ಉಡುಪಿ:- ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ಉಡುಪಿ ಇದರ ಮಹಾಸಭೆಯು 27.05.2025 ರಂದು ಸಹಕಾರಿಯ ನೋಂದಾಯಿತ ಕಚೇರಿಯಲ್ಲಿ ಅಧ್ಯಕ್ಷರಾದ ಶ್ರೀಮತಿ. ಜೆಸಿಂತಾ ಡಿ ಸೋಜ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ ದೇವರ ಸ್ತುತಿಯೊಂದಿಗೆ ಪ್ರಾರ್ಥನೆಯನ್ನು ಶಾಖಾ ಸಿಬ್ಬಂದಿಗಳು ನೆರವೇರಿಸಿದರು. ಕಾರ್ಯಕ್ರಮಕ್ಕೆ ಶ್ರೀ ಗುರುಚರಣ ಇವರು ಸ್ವಾಗತಿಸಿದರು, ಲೆಕ್ಕ ಪರಿಶೋಧನಾ ವರದಿ ವಾಚನೆ ಮತ್ತು ನಿರೂಪಣೆಯನ್ನು ಮುಖ್ಯಕಾರ್ಯನಿರ್ವಾಹಕರಾದ ಶ್ರೀ ಜೀವನ್ ಡಿ ಸೋಜ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶೈಲೇಶ್ […]

Read More

St. Joseph’s University Hosts Grand Open Day 2025: A Showcase of Innovation, Inclusivity, and Inspiration ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ಜುಲೈ 28, 2025ರಂದು ವಾರ್ಷಿಕ ಓಪನ್ ಡೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು. 1,300ಕ್ಕೂ ಹೆಚ್ಚು ಭೇಟಿಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ರೆ. ಫಾದರ್ ಡಾ. ವಿಕ್ಟರ್ ಲೋಬೊ ಎಸ್.ಜೆ. (ಕುಲಪತಿ), ಡಾ. ಚಂದ್ರಭಾಸ್ ನಾರಾಯಣ (ರಾಜೀವ್ ಗಾಂಧಿ ಜೈವಿಕತಂತ್ರಜ್ಞಾನ ಕೇಂದ್ರದ ನಿರ್ದೇಶಕ) ಮತ್ತು ಡಾ. ವಿ. ಕ್ರಿಸ್ಟೋ […]

Read More

ಕುಂದಾಪುರ; ದಿನಾಂಕ 05.08.2025 ರಂದು ನಗರದ ಸೈ0ಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸೈoಟ್ ಮೇರಿಸ್ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ಹಾಗೂ ಚರ್ಚಿನ ಧರ್ಮಗುರುಗಳಾಗಿರುವ ಅತೀ ವಂದನೀಯ ಫಾದರ್ ಪಾವ್ಲ್ ರೆಗೋರವರು ಅಧ್ಯಕ್ಷತೆಯನ್ನು ವಹಿಸಿ, ಉತ್ತಮ ವ್ಯಕ್ತಿತ್ವ ನಿಮ್ಮದಾಗಿರಬೇಕು. ಇಂದು ಅನೇಕ ರೀತಿಯಲ್ಲಿ ಅವಕಾಶಗಳಿವೆ. ಎಲ್ಲರೂ ಅದನ್ನು ಬಳಸಿಕೊಳ್ಳಬೇಕು. ಕಲಿತ ವಿದ್ಯಾಸಂಸ್ಥೆಗೆ, ಪಾಲಕರಿಗೆ ಕೀರ್ತಿ ತರಬೇಕು,ನಿಮ್ಮ ಕನಸು ಈಡೇರಲಿ ಎಂದು ಅನೇಕ ಕಿವಿ ಮಾತುಗಳನ್ನು ವಿದ್ಯಾರ್ಥಿಗಳಿಗೆ ಹೇಳಿ, ಈ […]

Read More

ಕುಂದಾಪುರ: ಈ ವರ್ಷದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ತುಂಬಾಡಿ ರಾಮಯ್ಯ ಅವರ “ಜಾಲ್ಗಿರಿ” ಕಾದಂಬರಿಗೆ ದೊರೆತಿದೆ. ತಮ್ಮ ಆತ್ಮಕಥನ ‘ಮಣೆಗಾರ’ದ ಮೂಲಕ ಕನ್ನಡ ಓದುಗರಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿದ ತುಂಬಾಡಿಯವರ ಅನುಭವ ಪ್ರಪಂಚ ಬಹು ದೊಡ್ಡದು. ‘ಮಣೆಗಾರ’ ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು, ನಾಟಕವಾಗಿಯೂ ಜನಪ್ರಿಯವಾಗಿದೆ. ‘ಮುತ್ತಿನ ಜೋಳ ‘ ಮಣೆಗಾರ ಕೃತಿಯ ಮುಂದುವರಿದ ಭಾಗ. ‘ಸ್ಪರ್ಶ’ ಮತ್ತು ‘ದಲಿತಕಾರಣ’ ಅವರ ಲೇಖನಗಳ ಸಂಗ್ರಹವಾದರೆ, ‘ಓದೋ ರಂಗ ‘ ಮೊದಲ ಕಾದಂಬರಿ.ಪ್ರಶಸ್ತಿಯು ಹದಿನೈದು ಸಾವಿರ […]

Read More

ಶಿರೂರು : ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ :ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಸ. ಹಿ. ಪ್ರಾಥಮಿಕ ಶಾಲೆ ಕೇಸರ್ ಕೊಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ಹೋಬಳಿ ಮಟ್ಟದ 14 ರ ವಯೋಮಾನದ ಬಾಲಕಿಯರ ತ್ರೋಬಾಲ್ ಮತ್ತು ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮಸ್ಥಾನಿಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ತರಭೇತಿಯನ್ನು […]

