ಕೋಲಾರ: ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ದೀಪಕ್ ಕುಂದಾಪುರ ಮತ್ತು ವೈಶಾಲಿ ದಂಪತಿಯ ಒಂದುವರೆ ವರ್ಷದ ಮಗಳು ಆದ್ಯ ಕುಂದಾಪುರ ಪ್ರಾಣಿ ಪಕ್ಷಿ, ತರಕಾರಿ, ವಾಹನ ಮುಂತಾದವುಗಳನ್ನು ತ್ವರಿತವಾಗಿ ಗುರುತಿಸಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ `ಐಬಿಆರ್ ಅಚೀವರ್’ ಸಾಧನೆ ಮಾಡಿದ್ದಾಳೆ.ಆದ್ಯ 30 ಪ್ರಾಣಿ, 31 ತರಕಾರಿ, 15 ಆಕಾರ, 18 ವಾಹನ, 12 ಅಡುಗೆ ವಸ್ತು, ದೇಹದ 12 ಅಂಗಾಂಗ, 17 ಹಕ್ಕಿ, 11 ಹಣ್ಣು, 16 ಇಲೆಕ್ಟಾçನಿಕ್ ಸಾಧನ ಹಾಗೂ ಇತರೆ 33 […]
ಶ್ರೀನಿವಾಸಪುರ : ತಾಲೂಕಿನಲ್ಲಿ ಕೆರೆಗಳಿಗೆ ಕೆಸಿ ವ್ಯಾಲಿ ನೀರನ್ನು ಹರಿಸುವ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಎಲ್ಲಾ ಕೆರೆಗಳಿಗೆ ನೀರು ಹರಿಸುವಂತೆ ವಿವಿಧ ಮುಖಂಡರು ಆಗ್ರಹಿಸಿದ್ದಾರೆ. ಮಂಗಳವಾರ ಪಟ್ಟಣದ ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ರಮೇಶ್ಕುಮಾರ್ ಅಭಿಮಾನಿ ಬಳಗದ ವತಿಯಿಂದ ನೀರಾಗಿ ನಮ್ಮ ಹಕ್ಕು ಕಾರ್ಯಕ್ರಮದಡಿ ಶ್ರೀನಿವಾಸಪುರದಿಂದ ಮುದುವಾಡಿ ಕೆರೆ ಹಾಗೂ ನರಸಾಪುರದ ಲಕ್ಷ್ಮಿಸಾಗರದವರೆಗೆ ಕಾರುಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮಾಜಿ ಶಾಸಕ ಕೆ.ಆರ್. ರಮೇಶ್ಕುಮಾರ್ ಅವರ ಕಾಳಜಿಯಿಂದ […]
Women’s Cell of St. Joseph’s University Organises Inspiring Talk on Women Empowerment ಬೆಂಗಳೂರು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಹಿಳಾ ಘಟಕವು, ಸಂಸ್ಥೆಯ ಇನ್ನೋವೇಶನ್ ಕೌನ್ಸಿಲ್ (IIC) ಸಹಯೋಗದೊಂದಿಗೆ, 2026ರ ಮಾರ್ಚ್ 17ರಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ‘ಮಹಿಳಾ ಸಬಲೀಕರಣ’ ಕುರಿತು ಚಿಂತನಶೀಲ ಉಪನ್ಯಾಸವನ್ನು ಆಯೋಜಿಸಿತ್ತು. ಭಾರತೀಯ ರಕ್ಷಣಾ ಇಂಜಿನಿಯರಿಂಗ್ ಸೇವೆಯ (IDSE) ಪ್ರತಿಷ್ಠಿತ ಅಧಿಕಾರಿ ಶ್ರೀಮತಿ ನಾಜ್ನೀನ್ ಬಾನು ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಹಿರಿಯ ನಾಯಕರನ್ನು […]
