Snehalaya Charitable Trust Completes 16 Years of Service to mankind 2025ರ ಆಗಸ್ಟ್ 26ರಂದು, ಕೋಲ್ಕತ್ತಾದ ಸಂತ ಮದರ್ ತೆರೆಸಾ ಅವರ ಜನ್ಮದಿನದ ಸುದಿನದಂದೇ, ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಇವರ ಮಾನವಸೇವೆಯ ಹದಿನಾರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂತೋಷವನ್ನು ಭಾವಪೂರ್ಣವಾಗಿ ಹಾಗೂ ಅತ್ಯಂತ ಸಡಗರದಿಂದ ಆಚರಿಸಿತು. ಕಾರ್ಯಕ್ರಮವು ದಿವ್ಯ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಪ್ರಧಾನ ಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ವಂ. […]
ಮಾನವತೆ, ಪ್ರೀತಿ ಮತ್ತು ಸೇವೆಯ ಪ್ರತೀಕವಾಗಿದ್ದ ಮದರ್ ತೆರೆಸಾ ಅವರ ಆದರ್ಶ ಮತ್ತು ಜೀವನ ಮೌಲ್ಯಗಳನ್ನು ಇಟ್ಟುಕೊಂಡು ಸ್ಥಾಪಿತವಾದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯು ತಮ್ಮ ಸಂಸ್ಥೆಯ ಪೋಷಕಿಯಾಗಿರುವ ಮದರ್ ತೆರೆಸಾ ಅವರ ಜನ್ಮದಿನವನ್ನು ಪೋಷಕರ ದಿನ(PATRONESS’ DAY) ಎಂದು ಅಗಸ್ಟ್ 26 ರಂದು ಅದ್ಧೂರಿಯಾಗಿ ಆಚರಿಸಿತು. ಈ ಸಂಭ್ರಮದ ಕಾರ್ಯಕ್ರಮವನ್ನು ಅಗಸ್ಟ್ 20 ರಂದು ಮದರ್ ತೆರೆಸರ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ಚಾಲನೆ ನೀಡಲಾಯಿತು. ಅಗಸ್ಟ್ 20ರಿಂದ 26 ರರ ಸಪ್ತಾಹದಲ್ಲಿಎಲ್ಲ ವಿಭಾಗದ ವಿದ್ಯಾರ್ಥಿ ಗಳಿಗೆ […]
ಬರಹ ; ಈಶ್ವರ್ ಸಿ ನಾವುಂದ ಸಾರ್ವಜನಿಕ ಗಣೇಶೋತ್ಸವ ಭಜನೆ ಭಕ್ತಿಯೆಂಬುದು ಮನುಷ್ಯನ ಜೀವನದಲ್ಲಿ ದೇವರನ್ನು ಅತಿ ವೇಗವಾಗಿ ಒಲಿಸುವಂತ ಒಂದು ಅದ್ಭುತ ಶಕ್ತಿದೇವರ ಭಕ್ತಿ ಮತ್ತು ಭಜನೆ ಮನುಷ್ಯನಿಗೆ ಹತ್ತಿರವಾದ ಸಂಬಂಧ ಭಜನೆ ಹೊರತು ಬೇರೇನೂ ಅಲ್ಲ.ಗಣೇಶೋತ್ಸವ ದೇವರ ಭಜನೆ ಧಾರ್ಮಿಕ ಅನುಪಮ ಮನುಷ್ಯನಿಗೆ ಆನಂದ ನೆಮ್ಮದಿ ಶಾಂತಿ ಕೊಡುವ ಸುಲಭದಲ್ಲಿ ಪರಮಾನಂದ ನೀಡುವಂತದ್ದು. ಮನುಷ್ಯನಿಗೆ ಮಾನಸಿಕ ಶಾಂತಿಗಾಗಿ ದೇವರ ಭಕ್ತಿ ಆಧ್ಯಾತ್ಮ ಮತ್ತು ಭಜನೆಯಿಂದ ಮಾತ್ರ ಎಂದರೆ ತಪ್ಪಾಗಲಾರದು.ಹಿಂದೂ ಧಾರ್ಮಿಕತೆಯಲ್ಲಿ ಭಜನೆಗೆ ಮಾತು ಆದ […]
“National Youth Day” at St. Assisi Church, Tallur ತಲ್ಲೂರು; 2025ರ ಆಗಸ್ಟ್ 24ರಂದು ತಲ್ಲೂರಿನ ಸಂತ ಅಸ್ಸಿಸಿ ಚರ್ಚಿನಲ್ಲಿ “ರಾಷ್ಟ್ರೀಯ ಯುವ ದಿನ”ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 7:30ಕ್ಕೆ ದಿವ್ಯ ಬಲಿಪೂಜೆಯನ್ನು ಪ್ರಧಾನ ಯಾಜಕರಾಗಿ ಆಗಮಿಸಿದ ಡಾನ್ ಬಾಸ್ಕೊ ಯುವಕೇಂದ್ರ, ಶಿರ್ವಾದ ನಿರ್ದೇಶಕರಾದ ವಂದನೀಯ ಫಾ. ಕಿರಣ್ ನಜ್ರೇತ್ ನೆರವೇರಿಸಿದರು. ಇವರೊಂದಿಗೆ ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜರವರು ಸಹಕರಿಸಿದರು.ನಂತರ ಸಭಾಂಗಣದಲ್ಲಿ ಯುವಜನತೆ ಹಾಗೂ ಅವರ ಪೋಷಕರಿಗಾಗಿ ಸಹಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. […]
