ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಉರ್ದು ಮತ್ತು ಇಂಗ್ಲಿಷ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ವತಿಯಿಂದ ಸುಮಾರು 200 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ಗಳು ಹಾಗೂ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಎಂ.ಪಿ ಫ್ರೂಟ್ಸ್ ಮಾವು ಮಂಡಿ ಮಾಲೀಕ ಅಬ್ದುಲ್ ಮಜೀದ್ ಉರ್ಫ್ ಅಫ್ಸರ್ ಪಾಷಾ ಅವರು ಮಾತನಾಡುತ್ತಾ, ಈ ಶಾಲೆಯನ್ನು ‘ಮೌಲಾನಾ ಆಜಾದ್ ಪಬ್ಲಿಕ್ ಶಾಲೆ’ಯಾಗಿ ಉನ್ನತೀಕರಿಸುವ ಕುರಿತು ಸಂಬಂಧಪಟ್ಟ […]
ಮೌಲಾನಾ ಆಜಾದ್ ಮಾದರಿ ಶಾಲೆಯಾಗಿ ಘೋಷಿಸಲು ಮನವಿ; ಶಿಕ್ಷಕರ ಕೊರತೆ, ಮೂಲಸೌಕರ್ಯ ದುರಸ್ಥಿ ಅಗತ್ಯ ಶ್ರೀನಿವಾಸಪುರದಲ್ಲಿ ಉರ್ದು ಶಾಲೆಯ ಉನ್ನತೀಕರಣಕ್ಕೆ ಪೋಷಕರ ಜೋರಾದ ಆಗ್ರಹ ಮೌಲಾನಾ ಆಜಾದ್ ಮಾದರಿ ಶಾಲೆಯಾಗಿ ಘೋಷಿಸಲು ಮನವಿ; ಶಿಕ್ಷಕರ ಕೊರತೆ, ಮೂಲಸೌಕರ್ಯ ದುರಸ್ಥಿ ಅಗತ್ಯ ಶ್ರೀನಿವಾಸಪುರ : ಪಟ್ಟಣದಲ್ಲಿನ ಡಾ. ಜಾಕಿರ್ ಹುಸೇನ್ ಮೊಹಲ್ಲಾ ಪ್ರದೇಶದಲ್ಲಿರುವ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹಿರಿದು ಪ್ರಾಥಮಿಕ ಶಾಲೆಯನ್ನು ಮೌಲಾನಾ ಆಜಾದ್ ಮಾದರಿ ಶಾಲೆಯಾಗಿ ಉನ್ನತೀಕರಿಸಲು ಸ್ಥಳೀಯ ಪೋಷಕರು, ಸಮುದಾಯದ ಮುಖಂಡರು ಹಾಗೂ […]
ಶ್ರೀನಿವಾಸಪುರ : ಇಲ್ಲಿ ಅನೇಕ ದಲಿತರು , ಕಡುಬಡ ರೈತರು ಇದ್ದು, ಭೂಮಿ ಸರ್ಕಾರಕ್ಕೆ ನೀಡಿದರೆ ನಿರ್ಗತಿಕರು ಆಗುವುದು ಖಚಿತವಾಗಿದೆ. ಈ ಹಿಂದೆ ನಡೆದ ಸಭೆಯಲ್ಲಿ ರೈತರು ನಾನು ಭೂಮಿಯನ್ನ ಕೊಡುವುದಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಈವತ್ತು ಸಹ ಅಷ್ಟೆ. ನಾವು ಯಾರು ಬ್ರೋಕರ್ಸ್ ಅಲ್ಲ. ಇಲ್ಲಿಗೆ ರಾಜಕಾರಣ ಮಾಡಲು ಬಂದಿಲ್ಲ. ನಾನು ಎರಡು ವರ್ಷ ಮೂರು ತಿಂಗಳಿನಿಂದ ಹೊರ ಬಂದಿಲ್ಲ. ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು .ತಾಲೂಕಿನ ಯದರೂರು ಗ್ರಾಮದಲ್ಲಿ ಶುಕ್ರವಾರ ಕೈಗಾರಿಕಾ ವಲಯ ಸ್ಥಾಪಿಸಲು […]