ಹಂಗಾರಕಟ್ಟೆ ; ವೃತ್ತಿ ಕೌಶಲ್ಯವು ಪಾರಂಪರಿಕ ವೃತ್ತಿಗಳಾದ ಕಮ್ಮಾರಿಕೆ, ಚಮ್ಮಾರಿಕೆ ನೇಕಾರಿಕಾ ಕುಂಬಾರಿಕೆ ಹಾಗೂ ಕ್ಷೌರಿಕ ಎಂಬ ಐದು ಪ್ರಧಾನ ಪ್ರಭೇದಗಳಿದ್ದು, ಅತ್ಯಂತ ಪ್ರಾಚೀನ ಕಸುಬುದಾರರು ಎಂದು ಗುರುತಿಸಲಾಗಿದ್ದು, ಅವರು ಅತ್ಯಂತ ನೈಪುಣ್ಯ ಪಡೆದವರಾಗಿದ್ದು, ತುಂಬಾ ಜನಪ್ರಿಯರಾಗಿದ್ದರು. ಆದರೆ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಈ ಹಸ್ತ ಕುಶಲಗಾರರು ನಿರ್ಮಿಸಿದ ಅನೇಕ ಕಲಾಕೃತಿಗಳು ನಿರ್ಲಕ್ಷö್ಯಕ್ಕೊಳಪಟ್ಟು ಅವಸಾನದ ಅಂಚಿನಲ್ಲಿದ್ದು, ಅದನ್ನು ಪ್ರಜಾ ಸತ್ತಾತ್ಮಕ ನೆಲೆಯಾದ ಈ ಎಲ್ಲಾ ವೃತ್ತಿ ಹಾಗೂ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ತುಂಬಾ ಅಗತ್ಯವಾಗಿದೆ ಎಂದು ಕೆ. […]
ಮಂಗಳೂರು ; ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಯ ನೇತ್ರತ್ವದಲ್ಲಿ ಕಳೆದ 20 ರ್ಷಗಳಲ್ಲಿ ಕಥೋಲಿಕ ಕ್ರೆöÊಸ್ಥ ಸಮುದಾಯಕ್ಕೆ ಸೇರಿದ ಮಂಗಳೂರು ಹಾಗೂ ಉಡುಪಿ ಧರ್ಮಪ್ರಾಂತ್ಯದ 3,000 ಕ್ಕೂ ಹೆಚ್ಚು ಶೈಕ್ಷಣಿಕ ಸಾಧಕರನ್ನು ಹಾಗೂ ಕಳೆದ 2 ರ್ಷಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳ ಸನ್ಮಾನ ಕರ್ಯಕ್ರಮ ನೆರವೇರಿಸಿದೆ. ಈ ಬಾರಿ ಮಂಗಳೂರಿನ ಎಮ್.ಸಿ.ಸಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ, ಮತ್ತೊಂದು ಹೊಸ ಮೈಲುಗಲ್ಲಾಗಿ ಕ್ರೀಡೆ, ಕಲೆ ಹಾಗೂ ಇತರೆ ಕ್ಶೇತ್ರಗಳಲ್ಲಿ ಸಾಧನೆಗೈದ 65 ವಿಶೇಷ ಸಾಧಕರನ್ನು ಗುರುತಿಸಿ […]
ಒಮಾನ್ನಲ್ಲಿ ದಿಢೀರ್ ಪ್ರವಾಹ ಸಂಭವಿಸಿದ್ದು, ಭಾರತೀಯರು ಸೇರಿದಂತೆ ನಾಲ್ವರ ಸಾವನ್ನಪ್ಪಿದ್ದಾರೆ. ಕೇರಳದ ಇಬ್ಬರು ಮೃತಪಟ್ಟಿದ್ದು ಇನ್ನೋರ್ವ ಮಹಿಳೆ ನಾಪತ್ತೆಯಾಗಿದ್ದಾರೆ. ತುರ್ತು ನೆರವು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿರಿಯ ಕಾಂಗ್ರೆಸ್ ನಾಯಕ ವಿ.ಡಿ. ಸತೀಸನ್ ಒತ್ತಾಯಿಸಿದ್ದಾರೆ. ಈ ಸಂಬಂಧ ಪತ್ರವನ್ನು ಬರೆದಿದ್ದಾರೆ. ಘಟನೆ ಈದ್ ಹಬ್ಬದಂದು ನಡೆದಿದೆ ಪ್ರವಾಹದಲ್ಲಿ ಕೇರಳದ ತ್ರಿಥಾಲದ ನಿವಾಸಿಗಳಾದ ಯೂಸುಫ್ ಮತ್ತು ಶಮ್ಲಾ ಸಾವನ್ನಪ್ಪಿದ್ದಾರೆ. ಕಾಣೆಯಾದ ಮಹಿಳೆಯನ್ನು ತ್ರಿಥಾಲ ಮೂಲದವರಾದ ರಮ್ಲಾ ಎಂದು ಗುರುತಿಸಲಾಗಿದೆ.ವರದಿಗಳ ಪ್ರಕಾರ, ಒಮಾನ್ನ ಅಲ್ ಬಟಿನಾ […]
