ಕುಂದಾಪುರ “ವಿದ್ಯಾರ್ಥಿಗಳು ನೀಟ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಸಿಸುವಾಗ ತಮ್ಮ ಸ್ಪರ್ಧೆಯಿರುವುದು ಬೇರೆಯವರೊಂದಿಗೆ ಅಲ್ಲ, ತನ್ನದೇ ಆದ ನಿನ್ನೆಯ ಸಾಮರ್ಥ್ಯದೊಂದಿಗೆ ಇಂದಿನ ಕೌಶಲ್ಯವನ್ನು ಸ್ಪರ್ಧೆಗೊಡ್ಡಿ, ನಿರಂತರತೆ, ಶಿಸ್ತು ಮತ್ತು ದೊಡ್ಡ ಕನಸು ಕಾಣುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಪ್ರತಿಶತವಾದರೂ ನಿನ್ನೆಗಿಂತ ಉತ್ತಮರಾಗ‌ಬೇಕೆಂದು ಮನಗಂಡು ಯಶಸ್ಸು ಸಾಧಿಸಬೇಕು” ಎಂದು ಕುವೈಟ್ ನ‌ ಅಲ್ ಸಭಾ ಆಸ್ಪತ್ರೆಯ ಮಕ್ಕಳತಜ್ಞ, ಸೀನಿಯರ್ ರಿಜಿಸ್ಟ್ರಾರ್, ಡಾ. ಶಿಶಿರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು‌.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು […]

Read More

“ಪೋಷಕರು,   ಮಗುವಿನ ಸಮಗ್ರ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಾಗ ವ್ಯಕ್ತಿತ್ವದ ವಿಕಾಸವಾಗುತ್ತದೆ, ಮಕ್ಕಳನ್ನು ಮಾಧ್ಯಮದಿಂದ ದೂರವಿರಿಸಿ” ಎಂದು ಶಾಲಾ ಸಂಚಾಲಕರು ಮತ್ತು ಉರ್ವ ಇಮ್ಯಾನಿಕ್ ಚರ್ಚ್ ಧರ್ಮ ಗುರುಗಳಾದ ವಂ. ಗುರು ಬೆಂಜಮೀನ್ ಪಿಂಟೊರವರು ಉರ್ವ ಚರ್ಚ್ ಸಭಾಂಗಣದಲ್ಲಿ ನಡೆದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ  ಶಿಕ್ಷಕ ರಕ್ಷಕ ಸಂಘದ ಸಭೆಯನ್ನು ಉದ್ದೇಶಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಸಂದೇಶ ನೀಡಿದರು. ಶಿಕ್ಷಕರಾದ ರಾಜ್ ಕಿರಣ್ ಡಿಕುನ್ಹಾ 2025 – 26ನೇ ಶೈಕ್ಷಣಿಕ ಸಾಲಿನ ಶಾಲಾ ವರದಿಯನ್ನು ವಾಚಿಸಿದರು. […]

Read More

ಕುಂದಾಪುರ, ಜೂನ್ 13: ಕೆರೆಕಟ್ಟೆಯಲ್ಲಿ ಜೂನ್ 13, 2026 ರಂದು ಸಂತ ಅಂತೋನಿಯ ವಾರ್ಷಿಕ ಮಹತ್ಸೋವ ಹಾಗೂ ಬಹು ಅಕಾಂಕ್ಷೆಯ ಅನಾಥಶ್ರಮ ಉದ್ಘಾಟನೆ  ಕಾರ್ಯಕ್ರಮ ನಡೆಯಿತು. ಜಿಲ್ಲೆ ಮತ್ತು ರಾಜ್ಯಾದ್ಯಂತ  ಆಗಮಿಸಿದ ಭಕ್ತರ ದೊಡ್ಡ ಸಭೆಯ ನಡುವೆ ಪದುವ ಸಂತ ಅಂತೋನಿಯ ನಾಮಾಂಕಿತ ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ।ವಂ। ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ  “ದೇವರನ್ನು ನಾವು ಮೊದಲು ಪ್ರೀತಿಸಿದ್ದಲ್ಲ, ದೇವರೆ ನಮ್ಮನ್ನು […]