ಕೋಲಾರ.ಜು.16: ಜಿಲ್ಲೆಯಲ್ಲಿನ ಸಣ್ಣ, ಅತಿ ಸಣ್ಣ ಮತ್ತು ದಲಿತ ರೈತರು ಅನಧಿಕೃತವಾಗಿ ರೆವಿನ್ಯೂ ಇಲಾಖೆಯಿಂದ ಮಂಜೂರಾಗಿರುವ ಜಮೀನುಗಳ ಮೇಲೆ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿರುವ ಹಣವನ್ನು ಬಂಡವಾಳ ಹಾಕಿ ಅಭಿವೃದ್ಧಿ ಪಡಿಸುತ್ತಾರೆ. ಒಂದಲ್ಲ ಒಂದು ದಿನ ಆ ಜಮೀನು ಅವರದಲ್ಲ ಎಂದು ಗೊತ್ತಾದಾಗ ಅವರನ್ನು ಯಾರೂ ಉಳಿಸಲಿಕ್ಕಾಗುವುದಿಲ್ಲ. ಇದು ನಾವು ಅವರಿಗೆ ಮಾಡುವ ದೊಡ್ಡ ದ್ರೋಹವಾಗುತ್ತದೆ. ಇದನ್ನು ಮನಗಂಡು ಈ ಒಂದು ಹೆಮ್ಮರವಾಗಿ ಬೆಳೆದಿರುವ ಸಮಸ್ಯೆಗೆ ಸಮಗ್ರ ಪರಿಹಾರ ದೊರಕಿಸುವ ಜವಾಬ್ದಾರಿ ಶಾಸಕರುಗಳು, ಅಧಿಕಾರಿಗಳು ಸೇರಿದಂತೆ […]
ಶ್ರೀನಿವಾಸಪುರ : ಕಚೇರಿಯಲ್ಲಿ ಮಾಡುವ ಸಿಬ್ಬಂದಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾಗಿ ನೆಮ್ಮದಿ ಇಲ್ಲದೆ ಇರುತ್ತದೆ. ಆ ಸಮಯದಲ್ಲಿ ದೇವರ ಧ್ಯಾನ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗುಳ್ಳುವುದರಿಂದ ಒಂದಿಷ್ಟು ನೆಮ್ಮದಿ ಸಿಗುತ್ತದೆ ಎಂದು ಆಗಮಿಕ ಕುರುಮಾಕಲಪಲ್ಲಿ ಪ್ರಕಾಶ್ ತಿಳಿಸಿದರು.ಪಟ್ಟಣ ಬೆಸ್ಕಾಂ ಕಚೇರಿ ಆವರಣದಲ್ಲಿ ಇರುವ ಮಹಾ ಗಣಪತಿ ದೇವಾಲಯದಲ್ಲಿ ಮಂಗಳವಾರ 41 ನೇ ವಾರ್ಷಿಕೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹನ್ಯಾಸ ಪೂರ್ವಕವಾಗಿ ಏಕವಾರ ರುದ್ರಾಭಿಷೇಕ, […]
ಶ್ರೀನಿವಾಸಪುರ, ಜುಲೈ 15: ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರದಂದು ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ, ಡಿಸಿ ಸಿ ಬ್ಯಾಂಕಿನ ನಿರ್ದೇಶಕಿಯಾಗಿ ಆಯ್ಕೆಯಾದ ನಾಗರತ್ನಮ್ಮ ಹಾಗೂ ಕೋಮುಲ್ ನಿರ್ದೇಶಕರಾಗಿ ಆಯ್ಕೆಯಾದ ಕೆ.ಕೆ. ಮಂಜುನಾಥ್ ರೆಡ್ಡಿ ಮತ್ತು ಎನ್. ಹನುಮೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬೈರಾರೆಡ್ಡಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶಿವಾರೆಡ್ಡಿ, ನಿರ್ದೇಶಕರಾದ ಶಬ್ಬೀರ್ ಅಹ್ಮದ್, ದ್ವಾರಸಂದ್ರದ ಮುನಿವೆಂಕಟರೆಡ್ಡಿ, […]
