

ಶ್ರೀನಿವಾಸಪುರ : ಪಟ್ಟಣದ ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಅವರೇ ಕಾಯಿ ವಹಿವಾಟನ್ನು ಕೃಷಿ ಉತ್ಪನ ಮಾರುಕಟ್ಟೆಗೆ ಸ್ಥಳಾಂತರಿಸಿ ಇಲ್ಲವೇ ಸೂಕ್ತವಾದ ಜಾಗವನ್ನು ಗುರುತಿಸಿ ರೈತರಿಗೆ ಆಗುತ್ತಿರುವ ಹರಾಜು ಮೋಸ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೆ. ನಾರಾಯಣಗೌಡ ಒತ್ತಾಯಿಸಿದರು. ಟು
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಬುಧವಾರ ಅವರೇ ಕಾಯಿ ಸಮೇತ ಉಪ.ತಹಸೀಲ್ದಾರ ನಾರಾಯಣಸ್ವಾಮಿ ರವರಿಗೆ ಮನವಿ ನೀಡಿ ಮಾತನಾಡಿದರು.
ಒಂದು ವಾರದೊಳಗೆ ಅವರೇ ಕಾಯಿ ವಹಿವಾಟನ್ನು ಎ.ಪಿ.ಎಂ.ಸಿಗೆ ಸ್ಥಳಾಂತರ ಮಾಡದೇ ಇದ್ದರೇ ಅವರೇ ಕಾಯಿ ಸಮೇತ ಮಾನ್ಯ ಶಾಸಕರ ಮನೆ ಮುಂದೆ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ನೀಡುವ ಜೊತೆಗೆಕೃಷಿ ಉತ್ಪನ ಮಾರುಕಟ್ಟೆಯಲ್ಲಿ ಅವರೇ ಕಾಯಿ ಮಾರಾಟ ಮಾಡಲು ಪರವಾನಿಗೆ ಪಡೆದಿರುವ ಮಂಡಿಮಾಲೀಕರು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸದೇ ಪ್ರತಿವರ್ಷ ನಗರದ ಹೃದಯ ಭಾಗದಲ್ಲಿರುವ ಎಂ.ಜಿ ರಸ್ತೆಯಲ್ಲಿ ಏಕೆ ವಹಿವಾಟು ನಡೆಸಿ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಕೃಷಿ ಮಾರುಕಟ್ಟೆಯ ನಿಯಮಗಳನ್ನು ಮಂಡಿಮಾಲೀಕರು ಉಲ್ಲಂಘನೆ ಮಾಡುತ್ತಿಲ್ಲವೇ? ಅವರ ವಿರುದ್ದ ಕ್ರಮ ಕೈಗೊಳ್ಳಲು ರಾಜಕೀಯ ಒತ್ತಡ ಅಧಿಕಾರಿಗಳ ಮೇಲೆ ಇದೆಯೇ? ಇದ್ದರೇ ದಯವಿಟ್ಟು ಸಾರ್ವಜನಿಕವಾಗಿ ಹೇಳಿಕೆ ನೀಡಿ ಪುಣ್ಯಕಟ್ಟಿಕೊಳ್ಳಿ ಎಂದು ರೈತ ಸಂಘದ ಅಧಿಕಾರಿಗಳಿಗೆ ಮನವಿ ಮಾಡಿದರು.
ತಾಲ್ಲೂಕು ಅಧ್ಯಕ್ಷ ತರ್ನೆಹಳ್ಳಿ ಅಂಜಿನಪ್ಪ ಮಾತನಾಡಿ ಅವರೇಕಾಯಿ ಸುಗ್ಗಿ ಪ್ರಾರಂಭವಾದಗ ಪ್ರತಿದಿನ ಸಾವಿರಾರು ಮೂಟೆ ನೂರಾರು ವಾಹನಗಳಲ್ಲಿ ಅವರೇಕಾಯಿ ಬಂದಾಗ ಜಾಗದ ಸಮಸ್ಯೆಯಿಂದ ಟ್ರಾಪಿಕ್ ಸಮಸ್ಯೆಯಾಗುವ ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಅಂಬುಲೇನ್ಸ ಬರುವಾಗ ಜಾಗವಿಲ್ಲದೇ ರೋಗಿಗಳನ್ನು ಪರಾದಡಾವು ಜೊತೆಗೆ ಸಾವುಗಳು ಹಾಗೂ ಅಪಘಾತಗಳನ್ನು ಸಂಭವಿಸುವುದು ಅಧಿಕಾರಿಗಳಿಗೆ ಗೊತ್ತಿದ್ದರು ಸಮಸ್ಯೆಗೆಳಿಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗದೇ ಅಮಾಯಕರಂತೆಯಾಗಿದ್ದಾರೆ ಎಂದು ತಾಲ್ಲೂಕು ಆಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ ನಾರಾಯಣಸ್ವಾಮಿ ಎಲ್ಲಾ ಮಂಡಿ ಮಾಲೀಕರಿಗೆ ಎಂ.ಜಿರಸ್ತೆಯಲ್ಲಿ ವ್ಯಾಪಾರ ನಡೆಸದಂತೆ ನೋಟಿಸ್ ನೀಡಿದ್ದು ಕೂಡಲೇ ಮಾರುಕಟ್ಟೆಗೆ ವ್ಯಾಪಾರವನ್ನು ಸ್ಥಳಾಂತರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಬಂಗವಾಡಿ ನಾಗರಾಜುಗೌಡ , ಅಲಾವಟ ಶಿವು, ಶೇಕ್ ಶಪೀವುಲ್ಲ, ರಾಜೇಂದ್ರ ರೆಡ್ಡಿ, ಗಂಗಾಧರ್, ತಿಮ್ಮಣ್ಣ ರಾಜು, ಗಿರೀಶ್ ಮುಂತಾದರವರು ಇದ್ದರು.