‘ನಮ್ಮ ಗುರಿಯಲ್ಲಿ ಸ್ಪಷ್ಟತೆ, ಅದನ್ನು ಕಾರ್ಯಪ್ರವೃತ್ತವಾಗಿಸುವ ಆತ್ಮವಿಶ್ವಾಸ ಮತ್ತು ಹಂತ ಹಂತದ ಪರೀಕ್ಷೆಗಳಲ್ಲಿ ಯಶಸ್ಸು ಸಿಕ್ಕಿದಾಗ ಮುಂದಿನ ತಯಾರಿ- ಇಂಥ ಸರಳ ಗುಣಗಳನ್ನು ಕಲಿತರೆ C.A/ C.S ಸಂಬಂಧಿತ ಕೋರ್ಸ್ಗಳನ್ನು ಮಾಡಲು ಸುಲಭವಾಗುತ್ತದೆ ” ಎಂದು ಉಡುಪಿಯ ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ತರಬೇತುದಾರರಾದ ಪ್ರೊ. ಅಲ್ಬನ್ ರವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಯೋಜಿಸಿದ C.A/ C.S ಓರಿಯಂಟೇಶನ್ ಕಾರ್ಯಕ್ರಮದಲ್ಲಿ ತಿಳಿಸಿದರು. ತ್ರಿಷಾ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಯಾದ ಜಯದೀಪ್ […]
ಬೆಳ್ತಂಗಡಿ: ಧರ್ಮ ಧರ್ಮಗಳ ನಡುವೆ, ಜಾತಿಗಳ ಮಧ್ಯೆ ದ್ವೇಷ ಹುಟ್ಟುವಂತೆ ಪ್ರಚೋದನಕಾರಿಯಾಗಿ ಮಾತನಾಡಿ ಅದನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದ ಬಗ್ಗೆ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ನೀಡಿದ ದೂರಿನಂತೆ ಸೆಕ್ಷನ್ 196(1)(a), 353(2) ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶೇಖರ ಲಾಯಿಲ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಬೆಂಗಳೂರಿನಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ […]
ಮಂಗಳೂರು : ಮಂಗಳೂರಿನ ಬೆಂದೂರ್ವೆಲ್ ಇಲ್ಲಿ ಕೇಂದ್ರ ಕಛೇರಿ ಹೊಂದಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಇದರ ಬೆಳ್ತಂಗಡಿ ಶಾಖೆಯು ಶೀಘ್ರದಲ್ಲಿ ಅಂದರೆ ಮುಂದಿನ ನವರಾತ್ರಿ ದಸರಾ ದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.
ಬೈಂದೂರು ; “ಕೊಂಕಣಿ ಮಾನ್ಯತಾ ದಿವಸ್” ಅನ್ನು ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಸಾಂಸ್ಕೃತಿಕವಾಗಿ ಆಚರಿಸಲಾಯಿತು. ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ ರವರ ಅಧ್ಯಕ್ಷತೆಯಲ್ಲಿ ಜರುಗಿತು ಈ ಸಮಾರಂಭ ದಲ್ಲಿ ದಿಯಾಕೊನ್ ಪೃಥ್ವಿ ರೊಡ್ರಿಗಸ್, ಸಿಸ್ಟರ್ ಆನ್ಸಿ ಪಾವ್ಲ್, ಪಾಲನ ಮಂಡಳಿ ಉಪಾಧ್ಯಕ್ಷ ಸ್ತೇಫಾನ್ ಡಾಯಸ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಸರ್ವ ಆಯೋಗಗಳ ಸಂಯೋಜಕಿ ಅನಿತಾ ನಜ್ರೆತ್, ಐ.ಸಿ.ವೈ.ಎಮ್. ಸಚೇತಕ ಪ್ರದೀಪ್ ಫೆರ್ನಾಂಡಿಸ್, ವೈ.ಸಿ.ಎಸ್. ಸಚೇತಕಿ ಆಶಾ ವೀಣಾ ಡಾಯಸ್, ಐ.ಸಿ.ವೈ.ಎಮ್. ಅಧ್ಯಕ್ಷ ಎಲ್ಸನ್ ಡಿ’ಸೋಜಾ, ಕಾರ್ಯದರ್ಶಿ ಡಿಯೋನ್ ಡಾಯಸ್, […]
ಕುಂದಾಪುರ, ಅ.26: ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಎಲ್ಲಾ 43 ಮಕ್ಕಳಿಗೆ ಮಿಲಾಗ್ರಿಸ್ ಸೌರ್ಹಾದ ಸೊಸೈಟಿಯಿಂದ ಕುಂದಾಪುರ ಚೈತನ್ಯ ವಿಶೇಷ ಶಾಲೆಗೆ ಕಲಿಕಾ ವಸ್ತುಗಳ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. 43 ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಈ ಕಾರ್ಯಕ್ರಮಕ್ಕೆ ಸ್ಥಳೀಯ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿ ‘ವಿಶೇಷ ಮಕ್ಕಳಿಗೆ ನೋಡಿಕೊಳ್ಳುವಂತಹ ಶಿಕ್ಷಕರು, ಶಿಕ್ಷಕೇತರರ ಸೇವೆ ದೇವರು ಮೆಚ್ಚುವಂತಹ […]

