ಕುಂದಾಪುರ ; ‘ತಂತ್ರಜ್ಞಾನದ ಪ್ರಭಾವದಿಂದ ಜನರು ಇಂದು ಗಾಂಧೀ ತತ್ವವನ್ನು ಮರೆಯುತ್ತಿದ್ದಾರೆ, ಅವರ ಚಿಂತನೆ ಯಾವಕಾಲಕ್ಕೂ ಪ್ರಸ್ತುತವೇ. ಆ ಕಾಲದಲ್ಲಿಯೇ ರೈತಜೀವನವನ್ನು ಪಾಲಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರ್ವಶ್ರೇಷ್ಠ ನಾಯಕ. ಯಾವುದೇ ಎರಡು ವ್ಯಕ್ತಿತ್ವಗಳ ನಡುವೆ ಹೋಲಿಕೆ ಮಾಡದೇ ಇಂಥ ಶ್ರೇಷ್ಠ ನಾಯಕರು ನಮ್ಮ ದೇಶಕ್ಕೆ ಅಂತ ಉದಾತ್ತ ಕೊಡುಗೆ ಆ ಕಾಲಕ್ಕೇ ನೀಡಿದ್ದರೆಂಬ ಹೆಮ್ಮೆ ನಮ್ಮದಾಗಬೇಕು’ ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾಲೇಜಿನಲ್ಲಿ ಆಯೋಜಿಸಿದ […]
ಕುಂದಾಪುರ : ದಿನಾಂಕ 30/09/25 ರಂದು ಇಲ್ಲಿನ ಭಂಡಾರ್ಕರ್ಸ್ ಕಾಲೇಜಿನಲ್ಲಿ ಬಿ. ಬಿ. ಎ ವಿಭಾಗ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಅದರ ಪ್ರಾಮುಕ್ಯತೆ ಬಗ್ಗೆ ಮಾಹಿತಿ ಶಿಬಿರ ವನ್ನು ಆಯೋಜಿಸಿದ್ದರು. ಸ್ಮಾರ್ಟ್ ಅಕಾಡೆಮಿ ಪುತ್ತೂರು ಇದರ ಮುಕುಂದ ಕೃಷ್ಣ ಸಂಪನ್ಮೂಲ ವ್ಯಕ್ತಿ ಆಗಿ ಆಗಮಿಸಿ ವಿಶೇಷ ಮಾಹಿತಿ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತಯಾರಿ ನಡೆಸಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿ ಎಂದು ಶುಭ ಹಾರೈಸಿದರು.ಬಿ. ಬಿ. ಎ […]
ಶಿರೂರು : ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿಯವರ 156 ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 121 ನೇ ಜನ್ಮದಿನಾಚರಣೆ ಆಚರಿಸಲಾಯಿತು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಮಹಾನ್ ನಾಯಕರಉದಾತ್ತ ವಿಚಾರದಾರೆಗಳನ್ನು ತಿಳಿಸಿ ಎಲ್ಲರಿಗೂ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜನ್ಮದಿನದ ಶುಭಾಶಯ ತಿಳಿಸಿದರು.
✍️ಈಶ್ವರ್ ಸಿ ನಾವುಂದ, 9833259692 ಒಬ್ಬ ವ್ಯಕ್ತಿಯ ನಡೆತೆ,ಕೌಶಲ್ಯ, ಭವಿಷ್ಯವನ್ನು. ರೂಪಿಸುವ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು ಎಂದು ಎಪಿಜೆ ಅಬ್ದುಲ್ ಕಲಾಂ ಹೇಳಿರುವ ಮಾತು ಅಕ್ಷರಶ ಸತ್ಯ ಯಾವೊಬ್ಬ ಮಗನು ಜನ್ಮ ಕೊಟ್ಟ ತಾಯಿಯನ್ನು ಮರೆಯುವುದಿಲ್ಲ.ಬಾಳು ಕೊಟ್ಟ ತಂದೆಯನ್ನು ಮರೆಯುವುದಿಲ್ಲ. ಮಾತು ಕಲಿಸಿದ ಕನ್ನಡ ತಾಯಿಯನ್ನು ಮರೆಯುವುದಿಲ್ಲ. ಕನ್ನಡ ಅಕ್ಷರ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ. ಗುರುಗಳು ನಮ್ಮ ಬದುಕಿನಲ್ಲಿ ಜೀವನ ದಾರಿಗೆ ಅರ್ಥ ಕಲ್ಪಿಸಿ ಸ್ವತಂತ್ರವಾಗಿ ಸ್ವಯಂ ತೀರ್ಮಾನ ಕೈಗೊಳ್ಳಲು ನಮ್ಮನ್ನು ವಿದ್ಯಾವಂತರಾಗಿಸಿದ ಗುರುಗಳು […]