Reported by Maria Wilma Rego Photographs arranged by Tolbert D’Souza ಕಲ್ಯಾಣಪುರ; ಮೌಂಟ್ ರೋಸರಿ ಚರ್ಚ್ನ ಕ್ಯಾಥೋಲಿಕ್ ಸಭಾವು ಮಾರ್ಚ್ 22, 2026 ರ ಭಾನುವಾರದಂದು ಚರ್ಚ್ ಮಿನಿ ಹಾಲ್ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅರ್ಥಪೂರ್ಣ ಮತ್ತು ರೋಮಾಂಚಕ ಆಚರಣೆಯನ್ನು ಆಯೋಜಿಸಿತು. ಈ ಕಾರ್ಯಕ್ರಮವು ಪ್ಯಾರಿಷನರ್ಗಳಿಂದ, ವಿಶೇಷವಾಗಿ ಮಹಿಳೆಯರಿಂದ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಕಂಡಿತು, ಇದು ಈ ಸಂದರ್ಭವನ್ನು ನಿಜವಾಗಿಯೂ ಸ್ಮರಣೀಯವಾಗಿಸಿತು. ಬೆಳಿಗ್ಗೆ 8.00 ಗಂಟೆಗೆ ಪ್ಯಾರಿಷ್ ಪಾದ್ರಿ ರೆವರೆಂಡ್ ಡಾ. ರೋಕ್ ಡಿಸೋಜಾ ಅವರು […]
ಶ್ರೀನಿವಾಸಪುರ : ಪವಿತ್ರ ರಮಝಾನ್ ಉಪವಾಸದ ಸಮಾಪ್ತಿಯನ್ನು ಸೂಚಿಸುವ ಈದ್-ಉಲ್-ಫಿತ್ರ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಸಮುದಾಯವು ಶನಿವಾರ ಭಕ್ತಿಪೂರ್ವಕವಾಗಿ ಹಾಗೂ ಸಂಭ್ರಮದಿಂದ ಆಚರಿಸಿತು. ಸಹೋದರತ್ವ, ಶಾಂತಿ ಮತ್ತು ದಾನಧರ್ಮದ ಸಂದೇಶ ಸಾರುವ ಈ ಹಬ್ಬವು ಪಟ್ಟಣದಾದ್ಯಂತ ವಿಶೇಷ ಧಾರ್ಮಿಕ ವಾತಾವರಣವನ್ನು ನಿರ್ಮಿಸಿತು.ಪಟ್ಟಣದ ಚಾರ್ಮಿನಾರ್ ಈದ್ಗಾ ಮೈದಾನ, ಜಾಮಿಯಾ ಮಸೀದಿ ಈದ್ಗಾ ಮೈದಾನ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಈದ್ಗಾಗಳಲ್ಲಿ ಸಾವಿರಾರು ಭಕ್ತರು ಸೇರಿ ಸಮೂಹವಾಗಿ ಈದ್ ನಮಾಜ್ ಸಲ್ಲಿಸಿದರು. ಬೆಳಗಿನ ಜಾವವೇ ಹೊಸ ಬಟ್ಟೆ ಧರಿಸಿ ಕುಟುಂಬ […]
ಬರಹ ; ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸಾಮಾನ್ಯವಾಗಿ ಕಾನೂನು ಚೌಕಟ್ಟಿನೊಳಗೆ ಕಟ್ಟುಪಾಡುಗಳೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಆದರೆ ಕೆಲವರು ಮಾತ್ರ ಈ ಕಠಿಣ ಚೌಕಟ್ಟಿನೊಳಗೆ ಮಾನವೀಯತೆ, ಸಹಾನುಭೂತಿ ಮತ್ತು ಸೇವಾ ಮನೋಭಾವವನ್ನು ಬೆರೆಸಿ ಜನಪರ ಆಡಳಿತಕ್ಕೆ ಹೊಸ ಅರ್ಥ ನೀಡುತ್ತಾರೆ. ಅಂತಹ ಅಪರೂಪದ ಅಧಿಕಾರಿಗಳ ಪೈಕಿ ಹಿರಿಯ ಐಎಎಸ್ ಅಧಿಕಾರಿ ಮಹಮ್ಮದ್ ಮೊಹ್ಸಿನ್ ಪ್ರಮುಖರಾಗಿದ್ದಾರೆ. ತಮ್ಮ ಸರಳತೆ, ಜನಪರ ನಿಲುವು ಮತ್ತು ಸಹಾಯ ಮನೋಭಾವದಿಂದ ರಾಜ್ಯಾದ್ಯಂತ ವಿಶಿಷ್ಟ ಗುರುತನ್ನು ಗಳಿಸಿರುವ ಅವರು, ನಿಜವಾದ ಅರ್ಥದಲ್ಲಿ ಬಡವರ […]

