ಬೈಂದೂರು;ಬೈಂದೂರು ಹೋಲಿಕ್ರಾಸ್ ಚರ್ಚ್ನಲ್ಲಿ ಸಂಭ್ರಮದ ತೆರಾಲಿ ಹಬ್ಬ ಸಡಗರ, ಸಂಭ್ರಮದಿಂದ ಜರುಗಿತು, ಬಲಿದಾನದ ನೇತ್ರತ್ವವನ್ನು ವಹಿಸಿದ ಕುಂದಾಪುರ ವಲಯದ ಮುಖ್ಯ ಧರ್ಮಗುರು ರೆ. ಫಾ. ಪಾವ್ಲ್ ರೇಗೋ “ಭರವಸೆ ನಮಗೆ ಎಂದಿಗೂ ನಿರಾಶೆಗೊಳಿಸುದಿಲ್ಲಾ ಎಂಬ ಸಂದೇಶವನ್ನು ನೀಡಿದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೆವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು. ಹಿಂದಿನ ದಿನದ ಹಬ್ಬದ ಧಾರ್ಮಿಕ ವಿಧಿವಿಧಾನಗಳನ್ನು ಜೆಜ್ವಿತ್ ಧರ್ಮಗುರು ರೆ. ಫಾ. ವಿಲ್ಸನ್ ಸಲ್ದಾನ, ಕೋಂಪ್ರಿ ಹಬ್ಬದ (ದೇವರ ವಾಕ್ಯದ) ಸಂಭ್ರವನ್ನು ಬಸ್ರೂರು […]
ಕುಂದಾಪುರ; ಐದು ನದಿಗಳು ಸೇರುವ ಕುಂದಾಪುರದ ಪಂಚ ಗಂಗಾವಳಿ ನದಿ ಬಹಳ ರಮಣೀಯವಾಗಿದ್ದು, ಚಟುವಟಿಕೆಯ ಕೇಂದ್ರವಾಗಿತ್ತು. ಸಾವಿರಾರು ಕುಟುಂಬಗಳ ಜೀವನಕ್ಕೆ ಆಶ್ರಯ ನೀಡುವ ತಾಣವಾಗಿತ್ತು. ವಿಹಾರಕ್ಕೂ ಬಹಳ ಅದ್ಬುತವಾದ ಪ್ರದೇಶವಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ನದಿಯಲ್ಲಿ ಹೂಳು ತುಂಬುತ್ತಾ ಹೋಗಿ ನದಿ ಸಂಪೂರ್ಣ ಕಳಾಹೀನವಾಗಿದೆ. ಹೂಳು ತುಂಬಿದ ಸ್ಥಳಗಳಲ್ಲೇ ಗಿಡಗಳು ಬೆಳೆದು ಕಾಡಿನಂತಾಗಿದೆ. ಹೊಸ ಹೊಸ ಕುದುರುಗಳು ಹುಟ್ಟಿವೆ. ಮೀನುಗಾರರಿಗೆ, ಚಿಪ್ಪು ಕಾರ್ಮಿಕರಿಗೆ ಜೀವನ ನಡೆಸಲು ಅನುಕೂಲ ಇಲ್ಲದೇ ನೂರಾರು ಕುಟುಂಬಗಳ ಮೇಲೆ ಪರಿಣಾಮ ಉಂಟಾಗಿದೆ. ಪ್ರವಾಸೋದ್ಯಮಕ್ಕೆ […]
ಕುಂದಾಪುರ; ಪಂಚಗಂಗಾವಳಿ ಇತಿಹಾಸ ಕಾಪಾಡಲು ಹಲವು ಆಕರಗಳಿವೆ. ಡಾ.ವಸಂತಮಾಧವ, ಇತಿಹಾಸ ತಜ್ಞರ ಅಭಿಪ್ರಾಯದಂತೆ ದಿ.ಗುರುರಾಜ ಭಟ್ಟರು, ದಿ.ಡಾ.ವಸಂತ ಶೆಟ್ಟಿ, ಡಾ.ಪಿ.ಎಸ್.ಶಾಸ್ತ್ರಿ ಮುಂತಾದ ರಾಜ್ಯದ ಇತಿಹಾಸ ಸಂಶೋಧಕರು ಈ ಬಗ್ಗೆ ಕುಂದಾಪುರದ ಹಲವು ಗ್ರಾಮಗಳಲ್ಲಿ ಶಾಸನದ ಅಧ್ಯಯನ ಮಾಡಿದ್ದಾರೆ. 1800 ರಲ್ಲಿ ಮೆಕೆಂಜಿ, ಪಂಚಗಂಗಾವಳಿಯ ಸಾಂಸ್ಕøತಿಕ ಇತಿಹಾಸಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಿದ್ದಾರೆ. ಹೆಮಿಲ್ಟನ್ ಅಲೆಕ್ಸಾಂಡ್, ಎಡನ್ ಮಸ್ಕತ್, ಕೂಟೊ ಮುಂತಾದ ವಿದೇಶಿಗರೂ ಪಂಚಗಂಗಾವಳಿ ಮಹತ್ವವನ್ನು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಕುಂದಾಪುರ ತಾಲ್ಲೂಕಿನ ಹಲವು ಹಿರಿಯರು ಬೇಕಾದ ಆಕರಗಳನ್ನು ಸಂಗ್ರಹಿಸಿಟ್ಟು, […]
