ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಐ.ಸಿ.ವೈ.ಎಮ್. ಹೊಸ್ಪೆಟ್ ಘಟಕ ಇವರ ಸಹಯೋಗದಲ್ಲಿ ಮೂಡುಬಿದರೆಯ ಹೊಸ್ಪೆಟ್ ಚರ್ಚ್ನ ಸಭಾಂಗಣದಲ್ಲಿ 20.07.2025ರಂದು ಭಾನುವಾರ ಬೆಳಿಗ್ಗೆ 10.00ಯಿಂದ ಸಂಜೆ 5.00ಗಂಟೆ ತನಕ ಕೊಂಕಣಿ ಸಾಹಿತ್ಯ ಕಾರ್ಯಗಾರವನ್ನು ಹಮ್ಮಿಕೊಂಡಿದೆ. ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರು ಕವನ ಬರೆಯುವ ಕುರಿತು ತರಬೇತಿ ನೀಡಲಿರುವರು. ಕೊಂಕಣಿ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಡಾ| ಜೊಯರ್ ರುಡೋಲ್ಪ್ ನೊರೊನ್ಹಾ ಹಾಗೂ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಶ್ರೀ ರೊನಿ ಕ್ರಾಸ್ತಾ, ಕೆಲರಾಯ್ ಇವರು ಉಪನ್ಯಾಸವನ್ನು […]
CCT Scholarship Awards – 2025 The CASK Centenary Trust will be distributing Scholarships ಮಂಗಳೂರು; ಸಿಎಎಸ್’ಕೆ ಸೆಂಟಿನರಿ ಟ್ರಸ್ಟ್ ವತಿಯಿಂದ ರೂ. 30 ಲಕ್ಷಕ್ಕೂ ಮಿಕ್ಕ ಮೌಲ್ಯದ ವಿದ್ಯಾರ್ಥಿವೇತನವನ್ನು 307 ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಈ ಸಮಾರಂಭ ಜುಲೈ 19, ಶನಿವಾರ ದಂದು ಸೆಂಟ್ ಆಗ್ನೆಸ್ ಕಾಲೇಜಿನ ಸೆಂಟಿನರಿ ಕಟ್ಟಡದಲ್ಲಿ ನಡೆಯಲಿದೆ.ಈ ವಿದ್ಯಾರ್ಥಿವೇತನಗಳನ್ನು ಟ್ರಸ್ಟ್ 2014 ರಿಂದ ನಿರಂತರವಾಗಿ ನೀಡುತ್ತಿದ್ದು, ಧರ್ಮ, ಭಾಷೆ, ಅಂಕಗಳು ಅಥವಾ ಪ್ರತಿಭೆಗೆ ಯಾವುದೇ ಮಹತ್ವ ನೀಡದೆ, ಕೇವಲ […]
ಕುಂದಾಪುರ :ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ವಡೇರ ಹೋಬಳಿಯ ಫಣಿರಾಜ ನಾವುಡ ತೇರ್ಗಡೆ ಆಗಿರುತ್ತಾರೆ. ಅವರು ಬೆಂಗಳೂರಿನA. R. T. S.& Co ಸಂಸ್ಥೆಯಲ್ಲಿಆರ್ಟಿಕಲ್ ಶಿಪ್ ವಿದ್ಯಾರ್ಥಿಯಾಗಿದ್ದರು. ವಡೇರ ಹೋಬಳಿಯ ಉದಯಶಂಕರ ನಾವುಡ ಹಾಗೂ ಮಾಲತಿ ( ಉಷಾ ) ಇವರ ಪುತ್ರರಾಗಿದ್ದು, ಕುಂದಾಪುರದ ಬೋರ್ಡ್ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿರುತ್ತಾರೆ.
