ಶ್ರೀನಿವಾಸಪುರ : ಈ ಹೇಯ ಕೃತ್ಯವನ್ನು ಮಾಡಿರುವವರನ್ನು ಬಂದಿಸುವ ತನಕ ನಾವು ನಿಮ್ಮೊಂದಿಗೆ ಇದ್ದು ಹೋರಾಟಗಳಿಗೆ ಕೈಜೋಡಿಸುತ್ತೇವೆ ಎಂದರು. ಈ ಹಿಂದೆ ಕೆಲ ಸಂಘಟನೆಗಳ ವಿರುದ್ಧ ೨ ಸಾವಿರ ಜನ ಹೋರಾಟ ಮಾಡಲಾಗಿತ್ತು, ಆಂದ್ರ ಪ್ರದೇಶದ ಸರ್ಕಾರ ಈ ಘಟನೆಯಲ್ಲಿನ ಆರೋಪಿಗಳನ್ನು ಬಂದಿಸದ ಪಕ್ಷದಲ್ಲಿ ೨೦ ಸಾವಿರ ಜನ ಹೋರಾಟಕ್ಕೆ ಇಳಿಯಲಾಗುತ್ತದೆ ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಎಚ್ಚರಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಶನಿವಾರ ನೆರಯ ಮದನಪಲ್ಲಿ ಬಳಿಯ ಬುದ್ದನ ಬೆಟ್ಟದಲ್ಲಿ ಇತ್ತೀಚಿಗೆ ಬುದ್ದನ ವಿಗ್ರಹವನ್ನು ಶಿರಚ್ಚೇದ […]

Read More

ಶ್ರೀನಿವಾಸಪುರ : ದೇಶದ ಬೆನ್ನೆಲುಬಾದ ವಿದ್ಯಾರ್ಥಿಗಳು ಕೆಟ್ಟಹವ್ಯಾಸಗಳಿಗೆ ತಮ್ಮ ಅಮೂಲ್ಯವಾದ ಜೀವನವನ್ನು ಬಲಿಕೊಡದೆ ಆರೋಗ್ಯವಂತ ಜೀವನವನ್ನು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗುಂಡು ಉತ್ತಮ ಸಾಧನೆಯ ಮೂಲಕ ದೇಶದ ಘನತೆ ಗೌರವವನ್ನು ಕಾಪಾಡುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕರೆನೀಡಿದರು.ಪಟ್ಟಣದ ಅಮಾನಿಕರೆ ಕ್ರೀಡಾಂಗಣದಲ್ಲಿ ಶನಿವಾರ ಪ್ರಾಥಮಿಕ, ಪ್ರೌಡಶಾಲೆಗಳ ತಾಲೂಕು ಮಟ್ಟದ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದರು.ಕ್ರೀಡೆಗಳಲ್ಲಿ ಸೋಲು, ಗೆಲವು ಎರಡನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸುತ್ತಾ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯು ಒಂದು ಅವಿಬಾಜ್ಯ ಅಂಗ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ […]

Read More

ಶ್ರೀನಿವಾಸಪುರ ಪಟ್ಟಣದ ವಾಸವಿಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಲಲೀತಾ ಮಹಿಳಾ ಸಂಘದ   ವತಿಯಿಂದ ಗುರುವಾರ ಕನ್ಯಕಾಪರಮೇಶ್ವರಿ ದೇವಿಯ ಪುರಾಣ ಪಾರಾಯಣ ಮಾಡಿರುವ 160 ಮಹಿಳೆಯರಿಗೆ ಮಡಲ ಅಕ್ಕಿ ತುಂಬಲಾಯಿತು.ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನೇತೃತ್ವದಲ್ಲಿ ಕಾಯ೯ಕ್ರಮ ನಡೆಯಿತು. ಈ ಸಂದರ್ಭದಲ್ಲಿ ‌ಲಲೀತಾ ಮಹಿಳಾ ಮಂಡಳಿ ವತಿಯಿಂದ ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಸಭಾ ರಾಜ್ಯಾಧ್ಯಕ್ಷರು ಉಮಾ ಸಾಯಿ ರಾಮ್, ಪ್ರಧಾನ ಕಾರ್ಯದರ್ಶಿ ಸಂಧ್ಯಾ ಜಗದೀಶ್, ಉಪಾಧ್ಯಕ್ಷ ರಾದ ಚೈತನ್ಯ ಲವಕುಮಾರ್, ಶೀಲ ಸುರೇಶ್ , ರವರನ್ನು  ಸನ್ಮಾನಿಸಲಾಯಿತು.

Read More

ಕೋಲಾರದ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಡಾ. ರಾಜ್‍ಕುಮಾರ್ ಅವರ ಹೆಸರಿಡುವಂತೆ ಕೋರಿ ಶ್ರೀನಿವಾಸಪುರದ ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್, ಕಾರ್ಯದರ್ಶಿ ಎಸ್.ಎಚ್.ನಾರಾಯಣಮೂರ್ತಿ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.ಒಳಾಂಗಣ ಕ್ರೀಡಾಂಗಣಕ್ಕೆ ಡಾ.ರಾಜ್‍ಕುಮಾರ್ ಹೆಸರಿಡಲು ಆಗ್ರಹಶ್ರೀನಿವಾಸಪುರ: ಕೋಲಾರದ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ವರನಟ ಹಾಗೂ ಯೋಗಪಟು ಡಾ. ರಾಜ್‍ಕುಮಾರ್ ಅವರ ಹೆಸರಿಡುವಂತೆ ಕೋರಿ ಶ್ರೀನಿವಾಸಪುರದ ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ […]

