ಶ್ರೀನಿವಾಸಪುರ : ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಬಾಡಿಗೆದಾರರಿಗೆ ಮುನ್ಸೂಚನೆಯನ್ನು ನೀಡದೇ ಸದರಿ ಛಾವಣಿಯನ್ನು ಪುರಸಭೆ ಸಿಬ್ಬಂದಿಯಿಮದ ತೆರವುಗೊಳಸಲಾಗುವುದು. ಠೇವಣಿದಾರರು ನಿಗಧಿತ ದಿನಾಂಕದಂದು ಬಾಡಿಗೆಗಳನ್ನು ಕಟ್ಟುವಂತೆ ಸೂಚಿಸಿ, ಪುರಸಭೆಯು ಸೂಚಿಸಿರುವ ಷರತ್ತುಗಳನ್ನು ಪಾಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜು ಕರೆನೀಡಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ವಿವಿಧ ಬಾಬ್ತುಗಳ ಬಹಿರಂಗ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಈ ಸಾಲಿನಲ್ಲಿ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿಖಾನೆ, ಬಸ್ಟಾಂಡ್ ಶುಲ್ಕ, ಮುಸಾಫೀರ್‌ಖಾನ ವಾಣಿಜ್ಯ ಸಂಕೀರ್ಣ ನೆಲಮಹಡಿಯ ವಾಹನ ಶುಲ್ಕ […]

Read More

ಶ್ರೀನಿವಾಸಪುರ : ತಾಲೂಕಿನಲ್ಲಿ ಕೆರೆಗಳಿಗೆ ಕೆಸಿ ವ್ಯಾಲಿ ನೀರನ್ನು ಹರಿಸುವ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಎಲ್ಲಾ ಕೆರೆಗಳಿಗೆ ನೀರು ಹರಿಸುವಂತೆ ವಿವಿಧ ಮುಖಂಡರು ಆಗ್ರಹಿಸಿದ್ದಾರೆ. ಮಂಗಳವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ರಮೇಶ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ನೀರಾಗಿ ನಮ್ಮ ಹಕ್ಕು ಕಾರ್ಯಕ್ರಮದಡಿ ಶ್ರೀನಿವಾಸಪುರದಿಂದ ಮುದುವಾಡಿ ಕೆರೆ ಹಾಗೂ ನರಸಾಪುರದ ಲಕ್ಷ್ಮಿಸಾಗರದವರೆಗೆ ಕಾರುಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮಾಜಿ ಶಾಸಕ ಕೆ.ಆರ್. ರಮೇಶ್‌ಕುಮಾರ್ ಅವರ ಕಾಳಜಿಯಿಂದ […]

Read More

ಶ್ರೀನಿವಾಸಪುರ : ಪವಿತ್ರ ರಮಝಾನ್ ಉಪವಾಸದ ಸಮಾಪ್ತಿಯನ್ನು ಸೂಚಿಸುವ ಈದ್-ಉಲ್-ಫಿತ್ರ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಸಮುದಾಯವು ಶನಿವಾರ ಭಕ್ತಿಪೂರ್ವಕವಾಗಿ ಹಾಗೂ ಸಂಭ್ರಮದಿಂದ ಆಚರಿಸಿತು. ಸಹೋದರತ್ವ, ಶಾಂತಿ ಮತ್ತು ದಾನಧರ್ಮದ ಸಂದೇಶ ಸಾರುವ ಈ ಹಬ್ಬವು ಪಟ್ಟಣದಾದ್ಯಂತ ವಿಶೇಷ ಧಾರ್ಮಿಕ ವಾತಾವರಣವನ್ನು ನಿರ್ಮಿಸಿತು.ಪಟ್ಟಣದ ಚಾರ್ಮಿನಾರ್ ಈದ್ಗಾ ಮೈದಾನ, ಜಾಮಿಯಾ ಮಸೀದಿ ಈದ್ಗಾ ಮೈದಾನ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಈದ್ಗಾಗಳಲ್ಲಿ ಸಾವಿರಾರು ಭಕ್ತರು ಸೇರಿ ಸಮೂಹವಾಗಿ ಈದ್ ನಮಾಜ್ ಸಲ್ಲಿಸಿದರು. ಬೆಳಗಿನ ಜಾವವೇ ಹೊಸ ಬಟ್ಟೆ ಧರಿಸಿ ಕುಟುಂಬ […]

