ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಸರೋಜ ಎಮ್ ಅವರು ಆಯ್ಕೆಗೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ ಆಡಳಿತ ಮಂಡಳಿ ಭೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ತಿಳಿಸಿದ್ದಾರೆ.ಡಾ. ಸರೋಜ ಎಮ್ ಅವರು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 20 ವರ್ಷಗಳಿಂದ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಮತ್ತು ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮಂಗಳೂರು; ಕೊಂಕಣಿ ಲೇಖಕ, ಕವಿ ಹಾಗೂ ಪತ್ರಕರ್ತ ಶ್ರೀ ಆವಿಲ್ ರಸ್ಕೀನ್ಹಾ ಅವರ ಪ್ರಪ್ರಥಮ ಕನ್ನಡ ಕವನ ಸಂಕಲನ ‘ಬಣ್ಣಗಳ ಚಿತ್ತಾರ ‘ ಪುಸ್ತಕದ ಲೊಕಾರ್ಪಣೆ ಸಮಾರಂಭ ಮೇ 31 ರಂದು ಸಂಜೆ 4.30ಕ್ಕೆ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಪುಸ್ತಕ ಲೊಕಾರ್ಪಣೆಗೊಳಿಸಿದ ಕರ್ನಾಟಕ ರಾಜ್ಯೋತ್ಸವ ಕನ್ನಡ ಸಾಹಿತ್ಯ ಪ್ರಶಸ್ತಿ ವಿಜೇತ ವಂ| ಪ್ರಶಾಂತ್ ಮಾಡ್ತ ಅವರು “ಕವಿತೆಗಳನ್ನು ರಚಿಸುವ ವಿಧಾನ ಇಂದು ಬದಲಾಗಿದೆ. ದಶಕಗಳ ಹಿಂದೆ ಪ್ರಾಸ ಮತ್ತು ಅಲಂಕಾರಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. […]
ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಬದುಕಿನಲ್ಲಿ ಜ್ಞಾನದ ಬೆಳಕು ಹರಡಿದ ಕುಂದಾಪುರದಲ್ಲಿನ ಶಿಕ್ಷಕಿ ಜೂಲಿಯಾನ ಡಯಾಸ್ ಅವರು ಮೇ 31 ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದಾರೆ. ತಮ್ಮ ಬೋಧನಾ ಬದುಕಿನ ಆರಂಭವನ್ನುಕುಂದಾಪುರ ಸಂತ ಮೇರಿಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿದರು. ನಂತರ ಸರಕಾರಿ ಶಾಲೆಗೆ ಆಯ್ಕೆಯಾಗಿ ಕೆರಾಡಿಯ ಅಯ್ಯಂಗಾರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಎರಡುವರೆ ವರ್ಷಗಳ ಸೇವೆಯೊಂದಿಗೆ ಆರಂಭಿಸಿದರು ಬಳಿಕ ಜಡ್ಕಲಿನ ಸರಕಾರಿ ಶಾಲೆಯಲ್ಲಿ […]
ಮಂಗಳೂರು; ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ, ಜೆಪ್ಪು ಇಲ್ಲಿ ದಿನಾಂಕ 03-06-2026, ಬುಧವಾರದಂದು ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕ ಹುದ್ದೆಗಳಿಗೆ ಚುನಾವಣೆ ನಡೆಯಿತು.6, 7, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಮತವನ್ನು ಚಲಾಯಿಸಿ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದರು. ಈ ಚುನಾವಣೆಯಲ್ಲಿ 10ನೇ ತರಗತಿಯ ಮೆಕ್ಟಿನ್ ಪ್ರೇಮ್ ಸಿಕ್ವೇರಾ ಅವರು 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದು, 9ನೇ ತರಗತಿಯ ಭುವನ್ ಅವರು ಶಾಲಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.ನೂತನವಾಗಿ ಆಯ್ಕೆಯಾದ […]
Milagres College of Nursing; World No Tobacco Day Observation 2026 ಮಂಗಳೂರು; ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್, ಮಿಲಾಗ್ರೆಸ್ ಚರ್ಚ್ ಯುವಕ ಸಂಘಗಳಾದ (ICYM & YCS) ಸಹಯೋಗದೊಂದಿಗೆ, 2026ರ ಮೇ 31ರಂದು “ತಂಬಾಕು ಮತ್ತು ನಿಕೋಟಿನ್ ವ್ಯಸನದ ಆಕರ್ಷಣೆಯನ್ನು ಬಯಲಿಗೆಳೆಯೋಣ” ಎಂಬ ಧ್ಯೇಯವಾಕ್ಯದಡಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸಿತುಕಾರ್ಯಕ್ರಮವು ಜಾಗೃತಿ ರ್ಯಾಲಿಯೊಂದಿಗೆ ಆರಂಭಗೊಂಡಿತು. ಈ ರ್ಯಾಲಿಗೆ ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್ನ ಕರಸ್ಪಾಂಡೆಂಟ್ ರೆವ. ಫಾ. ಐವನ್ ಮೈಕಲ್ ರೋಡ್ರಿಗಸ್ ಅವರು […]
