ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಒರಿಯಂಟೇಶನ್ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಕೋಡ್ ಜ಼ಿಂಗ್ ಇದರ ಸಿ ಇ ಓ ಆಗಿರುವ ಶ್ರೀ ಶ್ರೀನಿವಾಸ ಪ್ರಭು ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವರು ತಮ್ಮ ಆರಂಭಿಕ ಶೈಕ್ಷಣಿಕ ಜೀವನದಲ್ಲಿ ತಾವು ಎದುರಿಸಿದ ಸವಾಲುಗಳ ಬಗ್ಗೆ ವಿವರಿಸುತ್ತ, ನಿರಂತರ ಪ್ರಯತ್ನ, ಸ್ವಯಂ ಶಿಸ್ತು ಮತ್ತು ತಮ್ಮ ಇಚ್ಛಾಶಕ್ತಿಯಿಂದ ಅವರು ಕ್ರಮೇಣ ಈ ಅಡೆತಡೆಗಳನ್ನು ನಿವಾರಿಸಿ ಕೊಂಡರು ಎಂಬುದಾಗಿ ಹೇಳಿದರು. ಕಠಿಣ […]
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ರೋಹನ್ ಕಾರ್ಪೋರೇಶನ್ ವತಿಯಿಂದ ಬಿಜೈ ರೋಹನ್ ಸಿಟಿಯಲ್ಲಿ ವಿಶ್ವಕರ್ಮ ಪೂಜೆ ನೆರವೇರಿತು. ಸಂಸ್ಥೆಯ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ವಿಶ್ವಕರ್ಮ ದೇವರ ಅನುಗ್ರಹ ಕೋರಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಸ್ಥೆಯ ಉದ್ಯೋಗಿಗಳು ಹಾಗೂ ಕಾರ್ಮಿಕರು ಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ನಾಲ್ಕು ಮಂಟಪಗಳನ್ನು ರೂಪಿಸಿ ಅದನ್ನು ಅದ್ಭುತವಾಗಿ ಅಲಂಕರಿಸಿದರು. ಆಕರ್ಷಕ ಅಲಂಕಾರದಿಂದ ಈ ಮಂಟಪಗಳು ಪೂಜೆಯ ಸಾಂಸ್ಕೃತಿಕ ಸೊಬಗನ್ನು ಹೆಚ್ಚಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರತಿನಿಧಿಗಳು, “ವಿಶ್ವಕರ್ಮ […]
ಕುಂದಾಪುರ: 16.09.2025 : ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ “ಹಿಂದಿ ದಿವಸ್” ಅನ್ನು ಬಹಳ ವೈಭವದಿಂದ ಆಚರಿಸಿತು. ಹಿಂದಿ ಶಿಕ್ಷಕರು ಮತ್ತು ಭಾಷಾ ಕ್ಲಬ್ ಈ ಕಾರ್ಯಕ್ರಮವನ್ನು ನಡೆಸಿತು. ಈ ಕಾರ್ಯಕ್ರಮವನ್ನು ಹಿಂದಿ ಭಾಷೆಯನ್ನು ಮಾತ್ರ ಬಳಸಿ ನಡೆಸಲಾಯಿತು. ಹಿಂದಿ ಶಿಕ್ಷಕಿ ರಾಜೇಶ್ವರಿ ಅವರು ತಮ್ಮ ಮುಖ್ಯ ಅತಿಥಿ ಭಾಷಣದಲ್ಲಿ ಹಿಂದಿ ಭಾಷೆಯ ಮಹತ್ವದ ಕುರಿತು ಮಾತನಾಡಿದರು. ಸಿ.ಎಸ್.ಐ. ಕೃಪಾ ವಿದ್ಯಾಲಯ ನರ್ಸರಿ ವಿಭಾಗದ ಮುಖ್ಯೋಪಾಧ್ಯಾಯಿನಿ ಸವಿತಾ ಅವರು ಎಲ್ಲರಿಗೂ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು. ಪ್ರಾಂಶುಪಾಲರಾದ […]