Read More

ಬೆಂಗಳೂರು : ನಗರದಲ್ಲಿ ವೀಲಿಂಗ್ ಮಾಡಿ ರಸ್ತೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ವಾಹನ ಸವಾರರ ವಿರುದ್ಧ ದೂರು ದಾಖಲಿಸಿ, ಅವರ ಆರ್‌ಸಿ ಹಾಗೂ ಚಾಲನಾ ಪರವಾನಿಗೆಯನ್ನು ಶಾಶ್ವತವಾಗಿ ರದ್ದುಪಡಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದರು. ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಮಕ್ಕಳು ರಸ್ತೆ ದಾಟುವಾಗ […]

Read More

ಕೋಲಾರ : ಕೋಲಾರ ನಗರದ ಹೃದಯ ಭಾಗದಲ್ಲಿರುವ ಡಿ. ವಿ. ಗುಂಡಪ್ಪ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಮಾನ್ಯ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗ್ರಂಥಾಲಯದಲ್ಲಿನ ವಾಚನಾಲಯ, ನಿಯತಕಾಲಿಕೆಗಳ ಕೊಠಡಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ, ಓದುಗರು ಹಾಗೂ ಸ್ಪರ್ಧಾಕಾಂಕ್ಷಿಗಳೊಂದಿಗೆ ಮುಕ್ತವಾಗಿ ಮಾತನಾಡಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸ್ಪರ್ಧಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ಈ ಗ್ರಂಥಾಲಯ ಉಪಯೋಗಿಸಿಕೊಂಡು ಉತ್ತಮ ಅಂಕ ಪಡೆಯುವುದರ ಜೊತೆಗೆ, ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು ಎಂದು […]

Read More

ಶ್ರೀನಿವಾಸಪುರ : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಇ-ಪವತಿವಾರಸ್ಸು ಅಂದೋಲನ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದರು .ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಕಂದಾಯ ಇಲಾಖೆಯಿಂದ ಅ. 22 ರಿಂದ ಸೆ. 29 ವರೆಗೆ ತಾಲೂಕಿನ ಪ್ರತಿ ಹೋಬಳಿಯಲ್ಲಿ ಇ-ಪವತಿವಾರಸ್ಸು ಅಂದೋಲನವು ನಡೆಯುವುದರಿಂದ ಸಾರ್ವಜನಿಕರು ಈ ಅಂದೋಲನವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಇ-ಪವತಿವಾರಸ್ಸು ಮಾಡಿಸಿಕೊಳ್ಳದಿದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತೀರಾ ಎಂದರು. ದಾಖಲೆಗಳ ವಿವಿರ : ಆದಾರ್‍ಕಾರ್ಡ್ , ಮರಣಪತ್ರ, ವಂಶವಕ್ಷ, ಪಿ.ನಂಬರ್ ಮೂಲದಾಖಲೆ , ಚಾಲ್ತಿಯಲ್ಲಿ ಇರುವ ಪಹಣಿ […]

Read More

ಶ್ರೀನಿವಾಸಪುರ : ಗೋಕುಲಾಷ್ಟಮಿ ದಿನ ಪಾಲಕರು ತಮ್ಮ ಮಕ್ಕಳನ್ನು ಕೃಷ್ಣ , ರಾಧೆ ವೇಷಗಳೊಂದಿಗೆ ಅಲಂಕರಿಸಿ ಸಂತೋಷ ಪಡುತ್ತಾರೆ. ಕೃಷ್ಣನ್ನು ಮನದಲ್ಲಿ ಬಿಂಬಿಸುವದೇ ಗೋಕುಲಾಷ್ಟಮಿ. ಪ್ರತಿಯೊಬ್ಬ ತಂದೆತಾಯಿ ನಮಗೆ ಕೃಷ್ಣನಂತಹ ಗುಣಗಳುಳ್ಳ ಮಗು ಹುಟ್ಟಿಬರಲಿ ಎಂದು ಕದಂಬ ಮಹಿಳಾ ಘಟಕ ವೇದಿಕೆ ಜಿಲ್ಲಾ ಅಧ್ಯಕ್ಷ ಮಾಯಬಾಲಚಂದ್ರ ಆಶಿಸಿಸುತ್ತಾರೆ.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರ್ಸಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಮಂಗಳವಾರ ವಾಸವಿ ಕಲ್ಯಾಣ ಮಂಟಪದಲ್ಲಿ ಗೋಕುಲಾಷ್ಟಮಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು. ಶ್ರೀಕೃಷ್ಣನು ಭಗವತ್ ಗೀತೆಯಲ್ಲಿ ಅನೇಕ ಸಲಹೆಗಳು ಮತ್ತು ಉಪದೇಶ್ಳನ್ನು ನೀಡಿದ್ದಾನೆ. […]

Read More

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕಿನ ಎಲ್ಲಾ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಶಾಲಾ ಅಭಿವೃದ್ಧಿ ಮತ್ತು ಮಾನಿಟರಿಂಗ್ ಸಮಿತಿ (SDMC)ಗಳನ್ನು ತುರ್ತಾಗಿ ರಚಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಿರುವ ನಿರ್ದೇಶನದ ಪ್ರಕಾರ, ನಿಗದಿತ ಅವಧಿಯೊಳಗೆ ಸಮಿತಿ ರಚನೆ ಪೂರ್ಣಗೊಳ್ಳಲೇಬೇಕು. ಇಲ್ಲವಾದಲ್ಲಿ ಶಾಲೆಗಳ ಅಭಿವೃದ್ಧಿ ಕಾರ್ಯಗಳಲ್ಲಿ ಗಂಭೀರ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವಿವಿಧ […]

Read More
1 23 24 25 26 27 381