ಶಿರೂರು : ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ :ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಸ. ಹಿ. ಪ್ರಾಥಮಿಕ ಶಾಲೆ ಕೇಸರ್ ಕೊಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ಹೋಬಳಿ ಮಟ್ಟದ 14 ರ ವಯೋಮಾನದ ಬಾಲಕಿಯರ ತ್ರೋಬಾಲ್ ಮತ್ತು ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮಸ್ಥಾನಿಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ತರಭೇತಿಯನ್ನು […]
ಪಡುಕೋಣೆ; ದಿನಾಂಕ 3 /8/ 25 ಆದಿತ್ಯವಾರ ಬೆಳಿಗ್ಗೆ ಪಡುಕೋಣೆ ಚರ್ಚ್ ವಠಾರದಲ್ಲಿ ಪಡುಕೋಣೆ ಕಥೋಲಿಕ್ ಸಭಾದಿಂದ ಆಯೋಜಿಸಲ್ಪಟ್ಟ ಉಚಿತ ರಕ್ತ ಪರಿಕ್ಷೆ ಮತ್ತು ಥೈರಾಯ್ಡ್ ಪರೀಕ್ಷಾ ಶಿಬಿರ ನಡೆಯಿತು. ಈ ಶಿಬಿರಕ್ಕೆ ಬಯೋಲಿನ್ ಸಂಸ್ಥೆ ಕುಂದಾಪುರ ಮತ್ತು ರೋಟರಿ ಕುಂದಾಪುರ, ಮತ್ತು ಚರ್ಚಿನ ಆರೋಗ್ಯ ಆಯೋಗ,ಸ್ತ್ರೀ ಸಂಘಟನೆ, ವಿನ್ಸೆಂಟ್ ಪಾಲ್ ಸಭೆ ಇವರು ಸಹಕಾರ ನೀಡಿದರು. ಇದರ ಉದ್ಘಾಟನೆಯನ್ನು ಪಡುಕೋಣೆ ಚರ್ಚಿನ ಧರ್ಮ ಗುರುಗಳಾದ ಫಾದರ್ ಫ್ರಾನ್ಸಿಸ್ ಕರ್ನೆಲಿಯೋ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ […]
ಕೋಟೇಶ್ವರ ; “ಕಲಾವಿಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಮತ್ತು ಉದ್ಯೋಗದಲ್ಲಿ ಹಲವಾರು ಅವಕಾಶಗಳಿದೆ. ಅದರಲ್ಲಿಯೂ ರಾಜ್ಯಶಾಸ್ತ್ರದ ಅಧ್ಯಯನವು ಉತ್ತಮ ನಾಗರೀಕನನ್ನು ರೂಪಿಸುವುದರ ಜೊತೆಗೆ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ. ಈ ದಿಶೆಯಲ್ಲಿ ಉಪನ್ಯಾಸಕರು ರಾಜ್ಯಶಾಸ್ತ್ರ ಬೋಧನೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ತಮ್ಮನ್ನು ತಾವು ತಯಾರಿ ಮಾಡಿಕೊಳ್ಳಬೇಕು”. ಎಂದು ಡಾ. ಶುಭಕರಾಚಾರಿ, ಪ್ರಾಂಶುಪಾಲರು ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಅವರು ಹೇಳಿದರು . ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ನಡೆದ ಉಡುಪಿ ಜಿಲ್ಲಾ […]
