ಬೆಳ್ತಂಗಡಿ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂ.5 ರಂದು ವಿದ್ವತ್ ಪಿ.ಯು. ಕಾಲೇಜು, ಗುರುವಾಯನಕೆರೆಯಲ್ಲಿ ಪ್ರಥಮ ಪಿಯುಸಿ ವಿದ್ಯಸರ್ಥಿಗಳಿಂದ ಕಾಲೇಜು ಆವರಣದಲ್ಲಿ ಹೂ ಹಾಗೂ ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವತ್ ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಪರಿಸರವು ನಮ್ಮ ಜೀವನಾಡಿ; ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದು ಮರ ನೆಡುವ ಮೂಲಕ ಪ್ರಕೃತಿಗೆ ಕೃತಜ್ಞತೆ ಸಲ್ಲಿಸಿ, ಹಸಿರು ಭವಿಷ್ಯವನ್ನು ನಿರ್ಮಿಸೋಣ ಎಂದರು. ಇಂದಿನ ಪರಿಸರ […]
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಜೂನ್ 5ರಂದು ಆಯೋಜಿಸಲಾದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 9ನೇ ತರಗತಿ ‘ಬಿ’ ವಿಭಾಗದ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಗಮನಾರ್ಹ ಸಾಧನೆ ಮಾಡಿದ್ದಾರೆ. 60 ಮೀಟರ್ ಓಟ ಸ್ಪರ್ಧೆಯಲ್ಲಿ ಯುವರಾಜ್ ಚಿನ್ನದ ಪದಕ ಗೆದ್ದರೆ, ಉದ್ದ ಜಿಗಿತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿರುವ ಯುವರಾಜ್ ಅವರ ಸಾಧನೆಗೆ […]
ಕುಂದಾಪುರ, ಜೂ.7; ನಗರದ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ ದೀಪ ಬೆಳಗುವುದರ ಮೂಲಕ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ 2026 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗೋತ್ಸವ ಹಾಗೂ ಶಿಕ್ಷಕ ರಕ್ಷಕ ಸಭೆಯ ಕಾರ್ಯಕ್ರಮವನ್ನು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು, ವಿದ್ಯಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಅ|ವಂ|ಪಾವ್ಲ್ ರೇಗೊ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಅವರು ‘ನಮ್ಮ ಕಾಲೇಜಿನಲ್ಲಿ ಬೇಕಾದ್ದು ಎಲ್ಲ ವ್ಯವಸ್ಥೆ ಇದೆ, ಅನುಭವವುಳ್ಳ ಪ್ರಾಧ್ಯಪಕರಿದ್ದಾರೆ, ಹಾಗಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ […]
Reported by: Maria Wilma Rego Photographs arranged by Tolbert D’Souza ಕಲ್ಯಾಣಪುರ;ಜೂನ್ 7, 2026 ರ ಭಾನುವಾರ ಬೆಳಿಗ್ಗೆ 9:30 ಕ್ಕೆ ಸಂತೇಕಟ್ಟೆ-ಕಲ್ಯಾಣಪುರದ ಮೌಂಟ್ ರೋಸರಿ ಚರ್ಚ್ನ ಪರಿಸರ ವಿಜ್ಞಾನ ಆಯೋಗದಿಂದ ಹೋಲಿ ಫ್ಯಾಮಿಲಿ ವಾರ್ಡ್ನ ಶ್ರೀ ರೊನಾಲ್ಡ್ ಮತ್ತು ರೀನಾ ಡಿ’ಸೋಜಾ ಅವರ ಸ್ಥಳದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ವಿವಿಧ ಪ್ಯಾರಿಷ್ ಸಂಘಗಳಾದ ಪರಿಸರ ಆಯೋಗ, ಕ್ಯಾಥೋಲಿಕ್ ಸಭಾ ಮತ್ತು ಸ್ತ್ರೀ ಸಂಘಟನೆಯನ್ನು ಒಟ್ಟುಗೂಡಿಸಿ, ನಮ್ಮ ಪರಿಸರವನ್ನು ರಕ್ಷಿಸುವ […]
