Photographs arranged by: Praveen Cutinho ಸಂತೆಕಟ್ಟೆ-ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್, ಫೆಬ್ರವರಿ 11 ರ ಬುಧವಾರದಂದು ಭಕ್ತಿ ಮತ್ತು ಪ್ರಾರ್ಥನೆಯ ಮೂಲಕ ಉತ್ಸಾಹದಿಂದ ಲೂರ್ದ್ಸ್ ಮಾತೆಯ ಹಬ್ಬವನ್ನು ಸಂತೋಷದಿಂದ ಆಚರಿಸಲಾಯಿತು. ಬೆಳಿಗ್ಗೆ 6.30 ಕ್ಕೆ, ಸುಂದರವಾಗಿ ಅಲಂಕರಿಸಲ್ಪಟ್ಟ ಲೂರ್ದ್ಸ್ ಮಾತೆಯ ಗ್ರೊಟ್ಟೊ ಮುಂದೆ ಮಾತೆಯ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಒಟ್ಟುಗೂಡಿದರು. ಬೆಳಗಿನ ಮೃದುವಾದ ಬೆಳಕಿನಲ್ಲಿ, ಪ್ಯಾರಿಷಿಯನ್ನರು ಮೇಣದಬತ್ತಿಗಳನ್ನು ಹಿಡಿದು ಭಕ್ತಿಯಿಂದ ಪವಿತ್ರ ರೋಸರಿಯನ್ನು ಪಠಿಸಿದರು, ಇದು ಪ್ರಶಾಂತ ಮತ್ತು ನಂಬಿಕೆಯಿಂದ ತುಂಬಿದ ವಾತಾವರಣವನ್ನು ಸೃಷ್ಟಿಸಿತು. ಸೂರ್ಯ […]
ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ನಿನ್ನೆ ನಡೆದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಯತ್ನ ಪ್ರಕರಣ ದೊಡ್ಡದಾಗಿ ಸೌಂಡ್ ಮಾಡಿತ್ತು. ಆದರೆ ಸಂಬಂಧಪಟ್ಟಂತೆ ಪೊಲೀಸರ ತನಿಖೆಯಲ್ಲಿ ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ ತನ್ನ ಅಪಹರಣದ ಪ್ರಯತ್ನ, ಹುಡುಗಿಯೆ ಕಟ್ಟಿರುವ ಕಟ್ಟುಕಥೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡ್ನಲ್ಲಿ ಗೀರಿ ಅಪಹರಣದ ಕಥೆ ಕಟ್ಟಿದ್ದಾಳೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಕಾಶಿಬೆಟ್ಟು ಸರಕಾರಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಸ್ಕೂಟರ್ ತಡೆದು ಕಾರಿನಲ್ಲಿ ಬಂದ ಮೂವರು ಮೂವರು […]
ಕುಂದಾಪುರದ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಇಲ್ಲಿನ ಡಿಪಾರ್ಟ್ಮೆಂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (MBA) ವತಿಯಿಂದ ಕಾಲೇಜಿನಲ್ಲಿ “ಬಜೆಟ್ ವಿಶ್ಲೇಷಣೆ–2026” ಕುರಿತ ಸ್ಪರ್ಧೆಯನ್ನು ಎಂ ಬಿ ಎ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಉಪಸ್ಥಿತರಿದ್ದು, ಸ್ಪರ್ಧೆಗೆ ಶುಭ ಹಾರೈಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಅವರು ತಿಳಿಸಿದರು. ಈ ಸ್ಪರ್ಧೆಯ ಉದ್ದೇಶ ವಿದ್ಯಾರ್ಥಿಗಳಿಗೆ ಕೇಂದ್ರ ಬಜೆಟ್ 2026 […]
ಪಡುಕೋಣೆ; ದಿನಾಂಕ : 8/2/2026 ರ಼ಂದು ಮಿಶಿನರಿ ಮಕ್ಕಳ ವಾರ್ಷಿಕ ದಿನಾ ಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮ ಗುರುಗಳಾದ ವಂ| ಫಾ| ಪ್ರಾನ್ಸಿಸ್ ಕರ್ನೆಲಿಯೊರವರು ಮಿಶಿನರಿ ಸಂಘದ ಮಕ್ಕಳು ಹಾಗೂ ಚರ್ಚಿನ ಭಕ್ತಾದಿಗಳ ಜೊತೆಗೂಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಬಲಿಪೂಜೆಯ ನಂತರ ಸಭಾಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ವಂ। ಫಾ।ಪ್ರಾನ್ಸಿಸ್ ಕರ್ನೆಲಿಯೊ ಮಕ್ಕಳೊಂದಿಗೆ ಈ ಸಂಘದ ಬಗ್ಗೆ ವಿವರಿಸುತ್ತಾ ಸಂಘವನ್ನು 1843ರಲ್ಲಿ ಪ್ರಾನ್ಸ್ ದೇಶದಲ್ಲಿ ಸ್ಥಾಪಿಸಿದರು.ಮಿಶಿನರಿ ಮೇಳ ಅಂದರೆ ಬಾಲಯೇಸುವಿನ ಮೇಳ ಅಂದರೆ ಮಕ್ಕಳಸಂಘ, ಪರಸ್ಪರ ಒಬ್ಬರಿಗೊಬ್ಬರು […]
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು , ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ದೇವಾಡಿಗರು , ಓರ್ವ ಸಜ್ಜನ ರಾಜಕಾರಣಿ , ಸಾಮಾಜಿಕ ನ್ಯಾಯಕ್ಕಾಗಿ ದುಡಿದವರು . ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ , ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದವರು. ಓರ್ವ ಶಾಸಕನಾಗುವ ಎಲ್ಲಾ ಗುಣಗಳನ್ನು ಹೊಂದಿದವರು. ಅವರ ಅಗಲುವಿಕೆ ಸಮಾಜಕ್ಕೆ ಆದ ನಷ್ಟವೆಂದು , ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ಹಿರಿಯ ಕಾಂಗ್ರೆಸ್ಸಿಗ ಕೆದೂರು ಸದಾನಂದ ಶೆಟ್ಟಿ ಹೇಳಿದರು. ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಜು ದೇವಾಡಿಗ ರವರ […]