ಕುಂದಾಪುರ; ದಿನಾಂಕ 26 5 2026 ರಂದು ತ್ರಾಸಿಯ ನೈನ್ ಪ್ಲಾನೆಟ್ ರೆಸಾರ್ಟ್ ನಲ್ಲಿ 1987 88ನೇ ಸಾಲಿನ ಆರ್ ಎನ್ ಶೆಟ್ಟಿ ಸಿಪಿಎಡ್ ಕಾಲೇಜ್ ಕೊಕ್ಕರ್ಣೆ ಇಲ್ಲಿ ದೈಹಿಕ ಶಿಕ್ಷಣ ತರಬೇತಿ ಪಡೆದವರ “ಸವಿಸ್ಮಯ” ಎಂಬ ಶೀರ್ಷಿಕೆ ಅಡಿಯಲ್ಲಿ ಸಮಾಗಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ದಿನಕರ ಆರ್ ಶೆಟ್ಟಿ ನಿವೃತ್ತ ಮುಖ್ಯೋಪಾಧ್ಯಾಯರು ನಿವೇದಿತ ಹೈ ಸ್ಕೂಲ್, ಬಸ್ರೂರು, ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಘದ ಅಧ್ಯಕ್ಷರಾದ […]
ಹಳ್ನಾಡು; ತುಳಸಿ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ .ಹಳ್ನಾಡಿನ ತುಳಸಿ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವನ್ನು ವಿಶೇಷವಾಗಿ ಆಚರಿಸಲಾಯಿತು. ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯರು ಹಾಗೂ ಶಿಕ್ಷಕ ವೃಂದದವರು ಆರತಿಯನ್ನು ಬೆಳಗಿ,ತಿಲಕವನ್ನಿಟ್ಟು ,ಹೂವನ್ನು ಸಿಂಪಡಿಸಿ,ಪ್ರತಿಯೊಂದು ಮಗುವಿಗೂ ಉಡುಗೊರೆಯೊಂದಿಗೆ ಸಿಹಿತಿನಿಸನ್ನು ನೀಡಿ ಸ್ವಾಗತಿಸಿದರು.ಶಾಲೆಗೆ ಆಗಮಿಸಿದ ನೂತನ ವಿದ್ಯಾರ್ಥಿಗಳು ‘ತಾಯಿ ಸರಸ್ವತಿ ಹಾಗೂ ಶಾರದಾ ಮಾತೆಗೆ’ ಸಾಮೂಹಿಕವಾಗಿ ಆರತಿಯನ್ನು ಬೆಳಗಿ, ವಿದ್ಯಾಸರಸ್ವತಿಯ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ಮೊದಲ ದಿನವನ್ನು ಬರಮಾಡಿಕೊಂಡರು.ತದನಂತರ […]
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಎಕ್ಸಪ್ರೆಸ್ ಹಾಗೂ ಸರ್ವಿಸ್ ಬಸ್ಸುಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಕೆನರಾ ಬಸ್ಸು ಮಾಲಕರ ಸಂಘದಿಂದ ನೀಡುವ 2026-27ನೇ ಸಾಲಿನ 50%ರಿಯಾಯಿತಿ ವಿಧ್ಯಾರ್ಥಿ ಪಾಸುಗಳ ಅರ್ಜಿ ವಿತರಣೆ ಪ್ರಾರಂಭಗೊಂಡಿದೆ. ಸಂಘದ ಕಛೇರಿಗಳಾದ ಮಂಗಳೂರು, ಪಡುಬಿದ್ರೆ, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ,ಕಿನ್ನಿಗೋಳಿ, ಹಿರಿಯಡಕ, ಹೆಬ್ರಿ,ಬೈಂದೂರು, ಕೇಂದ್ರದಲ್ಲಿ ಅರ್ಜಿಯನ್ನು ಪಡೆದು ಸೂಕ್ತ ದಾಖಲೆಗಳನ್ನು ನೀಡಿ ವಿದ್ಯಾರ್ಥಿ ಪಾಸುಗಳನ್ನು ಪಡೆದುಕೊಳ್ಳಲು ವಿನಂತಿ. ಕೆನರಾ ಬಸ್ಸು ಮಾಲಕರ ಸಂಘ (ರಿ)ಪ್ರಧಾನ ಕಛೇರಿ ವಿಳಾಸ:-ಕೆನರಾ ಬಸ್ಸು […]
Barkur Grand Reopening of National Educational Institutions Marked with Festive Fervour. ಬಾರ್ಕೂರು; ಬೇಸಿಗೆ ರಜೆಯ ನಂತರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಪುನರಾರಂಭವನ್ನು ಅತ್ಯಂತ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಯಿತು, ಇದು ಕ್ಯಾಂಪಸ್ಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ರಾಷ್ಟ್ರೀಯ ಪ್ರೌಢಶಾಲೆ, ಎಸ್ವಿವಿಎನ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ಹೇರಾಡಿಯ ರುಕ್ಮಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಉನ್ನತ ಪ್ರಾಥಮಿಕ ಶಾಲೆ ಮತ್ತು ಹನೇಹಳ್ಳಿ ರಾಷ್ಟ್ರೀಯ ಉನ್ನತ ಪ್ರಾಥಮಿಕ ಶಾಲೆಯ ಶಾಲಾ ಆವರಣವನ್ನು ವರ್ಣರಂಜಿತ ಬಲೂನ್ಗಳು, ರೋಮಾಂಚಕ ಅಲಂಕಾರಗಳು […]