Read More

ಕುಂದಾಪುರ ; ದಿನಾಂಕ : 12.06.2026ರ ಶುಕ್ರವಾರದಂದು ಹೋಲಿ ರೋಸರಿ ಆಂಗ್ಲ ಮಾದ್ಯಮ ಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಸಮಾರಂಭವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.           ಶಾಲಾ ಸಂಚಾಲಕರು ಹಾಗೂ ಸ್ಥಳೀಯ ಚರ್ಚಿನ ಪ್ರಧಾನ ಧರ್ಮಗುರುಗಳೂ ಆಗಿರುವ ಅತೀ ವಂದನೀಯ ಗುರು ಪೌಲ್ ರೇಗೋರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಗತಿ ಮಹಿಳಾ ವಿವಿದೋದ್ಧೇಶ ಸಹಕಾರಿ ಬ್ಯಾಂಕ್, ಶಾಲಾ ಮುಖ್ಯೋಪಾಧ್ಯಾಯರಾಗಿರುವ ವಂದನೀಯ ಗುರು […]

Read More

ಕುಂದಾಪುರ; ಕಳೆದ 11 ತಿಂಗಳಿಂದ , ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ , ಪದೋನ್ನತಿ ವರ್ಗಾವಣೆಗೊಂಡು , ಹೊಸಕೋಟೆಯ ಯೋಜನಾ ಪ್ರಾಧಿಕಾರದ ಉಪನಿರ್ದೇಶಕರಾಗಿ ನೇಮಕಗೊಂಡ ಶ್ರೀನಿವಾಸರವರ ಬೀಳ್ಕೊಡುಗೆ ಕಾರ್ಯಕ್ರಮ ಪ್ರಾಧಿಕಾರ ಕಚೇರಿಯಲ್ಲಿ ನಡೆಯಿತು. ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ , ಕಳೆದ ಒಂದು ವರ್ಷದ ಸೇವೆಯಲ್ಲಿ , ಸದಸ್ಯ ಕಾರ್ಯದರ್ಶಿಯಾಗಿ ಶ್ರೀನಿವಾಸ್ ರವರ ಕಾರ್ಯ ವೈಕರಿ , ಜನಮಾನಸದಲ್ಲಿ ಉಳಿಯುವಂತಾಯ್ತು . ಇವರ ದಕ್ಷ […]

Read More

ಕುಂದಾಪುರ; ಪುರಸಭೆ ವ್ಯಾಪ್ತಿಯ ಮಂಗಳೂರು ಟೈಲ್ಸ್ ವಾರ್ಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಂಗನಹಿತ್ತಲು ಬಳಿ , ಕಳೆದ ಮೂರು ದಿನಗಳಿಂದ ಸುರಿದ ನಿರಂತರ ಮಳೆಯಿಂದ ಮನೆಗಳ ಒಳಗೆ ನೀರು ತುಂಬುವ ಪರಿಸ್ಥಿತಿ ಉಂಟಾಯಿತು. ಶ್ರೀ ವೆಂಕಟೇಶರವರ ಮನೆಯ ಹತ್ತಿರ ನೀರು ಹರಿಯಲು ಅವಕಾಶವಿಲ್ಲದ ಕಾರಣ ನೀರಿನ ಪ್ರವಾಹದಿಂದ ಆತಂಕದ ವಾತಾವರಣ ವಾರ್ಡಿನ ಜನರಲ್ಲಿ ಮೂಡಿತು. ಸಮಸ್ಯೆಯನ್ನು ಅರಿತ ಸ್ಥಳೀಯ ನಿವಾಸಿ , ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲೋ ರವರು, ಬ್ಲಾಕ್ ಕಾಂಗ್ರೆಸ್ ಕಚೇರಿಗೆ ವಿಷಯವನ್ನು […]

