ಉಡುಪಿ ; ತಾರೀಕು-11-6-2025 ರಂದು “ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ” ಉಡುಪಿ ಜಿಲ್ಲೆ ಇದರ ಪದಾಧಿಕಾರಿಗಳ ಚುನಾವಣೆಯು, ಉಡುಪಿ ” ಶೋಕಮಾತೆ” ಇಗರ್ಜಿಯ “ಆವೆ ಮಾರಿಯಾ” ಸಭಾಂಗಣದಲ್ಲಿ ನೆರವೇರಿತು. ಸಂಪದ ಸಂಸ್ಥೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಆಧ್ಯಾತ್ಮಿಕ ನಿರ್ದೇಶಕರಾದ ಧರ್ಮಗುರು ವಂ। ರೆಜಿನಾಲ್ಡ್ ಪಿಂಟೊ ಇವರು ಚುನಾವಣಾ ಅಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟರು. 2025-2027 ವರ್ಷದ ಅವಧಿಗೆ “ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ” ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷೆಯಾಗಿ ಸಿಲ್ವಿಯಾ ಸುವಾರಿಸ್ ಉಡುಪಿ ಇವರು ನೇಮಕಗೊಂಡರು. […]
ಕರ್ನಾಟಕ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದಡಿ, ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಉದಾರವಾದ ಕೊಡುಗೆ ನೀಡಿ, ಮಾನವ ಘನತೆ, ಚೇತರಿಕೆ ಮತ್ತು ದುರ್ಬಲರಿಗೆ ಕಾಳಜಿಯ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ತೊರೆಯಲ್ಪಟ್ಟವರಿಗೆ ಮತ್ತು ಮಾನಸಿಕವಾಗಿ ಅಸ್ವಸ್ಥರಿಗೆ ಆಶ್ರಯವಾಗಿರುವ ಸ್ನೇಹಾಲಯಕ್ಕೆ, ಕರ್ನಾಟಕ ಬ್ಯಾಂಕ್ 50 ಬೆಚ್ಚಗಿನ ಕೋಟ್ಗಳು, ಹಾಸಿಗೆಗಳು, ದಿಂಬುಗಳು ಮತ್ತು 700ಕ್ಕೂ ಅಧಿಕ ಹಾಸಿಗೆ ಹೊದಿಕೆಗಳು ಹಾಗೂ ದಿಂಬು ಕವರ್ಗಳನ್ನು ದಾನವಾಗಿ ನೀಡಿತು. ₹10.57 ಲಕ್ಷ ಮೌಲ್ಯದ ಈ ಅಮೂಲ್ಯ ಕೊಡುಗೆ, ನಿವಾಸಿಗಳಿಗೆ […]
ಕೋಟ; ಯೇಸು ಕ್ರಿಸ್ತರ 2025 ರ ಜ್ಯುಬಿಲಿ ವರ್ಷಕ್ಕೆ ನಾನ ತರಹದ ಯೋಜನೆ ಮತ್ತು ಮಹೋತ್ಸ್ವಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಂಡಿದೆ, ಅದೇ ರೀತಿ ಉಡುಪಿ ಧರ್ಮಪ್ರಾಂತ್ಯ ಕೂಡ ಹಮ್ಮಿಕೊಂಡಿದೆ, ಅದರಲ್ಲಿ ಪ್ರತಿಯೊಂದು ಧರ್ಮಕೇಂದ್ರದಲ್ಲಿ ಅಗತ್ಯ ಅಗತ್ಯಯುಳ್ಳವರಿಗಾಗಿ ಒಂದೊಂದು ಮನೆ ನಿರ್ಮಾಣ ಮಾಡಿ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದು. ಇದೀಗ ಉಡುಪಿ ಧರ್ಮಪ್ರಾಂತ್ಯದ, ಕುಂದಾಪುರ ವಲಯದ ಕೋಟ ಸಂತ ಜೋಸೆಫ್ ಧರ್ಮಕೇಂದ್ರದಿಂದ ಸಂತ ವಿನ್ಸೆಂಟ್ ಪಾವ್ಲ್ ಸಮಿತಿಯ ಮುಂದಾಳತ್ವದಲ್ಲಿ ಕೋಟ ಧರ್ಮಕೇಂದ್ರದ ಜನತೆಯ ಸಹಕಾರದಿಂದ, ಸಂಘ ಸಂಸ್ಥೆಗಳ ಸಹಕಾರದಿಂದ ಅನುಷ್ಟನಗೊಂಡು […]