Read More

ಶ್ರೀನಿವಾಸಪುರ : ಯಾವುದೇ ರೀತಿಯಾಗಿ ಗ್ಯಾಸ್ ಸಿಲೆಂಡರ್ ಪೂರೈಕೆಯಲ್ಲಿ ವ್ಯತ್ಯವಿಲ್ಲ ಕೇಂದ್ರ ಹಾಗು ರಾಜ್ಯ ಸರ‍್ಕಾರ ವಾಣಿಜ್ಯ ಸಿಲೆಂಡರ್‌ಗಳನ್ನು ಹೊರತುಪಡಿಸಿ, ಗೃಹಬಳಕೆಯ ಸಿಲೆಂಡರ್‌ಗಳು ಸರ್ಕಾರ ಆದೇಶದಂತೆ ಪೂರೈಕೆಯಾಗಿಲಿವೆ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು .ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ತಾಲೂಕಿನ ಗ್ಯಾಸ್ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.ತಾಲ್ಲೂಕಿನ ಸರ‍್ವಜನಿಕರಿಗೆ ಹೇಳುವೊಂದೆ ಸರ‍್ವರ್ ಪ್ರಬ್ಲಮ್ ನಿಂದ ಬುಕಿಂಗ್‌ಗೆ ಪ್ರಾಬ್ಲಮ್ ಆಗಿದೆ ಅಷ್ಟೆ. ತಡವಾಗಿ ತಗೆದುಕೊಳ್ಳುತ್ತಿದೆ. ಹೆಚ್ಚಿನ ಸಿಲೆಂಡರ್‌ಗಳನ್ನು ಬುಕ್ ಮಾಡುವುದರಿಂದ ಈ ವ್ಯತ್ಯಗಳು ನಡೆಯುತ್ತಿದೆ . ನಾಲೈದು ದಿನಗಳಲ್ಲಿ […]

Read More

ಶ್ರೀನಿವಾಸಪುರ: ತಾಲ್ಲೂಕಿನ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿ ಚುನಾವಣೆಯಲ್ಲಿ ಶಬ್ಬೀರ್ ಅಹ್ಮದ್ ಪಾಷಾ ಸೇರಿ ಒಟ್ಟು 12 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಅದರಲ್ಲಿ 11 ಸ್ಥಾನಗಳು ಸಾಲಗಾರರ ಕ್ಷೇತ್ರಕ್ಕೆ ಹಾಗೂ 1 ಸ್ಥಾನ ಸಾಲಗಾರರಲ್ಲದ ಕ್ಷೇತ್ರಕ್ಕೆ ಮೀಸಲಾಗಿತ್ತು.ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಮಾರ್ಚ್ 11 ಕೊನೆಯ ದಿನವಾಗಿತ್ತು. ವಿವಿಧ ಕ್ಷೇತ್ರಗಳಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. […]

Read More

ಶ್ರೀನಿವಾಸಪುರ: ಉಚ್ಚ ನ್ಯಾಯಾಲಯವು 2023ರ ಸೆಪ್ಟೆಂಬರ್ 11ರಂದು ನೀಡಿರುವ ಆದೇಶದ ಪ್ರಕಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಜಾಗಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಆದರೂ ಅರಣ್ಯ ಇಲಾಖೆ ಸಿಬ್ಬಂದಿಯೇ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ರೈತ ಮುಖಂಡ ಆರ್. ತಿಮ್ಮಸಂದ್ರ ಆರ್. ಶಿವರಾಮಶರ್ಮ ಆರೋಪಿಸಿದರು. ಶುಕ್ರವಾರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 1999ರಲ್ಲಿ ಕೇತಗಾನಹಳ್ಳಿ ಗ್ರಾಮದ ಪ್ರತಿಯೊಬ್ಬ ರೈತರಿಗೆ 30 ಗುಂಟೆ ಪ್ರಮಾಣದಲ್ಲಿ ಸಾಗುವಳಿ ಚೀಟಿ ಮೂಲಕ ಜಮೀನು ಹಂಚಿಕೆ ಮಾಡಲಾಗಿದೆ. ಆ ಬಳಿಕ […]

