2026ರ ಜುಲೈ 19ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚಿನ ಸಭಾಂಗಣದಲ್ಲಿ ಕುಂದಾಪುರ ವಲಯದ ಪಾಲನಾ ಮಂಡಳಿಯ ಸಭೆ ಹಾಗೂ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅ| ವಂ| ಫಾ. ಪೌಲ್ ರೇಗೋ ಸ್ವಾಗತಿಸಿದರು. ಈ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಅತೀ ವಂದನೀಯ ಫಾ. ಸ್ಟೀಫನ್ ಡಿಸೋಜಾ ಅವರು ಆಗಮಿಸಿ “ಮಹೋನ್ನತ ಮಾನವೀಯತೆ” (“Magnifica Humanitas”) ವಿಷಯದ ಕುರಿತು ಮಾರ್ಗದರ್ಶನ ನೀಡಿದರು. ತಮ್ಮ ಉಪನ್ಯಾಸದಲ್ಲಿ ಅವರು […]
ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಡೆದ ಉಪನ್ಯಾಸದಲ್ಲಿ ಡಾ.ಪ್ರಕಾಶ್ ತೋಳಾರ್ ಕುಂದಾಪುರ: ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವನದಲ್ಲಿ ಏಕಾಂಗಿಯಾಗಿ ಕಾಲ ಹರಣ ಮಾಡುವವರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಯುವಕರು ಕೆಟ್ಟ ಸ್ನೇಹಿತರ ಸಹವಾಸವನ್ನು ಮಾಡಬಾರದು. ಮೊದಮೊದಲು ಗುಟ್ಟು ಗುಟ್ಟಾಗಿ ಸೇವಿಸುತ್ತ ಬಳಿಕ ಅದರ ಗುಲಾಮರಾಗಿ, ವ್ಯಸನಿಗಳಾಗಿ ಜೀವನವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಾರೆ ಎಂದು ಖ್ಯಾತ ಮನೋರೋಗ ತಜ್ಞ ಡಾ.ಪ್ರಕಾಶ್ ತೋಳಾರ್ ಹೇಳಿದರು.ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಸಂಭ್ರಮ ಇತ್ತೀಚೆಗೆ ನಡೆದ ವಿವಿಧ ಸಂಘಗಳ ಚಟುವಟಿಕೆ ಉದ್ಘಾಟನೆ […]
ಉದ್ಯಾವರ : ಕಲೆ, ಸಾಹಿತ್ಯ, ನಾಟಕ, ಸಂಗೀತ ಮತ್ತು ಸಿನಿಮಾ lಕ್ಕೆ ಪ್ರೋತ್ಸಾಹ ನೀಡುತ್ತಿರುವ ನಿರಂತರ್ ಉದ್ಯಾವರ್ ನೇತೃತ್ವದಲ್ಲಿ ಜುಲೈ 31 ರಿಂದ ಅಗಸ್ಟ್ 2ರವರೆಗೆ ನಡೆಯುವ ಮೂರು ದಿನದ ‘ನಿರಂತರ್ ಬಹುಭಾಷಾ ಸಿನಿಮಾ ಉತ್ಸವ – 2026’ ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಬಲಾಯಿಪಾದೆ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉದ್ಯಾನವನದಲ್ಲಿ ನಡೆಯಿತು. ವಿವಿಧ ಧರ್ಮದ ಸಾಮಾಜಿಕ ಮುಖಂಡರುಗಳು ಜಂಟಿಯಾಗಿ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಬಳಿಕ ಮಾತನಾಡಿದ ಶ್ರೀ ನಾರಾಯಣಗುರು ಯುವ ವೇದಿಕೆ ಉಡುಪಿ […]
ಮಂಗಳೂರು ; ಸಾಹಿತ್ಯದ ಪ್ರಕಾರಗಳು ಜನರ ಮೇಲೆಬಹಳ ಪರಿಣಾಮಕಾರಿಯಾದ ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ಜನರ ಹಕ್ಕುಗಳ ಮೇಲೆ ಪ್ರಹಾರಗಳ ಬಗ್ಗೆ ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಧ್ವನಿ ಎತ್ತಬೇಕು ಎಂದು ಹಿರಿಯ ನ್ಯಾಯವಾದಿಗಳು ಮತ್ತು ದಕ ಜಿಲ್ಲಾ ಸರಕಾರಿ ಅಭಿಯೋಜಕರು ಆದ ಎಂಪಿ ನೊರೊನ್ಹಾ ನುಡಿದರು.ಅವರು ಮಂಗಳೂರು ಬಲ್ಮಠದ ಸಹೋದಯ ಸಭಾಗೃಹದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಐದನೇ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ತಡಪೆಯ ಮೇಲೆ ಇಟ್ಟ ಹಿತ್ತಾಳೆಯ ಸೇರಿಗೆ ಅಕ್ಕಿಯನ್ನು ತುಂಬಿಸಿ ಅದರ ತುಪ್ಪೆಯ ಮೇಲೆ ದೀಪ […]
ಕೋಟ: ಸಂತ ಜೋಸೆಫರ ಇಗರ್ಜಿಯಲ್ಲಿ ಅಪ್ಪಂದಿರ ದಿನಾಚರಣೆಯನ್ನು ಇತ್ತೀಚೆ ಪವಿತ್ರ ಬಲಿಪೂಜೆಯೊಂದಿಗೆ ಆಚರಿಸಲಾಯಿತು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯಾದ “ಸಂಪದ” ಸಂಸ್ಥೆಯ ನಿರ್ದೇಶಕರಾದ ವಂದನೀಯ ರೆಜಿನಾಲ್ಡ್ ಪಿಂಟೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಸಹಭಾಗಿಯಾದರು. ಪವಿತ್ರ ಬಲಿಪೂಜೆಯಲ್ಲಿ ಅಪ್ಪಂದರಿಗಾಗಿ ವಿಶೇಶ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹೆರಾಲ್ಡ್ ಫೆರ್ನಾಂಡಿಸ್ ಅವರು ಸ್ವಾಗತಿಸಿದರು. ವಂದನೀಯ ಸ್ಟ್ಯಾನಿ ತಾವ್ರೊ ಅವರು ಪ್ರಾಸ್ತವಿಕ ಭಾಶಣ ಮಾಡಿದರು. ಕುಟುಂಬದಲ್ಲಿ ತಂದೆಯ […]
