

ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ವಂದನೀಯ ಧರ್ಮಗುರು ವಿನ್ಸೆಂಟ್ ಕುವೆಲ್ಲೋ ಮತ್ತು ಸಹಾಯಕ ಧರ್ಮಗುರು ಪ್ರಥ್ವಿ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಗರಿಗಳ ಭಾನುವಾರದ ಆಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.
























ಮಂಗಳೂರು ; ನಮ್ಮ ಅದ್ಭುತಗಳ ತಾಯಿ (Our Lady of Miracles) ದೇವಾಲಯದ ಭಕ್ತರು ಪಾಮ್ ಸಂಡೇವನ್ನು ಸಿಲ್ವರ್ ಜೂಬಿಲಿ ಹಾಲ್ ನ ವಠಾರ ದಲ್ಲಿ ತಾಳೆ ಎಲೆಗಳನ್ನು ಆಶೀರ್ವದಿಸುವ ಮೂಲಕ ಆಚರಿಸಿದರು. ಫಾ. ಅವಿತ್ ಫಾಯ್ಸ್ ಅವರು ಪ್ರಾಥನಾ ವಿಧಿ ನೆರವೇರಿಸಿ ತಾಳೆ ಎಲೆ ಗಳನ್ನು ಆಶೀರ್ವದಿ ಸಿದರು ಫಾ. ಬೊನವೆಂಚರ್ ನಜರೇತ್, ಫಾ. ಆಲ್ವಿನ್ ಸೆರಾವ್, ಫಾ. ಜೆರಾಲ್ಡ್ ಪಿಂಟೋ ಹಾಗೂ ಫಾ. ಉದಯ ಫರ್ನಾಂಡಿಸ್ ಅವರೊಂದಿಗೆ ತಾಳೆ ಎಲೆಗಳನ್ನು ಹಿಡಿದು ಮೆರವಣಿಗೆ ಯಲ್ಲಿ ಭಕ್ತರ ಜೊತೆಗೆ ಪಾಲ್ಗೊಂಡು
ಆಮೇಲೆ ಮೆರವಣಿಗೆ ಚರ್ಚ್ ಕಡೆಗೆ ನಡೆಯಿತು. ಫಾ. ಉದಯ್ ಅವರು ಪವಿತ್ರ ಬಲಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅನೇಕ ಭಕ್ತರು ಭಾಗವಹಿಸಿದ್ದರು. ಯೇಸುವಿನ ಪೀಡೆ ಮತ್ತು ಮರಣವನ್ನು ಧ್ಯಾನಿಸುತ್ತಾ ಭಕ್ತಿಭಾವದಿಂದ ಪವಿತ್ರ ವಾರಕ್ಕೆ ಪ್ರವೇಶ ಮಾಡಲಾಯಿತು. ಗಾಯನ ಮಂಡಳಿ ಮತ್ತು ಸ್ವಯಂಸೇವಕರು ಈ ಆಚರಣೆಗೆ ಇನ್ನಷ್ಟುಸಹಕಾರ ನೀಡಿದರು.









































Sunday celebration at Our Lady of Miracles Temple Sunday celebration at Our Lady of Miracles Temple
The Parishioners of our Lady of miracles parish celebrated Sunday celebration at Our Lady of Miracles Temple sunday by blessing the Palms at silver jubilee varanda.Fr Avith Pais blessed the Palms together with the Parish Priests Frs Bonaventure Nazareth, Alwyn Serrao, Gerald Pinto, and Uday Fernandes. The procession was led to the church Fr. uday celebrated the Mass. A large number of people gathered on the occasion. The entry into the holy week was marked with dvotion meditating on the Passion and death of Jesus. The choir and the volunteers added glamour for the occasion.