ಬೆಂಗಳೂರು: ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗವು ತನ್ನ ಮೊದಲ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿತು. ಸಪ್ಟೆಂಬರ್ 29ರಂದು ನಡೆದ ಈ ಕಾರ್ಯಕ್ರಮದಲ್ಲಿ ಎಂಸಿಎ ಹಂತದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ನೈಜ-ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ನೀಡುವ ನಾವೀನ್ಯಕಾರಿ ಐಒಟಿ ಯೋಜನೆಗಳನ್ನು ಪ್ರದರ್ಶಿಸಿದರು. ಶ್ರೀ ಮುನೀನ್ ಪಾಷಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಈ ಯೋಜನೆಗಳು ದೈನಂದಿನ ಜೀವನದ ಅಡಚಣೆಗಳನ್ನು ತೊಡೆದುಹಾಕಲು ಸ್ಮಾರ್ಟ್ ಪರಿಹಾರಗಳನ್ನು ನೀಡಿದವು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು […]
ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿಜಿ ಜಯಂತಿಯನ್ನು ಕುಂದಾಪುರ ಚರ್ಚ್ ಸಭಾ ಭವನದಲ್ಲಿ (ಅ.2) ಆಚರಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರ್ಟೂನಿಸ್ಟ್, ಕಾಂಗ್ರೆಸಿನ ನಾಯಕ ಚಂದ್ರಶೇಖರ ಶೆಟ್ಟಿ ಮಾತನಾಡಿ “ಸ್ವಾತಂತ್ರಕ್ಕಾಗಿ ಅಹಿಂಸಾ ಹೋರಾಟ, ಚಳುವಳಿ ಮಾಡಿ, ಅಹಿಂಸಾ ಮಾರ್ಗದಿಂದ ಸ್ವಾತಂತ್ರ ದೊಕಿಸಿಕೊಟ್ಟಿದ್ದು ಮಹಾತ್ಮ ಗಾಂಧಿ ಎಂದು ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ ಹಾಗಾಗಿ ಗಾಂಧಿ ಜಯಂತಿ ಈಗಲೂ ಪ್ರಸ್ತುತವೇ ಎಂದು ಕೆಲವರು ಎಣಿಸಬಹುದು, ಆದರೆ ಈಗಲೂ ಪ್ರಸ್ತೂತವಾಗಿದೆ, ಯಾಕೆಂದರೆ ಅವರ ಚಿಂತನೇ ಬಹಳ […]
ಕಲ್ಯಾಣಪುರ; ಮಿಲಾಗ್ರೆಸ್ ಕಾಲೇಜು ಇತ್ತೀಚೆಗೆ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಸ್ಮರಣಾರ್ಥ “ಗಾಂಧಿ ಶಾಂತಿಯ ಮೂಲಕ ಜಗತ್ತನ್ನು ಮುನ್ನಡೆಸುವುದು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವು ಶಾಂತಿ ಮತ್ತು ಏಕತೆಯನ್ನು ಹರಡಲು ಗಾಂಧೀಜಿ ಜನಪ್ರಿಯಗೊಳಿಸಿದ “ರಘುಪತಿ ರಾಘವ ರಾಜಾ ರಾಮ್” ಎಂಬ ಭಕ್ತಿಗೀತೆಯೊಂದಿಗೆ ಪ್ರಾರಂಭವಾಯಿತು. ರಾಷ್ಟ್ರಪಿತರಾಗಿ ಅವರ ಪರಂಪರೆಯನ್ನು ಗೌರವಿಸುವ ಮೂಲಕ ಗಣ್ಯರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. […]
ಕೋಲಾರ : ಕೋಲಾರ ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇಕಡ 35 ರಷ್ಟು ಪೂರ್ಣಗೊಂಡಿದ್ದು, ನಿನ್ನೆ ಒಂದೇ ದಿನ 36 ಸಾವಿರ ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ್ ಒಳಗೊಂಡ ಗಣತಿದಾರರ ತಂಡಕ್ಕೆ ಪ್ರತಿ ದಿನ 10 ಸಾವಿರ ಮನೆಗಳ ಸಮೀಕ್ಷೆ ನಡೆಸಲು […]
ಶಿವಮೊಗ್ಗ, ಸೆಪ್ಟೆಂಬರ್ 29, 2025: ಸೆಪ್ಟೆಂಬರ್ 28, 2025 ರಂದು, ಶಿವಮೊಗ್ಗ ಡಯಾಸಿಸ್ ಪ್ರೀತಿಯ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವ್, ಎಸ್.ಜೆ. ಅವರಿಗೆ ಅಕ್ಟೋಬರ್ 7 ರಂದು ಸಂಜೆ 4:30 ಕ್ಕೆ ಮೈಸೂರಿನ ಸೇಂಟ್ ಜೋಸೆಫ್ ಕ್ಯಾಥೆಡ್ರಲ್ನಲ್ಲಿ ಮೈಸೂರು ಡಯಾಸಿಸ್ನ ಬಿಷಪ್ ಆಗಿ ನೇಮಕಗೊಳ್ಳುವ ನಿರೀಕ್ಷೆಯಲ್ಲಿ ಮಹತ್ವದ ವಿದಾಯ ಸಮಾರಂಭವನ್ನು ಆಯೋಜಿಸಿತ್ತು. ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಧಾರ್ಮಿಕ ಸಹೋದರಿಯರು ಮತ್ತು ಸಮುದಾಯದ ಸಾಮಾನ್ಯ ಸದಸ್ಯರು ಭಾಗವಹಿಸಿದ್ದರು, ಅವರು […]

