ಮೂಡ್ಲಕಟ್ಟೆ ಎಂ.ಐ.ಟಿ ಕುಂದಾಪುರದ ಸಾವಿಷ್ಕರ್-2026 ಎರಡನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಖ್ಯಾತ ಅಂತರಾಷ್ಟ್ರೀಯ ಮಟ್ಟದ ಸಂಗೀತ ನಿರ್ದೇಶಕರಾದ ಶ್ರೀ ರವಿ ಬಸ್ರೂರು ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಐ ಎಂ ಜೆ ವಿದ್ಯಾಸಂಸ್ಥೆಗಳ ಚೇರ್ಮನ್ ರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ, ಐ ಎಂ ಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್ ಎನ್ ಭಟ್ ಹಾಗೂ ಎಂ ಐ ಟಿ ಕುಂದಾಪುರದ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೈಂದೂರು: ಸಾಧಿಸಿದರೆ ಸಬಲವನ್ನೇ ನುಂಗಬಹುದು ಎನ್ನುವ ಮಾತಿಗೆ ಬೈಂದೂರಿನ ಯಡ್ತರೆ ಗ್ರಾಮದ ಆಶಾ ವೀಣಾ ಡಾಯಸ್ ಅನ್ವಯಿಸುತ್ತಾರೆ. ಶಾಲಾ ಜೀವನದಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಯಲ್ಲಿ ತೋರಿದ ಪ್ರತಿಭೆಗೆ ಸೋಪಾನವೆಂಬಂತೆ , ಉತ್ತಮ ಸಂಯೋಜಕೀ ಪುರಸ್ಕಾರ, 2025-26 ನೇ ಸಾಲಿನ ಐಬಿಬಿಎಸ್ ಬೆಸ್ಟ್ ಟೀಚರ್ ಅವಾರ್ಡ್ ಹಾಗೂ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಇವರು ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ಟಾಪ್ ಟೆನ್ನರ ವಿಜೇತೆಯಾಗಿ ಆಯ್ಕೆ.ಅಂಚೆಕಾಡಿನ ಮನಸ್ಸಿದ್ದರೆ ಮಾರ್ಗ ಮತ್ತು ನಿರ್ಮಲ ಪ್ರೀತಿ ಕಥಾ ಸ್ಪರ್ಧೆಗೆ ದ್ವಿತೀಯ ಸ್ಥಾನ […]
Release of Vally Vagga’s New Book ‘Vinchnnar Kanniyo’ ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರು ಬರೆದಿರುವ ‘ವಿಂಚ್ಣಾರ್ ಕಾಣಿಯೊ’ ಪುಸ್ತಕದ ಲೋಕಾರ್ಪಣೆ ಸಮಾರಂಭವು 2026ರ ಮೇ 10, ಭಾನುವಾರ ಸಂಜೆ 5:00 ಗಂಟೆಗೆ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಮತ್ತು ಕೊಂಕಣಿ ಸಲಹಾ ಸಮಿತಿ, ಸಾಹಿತ್ಯ ಅಕಾಡೆಮಿ, ಹೊಸ ದೆಹಲಿಯ ಸಂಚಾಲಕರಾದ ಶ್ರೀ ಮೆಲ್ವಿನ್ […]
ಕುಂದಾಪುರ,ಮೇ. 5; ನಿನ್ನೆ ಸಂಜೆ , ದಾವಣಗೆರೆ ಹಾಗೂ ಬಾಗಲಕೋಟೆ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂದೆ ಕಾಂಗ್ರೆಸ್ ಪಕ್ಷದ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ , ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಭಿಜಿತ್ ಪೂಜಾರಿ , ಐಟಿ ಸೆಲ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ , ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ […]
ತಲ್ಲೂರು; ತಾರೀಕು 03/05/2026 ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಮಹಿಳಾ ಆಯೋಗದ ಸಹಯೋಗದಲ್ಲಿ ತಾಯಂದಿರ ದಿನವನ್ನು ಆಚರಿಸಲಾಯಿತು.ಅಂದು ಬೆಳಗಿನ ದಿವ್ಯ ಬಲಿಪೂಜೆಯನ್ನು ಮೂಡಬೆಳ್ಳೆ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕರಾದ ವಂ। ಫಾ. ಸಿರಿಲ್ ಲೋಬೋ ಅವರು ಪ್ರಧಾನ ಯಾಜಕರಾಗಿ ನೆರವೇರಿಸಿದರು. ಚರ್ಚಿನ ಧರ್ಮಗುರು ವಂ। ಫಾ. ಎಡ್ವಿನ್ ಡಿಸೋಜಾ ಅವರು ಸಹಕರಿಸಿದರು.ನಂತರ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ತಾಯಂದಿರಿಗಾಗಿ ವಿಶೇಷ ಕಾರ್ಯಕ್ರಮ ಎರ್ಪಡಿಸಲಾಯಿತು. ಫಾ. ಸಿರಿಲ್ ಲೋಬೋ ಅವರು ತಾಯಂದಿರನ್ನು ಉದ್ದೇಶಿಸಿ “ತಾಯಿ ಎನ್ನುವ […]