ಫೆಬ್ರವರಿ 24, 2025 ರ ಮಧ್ಯಾಹ್ನ 2:30 ಕ್ಕೆ, ಬಾರ್ಕೂರು ಶೈಕ್ಷಣಿಕ ಸಂಘ, ಗೌರವಾನ್ವಿತ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಅಸಾಧಾರಣ ಶಿಕ್ಷಕ, ಮಾರ್ಗದರ್ಶಕ ಮತ್ತು ಮಾರ್ಗದರ್ಶಕ ಬೆಳಕು – ದಿವಂಗತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ ಅವರಿಗೆ ಗೌರವ ಸಲ್ಲಿಸಲು ಒಟ್ಟುಗೂಡಿದಾಗ NJC ಸಭಾಂಗಣವು ಪ್ರೀತಿ, ಗೌರವ ಮತ್ತು ಆಳವಾದ ದುಃಖದ ಸುರಿಮಳೆಗೆ ಸಾಕ್ಷಿಯಾಯಿತು. 85 ವರ್ಷಗಳ ಅದ್ಭುತ ಜೀವನವನ್ನು ನಡೆಸಿದ ಅವರು, ಫೆಬ್ರವರಿ 12, 2025 ರಂದು ಇಹಲೋಕ ತ್ಯಜಿಸಿದರು, ಶಿಕ್ಷಣ ಮತ್ತು ಸಮಾಜದ […]
ಕುಂದಾಪುರ, 22/02/2025 ರಂದು, ಸ್ಥಳೀಯ ಯುಬಿಎಂಸಿ ಮತ್ತು ಸಿಎಸ್ಐ ಕೃಪಾ ಇಂಗ್ಲಿಷ್ ಮಾಧ್ಯಮ ಶಾಲೆಯು ಶಿಕ್ಷಕ -ರಕ್ಷಕ ಸಂಘದ ಸಭೆಯನ್ನು ನಡೆಯಿತು. ಶಾಲಾ ಸಂಚಾಲಕಿ ಐರೀನ್ ಸಾಲಿನ್ಸ್ ಸಭೆಯ ಅಧ್ಯಕ್ಷಯತೆಯನ್ನು ವಹಿಸಿಕೊಂಡಿದ್ದರು, ರೆವರೆಂಡ್ ಇಮ್ಯಾನುಯೆಲ್ ಜೈ ಕರ್ ಮುಖ್ಯ ಅತಿಥಿಯಾಗಿ ಮತ್ತು ಶಾಲಾ ಪ್ರಾಂಶುಪಾಲೆ ಅನಿತಾ ಡಿ’ಸೋಜಾ, ಸಿಎಸ್ಐ ಕೃಪಾ ವಿದ್ಯಾಲಯದ ಮುಖ್ಯ ಶಿಕ್ಷಕಿ ಸವಿತಾ ವೇದಿಕೆಯನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಸೋನಿ ಡಿಕೋಸ್ಟಾ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರದ ಬಗ್ಗೆ […]
ಫಳ್ನೀರ್ ಫೆ.21: ದಕ್ಷಿಣಕನ್ನಡ ಸಾಹಿತ್ಯ ಪರಿಷತ್ತು ಇವರಿಂದ ನೆಡಸಲ್ಪಟ್ಟ, ಸಂತ ಮೆರೀಸ್ ಫ್ರೌಢಶಾಲೆಯ ಮಂಗಳೂರು ಇಲ್ಲಿಯ 22 ವಿದ್ಯಾರ್ಥಿಯರು ತಮ್ಮ ಶಾಲಾ ಶಿಕ್ಷಕಿಯೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಕೋಣಾಜೆ, ಮಂಗಳ ಸಭಾಂಗಣ ಗಂಗೋತ್ರಿಯಲ್ಲಿ ಏರ್ಪಾಡಿಸಿದ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ,ಮಂಗಳೂರು ಫಳ್ನೀರಿನ ಸಂತ ಮೆರೀಸ್ ಫ್ರೌಢಶಾಲೆಯ 22 ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಕಿಯೊಂದಿಗೆ ಸಕ್ರಿಯವಾಗಿ ಭಾಗವಹಿಸಿದರು. ಅವರು ಪಡೆದ ಅನುಭವ ಅಪಾರ ಹಾಗೂ ಶ್ಲಾಘನೀಯ. ಆ ಅನುಭವಗಳನ್ನು ಇತರರೊಂದಿಗೆ ಹಂಚಿ ತಮ್ಮ ಸಂತೋಷವನ್ನು ಶಾಲೆಯಲ್ಲಿ ವ್ಯಕ್ತ ಪಡಿಸಿದರು. ಈ […]