ಬಸ್ರೂರು; ಸೇಂಟ್ ಫಿಲಿಪ್ ನೇರಿ ಚರ್ಚ್ ಬಸ್ರೂರುರಿನಲ್ಲಿ ಏಸುಕ್ರಿಸ್ತರು ಜರಿಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿದ ಸಂದರ್ಭವನ್ನು ನೆನಪಿಸಿಕೊಂಡು ಇಂದು ಬಸ್ರೂರುರಿನಲ್ಲಿ ಸೆಂಟ್ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನಿಲ್ ಮಾರ್ಟಿಸ್ ಗರಿಗಳನ್ನು ಆಶೀರ್ವಚನದ ಬಳಿಕ ಮೆರವಣಿಗೆ ನಡೆಯಿತು ಹಾಗೂ ದೇವರ ವಾಕ್ಯದ ಮೇಲೆ ಕ್ರಿಸ್ತ ಸಂದೇಶ ನೀಡಿದರು ವಿಧಿಗಳನ್ನು ನಡೆಸ ಸಂದೇಶ ನೀಡಿದರು ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಶುಭಾಶಯ ಸಲ್ಲಿಸಿದರು ಸಹಾಯಕ ಧರ್ಮಗುರುಗಳಾದ ಫಾದರ್ ಶರೂನ್ ಡಿಸೋಜ ಅಪಾರ ಸಂಖ್ಯೆಯ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.







ಕುಂದಾಪುರ,ಮಾ.29 (2026) ; ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಚರ್ಚಿನ ಎದುರುಗಡೆ ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ನೇರವೆರಿಸಿದರು, ಗರಿಗಳನ್ನು ಆಶಿರ್ವಧಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ನಂತರ ಗರಿಗಳ ಮೆರವಣೆಗೆಯ ಮೂಲಕ ಚರ್ಚಿನೊಳಗೆ ಪ್ರವೇಶಿಸಿ ಪವಿತ್ರ ಬಲಿದಾನವನ್ನು ಭಕ್ತರೊಂದಿಗೆ ಅರ್ಪಿಸಲಾಯಿತು. ‘ತ್ಯಾಗದ ಹೊರತು ಮುಕ್ತಿಯಿಲ್ಲ, ಶಿಲುಭೆಯ ಹೊರತು ಮುಕುಟವಿಲ್ಲ’ ಎಂದು ಸಂದೇಶ ನೀಡಿ, ಯೇಸು ಕ್ರಿಸ್ತರು ತನ್ನನ್ನು ತಾನೆ ಬಲಿದಾನಕ್ಕೆ ಸಿದ್ದವಾಗಿ ಜೆರುಸೆಲೇಮ್ ನಗರಕ್ಕೆ ನಗರಕ್ಕೆ ಪ್ರವೇಶ ಮಾಡುವಾಗ ಅವರ ಹಿಂಬಾಲಕರು, ಒಲೀವ್ ಗೀಡದ ಗರಿಗಳನ್ನು ತೆಗೆದುಕೊಂಡು ಜಯಕಾರ ಹಾಕಿ ಸ್ವಾಗತಿಸಿದ್ದರು, ಹಾಗೇ ನಾವು ಗರಿಗಳ ಭಾನುವಾರದ ಮೂಲಕ ಪವಿತ್ರ ವಾರ ಆರಂಭಿಸೋಣ’ ಎಂದು ಕರೆ ನೀಡಿದರು. ಈ ಪ್ರಾರ್ಥನ ವಿಧಿಯಲ್ಲಿ ಅಪಾರ ಭಕ್ತಾಧಿಗಳು ನೆರೆದಿದ್ದರು.




















































Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/Ev3k8gPa7GoEoPPXlyxtW6 (jananudi news orga)
Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/KsqVmxkVQZA61f4rAB31mQ (jananudi byndoor)
Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/EJ5qhOlV441ASSM9IUi0Yw (Amche kundapur)


ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮದ ಭಾವನೆಯನ್ನು ಮೂಡಿಸುವ ಹಾಗೂ ತಂದೆ ತಾಯಿಯ ಮೌಲ್ಯವನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಮಾತಾ ಪಿತೃ ವಂದನಾ ಹಾಗೂ ಭಾರತ ಮಾತಾ ಪೂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಗಣೇಶ್ ನಾಯಕ್, ಶಿಕ್ಷಕರು ಶಿರಿಯಾರ ಇವರು ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಖಂಡ ಭಾರತದ ನಕಾಶೆಗೆ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಇವರು ತಾಯಿ ದೇವತಾ ಸ್ವರೂಪಿ, ತಂದೆ ಆಕಾಶ. ಇಂತಹ ತಂದೆತಾಯಿಯರಿಗೆ ಮಕ್ಕಳು ಪ್ರತಿನಿತ್ಯ ನಮಸ್ಕರಿಸಿ ಅವರ ಆರ್ಶೀವಾದವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ತುಳಸಿ ಎಜ್ಯುಕೇಶನ್ ಟ್ರಸ್ಟ್ ನ ಮುಖ್ಯಸ್ಥ ರಾದ ಶ್ರೀಯುತ ಕೃಷ್ಣರಾಯ ಶಾನುಭಾಗ್ ರವರು ಮಾತನಾಡಿ ಭಗವಂತ ಅವತರಿಸಿದ ಪುಣ್ಯಭೂಮಿ ಇದು. ಇಡೀ ಪ್ರಪಂಚಕ್ಕೆ ಮಾರ್ಗದರ್ಶನ ನೀಡುವ ದೇಶ ನಮ್ಮದು. ಅಂತಹ ಭಾರತ ಮಾತೆಗೆ ದೀಪಗಳ ಮೂಲಕ ನಮಿಸುವ ಭಾಗ್ಯ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಅಖಂಡ ಭಾರತದ ನಕಾಶೆಯ ಅಂಚಿನಲ್ಲಿ ಹಣತೆಗಳನ್ನು ಇಟ್ಟು ಪೋಷಕರು ಬೆಳಗಿಸಿದ ಜ್ಯೋತಿಯಿಂದ ಅಖಂಡ ಭಾರತ ನಕ್ಷೆ ಪ್ರಜ್ವಲಿಸಿತು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ರೇಷ್ಮ ಪ್ರದೀಪ್ ಉಪಸ್ಥಿತರಿದ್ದರು. ಶಿಕ್ಷಕಿ ಅಬಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ , ಸಹಶಿಕ್ಷಕಿ ಶ್ರೀಮತಿ ಶಿಲ್ಪಾ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ರೂಪ ವಂದಿಸಿದರು.

ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಭೋದಕ – ಭೋದಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಯಲ್ಲಿ U. ಏ.ಉ ತರಗತಿ ಗೆ ಗ್ರಾಜುಯೇಷನ್ ಡೇ ಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿದ ನಿವೃತ್ತ ಮುಖ್ಯೋ ಪಾಧ್ಯಾಯಿನಿ ರಾದ ಶ್ರೀಮತಿ ಗೌರಿ ಇವರು ವಿದ್ಯಾರ್ಥಿ ಗಳಿಗೆ ಸರ್ಟಿಫಿಕೇಟ್ ನೀಡಿ ” ಮಕ್ಕಳು ಮಣ್ಣಿನ ಮುದ್ದೆ, ಸುಂದರ ಕಲಾಕೃತಿ ಮಾಡುವುದು ಶಿಕ್ಷಕರ ಜವಾಬ್ದಾರಿ ” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ್ ಶೆಟ್ಟಿ ರವರು “ಮಕ್ಕಳಲ್ಲಿ ಇರುವ ಸೃಜನಾತ್ಮಕತೆ ಯನ್ನು ಗುರುತಿಸಿ, ಪ್ರೋತ್ಸಾಹವನ್ನು ಶಿಕ್ಷಕರು ಮತ್ತು ಪೋಷಕರು ನೀಡ ಬೇಕೆಂದು” ತಮ್ಮ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ, ಬಾರಕೂರು ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ.ಶ್ರೀಮತಿ ಕಿಶೋರಿ ಶೆಟ್ಟಿ , K. G ತರಗತಿಗಳ ಮುಖ್ಯಸ್ಥರಾದ ಶ್ರೀಮತಿ ಸುಜಾತಾ ಎಲ್. ರೈ ರವರು ಉಪಸ್ಥಿತರಿದ್ದರು.
LKG ತರಗತಿಯ ವಿದ್ಯಾರ್ಥಿ ಗಳು ಪ್ರಾರ್ಥನೆ ಮತ್ತು ಸ್ವಾಗತ ನೃತ್ಯ ಮಾಡಿದರು. ಶಿಕ್ಷಕಿ ಶ್ರೀಮತಿ ಕುಸುಮ ವಂದಿಸಿದರು.. ಶಿಕ್ಷಕಿಯರಾದ ಶ್ರೀಮತಿ ಚಂದ್ರ ಕಲಾ ಮತ್ತು ಶ್ರೀಮತಿ ರಕ್ಷಿತಾ ರವರು ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಶ್ರೀಮತಿ ಶುಭ, ಶಾಲೆಯ ಸಹಾಯಕರಾದ ಶ್ರೀಮತಿ ಗ್ರೇಟಾ, ಶ್ರೀಮತಿ ಕವಿತಾ, ಶ್ರೀ ವಿಜಯ ಪೂಜಾರಿ ಮತ್ತು ಶಾಲೆಯ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.














