ಶಂಕರನಾರಾಯಣ; ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್ ಗೆ ಉಡುಪಿ ಜಿಲ್ಲೆಯ ಐದು ತಾಲೂಕುಗಳಲ್ಲಿ 196 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 53 ವಿದ್ಯಾರ್ಥಿಗಳು ಕುಂದಾಪುರ ವಲಯದಿಂದ ಆಯ್ಕೆಯಾಗಿರುತ್ತಾರೆ. ಈ ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್ ಗೆ ಮದರ್ ತೆರೇಸಾ ಶಾಲೆಯ ಹೈಸ್ಕೂಲ್ ವಿಭಾಗದ 9ನೇ ತರಗತಿಯ ಮೋಕ್ಷಿತ್ .ವಿ.ಶೆಟ್ಟಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ಕಿಶನ್ ಶೆಟ್ಟಿ ಆಯ್ಕೆ ಆಗಿರುತ್ತಾರೆ. ವಿದ್ಯಾರ್ಥಿಗಳಿಗೆ ಮದರ್ ತೆರೇಸಾ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಕುಮಾರಿ ಮೆಲಿಶಾ ಹಾಗೂ ಕುಮಾರಿ ಗ್ರೇಸಿಯವರು […]
International Women’s Day Celebration at Bajjodi ಮಾರ್ಚ್ 15 ರಂದು ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ನಲ್ಲಿ ಮಹಿಳಾ ದಿನಾಚರಣೆಯನ್ನು ಬಹಳ ಸಂತೋಷ ಮತ್ತು ಭಕ್ತಿಯಿಂದ ನಡೆಸಲಾಯಿತು. ಕಾರ್ಯಕ್ರಮವು ನಮ್ಮ ಪ್ಯಾರಿಷ್ ಪಾದ್ರಿ ಆಚರಿಸಿದ ಥ್ಯಾಂಕ್ಸ್ಗಿವಿಂಗ್ ಮಾಸ್ನೊಂದಿಗೆ ಪ್ರಾರಂಭವಾಯಿತು. ಅವರು ತಮ್ಮ ಅರ್ಥಪೂರ್ಣ ಧರ್ಮೋಪದೇಶದಲ್ಲಿ, ಕುಟುಂಬ, ಚರ್ಚ್ ಮತ್ತು ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಪ್ರತಿಬಿಂಬಿಸಿದರು. ಯೂಕರಿಸ್ಟಿಕ್ ಆಚರಣೆಯ ನಂತರ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವು ಚರ್ಚ್ ಸಭಾಂಗಣದಲ್ಲಿ ಪ್ರಾರಂಭವಾಯಿತು. ಕಾರ್ಯಕ್ರಮವು ಶ್ರೀಮತಿ ಅಲ್ವಿಟಾ ಪಿಂಟೊ ಮತ್ತು ಶ್ರೀಮತಿ […]
St. Aloysius; National level management festival INSIGNIA 2026 organized ಮಂಗಳೂರು, ಮಾರ್ಚ್ 16: AIMIT ಕೇಂದ್ರದ ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿಯಲ್ಲಿರುವ ಸ್ಕೂಲ್ ಆಫ್ ಬ್ಯುಸಿನೆಸ್ ಅಂಡ್ ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗವು ಮಾರ್ಚ್ 16 ರಂದು ಬೀರಿಯ AIMIT ಕೇಂದ್ರದ ಆರ್ಥರ್ ಶೆನೋಯ್ ಆಡಿಟೋರಿಯಂನಲ್ಲಿ ತನ್ನ ರಾಷ್ಟ್ರೀಯ ಮಟ್ಟದ ನಿರ್ವಹಣಾ ಉತ್ಸವ INSIGNIA 2026 ಅನ್ನು ಆಯೋಜಿಸಿತು. ನಿರ್ವಹಣೆಯ ಭವಿಷ್ಯವು ಕೇವಲ ಲಾಭವನ್ನು ಹೆಚ್ಚಿಸುವವರಿಗೆ ಮಾತ್ರ ಸೇರಿರುವುದಿಲ್ಲ. ಮಹತ್ವಾಕಾಂಕ್ಷೆಯನ್ನು ಜವಾಬ್ದಾರಿಯೊಂದಿಗೆ, ನಾವೀನ್ಯತೆಯೊಂದಿಗೆ […]
ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಎಂಟರ್ಪ್ರೆನರ್ಶಿಪ್ ಡೆವಲಪ್ಮೆಂಟ್ ಸೆಲ್ (EDC) ಮತ್ತು ಇನ್ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ (IIC) ವತಿಯಿಂದ 13 ಮಾರ್ಚ್ 2026 ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ‘ಸ್ಟಾರ್ಟ್ಅಪ್ ಮೇಳ 5.0: ದಿ ನೆಕ್ಸಸ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೈಚಾರಿಕತೆ, ಸಮಸ್ಯೆ ಪರಿಹಾರ ಮತ್ತು ನವೋದ್ಯಮಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಿದ್ದ ಈ ಕಾರ್ಯಕ್ರಮವು ಪ್ರದರ್ಶನ ಮಳಿಗೆಗಳು, ಡೆಮೊ ಬೂತ್ಗಳು, ಸ್ಪರ್ಧೆಗಳು ಮತ್ತು ಪ್ಯಾನೆಲ್ ಚರ್ಚೆಗಳ ರೋಚಕ ಸಮ್ಮಿಲನವಾಗಿತ್ತು. ಈ ವೇದಿಕೆಯು ಭಾಗವಹಿಸುವವರಿಗೆ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು ಮತ್ತು […]
ಬೆಳ್ತಂಗಡಿ: ಪರೀಕ್ಷೆಗಳಾದ KCET, NEET ಹಾಗೂ JEE (Mains) ಪರೀಕ್ಷೆಗಳಿಗಾಗಿ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವತಿಯಿಂದ ಇದೇ ಮಾರ್ಚ್ 18, 2026 ರಿಂದ ವಿಶೇಷ ಕ್ರ್ಯಾಶ್ ಕೋರ್ಸ್ ಆರಂಭಿಸಲಾಗುತ್ತಿದೆ. ಈ ಕ್ರ್ಯಾಶ್ ಕೋರ್ಸ್ನಲ್ಲಿ ಪ್ರತಿಯೊಂದು ಅಧ್ಯಾಯವನ್ನು ತಜ್ಞ ಉಪನ್ಯಾಸಕರು ಬೋಧಿಸುವುದರ ಜೊತೆಗೆ ಅಧ್ಯಯನಕ್ಕೆ ಅಗತ್ಯವಾದ ರೆಫರೆನ್ಸ್ ಮಾಡ್ಯೂಲ್ಗಳು ಹಾಗೂ ತರಗತಿ ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪ್ರತಿದಿನ ಅಭ್ಯಾಸ ಪತ್ರಿಕೆಗಳೊಂದಿಗೆ ಅಧ್ಯಾಯವಾರು ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಮೊದಲ 20 ದಿನಗಳಲ್ಲಿ ಮೂರು ದಿನಕ್ಕೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ, […]
ಉಡುಪಿ, ಮಾ.೧೬ : ಕಟಪಾಡಿ ಬಳಿ ಮಂಗಳೂರು ಉಡುಪಿ ಮಾರ್ಗದಲ್ಲಿ ಇಂದು ಮಾಚ್ ೧೬ ರಂದು ಹಿಂದುಸ್ಥಾನ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮಧ್ಯ ರಸ್ತೆಯಲ್ಲಿ ಬಿದ್ದಿದ್ದು, ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಇಂದು ರಾತ್ರಿ 8 ಗಂಟೆಯವರೆಗೆ ಈ ಕೆಳಕಂಡ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅದೇಶಿಸಿರುತ್ತಾರೆ. ಮಂಗಳೂರಿನಿಂದ […]