ಬ್ರಹ್ಮಾವರ,ಜೂ.12; ‘ಸಾಮಾಜಿಕ ಜವಾಬ್ದಾರಿಯ ಶ್ಲಾಘನೀಯ ಸೂಚಕವಾಗಿ, ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ 12.06.2025 ರಂದು ನಡೆದ ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್, ಲಿ. ಇವರಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕಗಳನ್ನು ವಿತರಿಸಿತು. ಈ ಉಪಕ್ರಮವು ಸಮುದಾಯ ಕಲ್ಯಾಣ ಮತ್ತು ಶೈಕ್ಷಣಿಕ ಬೆಂಬಲಕ್ಕೆ ಬ್ಯಾಂಕಿನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಶಾಲೆಯಲ್ಲಿ ಸಮರ್ಪಿತ ಶಿಕ್ಷಕಿ ಟೀನಾ ಲಸ್ರಾದೊ ಅವರ ಆತ್ಮೀಯ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ, ಬ್ಯಾಂಕ್ ನಿರ್ದೇಶಕರಾದ ಎಲ್ರಾಯ್ ಕಿರಣ್ ಕ್ರಾಸ್ಟೊ, ಡಾ. […]
ಕುಂದಾಪುರ; ಜೂ.11; “ಭಾವನಾ ಮಹಿಳಾ ಒಕ್ಕೂಟ” ಕುಂದಾಪುರ ಬೈಂದೂರು ತಾಲೂಕು, ಇದರ ಪದಾಧಿಕಾರಿಗಳ ಚುನಾವಣೆಯು,28-5-2025 ರಂದು ಕುಂದಾಪುರ ಸೈಂಟ್ ಮೆರೀಸ್ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. “ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ” ಉಡುಪಿ ಜಿಲ್ಲೆ ಇದರ ಅಧ್ಯಕ್ಷೆಯಾದಾ ಗ್ರೇಸಿ ಕುವೆಲ್ಲೊ ಹಾಗೂ ಕಾರ್ಯದರ್ಶಿ, ಪ್ಲಾವಿಯ ಡಿಸೋಜ, ಉಪಾಧ್ಯಕ್ಷೆ ಅನ್ಸಿಲ ಲೂವಿಸ್ ಇವರು ಹಾಜರಿದ್ದು ಚುನಾವಣೆಯನ್ನು ನಡೆಸಿಕೊಟರು. 2025-2027 ರ ವರ್ಷದ ಅವಧಿಗೆ “ಭಾವನಾ ಮಹಿಳಾ ಒಕ್ಕೂಟ” ಇದರ ನೂತನ ಅಧ್ಯಕ್ಷರಾಗಿ ಶರ್ಮಿಳಾ ಬರೆಟ್ಟೊ,ಬಸ್ರೂರು ಇವರು ಆಯ್ಕೆಯಾಗಿದ್ದಾರೆ. ಇವರ ಜೊತೆ […]
ಮಂಗಳೂರು ; ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಶತಮಾನದಷ್ಟು ಹಳೆಯದಾದ ಕಬ್ಬಿಣದ ಸೇತುವೆಯ ಮೇಲೆ ಸುರಕ್ಷತಾ ಕಾರಣಗಳಿಗಾಗಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ.ಈ ಆದೇಶವು ಬಂಟ್ವಾಳ ಪಟ್ಟಣ ಪುರಸಭೆಯ ಮುಖ್ಯ ಅಧಿಕಾರಿಗೆ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನಿರ್ದೇಶಿಸುತ್ತದೆ. ಈ ಶಿಥಿಲಾವಸ್ಥೆಯಲ್ಲಿರುವ ಹಳೆ ಸೇತುವೆಯಲ್ಲಿ ಕೆಲವೆಡೆ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ಭಾರಿ ವಾಹನ ಸಂಚಾರ ಸ್ಥಗಿತಗೊಳಿಸಿ ಕೆಲ ವರ್ಷಗಳ ಹಿಂದೆಯೇ ಕಬ್ಬಿಣದ ಕಮಾನು ಅಳವಡಿಸಲಾಗಿತ್ತು. ಮಂಗಳವಾರ ಪಿಕಪ್ […]
” ವಾತಾವರಣದ ಅನುಕೂಲ ಮತ್ತು ಪ್ರತಿಕೂಲ ಬದಲಾವಣೆಗಳನ್ನು ತಿಳಿದುಕೊಂಡು ವಿಶೇಷ ತಳಿಯ ಹಣ್ಣುಗಳನ್ನು ಬೆಳೆಸಬೇಕಾಗುತ್ತದೆ. ವಾಣಿಜ್ಯ ಬೆಳೆಯ ಹಣ್ಣುಗಳನ್ನು ಬೆಳೆಯಲು ತೋಟಗಾರಿಕೆಯ ಪ್ರಾಥಮಿಕ ಜ್ಞಾನ ಇರಲೇ ಬೇಕಾಗುತ್ತದೆ ” ಎಂದುವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಬಸ್ರೂರಿನ ‘ವರದೇಂದ್ರ ಫಲೋದ್ಯಾನ’ ದ ಭೇಟಿಯ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾದ ದಿವ್ಯಾ ನಾಯಕ್ ತೆಕ್ಕಟ್ಟೆ ಇವರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಪರಿಸರ ನಾಶವನ್ನು […]
ಕುಂದಾಪುರ,ಜೂ.12: ಎಮ್.ಸಿ.ಸಿ.ಬ್ಯಾಂಕ್ ಲಿ. ಸಂತ ಅಂತೋನಿ ಹಿ. ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆಗಳ ವಿತರಣೆ ಜೂ. 11 ರಂದು ವಿತರಣೆ ಮಾಡಲಾಯಿತು. ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ”ನಮ್ಮ ಸಂಸ್ಥೆ ಬೆಳೆಯಬೇಕಾದರೆ, ಕಥೊಲಿಕ್ ಶಿಕ್ಷಣ ಸಂಸ್ಥೆಗಳ ಯೋಗದಾನ ಬಹಳಷ್ಟಿದೆ, ನೀವು ಇವತ್ತು ಬ್ಯಾಗ್ ಮತ್ತು ಕೋಡೆಗಳು ಪಡೆದಿದ್ದರಿಂದ ಇಂದು ನೀವು ಸಂತೋಷದಿಂದ ಇದ್ದಿರಿ, ಆದರೆ ನೀವು ಕಲಿಕೆಯ […]
ಕುಂದಾಪುರ,ಜೂ.12: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕೊಡೆಗಳನ್ನು ಜೂ. 11 ರಂದು ವಿತರಣೆ ಮಾಡಲಾಯಿತು. ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ”ನಮ್ಮ ಸಂಸ್ಥೆ ಬೆಳೆಯಬೇಕಾದರೆ, ಈ ಕಾರ್ಮೆಲ್ ಸಂಸ್ಥೆಯ ಯೋಗದಾನ ಬಹಳಷ್ಟಿದೆ, ಕಾನ್ವೆಂಟ್ ಶಾಲೆಗಳೆಂದರೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದ ಶಾಲೆಗಳು ಅದರಲ್ಲೂ ಕಾರ್ಮೆಲ್ ಶಿಕ್ಷಣ ಸಂಸ್ಥೆಗಳೆಂದರೆಂ ಬಹಳ ಪ್ರಸಿದ್ದಿ ಪಡೆದಿವೆ, […]

