

ಶ್ರೀನಿವಾಸಪುರ : ಪೊಲೀಸ್ ಇಲಾಖೆ ಪಕ್ಷತೀತವಾಗಿ ಕಾರ್ಯನಿರ್ವಹಿಸಬೇಕು. ಯಾರದೂ ಒತ್ತಡಕ್ಕೆ ಮಣಿದು ಇಲ್ಲಸಲ್ಲದ ಕೇಸು ದಾಖಲಿಸುವುದು ಸರಿಯಲ್ಲ ಎಂದು ಕೆಪಿಸಿಸಿ ಸದಸ್ಯ ಸಂಜಯ್ರೆಡ್ಡಿ ಹೇಳಿದರು.
ತಾಲೂಕಿನ ಗೌನಿಪಲ್ಲಿ ಪೊಲೀಸ್ಠಾಣೆಯ ಮುಂಭಾಗದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸುತ್ತಿರುವ ಪೊಲೀಸ್ರ ವಿರುದ್ಧ ಧರಣಿ ನಡೆಸಿ ಮಾತನಾಡಿದರು.
ಇತ್ತೀಚಿಗೆ ಗೌನಿಪಲ್ಲಿ ಪೊಲೀಸ್ ಠಾಣಾ ಮರಸನಪಲ್ಲಿ ಗ್ರಾಮದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಮೇಲೆ ಹೊಡೆದ ಜೆಡಿಎಸ್ ಪಕ್ಷದವರು ಪೊಲೀಸರ ಮೇಲೆ ಒತ್ತಡ ತಂದು ನಮ್ಮ ಕಾರ್ಯಕರ್ತನ ಮೇಲೆ ಕೇಸು ಹಾಕಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮುಖಂಡ ಜಮಕಾಯಿಲ ವೆಂಕಟೇಶ್ ಮಾತನಾಡಿ ಕಾನೂನು ಚೌಕಟ್ಟಿನಲ್ಲಿ ಯಾವುದೇ ಇಲಾಖೆ ಆಗಲಿ ಸಮಾನವಾಗಿ ಇರಬೇಕು. ವಿನಃ ಕಾರಣ ಮರಸನಪಲ್ಲಿ ಗ್ರಾಮದ ನಮ್ಮ ಕಾಂಗ್ರೆಸ್ ಕಾರ್ಯಕರ್ತ ಮೇಲೆ ಜೆಡಿಎಸ್ ಪಕ್ಷದವರು ದೌರ್ಜನ್ಯವೆಸಗಿ, ಒಂದಿಷ್ಟು ಗಾಯಗಳಾಗಿ ನಮ್ಮ ಪಕ್ಷದವರು ಆಸ್ಪತ್ರೆಗೆ ದಾಖಲಾದರೂ ಸಹ ಸದರಿ ಠಾಣೆಯ ಪೊಲೀಸರು ನಿಧಾನಗತಿಯಲ್ಲಿ ಗಾಯಳುಗಳ ಬಳಿ ಗಲಾಟೆಯ ವರದಿಯನ್ನು ಪಡೆಯುತ್ತಾರೆ ಎಂದು ಆರೋಪಿಸಿ,
ಸ್ಥಳೀಯ ಪೊಲೀಸರೇ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ವಿಷಯ ಮುಟ್ಟಿಸಿ , ನೀವು ಒಂದು ದೂರು ದಾಖಲಿಸುವಂತೆ ಪ್ರೇರೆಪಣೆ ನೀಡುತ್ತಾರೆ. ಅಲ್ಲದೆ ಜೆಡಿಎಸ್ ಪಕ್ಷದವರು ನೀಡಿರುವ ದೂರನ್ನು ಮೊದಲು ದಾಖಲಿಸಿಕೊಳ್ಳುತ್ತಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ವೃತ್ತ ನೀರಿಕ್ಷಕ ಶಿವಕುಮಾರ್ ನಮ್ಮೊಂದಿಗೆ ಗಲಾಟೆ ವಿಷಯದ ಬಗ್ಗೆ ಚರ್ಚೆ ಮಾಡಿ ಎಲ್ಲಾ ವಿಷಯವನ್ನು ಜಿಲ್ಲಾ ರಕ್ಷಣಾಧಿಕಾರಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗೌನಿಪಲ್ಲಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಸ್ಐ ರವರನ್ನು ವರ್ಗಾವಣೆ ಮಾಡಲು ಸೂಚನೆ ನೀಡಿದ್ದಾರೆಂದು ವೃತ್ತ ನಿರೀಕ್ಷಕ ಶಿವಕುಮಾರ್ ಧರಣಿ ನಿರತರಿಗೆ ಮಾಹಿತಿ ನೀಡಿದರು. ಗೌನಿಪಲ್ಲಿ ಎಎಸ್ಐ ರವರು ಠಾಣೆಯಿಂದ ವರ್ಗಾವಣೆಯ ಆದೇಶದ ವಿಷಯ ತಲುಪಿದ ನಂತರ ಧರಣಿ ನಿರತರು ಧರಣಿ ಹಿಂಪಡೆದರು.
ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಕೋಡಿಪಲ್ಲಿ ಸುಬ್ಬಿರೆಡ್ಡಿ, ಮುಖಂಡರಾದ ಪೆದ್ದರೂ ನಾಗರಾಜ್, ಬಕ್ಷುಸಾಬ್, ಜಾಮಕಾಯಿಲ ವೆಂಕಟೇಶ್, ರಮೇಶ್, ಭಾಸ್ಕರ್, ಸುರೇಶ್, ನರಸಿಂಹ ಇತರರು ಇದ್ದರು.

