

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ನಿವಾಸಿ ಕರ್ನಾಟಕದ ಪ್ರಸಿದ್ಧ ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆಯವರಿಗೆ ಹಾಗೂ ರಾಷ್ಟç, ಅಂತಾರಾಷ್ಶ್ರೀಯ ಮಟ್ಟದಲ್ಲಿ ತನ್ನ ಕಾರ್ಟೂನ್ ಚಿತ್ರಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಸತೀಶ ಆಚಾರ್ಯ ಕುಂದಾಪುರ ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರ ಇಬ್ಬರು ಪ್ರಶಸ್ತಿಗೆ ಭಾಜನರಾಗಿರುವುದು ಇದು ಪ್ರಥಮ ಬಾರಿ.
ಭಂಡಾರ್ಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಸೋಮಶೇಖರ ಪಡುಕೆರೆಯವರು ಪತ್ರಕರ್ತರಾಗಿ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದವರಾಗಿದ್ದು, ಕ್ರೀಡಾ ವರದಿಗಾಗಿ ಹೆಚ್ಚು ಖ್ಯಾತರಾದವರು. ಈಗ ತಮ್ಮ “ಸ್ಪೋರ್ಟ್ಸ್ ಮೇಲ್ ನೆಟ್” ವೆಬ್ಸೈಟ್ ಮಾಧ್ಯಮದ ಮೂಲಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸ್ಪೋರ್ಟ್ಸ್ ಮೇಲ್ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ.
ಸತೀಶ ಆಚಾರ್ಯ ಅವರು ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಪದವಿ ಪಡೆದು ಮಂಗಳೂರು ವಿ.ವಿ.ಯಲ್ಲಿ ಎಂ.ಬಿ.ಎ. ಅಧ್ಯಯನ ಮಾಡಿ, ಮುಂಬೈಯಲ್ಲಿ ಇಂಗ್ಲೀಷ್ ಪತ್ರಿಕೆಗಳಲ್ಲಿ ವ್ಯಂಗ್ಯ ಚಿತ್ರಕಾರರಾಗಿ ಪ್ರತಿಭೆ ಮೆರೆದರು. ಕುಂದಾಪುರಕ್ಕೆ ಆಗಮಿಸಿದ ನಂತರ ಮಾಹಿತಿ ತಂತ್ರಜ್ಞಾನಗಳಲ್ಲಾದ ಆಧುನಿಕತೆಯ ಪ್ರಯೋಜನ ಪಡೆದು ರಾಷ್ಟ್ರ, ಅಂತಾರಾಷ್ಶ್ರೀಯಮಟ್ಟದ ಸಂಪರ್ಕ ಬೆಳೆಸಿಕೊಂಡರು. ಐದು ಕಾರ್ಟೂನ್ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುವ ಕಾರ್ಟೂನ್ ಹಬ್ಬ ಜನಪ್ರಿಯವಾಗಿದೆ.
ಪ್ರಶಸ್ತಿಗೆ ಆಯ್ಕೆಯಾದ ಈ ಇಬ್ಬರೂ ಸಾಧಕರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಯು. ಎಸ್. ಶೆಣೈ ಅಭಿನಂದನೆ ಸಲ್ಲಿಸಿದ್ದಾರೆ.