ಸತತ 170 ಗಂಟೆಗಳು ಅಂದರೆ ನಿರಂತರ ಏಳು ದಿನ ಭರತನಾಟ್ಯ ಪ್ರದರ್ಶನದ ಮೂಲಕ ವಿಶ್ವ ದಾಖಲೆಯೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿರುವ ಕರಾವಳಿಯ ಹೆಮ್ಮೆಯ ಸುಪುತ್ರಿ ಕು. ರೆಮೋನಾ ಪಿರೇರಾ ರವರಿಗೆ ಇಂದು ಉದ್ಯಾವರದಲ್ಲಿ ಅದ್ದೂರಿಯ ಅಭಿನಂದನಾ ಸಮಾರಂಭ.. ಇಂದು ಅಗಸ್ಟ್ 5, ಸಂಜೆ ಗಂಟೆ 5.15ಕ್ಕೆ ಸಭಾಭವನದ ಸಮೀಪವಿರುವ ಪ್ರಮುಖ ರಸ್ತೆಯ ಬಳಿ ಸ್ವಾಗತದೊಂದಿಗೆ, ಸಭಾಭವನದವರೆಗೆ ಮೆರವಣಿಗೆಯ ಮೂಲಕ ಸಾಧಕಿಯನ್ನು ಕರೆತರಲಾಗುವುದು.. ವಿಶೇಷ ಸೂಚನೆ : ಸಂಘ ಸಂಸ್ಥೆಗಳಿಗೆ ಮತ್ತು ವೈಯಕ್ತಿಕವಾಗಿ […]
ಉಡುಪಿ : ಡಿಜಿಟಲ್ ಪರಿವರ್ತನೆಯತ್ತ ಇನ್ನೊಂದು ಹೆಜ್ಜೆ ಇಟ್ಟಿರುವ ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ನೂತನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಯುನಿಗ್ಸ್ (UNIGS) ಅನ್ನು ಆಗಸ್ಟ್ 1, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಿತು. ಇದರ ಮೂಲಕ ಸದಸ್ಯರಿಗೆ ಸುಲಭ, ಸುರಕ್ಷಿತ ಹಾಗೂ ಬಳಕೆದಾರ ಸ್ನೇಹಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಮೈಲುಗಲ್ಲು ಇಟ್ಟಂತಾಗಿದೆ. ಈ ಹೊಸ ಯುನಿಗ್ಸ್ ಆಪ್ನ ಮೂಲಕ ಸದಸ್ಯರು ತಮ್ಮ ಖಾತಾ ವಿವರಗಳನ್ನು ನೇರವಾಗಿ ತಮ್ಮ ಮೊಬೈಲ್ನಲ್ಲಿ […]
ಕುಂದಾಪುರ, ಅ.5; ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ವಲಯದ ಆಶ್ರಯದಲ್ಲಿ ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಇವರ ಮತ್ತು ಇತರ ದಾನಿಗಳ ಸಹಕಾರದಲ್ಲಿ ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯ ಪೋಷಕತ್ವದಲ್ಲಿ ಶಾಲೆಯಲ್ಲಿ ಕುಂದಾಪುರ ವಲಯ ಮಟ್ಟದ 14 ಮತ್ತು 17 ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾಟ ನಡೆಯಿತು. ಇದರ ಉದ್ಘಾಟನೆಯನ್ನು ಮುಖ್ಯ ಪೋಷಕರಾದ ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಇದರ ಅಧ್ಯಕ್ಷರಾದ ಸದಾನಂದ […]
