ಕುಂದಾಪುರದ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ (MCN) ನ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು 2025–26 ನೇ ಸಾಲಿನ ಉದ್ಯೋಗ ನಿಯೋಜನೆ ಅಭಿಯಾನವನ್ನು ಜುಲೈ 2, 2026 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ ಯಶಸ್ವಿಯಾಗಿ ಆಯೋಜಿಸಿತು. ಭಾರತದ ಪ್ರಮುಖ ಮಲ್ಟಿ-ಸ್ಪೆಷಾಲಿಟಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ಹೈದರಾಬಾದ್ನ ಹೈಟೆಕ್ ಸಿಟಿಯ ಯಶೋದಾ ಆಸ್ಪತ್ರೆಗಳ ಸಹಯೋಗದೊಂದಿಗೆ ನೇಮಕಾತಿ ಅಭಿಯಾನವನ್ನು ನಡೆಸಲಾಯಿತು. ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ನೇಮಕಾತಿ ತಂಡಕ್ಕೆ ಆತ್ಮೀಯ ಸ್ವಾಗತ ಕೋರುವುದರೊಂದಿಗೆ ಕಾರ್ಯಕ್ರಮ […]
ಕಾರ್ಕಳ ; ಕಾರ್ಕಳ ಮಾಜಿ ಶಾಸಕರಾದ ದಿವಂಗತ ಎಚ್.ಗೋಪಾಲ ಭಂಡಾರಿಯವರ ಸ್ಮೃರಣಾರ್ಥ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿತಾ ಡಿಸೋಜಾ ಬೆಳ್ಮಣ್ ಅವರು ಕೆರ್ವಾಶೆ , ಬಂಗ್ಲೆಗುಡ್ಡೆ, ಹಾಗೂ ಶೆಟ್ಟಿಬೆಟ್ಟು ಅಂಗನವಾಡಿಯ ಶಾಲಾ ಮಕ್ಕಳಿಗೆ ಬ್ಯಾಗ್, ವಾಟರ್ ಬಾಟಲ್, ನೋಟ್ ಬುಕ್ ಹಾಗೂ ಇನ್ನಿತರ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು .ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ,ಕೆರ್ವಾಶೆ ಗ್ರಾಮೀಣ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಚೆರಿಯನ್ ಡಯಾಸ್, ಕೆರ್ವಾಶೆ ಯುವ […]
ಮಂಗಳೂರು, ಜು.2; ಮಂಗಳೂರು ನಗರದಲ್ಲಿ ಪಾದಚಾರಿ ರಸ್ತೆಗಳ ಪಕ್ಕದ ಕಂಬಗಳಲ್ಲಿ ಕೇಬಲ್ ಗಳ ಕೇಬಲ್ ಗಳ ಮಂಗಳೂರು, ಜು.2; ಮಂಗಳೂರು ನಗರದಲ್ಲಿ ಪಾದಚಾರಿ ರಸ್ತೆಗಳ ಪಕ್ಕದ ಕಂಬಗಳಲ್ಲಿ ಕೇಬಲ್ ಗಳ ಕೇಬಲ್ ಗಳ ರಾಶಿ ಜೋತಾಡುತ್ತವೆ, ನೇತಾಡುವ ಕೇಬಲ್ ಗಳ ಉರುಳಿಗೆ ಜನ ನೇತಾಡಿ ಸಾಯಲಿಕ್ಕಾಗಿ ಇವೆಯೇ ? ಮಂಗಳೂರು ನಗರ ಶಿಕ್ಷಣ, ವೈದ್ಯಕೀಯ ಧಾರ್ಮಿಕ, ಬಂದರು,ಬೀಚ್ ಗಳು, ಉದ್ಯಮ, ಪ್ರವಾಸೋದ್ಯಮ ಗಳಿಗೆ ಹೆಸರು ವಾಸಿಯಾಗಿದೆ ಇದೇ ನಗರ ಸ್ಮಾರ್ಟ್ ಸಿಟಿ ಯಾಗಿದೆ ಕೆಲವರ ನಿರ್ಲಕ್ಷ ದಿಂದ […]
ಕುಂದಾಪುರ: ಪತ್ರಿಕೆಗಳು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಹೇಳಿದರು.ಅವರು ಜುಲೈ 1 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ “ಪತ್ರಿಕಾ ದಿನಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಪತ್ರಿಕೆಗಳು ಆರಂಭವಾದಾಗಿನಿಂದ ಸಾಮಾಜಿಕ ಜಾಗೃತಿ ಜೊತೆಗೆ ಅಭಿವೃದ್ಧಿಪರ ಚಿಂತನೆ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಐತಿಹಾಸಿಕ ಹಿನ್ನೆಲೆಯಲ್ಲಿ ಪತ್ರಿಕೆಗಳು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಜನರಲ್ಲಿ […]
Reported & Photographs arranged by Ashok Gundmi ಬಾರ್ಕೂರು; “ಶಿಕ್ಷಣಕ್ಕೆ ನೀಡುವ ಬೆಂಬಲ ಎಂದಿಗೂ ವ್ಯರ್ಥವಾಗುವುದಿಲ್ಲ; ಅದು ಭವಿಷ್ಯವನ್ನು ಬೆಳಗಿಸುವ ದೀಪವಾಗುತ್ತದೆ.” ಈ ಅರ್ಥಪೂರ್ಣ ಸಂದೇಶಕ್ಕೆ ಅನುಗುಣವಾಗಿ, ನಮ್ಮ ನೇಶನಲ್ ಪ್ರೌಢಶಾಲೆ ಬಾರ್ಕೂರು, ರೋಟರಿ ಕ್ಲಬ್ ಬಾರ್ಕೂರು ಮತ್ತು ಕಿಶೂ ಎಂಟರ್ಪ್ರೈಸಸ್ – ಡೈಜಿವರ್ಲ್ಡ್ನ ಉದಾರ ಪ್ರಾಯೋಜಕತ್ವದೊಂದಿಗೆ, ಪ್ರೌಢಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಅರ್ಥಪೂರ್ಣ ಮತ್ತು ಸಂಭ್ರಮಾಚರಣೆಯ ರೀತಿಯಲ್ಲಿ ಆಯೋಜಿಸಿತು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಮಾರಂಭದ […]