ಪಡುಕೋಣೆ; 15.9.2025; ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಸೀನಿಯರ್ ಸಿಟಿಜನ್ ಸಂಘದ ಸದಸ್ಯರಿಂದ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯಲ್ಲಿ ಹಿರಿಯ ಸದಸ್ಯರು ತಾವು ಈ ಹಿಂದೆ ಮಾಡಿದ ಮೊಂತಿ ಹಬ್ಬದ ಮತ್ತು ಈಗ ಆಚರಿಸುವ ಮೊಂತಿ ಹಬ್ಬದ ಆಚರಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಡುಕೋಣೆ ಇಗರ್ಜಿಯ ಧರ್ಮಗುರುಗಳಾದ ಹಿರಿಯ ಖ್ಯಾತ ಸಂಗೀತ ಸಂಯೋಜಕರಾದ ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊರವರು ಸಂಗೀತ ಕ್ಶೇತ್ರದಲ್ಲಿ, 50 ವರ್ಷದ ಹಿಂದೆ ಸೆಮಿನರಿಯಲ್ಲಿದ್ದಾಗ ರಚಿಸಿದ “ಮರಿಯೇ […]
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯು ದಿನಾಂಕ 14/9/2025 ರಂದು ಮಂಗಳೂರಿನ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಕಳೆದ ವರ್ಷದಲ್ಲಿ ಸೇವೆ ಸಲ್ಲಿಸಿ ದೈವಾಧೀನರಾದ ಸಂಘಟನೆಯ ಸದಸ್ಯರಿಗೆ ಹಾಗೂ ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ದೈವಾಧೀನರಾದ ವಂದನೀಯ ಫಾದರ್ ವಿನ್ಸೆಂಟ್ ಮೊಂತೆರೊರವರಿಗೆ ಮತ್ತು ಕೊಂಕಣಿ ಕಲಾರತ್ನ ದಿ|ಎರಿಕ್ ಒಝೇರಿಯೋರವರ ಆತ್ಮಕ್ಕೆ ಶೃದ್ಧಾಂಜಲಿಯನ್ನು ಅರ್ಪಿಸಿ ಪ್ರಾರ್ಥಿಸಲಾಯಿತು.ಸಭಾಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾರವರು ಹಾಜರಿದ್ದ ಎಲ್ಲರನ್ನು ಸ್ವಾಗತಿಸಿದರು. ಪ್ರಸ್ತುತ ವರ್ಷದ […]
Inauguration of FMHMC New PG block & FMCI Badminton Indoor Stadium at Deralakatte campus ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ (FMHMC) ಹೊಸ ಸ್ನಾತಕೋತ್ತರ ಬ್ಲಾಕ್ ಅನ್ನು 15.09.2025 ರಂದು ಫಾದರ್ ಮುಲ್ಲರ್ ಚಾರಿಟಬಲ್ ಇನ್ಸ್ಟಿಟ್ಯೂಷನ್ಸ್ನ ನಿರ್ದೇಶಕರಾದ ರೆವ್. ಫಾ. ಫಾಸ್ಟಿನ್ ಲೂಕಸ್ ಲೋಬೋ ಅವರಿಂದ ಉದ್ಘಾಟಿಸಲಾಯಿತು.ಕಾರ್ಯಕ್ರಮದ ಸಮಾರಂಭವನ್ನು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಇ. ಎಸ್. ಜೇ. ಪ್ರಭು ಕಿರಣ ಸ್ವಾಗತಿಸಿದರು. ನಂತರ ಜೀವ ಶಾಸ್ತ್ರ […]