ಮಂಗಳೂರು: ಸಾo ಕ್ರಿಸ್ತೋಪರ್ ಎಸೋಸಿ ಯೆಶನ ವಾರ್ಷಿಕೋತ್ಸವ ವು ಆಗಸ್ಟ್ 3 ರಂದು ರೋಸಾರಿಯೋ ಕ್ಯಾಥ್ಡ್ರಾಲ್ ನಲ್ಲಿ ಜರುಗಿತು ವಂದನೀಯ ಧರ್ಮ ಗುರು ವಲೇರಿಯನ್ ಡಿಸೋಜಾ ಬಲಿ ಪೂಜೆ ಅರ್ಪಿಸಿ ವಾಹನ ಗಳನ್ನು ಆಶೀರ್ವದಿಸಿ ದರು ನಂತರ ನಡೆದ ಸಭಾ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿ ವಾಹನ ಚಾಲಕರ ಸಂಘಟನೆ ಗೆ ಶುಭ ಹಾರೈಸಿದರು ಶ್ರೀಮತಿ ಜೂಡಿತ್ ಕ್ರಾಸ್ತಾ ರವರು ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಕೆಲವು ಸಲಹೆ ಗಳನ್ನು ನೀಡಿದರು ಸಂಘಟನೆ ಯ […]
ಉಡುಪಿ, ಆಗಸ್ಟ್ 4, 2025: ಏಕತೆ, ಸಹಾನುಭೂತಿ ಮತ್ತು ಶಾಂತಿಯುತ ಪ್ರತಿರೋಧದ ಅಸಾಧಾರಣ ಪ್ರದರ್ಶನದಲ್ಲಿ, ಸಾವಿರಾರು ನಾಗರಿಕರು ಉಡುಪಿಯ ಅಜ್ಜರಕಾಡಿನ ಹುತಾತ್ಮ ಚೌಕದಲ್ಲಿರುವ ಯುದ್ಧ ಸ್ಮಾರಕದಲ್ಲಿ ಒಟ್ಟುಗೂಡಿದರು, ಛತ್ತೀಸ್ಗಢದಲ್ಲಿ ಅನ್ಯಾಯದ ಬಂಧನ ಮತ್ತು ದೌರ್ಜನ್ಯಕ್ಕೆ ಗುರಿಯಾದ ಮೂವರು ಕ್ರೈಸ್ತ ಸನ್ಯಾಸಿನಿ ಭಗಿನಿ ಪ್ರೀತಿ ಮೇರಿ, ಸೀನಿಯರ್ ಭಗಿನಿ ಫ್ರಾನ್ಸಿಸ್ ಮತ್ತು ಸುಕಮನ್ ಮಾಂಡವಿ ಅವರಿಗಾಗಿ ಒಗ್ಗಟ್ಟಿನಿಂದ ನಿಂತು ಪ್ರತಿರೋಧಿಸಿದರು. ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಇವರಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಮತ್ತು ಅದರಾಚೆಯಿಂದ ಅಗಾಧ ಭಾಗವಹಿಸುವಿಕೆಯನ್ನು […]
ಬೈಂದೂರು ಹೋಲಿ ಕ್ರಾಸ್ ಚರ್ಚ್ ಕಾರ್ಯವ್ಯಾಪ್ತಿಯಲ್ಲಿ ತಮ್ಮದೇ ಆದ ಹೊಸ ಚಿಂತನೆಗಳೊಂದಿಗೆ ಹೊಸ ವ್ಯವಹಾರವನ್ನು ಆರಂಭಿಸಿ ಸ್ವಂತ ಉದ್ಯಮವನ್ನು ಮಾಡುವ ಮುಖಾಂತರ ಸಮಾಜದ ಆರ್ಥಿಕತೆಗೆ ಕಾರಣೀಕರ್ತರಾಗಿ ಸೇವೆ ಮಾಡುತ್ತಿರುವ ಕ್ರೈಸ್ತ ಸಮುದಾಯದಲ್ಲಿರುವ ಉದ್ಯಮಿಗಳನ್ನು ಗುರುತಿಸಿ “ಉದ್ಯಮಿಗಳ ಜುಬಿಲಿ” ಯನ್ನು ಕಾರ್ಮಿಕ ಆಯೋಗದ ಸಹಯೋಗದಲ್ಲಿ ಆಗಸ್ಟ್ 3 ರಂದು ಭಾನುವಾರ ಚರ್ಚ್ ಸಭಾಂಗಣದಲ್ಲಿ ಜರುಗಿಸಲಾಯಿತು.ಕಾರ್ಯಕ್ರಮ ಆರಂಭಕ್ಕೆ ಮುನ್ನ ಉದ್ಯಮಿಗಳ ಏಳಿಗೆಗೆ ಹಾಗೂ ಪ್ರಗತಿಗಾಗಿ ವಿಶೇಷವಾಗಿ ಪ್ರಾರ್ಥಿಸಿ ಬಲಿಪೂಜೆಯನ್ನು ಸಲ್ಲಿಸಲಾಯಿತು.ನಂತರ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕಾರ್ಮಿಕ ಆಯೋಗದ ಸಂಚಾಲಕರಾದ ರೊನಾಲ್ಡ್ […]