ಶ್ರೀನಿವಾಸಪುರ, ಜುಲೈ 12: ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಉರ್ದು ಹಾಗೂ ಇಂಗ್ಲಿಷ್ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್ಡಿಎಂಸಿ) ಹಾಗೂ ಪೋಷಕರ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ, ನೈತಿಕ ಮೌಲ್ಯಗಳು, ಹಾಗೂ ಶಾಲೆಯ ಮೂಲಭೂತ ಸೌಲಭ್ಯಗಳ ಕುರಿತಾಗಿ ವಿಶ್ಲೇಷಣಾತ್ಮಕ ಚರ್ಚೆ ನಡೆಯಿತು. ಪೋಷಕರು ನೇರವಾಗಿ ಶಿಕ್ಷಕರೊಂದಿಗೆ ಮಕ್ಕಳ ಹಾಜರಾತಿ, ಪಠ್ಯದಲ್ಲಿ ಆಸಕ್ತಿ, ಹಾಗೂ ದಿನನಿತ್ಯದ ಕಾರ್ಯವೈಖರಿಯ ಬಗ್ಗೆ ಮಾತುಕತೆ ನಡೆಸಿದರು. ಪೋಷಕರು ತಮ್ಮ […]
ಶ್ರೀನಿವಾಸಪುರ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ವರ್ಗಾವಣೆ ಯಾಗಿರುವ ವೈದ್ಯರಾದ ರಂಗರಾವ್, ನಿರಂಜನ್ ರವರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.ಆಸ್ಪತ್ರೆ ಆಡಳಿತ ಅಧಿಕಾರಿ ಜಿ.ಎಸ್.ಶ್ರೀನಿವಾಸ್, ವೈದ್ಯರಾದ ಉಮಾಶಂಕರ್, ದಿವಾಕರ್, ಸಂಗೀತ, ವರಲಕ್ಷ್ಮಿ, ಫಾರ್ಮಾಸಿಗಳಾದ ಕಲ್ಲೇಶ್ ಕುಮಾರ್, ಮಹ್ಮದ್ಆಲಿ, ಮಂಜುನಾಥ್, ಶಿವಕುಮಾರ್, ಸಿಬ್ಬಂದಿಗಳಾದ ಕವಿತಾ, ಉಮಾ ಇದ್ದರು.
ಶ್ರೀನಿವಾಸಪುರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ಸರಬರಾಜು ಮಾಡುತ್ತಿರುವ ಕೆಸಿ ವ್ಯಾಲಿ ಮತ್ತು ಎಚ್ಚೆನ್ ವ್ಯಾಲಿ ನೀರು ಕಲುಷಿತವಾಗಿದೆ.ಕೊಳಚೆ ನೀರನ್ನು ಸಂಸ್ಕರಿಸಿ ಕುಡಿಯುವ ಶುದ್ಧ ನೀರಾಗಿ ಮಾಡಿಸುವ ತಂತ್ರಜ್ಞಾನ ಇಂಡಿಯಾ ಅಲ್ಲಾ ವಿಶ್ವದ ಯಾವ ದೇಶದಲ್ಲೂ ಇಲ್ಲ.ಆದರೂ ನಮ್ಮ ರಾಜ್ಯ ಸರ್ಕಾರ-ಅದನ್ನು ಶುದ್ಧ ನೀರು ಎಂದು ಕೆರೆಗಳಿಗೆ ಸರಬರಾಜು ಮಾಡುವ ಮೂಲಕ ರೈತರಿಗೆ ಮಂಕು ಬೂದಿ ಎರಚುತ್ತಿದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.ತಾಲ್ಲೂಕಿನ ಪುಂಗನೂರು ಕ್ರಾಸ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಬೃಹತ್ […]