ಶಿರೂರು : ಪರಿಸರ ಕಾಳಜಿ ಅತೀ ಅಗತ್ಯ – ಜ್ಞಾನದಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾl ರವಿದಾಸ್ ಶೆಟ್ಟಿ ಕಿವಿಮಾತುಜ್ಞಾನದ ಶೈಕ್ಷಣಿಕ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತುಇಂದಿನ ಪ್ರಚಲಿತ ಕಾಲಘಟ್ಟದಲ್ಲಿ ಪರಿಸರ ಉಳಿದರೆ ಮನುಕುಲದ ಉಳಿವು, ಪ್ರಕೃತಿ ವಿನಾಶದತ್ತ ಸಾಗಿದರೆ ಮನುಕುಲದ ರಕ್ಷಣೆ ಅಸಾಧ್ಯ, ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಇದನ್ನು ನಮಗೆಲ್ಲ ನೆನಪಿಸುವ ದಿನವೇ ವಿಶ್ವ ಪರಿಸರ ದಿನ ಪರಿಸರ ಸಂರಕ್ಷಣೆಗೆ ನಾವು ಸ್ವಯಂ ಪ್ರೇರಿತರಾಗಿ ಗಿಡ ನೆಟ್ಟು ನೀರು ಹಾಕಿ ಅವುಗಳನ್ನು ಬೆಳೆಸಿ […]
ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ” ವಿಶ್ವ ಪರಿಸರ ದಿನಾಚರಣೆ ” ಯ ಅಂಗವಾಗಿ ವಿಶೇಷ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಕಂಡ್ಲೂರಿನ ಪರಿಸರ ತಜ್ಞರು ಹಾಗೂ ಗೋವು ಪ್ರೇಮಿಯಾದ ಶ್ರೀ ವಾಸುದೇವ ಕಾಮತ್ ಆಗಮಿಸಿ ಶಾಲಾವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಸಸ್ಯಗಳು ಹಾಗೂ ಜೀವ ಸಂಕುಲಗಳ ಮಹತ್ವವನ್ನು ಕಥೆಯ ಮೂಲಕ ವಿವರಿಸಿ ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಿದರು. ವರ್ಷಕ್ಕೆ […]
ಗಂಗೊಳ್ಳಿ ; ದಿನಾಂಕ 05.06. 2026ರಂದು, ವಿಶ್ವ ಪರಿಸರ ದಿನ ಆಚರಿಸಲಾಯಿತು. ಪೂರ್ವಾಹ್ನ ಅಸೆಂಬ್ಲಿಯಲ್ಲಿ ಪರಿಸರಕ್ಕಾಗಿ ಪ್ರಾರ್ಥನೆ, ಪರಿಸರ ಘೋಷ ವಾಕ್ಯಗಳು, ಪರಿಸರ ಕವನ ಹಾಗೂ ಪರಿಸರ ಗೀತೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಸಿರು ಉಟ್ಟು ಶಾಲಾ ಆವರಣದಲ್ಲಿ ದಾಳಿಂಬೆ ಹಣ್ಣಿನ ಗಿಡ ನೆಡುವುದರ ಮೂಲಕ ಪರಿಸರ ದಿನವನ್ನು ಸಂಭ್ರಮಿಸಿದರು.
ಮಂಗಳೂರು ಧರ್ಮ ಕ್ಷೇತ್ರ ದ ಎಲ್ಲಾ ದೇವಾಲಯ ದಲ್ಲಿ ಕ್ರೈಸ್ತ ಧಾರ್ಮಿಕ ಶಿಕ್ಷಣ 2026-27 ವರ್ಷ ದ ಉದ್ಘಾಟನೆ ಯನ್ನು ರೋಸಾರಿಯೋ ಕ್ಯಾಥಾ ಡ್ರಾಲ್ ನಲ್ಲಿ ಮಂಗಳೂರು ಧರ್ಮ ಕ್ಷೇತ್ರ ದ ಧರ್ಮದ್ಯಕ್ಷರಾದ ಅತೀ ವಂದನೀಯ ಡಾ ಪೀಟರ್ ಪೌಲ್ ಸಲ್ದಾನ್ಹ ಪ್ರಾಥನೆ ವಿಧಿ ಯೊಂದಿಗೆ ನಡೆಸಿ ದರು ಈ ಸಂದರ್ಭದಲ್ಲಿ ವಂದನೀಯ ಧರ್ಮ ಗುರು ವಲೇರಿಯನ್ ಡಿಸೋಜಾ, ವಂದನೀಯ ಧರ್ಮ ಗುರು ವಲೇರಿಯನ್ ಫೆರ್ನಾಂಡಿಸ್,ವಂದನೀಯ ಧರ್ಮ ಗುರು ಪ್ರದೀಪ್, ವಂದನೀಯ ಧರ್ಮ ಗುರು ಐವನ್ ಡಿಸೋಜಾ […]
Welcome and Farewell Ceremony at Infant Mary Church, Bajjodi ಮಂಗಳೂರು; ಜೂನ್ 5 ರಂದು ಶುಕ್ರವಾರ, ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ನಲ್ಲಿ, ಪ್ಯಾರಿಷನರ್ಗಳು ಹೊಸ ಪ್ಯಾರಿಷ್ ಫಾದರ್ ಪ್ರಕಾಶ್ ಡಿ’ಕುನ್ಹಾ, ಒಸಿಡಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ನಿರ್ಗಮಿತ ಪ್ಯಾರಿಷ್ ಫಾದರ್ ಡೊಮಿನಿಕ್ ವಾಸ್ ಒಸಿಡಿ ಅವರನ್ನು ಬೀಳ್ಕೊಟ್ಟರು. ಒಂದು ಸಣ್ಣ ಸಮಾರಂಭದಲ್ಲಿ, ಫಾದರ್ ಪ್ರಕಾಶ್ ಡಿ’ಕುನ್ಹಾ ಅವರನ್ನು ಚರ್ಚ್ನ ಪ್ರವೇಶದ್ವಾರದಲ್ಲಿ ಫಾದರ್ ಡೊಮಿನಿಕ್ ವಾಸ್ ಮತ್ತು ಪಿಪಿಸಿ ಸದಸ್ಯರು ಸ್ವಾಗತಿಸಿದರು. ನಂತರ ಬಿಷಪ್ […]