ಹಂಗಾರಕಟ್ಟೆ ; ವ್ಯಕ್ತಿಗಳ ನಡುವಿನ ಮನಃಸ್ತಾಪಗಳು, ಹಲವು ಬಗೆಯ ನೋವುಗಳು, ನಿರಾಶೆಗಳು, ಹಣಕಾಸಿನ ಮುಗ್ಗಟ್ಟು, ಉದ್ಯೋಗ ಸಮಸ್ಯೆಗಳು, ಅತೃಪ್ತಿ, ಲೈಂಗಿಕ ಸಮಸ್ಯೆಗಳು ಇತ್ಯಾದಿ ನಾನಾ ಬಗೆಯ ಕಾರಣಗಳಿಂದ ದುಃಖಿತರಾದ ಜನ ಮಾದಕ ವಸ್ತುಗಳಿಂದ ಉಂಟು ಮಾಡುವ ಸುಖದ ಭ್ರಮೆಯಲ್ಲಿ ತಮ್ಮ ನೋವು ದುಃಖಗಳನ್ನು ಮರೆಯಲು ಪ್ರಯತ್ನ ಮಾಡುತ್ತಾ ದುಃಖವಾದಾಗಲೆಲ್ಲಾ ಮಾದಕ ವಸ್ತುಗಳನ್ನು ಸೇವಿಸುತ್ತಾ ಅದರ ದಾಸಾನು ದಾಸರಾಗಿ ಸಮಾಜಕ್ಕೆ ಕಂಟಕರಾಗಿ ಬದುಕುವ ಜನರನ್ನು ಎಚ್ಚರಿಸಬೇಕಾಗಿದೆ. ಅದು ವಿದ್ಯಾರ್ಥಿ ದೆಸೆಯಿಂದಲೇ ಜಾಗ್ರತೆಗೊಳಿಸಿದಾಗ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು […]
ಹಂಗಳೂರು;14.09.2025 ರಂದು ಸಂತ ಪಿಯುಸ್ 10ನೇ ಭಕ್ತಿನಾಥರ ಇಗರ್ಜಿಯಲ್ಲಿ ಸೃಷ್ಟಿ ಮಹಾಸಂಘ ಹಾಗೂ ಸ್ತ್ರೀ ಆಯೋಗದ ಮುಂದಾಳತ್ವದಲ್ಲಿ ತಾಯಂದಿರ ದಿನವನ್ನು ಆಚರಿಸಲಾಯಿತು. ಪಿಯುಸ್ ನಗರ್ ಚರ್ಚಿನ ಗುರುಗಳಾದ ವಂದನಿಯ ಫಾದರ್ ಆಲ್ಬರ್ಟ್ ಕ್ರಾಸ್ತಾರವರು ಬಲಿಪೂಜೆಯನ್ನು ನೆರವೇರಿಸಿದರು. ಬಲಿಪೂಜೆಯಲ್ಲಿ ಗುರುಗಳು ಎಲ್ಲಾ ತಾಯಂದಿರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ಬಳಿಕ ತಾಯಿಂದಿರ ಸಹಮಿಲನವು ಇಗರ್ಜಿಯ ಮುಂಭಾಗದಲ್ಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ತಾಯಿಯಂದಿರ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಪಿಯುಸ್ ಹತ್ತನೆಯ ಇಗರ್ಜಿಯ ಧರ್ಮಗುರುಗಳು ವಂದನಿಯ ಆಲ್ಬರ್ಟ್ ಕ್ರಾಸ್ತರವರು ವಹಿಸಿ […]
ಶಂಕರನಾರಾಯಣ; ಮದರ್ ತೆರೆಸಾ ಕಿಂಡರ್ ಗಾರ್ಟನ್ , ಶಂಕರನಾರಾಯಣದಲ್ಲಿ 13-09 2025ರಂದು ಪೂರ್ವ ಪ್ರಾಥಮಿಕ( ಕಿಂಡರ್ ಗಾರ್ಟನ್ ) ವಿದ್ಯಾರ್ಥಿಗಳ ಪೋಷಕರ ಸಭೆ “FAMILY HOUR – ತಂದೆ ತಾಯಿಯ ಸ್ಪಂದನ… ಮಕ್ಕಳ ನಗುವಿನ ನಂದನ…” ಎಂಬ ಅರ್ಥಪೂರ್ಣ ಶೀರ್ಷಿಕೆಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವು ದೀಪಾರಾಧನೆಯ ಮೂಲಕ ಆರಂಭಗೊಂಡಿತು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಡಳಿತ ನಿರ್ದೇಶಕರಾದ ಕುಮಾರಿ ರೆನಿಟಾ ಲೋಬೊ ಅವರು ಮಾತನಾಡಿ, “ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಉಂಟಾಗುವ ದುಷ್ಪರಿಣಾಮಗಳು ಮತ್ತು ಅವನ್ನು ತಡೆಗಟ್ಟಲು ಪೋಷಕರು ಕೈಗೊಳ್ಳಬಹುದಾದ ಮಾರ್ಗಗಳು” ಕುರಿತು ಸಲಹೆ […]

