ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯ ಮಧ್ಯಪ್ರದೇಶದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ 69ನೇ ನ್ಯಾಶನಲ್ ಸ್ಕೂಲ್ ಗೇಮ್ಸ್ ನ ಸ್ಕೇಟಿಂಗ್ ನಲ್ಲಿ 500 ಮೀ ರಿಂಕ್ ಓಟದಲ್ಲಿ ಮತ್ತು 2000 ಮೀ ರಸ್ತೆ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದು ಅಪೂರ್ವ ಸಾಧನೆಗೈದಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ.ರೋಹನ್ ಡಿ ಅಲ್ಮೇಡ ಅವರು ಯುವರಾಜ್ ಅವರ ಈ ಅದ್ಭುತ ಸಾಧನೆಗಾಗಿ ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದ ಪರವಾಗಿ […]
ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸುಮಾರು 71 ಲಕ್ಷ ರೂಪಾಯಿಗೂ ಅಧಿಕ ಹಣ ಮತ್ತು ಚಿನ್ನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಂಟಿ ವ್ಯವಸ್ಥಾಪಕರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೆರ್ನೆ ಶಾಖೆಯ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯಂ (30 ವ) ಎಂಬಾತನೇ ವಂಚನೆ ಎಸಗಿದ ಆರೋಪಿ. ಈತ ಬ್ಯಾಂಕ್ನ ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದನು. 2024ರ ಫೆಬ್ರವರಿ 6ರಿಂದ 2025ರ ಡಿಸೆಂಬರ್ 16ರ ಅವಧಿಯಲ್ಲಿ ಎಟಿಎಂಗೆ ನಿಗದಿತ ನಗದನ್ನು ಜಮಾ […]
ಮಂಗಳೂರು ; ಬಿಕರ್ನಕಟ್ಟೆ ಬಾಲಾ ಯೇಸುವಿನ ಪುಣ್ಯ ಕ್ಷೇತ್ರದಲ್ಲಿ 2026 ರ ಬಾಲಾ ಯೇಸುವಿನ ಉತ್ಸವಕ್ಕಾಗಿ ನೊವೆನಾಗಳು ಜನವರಿ 5 ರಿಂದ ಆರಂಭವಾಗಲಿವೆ ಎಂದು ಬಾಲಾ ಯೇಸುವಿನ ಪುಣ್ಯ ಕ್ಷೇತ್ರದ ಆಡಳಿತಕಾರಿಗಳು ತಿಳಿಸಿದ್ದಾರೆ. ಅದಕ್ಕಾಗಿ ಅವರು ಜಾಹಿರಾತನ್ನು ನಮ್ಮ ಸಂಸ್ಥೆಗೆ ನೀಡಿದ್ದಾರೆ. ನೊವೆನಾಗಳು ಜನವರಿ 5 ರಿಂದ ಆರಂಭವಾಗಿ ಮಹಾಉತ್ಸವವು ಜನವರಿ 14 ಮತ್ತು 15 ರಂದು ನಡೆಯಲಿವೆ. ಜೊತೆಗೆ ಜನವರಿ 3 ರಂದು ಹೊರೆಕಾಣಿಕೆ ನಡೆಯಲಿದೆ. ಎಲ್ಲಾ ರೀತಿಯ ಕಾರ್ಯಕ್ರಮಗಳ ವಿವರಕ್ಕಾಗಿ ಜಾಹಿರಾತನ್ನು ನೋಡಿ […]
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಕೇಂದ್ರ ಕಚೇರಿ, ಬೆಂಗಳೂರು ವತಿಯಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಂತೆ, ರಾಜ್ಯ ಸರ್ಕಾರದ ಆದೇಶಗಳ ಅನ್ವಯ ವಿವಿಧ ಸರ್ಕಾರಿ ಬಸ್ ನಿಗಮಗಳ ಉದ್ಯೋಗಿಗಳಿಗೆ ಅಂತರ ನಿಗಮ ವರ್ಗಾವಣೆ ಸೌಲಭ್ಯವನ್ನು ಒದಗಿಸಲಾಗಿದೆ. ಸರ್ಕಾರ ಹೊರಡಿಸಿದ ಆದೇಶ ಸಂಖ್ಯೆ ಟಿಡಿ 45 ಟಿಸಿಎಸ್ 2020 (ದಿನಾಂಕ 9 ಮಾರ್ಚ್ 2021, 23 ಮಾರ್ಚ್ 2021 ಹಾಗೂ 18 ಜನವರಿ 2025)ರ ಪ್ರಕಾರ, ಕೆಎಸ್ಆರ್ಟಿಸಿ, ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), […]