ಶಿರೂರು : ವೈದ್ಯೋ ನಾರಾಯಣೋ ಹರಿ : ಎಂಬ ಉಕ್ತಿಯಂತೆ ಜಗತ್ತಿನಲ್ಲಿ ತಾಯಿಯ ನಂತರ ಮರುಜನ್ಮ ನೀಡುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ವೈದ್ಯರಾದವರು ದೇವರಿಗೆ ಸಮಾನರಾದವರು ಅವರು ರೋಗಿಯ ರೋಗವನ್ನು ಪರಿಹರಿಸುವವರು, ವೈದ್ಯ ಕೇವಲ ರೋಗ ಪರಿಹಾರಕರಾಗಿರದೇ ರೋಗಿಯ ಸಹ ಚಿಂತಕರೂ ಆಗಿರುತ್ತಾರೆ ಅದಕ್ಕಾಗಿ ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ ರೋಗಕ್ಕೆ ತುತ್ತಾದ ಪ್ರತಿಯೊಬ್ಬರನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಧೈರ್ಯತುಂಬಿ ಅವರಿಗೆ ಪುನರ್ಜನ್ಮ ನೀಡುವುದು ವೈದ್ಯರ ಕಾಯಕವಾದರೆ ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ನಾಗರೀಕರ […]
ಉಡುಪಿ, ಜು. 1: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲ್ಯಾನ್ (40) ಗೋವಾದ ಕಲ್ಲಂಗೂಟ್ ಬೀಚ್ ಸಮೀಪದ ಗೆಸ್ಟ್ ಹೌಸ್ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಮೂಲತಃ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿಯಾಗಿರುವ ಸಂದೀಪ್ ಸಾಲ್ಯಾನ್, ಹಲವು ವರ್ಷಗಳ ಹಿಂದೆ ಪ್ರಮೋದ್ ಮಧ್ವರಾಜ್ ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ಆ ಕೆಲಸವನ್ನು ತೊರೆದು, ಮಲ್ಪೆಯಲ್ಲಿ ಪ್ರವಾಸಿ ಬೋಟ್ ವ್ಯವಹಾರ ನಡೆಸುತ್ತಿದ್ದರು ಎಂದು […]
ಕಾಪು : ಭಾರತೀಯ ಜೀವವಿಮಾ ನಿಗಮದ ಕಾಪು ಶಾಖೆಯಲ್ಲಿ ಕಳೆದ 13 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಉತ್ತರ ಕನ್ನಡ ಜಿಲ್ಲೆಯ ಕುಮುಟಾಕ್ಕೆ ಶಾಖಾ ಸಹಾಯಕ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿದ ಪ್ರವೀಣ್ ಕುಮಾರ್ ಎನ್ ಕೆ ಅವರಿಗೆ ಅವರ ತಂಡದ ವಿಮಾ ಪ್ರತಿನಿಧಿಗಳಿಂದ ಸೇವಾ ಗೌರವ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಕಾಪುವಿನ ಜೆಸಿ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕಾಪು ಶಾಖೆಯ ಹಿರಿಯ ಶಾಖ ವ್ಯವಸ್ಥಾಪಕ ಬಾಲಚಂದ್ರ ಬಿ ಮತ್ತು ಕುಂದಾಪುರ ಶಾಖೆಯ ಸಹಾಯಕ ವ್ಯವಸ್ಥಾಪಕ, ಅಭಿವೃದ್ಧಿ ಅಧಿಕಾರಿ […]
ಮಂಗಳೂರು; ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಅವರ ಮಂಗಳೂರಿನ ನಿವಾಸದಲ್ಲಿ ಇಂದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಂಗವಾಗಿ ಮನೆ-ಮನೆಗೆ ತೆರಳಿ ನಡೆಸಲಾಗುತ್ತಿರುವ ಎಣಿಕೆ (Enumeration) ಹಾಗೂ ನಮೂನೆ ಭರ್ತಿ (Enumeration Form Filling) ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಅವರು ಶ್ರೀ ಐವನ್ ಡಿ’ಸೋಜಾ ಹಾಗೂ ಅವರ ಕುಟುಂಬದ ಸದಸ್ಯರ ಎಣಿಕೆ ನಮೂನೆಗಳನ್ನು ಭರ್ತಿ ಮಾಡುವ ಮೂಲಕ ಎಸ್ಐಆರ್ […]