ಬೆಳ್ತಂಗಡಿ, ಫೆ.9: ದ.ಕ.ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರ. ನಮ್ಮಲ್ಲಿ ಅನೇಕರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಲ್ಲೂ ವಿದ್ವತ್ ಶಿಕ್ಷಣ ಸಂಸ್ಥೆ ಸಮಾಜಮುಖಿಯಾಗಿ ಚಿಂತಿಸಿ, ಸಮಾಜದ ವಿದ್ಯಾರ್ಥಿಗಳಿಗಾಗಿ 54 ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಿವೆ, ಅದಕ್ಕೆ ಹೇಗೆ ತಯಾರಿ ನಡೆಸಬೇಕೆಂಬ ನೆಲೆಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಉಚಿತವಾಗಿ ಮಾರ್ಗದರ್ಶನ ನೀಡಲು ಮುಂದಾಗಿರುವ ಏಕೈಕ ಕಾಲೇಜೆಂದರೆ ಅದು ವಿದ್ವತ್ ಕಾಲೇಜು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ […]
ದಿನಾಂಕ 07-02-2026ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಐ.ಸಿ.ವೈ.ಎಂ. ಚರ್ಚಿನಲ್ಲಿ ಪೋಷಕರಾದ ಸಂತ ಗೊನ್ಜಾಲೊ ಗರ್ಸಿಯವರ ದಿನವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಸಂಜೆ ಚರ್ಚಿನ ಧರ್ಮಗುರುಗಳಾದ ವಂ। ಫಾ. ಎಡ್ವಿನ್ ಡಿಸೋಜಾ ರವರು ಯುವಜನರಿಗಾಗಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಐ.ಸಿ.ವೈ.ಎಂ ಸದಸ್ಯರು ಪ್ರಾರ್ಥನಾ ವಿಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬಲಿ ಪೂಜೆಯ ನಂತರ ಯುವಜನರಿಗಾಗಿ ಧರ್ಮಗುರುಗಳು ವಿಶೇಷ ಪ್ರಾಥನೆಯನ್ನು ಸಲ್ಲಿಸಿದರು.ನಂತರ ಚರ್ಚಿನ ಸಭಾಭವನದಲ್ಲಿ ಯುವಜನರಿಗಾಗಿ ಸ್ನೇಹಕೂಟವನ್ನು ಎರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಯರಾಣಿ ಕಾನ್ವೆಂಟಿನ ಧರ್ಮಭಗಿನಿಯರು ಹಾಜರಿದ್ದು, ಯುವಜನರಿಗಾಗಿ ವಿವಿಧ […]
The annual grand festival of Infant Mary Church in Bajjodi is celebrated with great devotion ಫೆಬ್ರವರಿ 8 ರ ಭಾನುವಾರದಂದು ಬಜ್ಜೋಡಿಯ ಬಾಲೆ ಮೇರಿ ಚರ್ಚ್ನ ಪ್ಯಾರಿಷ್ ಹಬ್ಬವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಬೆಳಿಗ್ಗೆ 9.30 ಕ್ಕೆ ಎಲ್ಲಾ ಜನರು OSS ಕಾನ್ವೆಂಟ್ನಲ್ಲಿ ಒಟ್ಟುಗೂಡಿದರು. ಇನ್ಫೆಂಟ್ ಮೇರಿಯ ಪ್ರತಿಮೆಯನ್ನು ಆಶೀರ್ವದಿಸಿ ಸಣ್ಣ ಪ್ರಾರ್ಥನಾ ಸೇವೆಯನ್ನು ನಡೆಸಲಾಯಿತು. ನಂತರ ಬ್ಯಾಂಡ್ನೊಂದಿಗೆ ಚರ್ಚ್ಗೆ ಭವ್ಯ ಮೆರವಣಿಗೆಯನ್ನು ಕರೆದೊಯ್ಯಲಾಯಿತು. ಚರ್ಚ್ನಲ್ಲಿ ಎಲ್ಲಾ ದಾನಿಗಳನ್ನು ಆಶೀರ್ವದಿಸಲಾದ ಮೇಣದಬತ್ತಿಗಳಿಂದ […]
USWAS organization donates uniforms and shoes to Shirwa Manasa Special School children ಶಿರ್ವದ USWAS, (ಯು.ಎ.ಇ. ಆಧಾರಿತ ಶಿರ್ವ ಪ್ಯಾರಿಷನರ್ಗಳ ಸಂಘಟನೆ) ಮಾನಸ ಪಂಬೂರು ಶಾಲಾ ಸಭಾಂಗಣದಲ್ಲಿ 7.2.2026 ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ವೆಚ್ಚದ 152 ಮಾನಸ ವಿಶೇಷ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಶೂಗಳನ್ನು ದಾನ ಮಾಡಿದೆ. ಮಾನಸ ಟ್ರಸ್ಟ್ನ ಅಧ್ಯಕ್ಷ ಶ್ರೀ ಜಾನ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. USWAS ಉಪಾಧ್ಯಕ್ಷ ಶ್ರೀ ಮನೋಜ್ […]

