾಂಕ 10 ರಂದು ದೇವರ ವಾಕ್ಯದ (ವೆಸ್ಪರ್) ಸಂಭ್ರಮ ನಡೆಯಿತು. ಇದನ್ನು ಬೈಂದೂರು ಇಗರ್ಜಿಯ ಸಹಾಯಕ ಧರ್ಮಗುರು ವಂ। ಪ್ರಥ್ವಿ ರೋಡ್ರಿಗಸ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ಉಪಸ್ಥಿತರಿದ್ದರು. ಈ ಸಂಭ್ರಮದಲ್ಲಿ ವಲಯದ ಮತ್ತು ಅತಿಥಿ ಧರ್ಮಗುರುಗಳು ಭಾಗಿಯಾದರು. ದೇವರ ವಾಕ್ಯದ ಸಂಭ್ರಮ ಚರ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ಜರುಗಿತು.




























ವಾರ್ಷಿಕ ಮಹಾಹಬ್ಬ

ದಿನಾಂಕ 11 ರಂದು ವಾರ್ಷಿಕ ಮಹಾ ಹಬ್ಬ ಜರುಗಿತು. ಈ ಸಂಭ್ರಮಕ್ಕೆ ಕರ್ನಾಟಕ ಪ್ರಾಂತೀಯ ಸೆಮಿನರಿಯ ನಿರ್ದೇಶಕ ರೆ. ಫಾ. ಬೊನಿಪಾಸ್ ಪಿಂಟೊರವರು ಬಲಿಪೂಜೆಯ ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೆವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು. ಕೋಂಪ್ರಿ ಹಬ್ಬವನ್ನು ಉಡುಪಿಯ ರೆ. ಫಾ. ಜೋಕಿಂ ಡಿಸೋಜಾರವರು ನೆರವೆರಸಿದರು, ಈ ಸಂದರ್ಭದಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ಉಪಸ್ಥಿತರಿದ್ದು ಹಬ್ಬಕ್ಕೆ ಶುಭಾಷಯಗಳನ್ನು ಸಲ್ಲಿಸಿದರು. ಉಡುಪಿ ಧರ್ಮಪ್ರಾಂತ್ಯದ ಹಲವಾರು ಧರ್ಮಗುರುಗಳು, ಬೈಂದೂರಿನ ಸಹಾಯಕ ಧರ್ಮಗುರು ಪ್ರಥ್ವಿ ರೋಡ್ರಿಗಸ್ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಸ್ಟೇಪನ್ ಡಾಯಸ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಆಯೋಗದ ಸಂಯೋಜಕಿ ಜೋಸ್ಪಿನ್ ರೊಡ್ರಿಗಸ್ ಉಪಸ್ಥಿತರಿದ್ದರು.
ಚರ್ಚಿನ ಧರ್ಮಗುರುಗಳಾದ ವಂ। ವಿನ್ಸೆಂಟ್ ಕುವೆಲ್ಲೊರವರು ಚರ್ಚಿನ ಮಹೋತ್ಸವಕ್ಕೆ ಬೆಂಬಲ ನೀಡಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.
ನಾಟಕ “ಸ್ವಾರ್ಥಾಚಿ ದಾವ್ಲಿ” ಅಭುತಪೂರ್ವಕವಾಗಿ ಪ್ರದರ್ಶಿಸಲ್ಪಟ್ಟಿತು
ಸಂಜೆ ಬೈಂದೂರಿನ ಸಾಂಸ್ಕ್ರತಿಕ ತಂಡದಿಂದ ಮನೋರಂಜನ ಕಾರ್ಯಕ್ರಮವಾಗಿ ಖ್ಯಾತ ನಾಟಕಗಾರರಾದ ಬರ್ನಾಡ್ ಜೆ.ಕೋಸ್ತಾ, ಕುಂದಾಪುರ ಇವರು ರಚಿಸಿದ ಸಾಮಾಜಿಕ, ಹಾಸ್ಯಭರಿತ, ನಿತಿದಾಯಕ “ಸ್ವಾರ್ಥಾಚಿ ದಾವ್ಲಿ” ನಾಟಕ ಪ್ರದರ್ಶಿಸಲಾಯಿತು. ಎಲ್ಲಾ ಕಲಾವಿದರು ಉತ್ತಮವಾಗಿ ನಟನೆ ಮಾಡಿ, ನಾಟಕ ಅಭುತಪೂರ್ವಕವಾಗಿ ಹೊರ ಹೊಮ್ಮಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.




















































Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/Ev3k8gPa7GoEoPPXlyxtW6 (jananudi news orga)