Read More

ಕುಂದಾಪುರ; ಆಧುನಿಕ ಕೃಷಿ ಪದ್ಧತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ‘ಐಒಟಿ ಆಧಾರಿತ ಸ್ಮಾರ್ಟ್ ಹೈಡ್ರೋಪೋನಿಕ್ಸ್’ ತಂತ್ರಜ್ಞಾನವನ್ನು ಮೂಡ್ಲಕಟ್ಟೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ.ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿಯರಾದ ಫಾತಿಮಾ ತಹಸಿರ್, ಸಿಂಚನಾ ದೇವಾಡಿಗ ಮತ್ತು ವಿನಿತಾ ನಾಯ್ಕ್ ಈ ನೂತನ ಸಂಶೋಧನೆ ಮಾಡಿದ ಪ್ರತಿಭೆಗಳು. ಇವರು ಸಿದ್ಧಪಡಿಸಿದ ಸಂಶೋಧನಾ ಪ್ರಬಂಧವು ಜಾಗತಿಕ ಮಟ್ಟದ ಪ್ರತಿಷ್ಠಿತ ಸ್ಕೋಪಸ್ ಇಂಡೆಕ್ಸ್ ಮಾನ್ಯತೆ ಹೊಂದಿರುವ “ದಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಇನ್ಫರ್ಮ್ಯಾಟಿಕ್ಸ್ ಅಂಡ್ ಕಮ್ಯುನಿಕೇಶನ್ ಟೆಕ್ನಾಲಜಿ”ಯಲ್ಲಿ ಪ್ರಕಟಗೊಂಡಿದೆ.ಮಣ್ಣಿಲ್ಲದೆ […]

Read More

ಮಂಗಳೂರು, ಜೂನ್ 11: ಮಂಗಳೂರಿನ ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಪುಣ್ಯಕ್ಷೇತ್ರದಲ್ಲಿ (ಬಾಲ ಯೇಸು ದೇವಸ್ಥಾನ) ಜೂನ್ 11 ರಂದು ಪರಿಸರ ಜಾಗೃತಿ ಮತ್ತು ಸೃಷ್ಟಿಯ ಕಾಳಜಿಯನ್ನು ಉತ್ತೇಜಿಸುವ ವಿಶೇಷ ಕಾರ್ಯಕ್ರಮದೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಆಚರಣೆಯ ಅಂಗವಾಗಿ ಭಕ್ತಾದಿಗಳಿಗೆ ಸುಮಾರು 1,000 ಸಸಿಗಳನ್ನು ವಿತರಿಸಲಾಯಿತು. ಡಿಸ್ಕಾಲ್ಸ್ಡ್ ಕಾರ್ಮೆಲೈಟ್ಸ್‌ನ ಕರ್ನಾಟಕ-ಗೋವಾ ಪ್ರಾಂತ್ಯದ ಪ್ರಾಂತೀಯ ಸುಪೀರಿಯರ್ ಆಗಿರುವ ವಂ| ಜಾನ್ ಫ್ರಾನ್ಸಿಸ್ ಸಿಕ್ವೇರಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಾನವಕುಲವು ದೇವರ […]

Read More

ಕುಂದಾಪುರ; ಕುಂದಾಪುರ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೆಯ ಶೈಕ್ಷಣಿಕ ಶಾಲೆಯ ಶೈಕ್ಷಣಿಕ ವರ್ಷದ ಹಲವಾರು ಕ್ಲಬ್ಸ್ ಗಳನ್ನು 08-06- 2026 ರಂದು ಉದ್ಘಾಟಿಸಲಾಯಿತು. ಇವುಗಳಲ್ಲಿ ಸಾಂಸ್ಕೃತಿಕ ಕ್ಲಬ್ ಭಾಷಾ ಕ್ಲಬ್ ಆಟೋಟ ಕ್ಲಬ್ ವಿಜ್ಞಾನ ಕ್ಲಬ್ ಗಣಿತ ಕ್ಲಬ್ ಕಲಾ ಕ್ಲಬ್ ಗಳನ್ನು ಉದ್ಘಾಟಿಸಲಾಯಿತು ಈ ಕಾರ್ಯಕ್ರಮಕ್ಕೆ ಕುಂದಾಪುರದ ಆರತಿ ಆಪ್ಟಿಕಲ್ಸ್ ನ ಮಾಲೀಕರಾದ ಶ್ರೀಮತಿ ಆರತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ‘ಮಕ್ಕಳ ಪ್ರತಿಭೆಯನ್ನು ಪ್ರಚುರ ಪಡಿಸಲು ಅವರಿಗೊಂದು ವೇದಿಕೆಯ ಅಗತ್ಯವಿದೆ , […]

Read More
1 11 12 13 14 15 561