Read More

ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ 14 ವರ್ಷದ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಗೌರವಪೂರ್ಣ ಸಮ್ಮಾನ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಭಾವಪೂರ್ಣ ಬೀಳ್ಕೊಡುಗೆ ಫೆಬ್ರವರಿ 17, 2026 ರಂದು ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು. ಎರಡು ವರ್ಷದ ಪಿಯುಸಿ ಪಯಣಕ್ಕೆ ತೆರೆಯೆಳೆಯುವ ಸಂದರ್ಭದಲ್ಲಿ ಕಾರ್ಯಕ್ರಮವು ಆತ್ಮೀಯತೆಯಿಂದ ಮತ್ತು ಮುಂಬರುವ ದಿನಗಳಿಗೆ ಹೊಸ ಭರವಸೆ ಮೂಡಿಸುವ ರೀತಿಯಲ್ಲಿ ಜರುಗಿತು.ಉಪನ್ಯಾಸಕ ವೃಂದದವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಕಳೆದ ಎರಡು ವರ್ಷದ ಸ್ಮರಣೀಯ ಕ್ಷಣಗಳನ್ನು ಒಳಗೊಂಡ […]

Read More

ಶ್ರೀನಿವಾಸಪುರ : ದೇಶದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಬಡಕುಂಟುಂಬಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಡೆಸುತ್ತಿದೆ ಇದರ ಬಗ್ಗೆ ಪ್ರತಿ ಹಳ್ಳಿಗಳಲ್ಲಿ, ಪ್ರತಿಭೂತಿನ ಸಾರ್ವಜನಿಕರಿಗೆ ಹಾಗು ಮತದಾರರನ್ನ ಎಚ್ಚರಿಕೆಗೊಳಿಸಬೇಕಿದೆ ಎಂದು ಜಿಲ್ಲಾ ಉಪಾಧ್ಯಕ್ಷ ವಾಸುದೇವರೆಡ್ಡಿ. ಹೇಳಿದರು.ಗ್ರಾಮದ ಬಸ್‌ನಿಲ್ದಾಣದಲ್ಲಿ ಭಾನುವಾರ ಯುವಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು.ಈ ಹಿಂದೆ 2014 ರಲ್ಲಿ ನರೇಂದ್ರಮೋದಿರವರಿಗೆ ಅಮೇರಿಕಗೆ ಹೋಗಲು ವೀಸಾ ಸಿಕ್ಕಿಲ್ಲ. ಅಂದು ನರೆಂದ್ರಮೋದಿರುವರು ಗೋದ್ರ ಹತ್ಯಕಾಂಡದಲ್ಲಿ ಪಾಲ್ಗುಂಡಿರುವುದನ್ನ ಎಂಬ ಕಾರಣಕ್ಕೆ ವೀಸಾವನ್ನು ನೀಡಿಲ್ಲ.. ಇಂದು ದೇಶದ ರೈತರು , […]

Read More

ಶ್ರೀನಿವಾಸಪುರ : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಶ್ರೀಮತಿ ಅನಿತಾ ಕೌಲ್ ಸ್ಮರಣಾರ್ಥವಾಗಿ ಬೆಂಗಳೂರು ನಗರದ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಐವರು ಶಿಕ್ಷಕರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ತಾಲ್ಲೂಕಿನ ಶಿವಪುರ ಶಾಲೆಯ ಸಹಶಿಕ್ಷಕ ಎನ್.ಎ. ಹನುಮಂತಪ್ಪ, ತಾಡಿಗೋಳ್ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ರಜನಿ ಜೆ.ಎಸ್., ಸೋಮಯಾಜನಹಳ್ಳಿ ಕೆಪಿಎಸ್ ಶಾಲೆಯ ಸಹಶಿಕ್ಷಕಿ ಅರುಣ ಕುಮಾರಿ ವಿ., ಆರಿಕುಂಟೆ ಪ್ರೌಢಶಾಲೆಯ ಸಹಶಿಕ್ಷಕಿ ರತ್ನಮ್ಮ […]

Read More
1 6 7 8 9 10 384