Fusionverse 2026: A Dazzling Confluence of Creativity, Innovation, and Youthful Brilliance Reported and photography by Ganesh Nayak ಕಲ್ಯಾಣಪುರ; ಪ್ರತಿಭೆ ಮತ್ತು ತಂತ್ರಜ್ಞಾನದ ಭವ್ಯ ಆಚರಣೆಯಲ್ಲಿ, ಎರಡು ದಿನಗಳ ಅಂತರ-ವರ್ಗ ಉತ್ಸವ ಫ್ಯೂಷನ್ವರ್ಸ್ 2026, ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನಲ್ಲಿ ಭವ್ಯತೆಯಿಂದ ತೆರೆದುಕೊಂಡಿತು, ಕ್ಯಾಂಪಸ್ ಅನ್ನು ಕಲ್ಪನೆ ಮತ್ತು ಯುವ ಶಕ್ತಿಯ ರೋಮಾಂಚಕ ವಸ್ತ್ರವಾಗಿ ಪರಿವರ್ತಿಸಿತು. ಉತ್ಸವವನ್ನು ಉಪ ಪ್ರಾಂಶುಪಾಲರಾದ ಶ್ರೀಮತಿ ಸೋಫಿಯಾ ಡಯಾಸ್ ಉದ್ಘಾಟಿಸಿದರು, ಅವರು ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಳನವನ್ನು […]
ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನಲ್ಲಿ ಪ್ರಥಮ ಪರಮ ಪ್ರಸಾದದ ಸಂಸ್ಕಾರ ನೆರವೇರಿತು 8 ಪುಟಾಣಿಗಳು ಕ್ರಿಸ್ತ ಪ್ರಸಾದ ಸ್ವೀಕರಿಸಿದರು ಇಗರ್ಜಿಯ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಬಲಿ ಪೂಜೆ ನಡೆಸಿ ಪರಮ ಪ್ರಸಾದದ ಧಾರ್ಮಿಕ ವಿಧಿ ನೆರವೇರಿಸಿದರು ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಕ್ರಿಸ್ತ ಪ್ರಸಾದದ ಮಹತ್ವ ಹಾಗೂ ಅದನ್ನು ಸೇವಿಸುವುದರಿಂದ ನಾವು ಕ್ರಿಸ್ತನನ್ನು ತಮ್ಮದಾಗಿಸಿಕೊಳ್ಳುತ್ತೇವೆ ಎಂದರು ಫಾದರ್ ಅರುಣ್ ಕೋತ್ ಭಾಗವಹಿದ್ದರು.
ಉಡುಪಿ; ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ ಪದಾಧಿಕಾರಿಗಳು, ಐದು ವರಡೋ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರೊಂದಿಗೆ, ಎಪ್ರಿಲ್ 30 ರಂದು ಉಡುಪಿಯ ಬಿಷಪ್ ಹೌಸ್ನಲ್ಲಿ ನಮ್ಮ ಹೊಸ ಬಿಷಪ್ ರೆವರೆಂಡ್ ರೆವರೆಂಡ್ ಡಾ. ಲೆಸ್ಲೀ ಕ್ಲಿಫರ್ಡ್ ಡಿಸೋಜಾ ಅವರನ್ನು ಭೇಟಿ ಮಾಡಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಪ್ರಾರ್ಥನಾಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು ನಂತರ ಆತ್ಮೀಯ, ಸ್ಪೂರ್ತಿದಾಯಕ ಮತ್ತು ಭವಿಷ್ಯದ ದೃಷ್ಟಿಕೋನದ ಸಂವಾದ ನಡೆಯಿತು. ಸಂಕ್ಷಿಪ್ತ ಚರ್ಚೆಯ ಸಮಯದಲ್ಲಿ, ಬಿಷಪ್ ರವರು ಸಹಭಾಗಿತ್ವ ಬಗ್ಗೆ […]
ಸಾವಿಷ್ಕಾರ್-2026: ‘ಮೈಸೂರು ಎಕ್ಸ್ಪ್ರೆಸ್’ ತಂಡದಿಂದ ಕುಂದಾಪುರದಲ್ಲಿ ಸಂಗೀತದ ಮಳೆ!ಕುಂದಾಪುರ: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಆಯೋಜಿಸಿರುವ ರಾಷ್ಟ್ರಮಟ್ಟದ ಅಂತರಕಾಲೇಜು ಸಾಂಸ್ಕೃತಿಕ ಹಬ್ಬ ಸಾವಿಷ್ಕಾರ್ 2026′ ಕಾರ್ಯಕ್ರಮದ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿ ಖ್ಯಾತ ‘ಮೈಸೂರು ಎಕ್ಸ್ಪ್ರೆಸ್’ (Mysore Xpress) ಬ್ಯಾಂಡ್ ತಂಡದಿಂದ ಭರ್ಜರಿ ಸಂಗೀತ ಕಚೇರಿ ನಡೆಯಿತು. ಕಾಲೇಜು ಆವರಣವು ಸಂಗೀತ ಪ್ರೇಮಿಗಳಿಂದ ತುಂಬಿ ತುಳುಕುತ್ತಿತ್ತು. ಮೈಸೂರು ಎಕ್ಸ್ಪ್ರೆಸ್ ತಂಡದ ವಿಶಿಷ್ಟ ಶೈಲಿಯ ಗಾಯನ ಮತ್ತು ಪ್ರದರ್ಶನಕ್ಕೆ ಯುವಜನತೆ ಮನಸೋತರು. ತಾಂತ್ರಿಕ ಮತ್ತು ಕ್ರೀಡಾ ಸ್ಪರ್ಧೆಗಳ […]

