ರಚನಾ ಪ್ರಶಸ್ತಿ 2023-2025 ಪ್ರಕಟಣೆ ಮಂಗಳೂರು;1998ರಲ್ಲಿ ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯು ತನ್ನ ಮೂಲ ಆಶಯವಾದ ಕಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದಿದೆ.ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಹಲವು ಯುವ ಜನರಿಗೆ ತರಬೇತಿಯನ್ನು ನೀಡಲಾಗಿದೆ.ಕ್ರೈಸ್ತ ಕಥೊಲಿಕ್ ಸಮಾಜದ ಯಶಸ್ವಿ […]
ಹಂಗಾರಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಅತ್ಯಂತ ಪ್ರತಿಭಾನ್ವಿತ ಮತ್ತು ಸಮರ್ಪಿತ ಶಿಕ್ಷಕಿ ಶ್ರೀಮತಿ ವೀಣಾ ಉದಯ ಶೆಟ್ಟಿ ಅವರನ್ನು ಉಡುಪಿ ಜಿಲ್ಲಾ ಮಟ್ಟದ ಪ್ರತಿಷ್ಠಿತ ‘ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ – 2025’ಕ್ಕೆ ಅರ್ಹವಾಗಿ ಆಯ್ಕೆ ಮಾಡಲಾಗಿದೆ ಎಂಬ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ನಾವು ಅಪಾರ ಹೆಮ್ಮೆಪಡುತ್ತೇವೆ. ವಿಜ್ಞಾನ ವಿಷಯ ತಜ್ಞರಾದ ಶ್ರೀಮತಿ ವೀಣಾ ಅವರು ತಮ್ಮ ವಿಶಿಷ್ಟ ಬೋಧನಾ ವಿಧಾನ, ಕುತೂಹಲವನ್ನು ಪೋಷಿಸುವ ಬದ್ಧತೆ ಮತ್ತು ಸಂಶೋಧನೆ ಮತ್ತು ವೈಜ್ಞಾನಿಕ ಪ್ರಯೋಗಗಳಲ್ಲಿ ಯುವ ಮನಸ್ಸುಗಳನ್ನು ಪ್ರೇರೇಪಿಸುವ ಉತ್ಸಾಹದಿಂದ ಪೀಳಿಗೆಯ […]
ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂ ನಲ್ಲಿ ಅಗಸ್ಟ್ 30 2025ರಂದು ರಂದು ನಡೆದ ನಾಲ್ಕನೇ ದಕ್ಷಿಣ ಭಾರತ ವಲಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕುಂದಾಪುರದ ಖಾರ್ವಿಕೇರಿ ನಿವಾಸಿ ಗುರುಕುಲ ಪಬ್ಲಿಕ್ ಸ್ಕೂಲ್ ಕೋಟೇಶ್ವರದ 8ನೇ ತರಗತಿಯ ವಿದ್ಯಾರ್ಥಿನಿ ಸಾನಿಧ್ಯ ಎಸ್ ನಾಯ್ಕ12ರ ವಯೋಮಾನದ ವಿಭಾಗದಲ್ಲಿ ಕುಮಿಟಿಯಲ್ಲಿ ಚಿನ್ನದ ಪದಕವನ್ನು ಮತ್ತುಕಟಾ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಸಾನಿಧ್ಯ ಕಳೆದ 4 ವರ್ಷಗಳಿಂದ ಕರಾಟೆಯನ್ನು ಕುಂದಾಪುರದ ಪ್ರಖ್ಯಾತ ಕಿರಣ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ರಿಜಿಸ್ಟರ್ಡ್ ಇಲ್ಲಿ […]
ಖ್ಯಾತ ಪತ್ರಕರ್ತೆ, ಜನಪರ ಹೋರಾಟಗಾರ್ತಿ ಹಾಗೂ ಪ್ರಗತಿಪರ ಬರಹಗಾರ್ತಿ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ಎಂಟು ವರ್ಷಗಳು ತುಂಬುತ್ತಿರುವ ಪ್ರಯುಕ್ತವಾಗಿ, ಈ ಬಾರಿ ಸೆಪ್ಟೆಂಬರ್ 05 ಶುಕ್ರವಾರ ಸಂಜೆ 6.00 ಗಂಟೆಗೆ, ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ “ಗೌರಿ ನೆನಪು” ಕಾರ್ಯಕ್ರಮವನ್ನು “ಸಹಬಾಳ್ವೆ ಕುಂದಾಪುರ” ಸಂಘಟನೆಯ ನೇತೃತ್ವದಲ್ಲಿ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಅವರನ್ನು ಆತ್ಮೀಯವಾಗಿ ನೆನೆಸಿಕೊಳ್ಳಲಾಗುವುದು. ಅವರ ಬರಹ, ಅವರ ಹೋರಾಟ ಹಾಗೂ ಅವರ ಜನಪರ ಸಂದೇಶವನ್ನು ಚರ್ಚಿಸುವ ವೇದಿಕೆಯಾಗಲಿದೆ. ಕಾರ್ಯಕ್ರಮದಲ್ಲಿ ಗೌರಿಯ […]