ಗಂಗೊಳ್ಳಿ, ಜು.೧೭; ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ರಾಮಚಂದ್ರ ಶೇರುಗಾರ್ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ಒಂದು ವಾರದ ಹಿಂದೆ ಅನಾರೋಗ್ಯದ ಸಮಸ್ಯೆ ಇದ್ದ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.ಗುರುವಾರ ಮಧ್ಯಾಹ್ನ 11ಗಂಟೆಯ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಮಚಂದ್ರ ಶೇರುಗಾರ್ ಕಳೆದ 25 ವರ್ಷಗಳಿಂದ ಪೊಲೀಸ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದು ಇನ್ನು ಒಂದು ವಾರದಲ್ಲಿ ಪ್ರಮೋಷನ್ ಆಗಿ ಎಎಸ್ ಐ ಆಗುವ ಹಂತದಲ್ಲಿ ಇದ್ದಿದ್ದರು ಎಂದು ತಿಳಿದುಬಂದಿದೆ. ರಾಮಚಂದ್ರ […]
ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯ ಅರಿವನ್ನು ಪಡೆದುಕೊಂಡರು .ಹಳ್ನಾಡಿನ ಸಮೀಪದ ,ಮೊಗವೀರ ಸಂಘಟನೆಯ ಅಧ್ಯಕ್ಷರು, ಕೃಷಿಕರಾದ ಶ್ರೀ ನಾಗೇಶ್ ಮೊಗವೀರ ಇವರ ಗದ್ದೆಯಲ್ಲಿ ಶನಿವಾರ ನಡೆದ ಪ್ರಾತ್ಯಕ್ಷಿಕೆಯಲ್ಲಿ 6, 7 ಮತ್ತು 8ನೇ ತರಗತಿ ಮಕ್ಕಳು ಭಾಗವಹಿಸಿ ಕೃಷಿ ಜ್ಞಾನ, ಪ್ರಸ್ತುತ ಕೃಷಿ ಭೂಮಿಯಲ್ಲಿ ರೈತರ ಸಮಸ್ಯೆ , ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳು ಮುಂತಾದ ಮಾಹಿತಿಗಳನ್ನು ತಿಳಿದುಕೊಂಡರು.ಶಾಲಾ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್ ಮುಂಚೂಣಿಯಲ್ಲಿ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಒಂದು ತಿಂಗಳ ಕಾಲ ನಡೆದ ಗೋ ಗ್ರೀನ್ -ಪ್ರಕೃತಿ ಅಭಿಯಾನದ ಸಮಾರೋಪ ಸಮಾರಂಭ ಜುಲೈ 16 ರಂದು ನಡೆಯಿತು. ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಆಯೋಜಿಸಲಾದ ‘ಗೋ ಗ್ರೀನ್ ‘ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು6ರಿಂದ 12 ನೇ ತರಗತಿಯ ಮಕ್ಕಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಪರಿಸರ ತಜ್ಞ, ಹಲವು ಪ್ರಶಸ್ತಿಗಳಿಗೆ ಭಾಜನರಾದ, ಮಂಗಳೂರು ಆರ್ಥಿಕ ವಲಯದ (ಗ್ರೀನ್ ಬೆಲ್ಟ್) […]
ಕುಂದಾಪುರ, ಜು.16: ಕುಂದಾಪುರ ಸಂತ ಜೋಸೆಫ್ ಕಾನ್ವೆಂಟ್ ಪ್ರಾರ್ಥನ ಮಂದಿರದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 16 ರಂದು ಆಚರಿಸಿದರು. ಹಬ್ಬದ ಬಲಿದಾನವನ್ನು ಕಟ್ಕರೆ ಬಾಲ ಯೇಸುವಿನ ಆಶ್ರಮದ ವಂ| ಫಾ| ಜೋಸೆಫ್ ಸಿರಿಲ್ ಡಿಸೋಜಾ ಇವರ ನೇತ್ರತ್ವದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಅವರು “ಕಶ್ಟದ ವೇಳೆಯಲ್ಲಿ ನಮಗೆ ಯೇಸು ಸ್ವಾಮಿ ಮೇರಿಮಾತೆಯನ್ನು ನಮಗೆ ತಾಯಾಗಿ ಕರುಣಿಸಿದ್ದಾರೆ. ಮೇರಿ ಮಾತೆ ಪಾಪರಹಿತಳು, ಅವಳು ದೇವರ ಕ್ರಪಾ ಭರಿತಳು, ಸ್ವರ್ಗದಲ್ಲಿರುವ ತಾಯಿ, ಅವಳು ನಮ್ಮ ಬೇಡಿಕೆಯನ್ನು […]
ಕುಂದಾಪುರ, ಜು.16; ನಮ್ಮ ಸಂಸ್ಥೆಯಾದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಇಲ್ಲಿ ಸರಿ ಸುಮಾರು 13 ವರ್ಷಗಳ ಕಾಲ (2000 ರಿಂದ 2013ರವರೆಗೆ) ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶ್ರೀಮತಿ ಕೊನಿ ರೆಬೆಲ್ಲೋ ಅವರು ದಿನಾಂಕ 16.07.2025ರಂದು ನಿಧನ (74 ವರ್ಷ) ಹೊಂದಿದ್ದು, ಅವರ ನಿಧನದ ಸುದ್ದಿ ನಮ್ಮೆಲ್ಲರಿಗೂ ತುಂಬಾ ದುಃಖ ತಂದಿದೆ. ಅವರು ಅಪಾರ ಬದ್ಧತೆ ಮತ್ತು ಶ್ರದ್ಧೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಿಷ್ಠಾವಂತ ಶಿಕ್ಷಕಿ ಹಾಗೂ ಕರುಣಾಮಯಿ […]
ಗಂಗೊಳ್ಳಿ, ಜು.15; ಇಂದು ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿಯಲ್ಲಿ ನಾಲ್ಕು ಜನರು ಮೀನುಗಾರರು ಹೊರಟಿದ್ದು, ಅಲೆಯ ರಭಸಕ್ಕೆ ಸಿಲುಕಿ ದೋಣಿ ಮಗುಚಿದ್ದು, ಒಬ್ಬ ಮೀನುಗಾರ ಈಜಿ ಬೇರೆ ದೋಣಿ ತಲುಪಿದ್ದು ಇನ್ನೂ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ. ಗಂಗೊಳ್ಳಿ ಸೀವಾಕ್ ಬಳಿ ಈ ದುರ್ಘಟನೆ ನಡೆದಿದ್ದು, ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ರೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತ ಸಂತೋಷ್ ಖಾರ್ವಿ ಎನ್ನುವವರನ್ನು ಬೇರೊಂದು ಬೋಟ್ ನವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.ಸಿಪಾಯಿ ಸುರೇಶ […]