ಜುಲೈ 20, 2026 ರಂದು 3 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಆಹಾರ ಉತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. 4 ನೇ ತರಗತಿಯ ದರ್ಶ್ ಅವರು ಮುಖ್ಯ ಅತಿಥಿಗಳಾದ ಮೌಂಟ್ ರೋಸರಿ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ರೋಹನ್ ಮಸ್ಕರೆನ್ಹಾಸ್ ಮತ್ತು ಮುಖ್ಯೋಪಾಧ್ಯಾಯಿನಿ ಸೀನಿಯರ್ ಆನ್ಸಿಲ್ಲಾ ರೋಶನಿ ಡಿ’ಮೆಲ್ಲೊ ಅವರನ್ನು ಸಭೆಯೊಂದಿಗೆ ಸ್ವಾಗತಿಸಿದರು. ಆರೋಗ್ಯಕರ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಸಂಕೇತಿಸುವ ಕಮಲದ ದಳಗಳನ್ನು ತೆರೆಯುವ ಮೂಲಕ ಉತ್ಸವವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ವಿವಿಧ […]
ಕಲ್ಯಾಣಪುರ, ಜುಲೈ 16: ಮೌಂಟ್ ರೋಸರಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯು ವನಮಹೋತ್ಸವ 2026 ಅನ್ನು ಅತ್ಯಂತ ಉತ್ಸಾಹದಿಂದ ಮತ್ತು ಪರಿಸರ ಸಂರಕ್ಷಣೆಗೆ ಬಲವಾದ ಬದ್ಧತೆಯೊಂದಿಗೆ ಆಚರಿಸಿತು. ಕಾರ್ಯಕ್ರಮವು ಬೆಳಿಗ್ಗೆ 9.30 ಕ್ಕೆ ಮೌಂಟ್ ರೋಸರಿ ಮಿಲೇನಿಯಂ ಸಭಾಂಗಣದಲ್ಲಿ ಪ್ರಾರ್ಥನಾಪೂರ್ವಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ನಂತರ ಆಕರ್ಷಕವಾದ ಸ್ವಾಗತ ನೃತ್ಯವು ಈ ಸಂದರ್ಭಕ್ಕೆ ಸ್ಪೂರ್ತಿದಾಯಕ ವಾತಾವರಣವನ್ನು ಸೃಷ್ಟಿಸಿತು. ಮುಖ್ಯ ಅತಿಥಿಗಳಾಗಿ, ಹಿರಿಯಡ್ಕದ ಬೀಟ್ ಫಾರೆಸ್ಟ್ ಅಧಿಕಾರಿ ಶ್ರೀ ಕೇಶವ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಕಾಡುಗಳನ್ನು ರಕ್ಷಿಸುವುದು, ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು […]
ಕುಂದಾಪುರ; ತೆಕ್ಕಟ್ಟೆ ಶ್ರೀ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜುಲೈ 19ರ ಭಾನುವಾರ ನಡೆದ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ಪದಪ್ರದಾನ ಸಮಾರಂಭದಲ್ಲಿ,PMJF Ln ವೆಂಕಟೇಶ್ ಹೆಬ್ಬಾರ್ ರ ಅಮೃತ ಹಸ್ತಗಳಿಂದ ಪದ ಪ್ರದಾನ ಸಮಾರಂಭ ನೆರವೇರಿತು. ನೂತನ PSTಗಳಾಗಿ Ln ಚಂದ್ರಿಕಾ ಧನ್ಯ, Ln ಜಯಶೀಲ ಕಾಮತ್ ಹಾಗೂ Ln ಶುಭಾ ಶೇಟ್ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಸದಾನಂದ ನಾವುಡ, Zone 1 ರ ವಲಯ್ಯಾಧ್ಯಕ್ಷರಾದ ಲಯನ್ ರವೀಂದ್ರ ಕಾವೇರಿ, ಪ್ರಾಂತ್ಯ […]
ಕುಂದಾಪುರ ; ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಪದಪ್ರದಾನ ಸಮಾರಂಭ ‘ಸಹನ’ದ ಕೃಷ್ಣ ಸಭಾಂಗಣದಲ್ಲಿ ಐವತ್ತು ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿದ ಕ್ಲಬ್ಬಿನ ಹಿರಿಯ ಸದಸ್ಯ ರೊ. ಡಾ. ರಾಮಮೋಹನ ದಂಪತಿಯನ್ನು ಸಮಾರಂಭದಲ್ಲಿ ಗುರುತಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಡಾ. ರಾಜಗೋಪಾಲ್ ಶೆಣೈ , ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಕೆ ಎಮ್ ಸಿ ಮಣಿಪಾಲ್ ಇವರು ಉಪಸ್ಥಿತರಿದ್ದರು . ಸಭಾ ಕಾರ್ಯಕ್ರಮವನ್ನು 2025-2026 ರ ಅಧ್ಯಕ್ಷ ರೊ. ಸಚಿನ್ ನಕ್ಕತ್ತಾಯ ವಿದ್ಯುಕ್ತವಾಗಿ ಆರಂಭಿಸಿದ ನಂತರ ರೊ. […]