ಕೋಲಾರ : 2025-26ನೇ ಸಾಲಿನ ಕೋಲಾರ ಜಿಲ್ಲೆಯ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಶಿಕ್ಷಕರ ಕಾರ್ಯಪರಿಣಾಮ, ವಿದ್ಯಾರ್ಥಿಗಳಲ್ಲಿ ತಂದ ಬದಲಾವಣೆ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಜಿಲ್ಲಾ ಆಯ್ಕೆ ಸಮಿತಿಯು ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ.ಈ ಬಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಸರ್ಕಾರಿ ಉರ್ದು ಶಾಲೆಯ ಇಬ್ಬರು ಶಿಕ್ಷಕರು ಪ್ರಶಸ್ತಿ ಪಡೆದಿದ್ದಾರೆ. ಮುಳಬಾಗಿಲು ತಾಲ್ಲೂಕಿನ ಕುರುಬರಪೇಟೆ ಮೈನ್ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ […]
ಕಾರವಾರ : ನಗರದ ಹೆದ್ದಾರಿಯಲ್ಲಿರುವ ಸುರಂಗ ಮಾರ್ಗದಲ್ಲಿ ತಡರಾತ್ರಿ ಸಂಭವಿಸಿದ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಗೋವಾ ಕಡೆಯಿಂದ ಕಾರವಾರ ಮಾರ್ಗವಾಗಿ ಪುತ್ತೂರು ಕಡೆಗೆ ತೆರಳುತ್ತಿದ್ದ ಅಲ್ಟೋ ಕಾರ್ ಚಾಲಕ, ಎದುರಿಗೆ ಇದ್ದ ಇನ್ನೊಂದು ಕಾರನ್ನು ಓವರ್ ಟೆಕ್ ಮಾಡಲು ಪ್ರಯತ್ನಿಸಿದ್ದ. ಈ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕಾರು ಚಲಾಯಿಸುತ್ತಿದ್ದ ಪುತ್ತೂರು ಮೂಲದ ರಂಜಿತ್ ಕುಮಾರ್ ವಿಶ್ವನಾಥ ನಾಯ್ಕ (35) ಸ್ಥಳದಲ್ಲೇ ಮೃತಪಟ್ಟಿದ್ದಾನೆ. […]
ಕುಂದಾಪುರ; ಆಗಸ್ಟ್ 30, 2025 ರಂದು ಬೆಂಗಳೂರಿನಲ್ಲಿ ನಡೆದ 4 ನೇ ದಕ್ಷಿಣ ಭಾರತ ಕರಾಟೆ ಚಾಂಪಿಯನ್ಶಿಪ್ 2025 ರಲ್ಲಿ ಕಟಾ ಮತ್ತು ಕುಮಿಟೆಯಲ್ಲಿ ಕುಂದಾಪುರದ ಅರ್ನಾನ್ ಡಿ’ಆಲ್ಮೇಡಾ ಚಿನ್ನದ ಪದಕ ಗೆದ್ದಿದ್ದಾನೆ. ಅವನು ಸಬ್ ಜೂನಿಯರ್ 11 ವರ್ಷ -40 ಕೆಜಿ ವಿಭಾಗದಲ್ಲಿ ಸ್ಫರ್ಧಿಸಿ ಪದಕ ಪಡೆದಿದ್ದಾನೆ. ಇವನು ಕುಂದಾಪುರದ ವಿಲ್ಸನ್ ಮತ್ತು ಜ್ಯೋತಿ ಡಿಅಲ್ಮೇಡ ಅವರ ಪುತ್ರನಾಗಿದ್ದಾನೆ. ಎಚ್ಎಂಎಂ ಇಂಗ್ಲಿಷ್ ಮಾಧ್ಯಮ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ಪಡುಕೋಣೆ: ದಿನಾಂಕ 31.8.2025 ರಂದು ಪಡುಕೋಣೆ ಸಂತ ಅಂತೋನಿ ಚರ್ಚಿನ ಸೌಪರ್ಣಿಕ ಮಹಿಳಾ ಸಂಘದಿಂದ ಮಹಿಳೆಯರ ದಿನಾಚರಣೆ ಸೌಪರ್ಣಿಕ ನದಿಯ ದಂಡೆಯ ಮೇಲೆ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ವಂದನೀಯ ಫಾದರ್ ಪ್ರಾನ್ಸಿಸ್ ಕರ್ನೆಲಿಯೊರವರು ಚರ್ಚಿನ ಭಕ್ತಾಧಿಗಳ ಜೊತೆಗೂಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಹಾಗೂ ಮಾತೆ ಮರಿಯಮ್ಮನ ಜನುಮದಿನದ ವ್ಯಾಪ್ತಿಯಾಗಿ 2ನೇ ದಿನದ ಪ್ರಾರ್ಥನೆಯೊಂದಿಗೆ ಹೂಗಳ ಅರ್ಪಣೆಯನ್ನು ಮಾಡಲಾಯಿತು. ಬಳಿಕ ಚರ್ಚಿನ ಸಭಾಂಗಣದಲ್ಲಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ,ಸ್ವಾಗತ ನೃತ್ಯ, ವಿವಿಧ ವಿನೋದಾವಳಿಗಳಾದ ಇತರ ನೃತ್ಯಗಳು, ಹಾಡುಗಳು ಪ್ರದಶನ […]
Passed away – Mrs. Ivy D:Mello (66) Koteshwar W/O Mr. Maurice D’Mello M/O Monisha Passed away on 31st august Funeral Cortege The funeral rites of Lt. Ivy D’Mello, will be on Monday the 1st September at 3.30 pm from her residence Beach Road Koteshwar,followed by Holy Mass at 4.00pm at St Antony’s Church, Koteshwar.