ಬೆಂಗಳೂರು (ವರದಿ ಶಬ್ಬೀರ್ ಅಹ್ಮದ್) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ನೌಕರರ ಮಾನವ ಸಂಪನ್ಮೂಲ ಸೇವೆಗಳನ್ನು ಮತ್ತಷ್ಟು ಸುಲಭ, ವೇಗ ಹಾಗೂ ಪಾರದರ್ಶಕವಾಗಿಸುವ ಉದ್ದೇಶದಿಂದ ‘ಸಾರಿಗೆ ಮಿತ್ರ’ HRMS ಮೊಬೈಲ್ ಆಪ್ನ ನವೀಕೃತ ಆವೃತ್ತಿ 2.0.0 ಅನ್ನು ಬಿಡುಗಡೆ ಮಾಡಲಾಗಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಇಂದು ಈ ಆಪ್ಗೆ ಅಧಿಕೃತ ಚಾಲನೆ ನೀಡಿದರು. ಡಿಜಿಟಲ್ ಪರಿವರ್ತನೆಗೆ ಒತ್ತು ನೀಡುವ ಜೊತೆಗೆ ನೌಕರರ ಕಲ್ಯಾಣ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು […]
ಕೋಟ ಸಂತ ಜೊಸೇಫರ ಇಗರ್ಜಿಯಲ್ಲಿ ಹೊಸ ವರ್ಷದ ಆಚರಣೆಯ ಅಂಗವಾಗಿ ಪರಮ ಪ್ರಸಾದದ ಆರಾಧನೆ ನಡೆಯಿತು. ಅಥಿತಿ ಗುರುಗಳಾಗಿ ಆಗಮಿಸಿದ ವಂ। ಜೋನ್ ಸಿಕ್ವೇರಾ ಅವರು ಆರಾಧನೆಯನ್ನು ನಡೆಸಿದರು. ನಂತರ ಪವಿತ್ರ ಬಲಿಪೂಜೆ ನೆರವೇರಿತು. ಚರ್ಚಿನ ಧರ್ಮಗುರುಗಳಾದ ವಂ। ಸ್ಟ್ಯಾನಿ ತಾವ್ರೊ ಹಾಗು ಇನ್ನೋರ್ವ ಅಥಿತಿ ಧರ್ಮಗುರುಗಳಾದ ವಂ। ದೀಪಕ್ ಫುರ್ಟಾಡೊ ಅವರು ಬಲಿಪುಜೆಯಲ್ಲಿ ಸಹಕರಿಸಿದರು. ಭಕ್ತಾದಿಗಳು ಭಕ್ತಿ ಪೂರ್ವಕವಾಗಿ ಬಲಿಪೂಜೆಯಲ್ಲಿ ಪಾಲ್ಗೊಂಡರು. ಕಳೆದ ವರ್ಷದಲ್ಲಿ ದೇವರು ಕರುಣಿಸಿದ ಆಶಿರ್ವಾದಗಳಿಗಾಗಿ ದೇವರಿಗೆ ಧನ್ಯವಾದಾಗಳನ್ನು ಅರ್ಪಿಸುತ್ತ ಹೊಸ ವರ್ಷವನ್ನು […]
ಕುಂದಾಪುರ; ಸಂಗೀತ ಭಾರತಿ ಟ್ರಸ್ಟ್ (ರಿ.), ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ “ಶಿಶಿರ ಸಂಗೀತೋತ್ಸವ” ಕಾಲೇಜಿನ ರಂಗ ಅಧ್ಯಯನ ಕೇಂದ್ರದಲ್ಲಿ ಡಿ. ೨೮ ರಂದು ಆದಿತ್ಯವಾರ ನಡೆಯಿತು. ದಿ| ಎ. ವೈಕುಂಠ ಹೆಬ್ಬಾರ್ ಹಾಗೂ ದಿ| ಅವಿನಾಶ್ ಹೆಬ್ಬಾರ್ ಸ್ಮರಣಾರ್ಥ ಏರ್ಪಡಿಸಿದ ಕಾರ್ಯಕ್ರಮವನ್ನು ಖ್ಯಾತ ಗಾಯಕರಾದ ಓಂಕಾರ್ ಹವಾಲ್ದಾರ್ ಮತ್ತು ಶ್ರೀಮತಿ ಮಾನಸಿ ಶಾಸ್ತಿç ಬೆಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು.ಸಂಗೀತ ಭಾರತಿ ಟ್ರಸ್ಟ್ (ರಿ.) ಅಧ್ಯಕ್ಷ ಕೆ. ಶ್ರೀಧರ ಕಾಮತ್, ಭಂಡಾರ್ಕರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ […]
Our lady of Miracles church Milagres celebrated the new year and the feast of the Mother of God ಮಂಗಳೂರು; ಮಿಲಾಗ್ರಿಸ್ನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ಹೊಸ ವರ್ಷ ಮತ್ತು ದೇವರ ತಾಯಿಯ ಹಬ್ಬವನ್ನು ಹುರುಪಿನಿಂದ ಮತ್ತು ಉತ್ಸಾಹದಿಂದ ಆಚರಿಸಿತು. ಚರ್ಚ್ ನ ಪ್ರದಾನ ಫಾದರ್ ಬೊನಾವೆಂಚರ್ ನಜರೆತ್ ಇಂಗ್ಲಿಷ್ನಲ್ಲಿ ಆರಾಧನೆಯನ್ನು ನಡೆಸಿದರು ಮತ್ತು ಫಾದರ್ ಆಲ್ವಿನ್ ಸೆರಾವೊ ಇಂಗ್ಲಿಷ್ನಲ್ಲಿ ಬಲಿಪೂಜೆಯನ್ನು ನಡೆಸಿದರು. ಬಿಷಪ್ ಕಾರ್ಯದರ್ಶಿ ಫಾದರ್ ಐವಾನ್ […]
ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್, ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿ ಆಚರಿಸಲಾಗುವುದು. ವಾರ್ಷಿಕ ಮಹೋತ್ಸವ ಸಾಂಭ್ರಮಿಕ ಬಲಿಪೂಜೆಗಳು:ಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ನಡೆಸಿಕೊಡಲಿರುವರು. ಅದೇ ದಿನ ಬೆಳಿಗ್ಗೆ 10.00 ಘಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು […]