ಕುಂದಾಪುರ: ಫೆಬ್ರುವರಿ 21, 22, ಮತ್ತು 23, 2025ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಂಗಳೂರು ಮತ್ತು ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘ ಮತ್ತು ಕಾಲೇಜಿನ ಐಕ್ಯೂಎಸಿ. ಇವರು ಸಹಯೋಗದಲ್ಲಿ ಆಯೋಜಿಸಿದ “ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನದಲ್ಲಿ ಫೆಬ್ರವರಿ 21 ರಂದು ವಿವಿಧ ದತ್ತಿ ಉಪನ್ಯಾಸಗಳನ್ನು ಪ್ರೊ. ಎಮ್.ಎನ್.ಶ್ರೀನಿವಾಸ ಅವರು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಅಶ್ವತ್ಥನಾರಾಯಣ […]
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನಲ್ಲಿ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚೆಸ್ ಚಾಂಪ್ ನಡೆಯಿತುಮುಖ್ಯ ಅತಿಥಿಗಳಾಗಿ ಆಗಮಿಸಿದ ಸೌಂದರ್ಯ ಯು ಕೆ. ಇಂಜಿನಿಯರ್ ( ಫಿಡೆ ತೀರ್ಪುಗಾರರು ಮತ್ತು ಚೆಸ್ ಕೋಚ್,ನಿರ್ದೇಶಕರು, ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಉಡುಪಿ ಮತ್ತು ಕಾಪು) ಮಾತನಾಡಿ ಕ್ರಿ ಶ 6ನೇ ಶತಮಾನಕ್ಕೂ ಮೊದಲೇ ಚೆಸ್ ಭಾರತೀಯರಿಗೆ ಪರಿಚಯವಾಗಿತ್ತು ಎಂಬುದು ತಜ್ಞರ ಅಭಿಪ್ರಾಯ ಈ ಜನಪ್ರಿಯ ಆಟವು ಏಕಾಗ್ರತೆ, ಸ್ಮರಣೆ, ತಾರ್ಕಿಕ ಚಿಂತನೆ, […]
ವಿನ್ಸೆಂಟ್ ಫೆರ್ನಾಂಡಿಸ್ ಕ್ಯಾಸಿಯಾ ಅವರ ಮೊಗಾಚಿ ಲಹ್ರಾನ್ ಮತ್ತು ಟೀಮ್ ಡೋನೇಟಿಂಗ್ ಲವ್ ಸಹಯೋಗದೊಂದಿಗೆ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು (ಎಫ್ಎಂಸಿಐ) ಆಯೋಜಿಸಿದ್ದ ದತ್ತಿ ಸಂಗೀತ ಕಚೇರಿಯು ಅಗತ್ಯವಿರುವ ಕಿಡ್ನಿ ಡಯಾಲಿಸಿಸ್ ರೋಗಿಗಳಿಗೆ ಯಶಸ್ವಿಯಾಗಿ ಹಣವನ್ನು ಸಂಗ್ರಹಿಸಿತು. ಫೆಬ್ರವರಿ 23, 2025 ರಂದು ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಗಾಧ ಪ್ರತಿಕ್ರಿಯೆ ದೊರೆಯಿತು. ಈ ಸಂಗೀತ ಕಚೇರಿಯಲ್ಲಿ ಜನಪ್ರಿಯ ಕೊಂಕಣಿ ಗಾಯಕ ವಿನ್ಸೆಂಟ್ ಫೆರ್ನಾಂಡಿಸ್ ಮತ್ತು ಅವರ ತಂಡದಿಂದ ಉತ್ಸಾಹಭರಿತ ಬೈಲಾ […]