Read More

ಪಡುಕೋಣೆ; ದಿನಾಂಕ 3 /8/ 25 ಆದಿತ್ಯವಾರ ಬೆಳಿಗ್ಗೆ ಪಡುಕೋಣೆ ಚರ್ಚ್ ವಠಾರದಲ್ಲಿ ಪಡುಕೋಣೆ ಕಥೋಲಿಕ್ ಸಭಾದಿಂದ ಆಯೋಜಿಸಲ್ಪಟ್ಟ ಉಚಿತ ರಕ್ತ ಪರಿಕ್ಷೆ ಮತ್ತು ಥೈರಾಯ್ಡ್ ಪರೀಕ್ಷಾ ಶಿಬಿರ ನಡೆಯಿತು. ಈ ಶಿಬಿರಕ್ಕೆ ಬಯೋಲಿನ್ ಸಂಸ್ಥೆ ಕುಂದಾಪುರ ಮತ್ತು ರೋಟರಿ ಕುಂದಾಪುರ, ಮತ್ತು ಚರ್ಚಿನ ಆರೋಗ್ಯ ಆಯೋಗ,ಸ್ತ್ರೀ ಸಂಘಟನೆ, ವಿನ್ಸೆಂಟ್ ಪಾಲ್ ಸಭೆ ಇವರು ಸಹಕಾರ ನೀಡಿದರು. ಇದರ ಉದ್ಘಾಟನೆಯನ್ನು ಪಡುಕೋಣೆ ಚರ್ಚಿನ ಧರ್ಮ ಗುರುಗಳಾದ ಫಾದರ್ ಫ್ರಾನ್ಸಿಸ್ ಕರ್ನೆಲಿಯೋ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ […]

Read More

ಕೋಟೇಶ್ವರ ; “ಕಲಾವಿಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಮತ್ತು ಉದ್ಯೋಗದಲ್ಲಿ ಹಲವಾರು ಅವಕಾಶಗಳಿದೆ. ಅದರಲ್ಲಿಯೂ ರಾಜ್ಯಶಾಸ್ತ್ರದ ಅಧ್ಯಯನವು ಉತ್ತಮ ನಾಗರೀಕನನ್ನು ರೂಪಿಸುವುದರ ಜೊತೆಗೆ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ. ಈ ದಿಶೆಯಲ್ಲಿ ಉಪನ್ಯಾಸಕರು ರಾಜ್ಯಶಾಸ್ತ್ರ ಬೋಧನೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ತಮ್ಮನ್ನು ತಾವು ತಯಾರಿ ಮಾಡಿಕೊಳ್ಳಬೇಕು”. ಎಂದು ಡಾ. ಶುಭಕರಾಚಾರಿ, ಪ್ರಾಂಶುಪಾಲರು ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಅವರು ಹೇಳಿದರು . ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ನಡೆದ ಉಡುಪಿ ಜಿಲ್ಲಾ […]

Read More

ಸತತ 170 ಗಂಟೆಗಳು ಅಂದರೆ ನಿರಂತರ ಏಳು ದಿನ ಭರತನಾಟ್ಯ ಪ್ರದರ್ಶನದ ಮೂಲಕ ವಿಶ್ವ ದಾಖಲೆಯೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿರುವ ಕರಾವಳಿಯ ಹೆಮ್ಮೆಯ ಸುಪುತ್ರಿ ಕು. ರೆಮೋನಾ ಪಿರೇರಾ ರವರಿಗೆ ಇಂದು ಉದ್ಯಾವರದಲ್ಲಿ ಅದ್ದೂರಿಯ ಅಭಿನಂದನಾ ಸಮಾರಂಭ.. ಇಂದು ಅಗಸ್ಟ್ 5, ಸಂಜೆ ಗಂಟೆ 5.15ಕ್ಕೆ ಸಭಾಭವನದ ಸಮೀಪವಿರುವ ಪ್ರಮುಖ ರಸ್ತೆಯ ಬಳಿ ಸ್ವಾಗತದೊಂದಿಗೆ, ಸಭಾಭವನದವರೆಗೆ ಮೆರವಣಿಗೆಯ ಮೂಲಕ ಸಾಧಕಿಯನ್ನು ಕರೆತರಲಾಗುವುದು.. ವಿಶೇಷ ಸೂಚನೆ : ಸಂಘ ಸಂಸ್ಥೆಗಳಿಗೆ ಮತ್ತು ವೈಯಕ್ತಿಕವಾಗಿ […]

Read More

ಉಡುಪಿ : ಡಿಜಿಟಲ್ ಪರಿವರ್ತನೆಯತ್ತ ಇನ್ನೊಂದು ಹೆಜ್ಜೆ ಇಟ್ಟಿರುವ ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ನೂತನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಯುನಿಗ್ಸ್ (UNIGS) ಅನ್ನು ಆಗಸ್ಟ್ 1, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಿತು. ಇದರ ಮೂಲಕ ಸದಸ್ಯರಿಗೆ ಸುಲಭ, ಸುರಕ್ಷಿತ ಹಾಗೂ ಬಳಕೆದಾರ ಸ್ನೇಹಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಮೈಲುಗಲ್ಲು ಇಟ್ಟಂತಾಗಿದೆ. ಈ ಹೊಸ ಯುನಿಗ್ಸ್ ಆಪ್‌ನ ಮೂಲಕ ಸದಸ್ಯರು ತಮ್ಮ ಖಾತಾ ವಿವರಗಳನ್ನು ನೇರವಾಗಿ ತಮ್ಮ ಮೊಬೈಲ್‌ನಲ್ಲಿ […]

Read More