ಕುಂದಾಪುರ, ಮಾ.16 ; ಬಿಕ್ಕಟ್ಟುಗಳನ್ನು ಸಕರಾತ್ಮಕ ಸವಾಲುಗಳನ್ನಾಗಿ ಸ್ವೀಕರಿಸಿದ ಸಮಯದಲ್ಲಿ ಪ್ರತಿಭೆಗಳು ಹೊರಹೊಮ್ಮುತ್ತದೆ. ಇಂದಿನ ಕಾಲದ ಹೊಸತನದ ಸವಾಲುಗಳನ್ನು ಯುವಜನತೆ ಅಧ್ಯಯನಶೀಲತೆ ಮತ್ತು ವ್ಯಕ್ತಿತ್ವ ವಿಕಸನದಿಂದ ಗಮನವನ್ನು ನೀಡಬೇಕು ಎಂದು ಉದ್ಯಮಿ ವಿವಿಯನ್ ಕ್ರಾಸ್ಟೊ ತಿಳಿಸಿದರು. ಮಾರ್ಚ್ ೧೫ ರಂದು ಸೇಂಟ್ ಮೇರಿಸ್ ಸಭಾಂಗಣದಲ್ಲಿ ಕಥೋಲಿಕ್ ಸಭಾ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಟಾನ (ರಿ) ಕುಂದಾಪುರ ಇವರು ಜಂಟಿಯಾಗಿ ಆಯೋಜಿಸಿದ್ದ ,ಕುಂದಾಪುರ ವಲಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ […]
ಕೋಟ: ಕ್ರೈಸ್ತರ ಪವಿತ್ರ ಹಾಗೂ ಪ್ರಾಯಶ್ಚಿತ್ತದ ಕಾಲದ ಪ್ರಯುಕ್ತವಾಗಿ ಎಕದಿನದ ಧ್ಯಾನ ಕೂಟವನ್ನು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಮಾರ್ಚ್ 15 ರಂದು ಆಯೊಜಿಸಲಾಗಿತ್ತು. ಬಸ್ರೂರು ಫಿಲಿಪ್ ನೇರಿ ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಡೆನ್ಸಿ ಮಾರ್ಟಿಸ್ ಅವರು ಪ್ರಧಾನ ಪ್ರವಚಕರಾಗಿ ಧ್ಯಾನ ಕೂಟವನ್ನು ನಡೆಸಿದರು ಕೊಟ್ಟರು. ಶಿಲುಬೆಯ ಹಾದಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಧ್ಯಾನ ಕೂಟ ಪವಿತ್ರ ಬಲಿಪೂಜೆಯೊಂದಿಗೆ ಅಂತ್ಯ ಗೊಂಡಿತು. ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ಹಾಜರಾಗಿ ಆತ್ಮಿಕ ಪ್ರಯೋಜನವನ್ನು ಪಡಕೊಂಡರು ಹಾಗೂ ಮುಂಬರುವ “ಶುಭ […]
ಮಂಗಳೂರಿನ ವಿಶ್ವವಿದ್ಯಾನಿಲಯದ ಜೊತೆಗೂಡಿ ಇಸಿಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಸ್ಟಡೀಸ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ 2026 – 27 ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವು ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಹೆಚ್ ಬಾಲಕೃಷ್ಣ ಶೆಟ್ಟಿ ಟ್ರಸ್ಟ್ ಇಸಿಆರ್ ಗ್ರೂಪ್ ಇನ್ಸ್ಟಿಟ್ಯೂಟ್ ಇವರು ವಹಿಸಿದ್ದರು. ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತುಳಸಿ ವಿದ್ಯಾಮಂದಿರದ ಸಂಚಾಲಕರಾದ ಶ್ರೀಯುತ ಕೃಷ್ಣರಾಯ ಶಾನುಭಾಗ್,ಶಾಲೆಯ ಮುಖ್ಯ ಶಿಕ್ಷಕಿ […]