ಕುಂದಾಪುರ: ಮಾರ್ಚ್ 27ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ್ ಅವರು ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ತರಬೇತಿ ಶಿಬಿರವಾಗಿರುತ್ತದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸುವುದುರೊಂದಿಗೆ ಜೀವನದ ಪಾಠವನ್ನು ಕಲಿಯುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ.ಶಾಂತರಾಮ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್ ಶೆಣೈ ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ 1973ನೇ ಬ್ಯಾಚ್ ನ ವೆಂಕಟೇಶ್ ಶೆಣೈ ಆಗಮಿಸಿದ್ದರು.
ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಸಂಯೋಜಕರಾದ ಪ್ರೊ ಸತ್ಯನಾರಾಯಣ ಸ್ವಾಗತಿಸಿದರು.
ರಸಾಯನ ಶಾಸ್ತ್ರದ ಮುಖ್ಯಸ್ಥೆ ಪ್ರೊ.ನಿಶಾ ಎಮ್. ವಂದಿಸಿದರು. ಉಪನ್ಯಾಸಕಿಯರಾದ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ತೀರ್ಪುಗಾರರನ್ನು ಪರಿಚಯಿಸಿದರು. ಉಪನ್ಯಾಸಕ ರಾಮಚಂದ್ರ ಆಚಾರಿ ಅತಿಥಿಗಳನ್ನು ಪರಿಚಯಿಸಿದರು.
ಅಂತರ್ ತರಗತಿ ಪ್ರತಿಭಾ ಪ್ರದರ್ಶನದ ಪ್ರಥಮ ಸ್ಥಾನವನ್ನು ಕಲಾ ವಿಭಾಗ ದ್ವಿತೀಯ ಸ್ಥಾನವನ್ನು: ದ್ವಿತೀಯ ಮತ್ತು ತೃತೀಯ ಬಿ ಎಸ್.ಸಿ , ತೃತೀಯ ಸ್ಥಾನವನ್ನು ತೃತೀಯ ಬಿಕಾಮ್ ವಿದ್ಯಾರ್ಥಿಗಳ ತಂಡ ಪಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ತೀರ್ಪುಗಾರರಾದ ಡಾ.ಗಣೇಶ್ ಗಂಗೊಳ್ಳಿ, ಅನುರಾಧ ಮಯ್ಯ, ಮತ್ತು ರಮ್ಯಾ ರಮಣಿ ರವಿ ಉಪಸ್ಥಿತರಿದ್ದರು.
ಲಲಿತಾ ಕಲಾ ಸಂಘದ ಸಂಚಾಲಕರಾದ ಶಶಾಂಕ್ ಪಟೇಲ್ ವಂದಿಸಿದರು. ಉಪನ್ಯಾಸಕ ದುರ್ಗಾಪ್ರಸಾದ್ ಮಯ್ಯ ಸ್ವಾಗತಿಸಿದರು. ಉಪನ್ಯಾಸಕಿ ಶೃತಿ ಕಾಶಿ ಕಾರ್ಯಕ್ರಮ ನಿರೂಪಿಸಿದರು.






ಶ್ರೀನಿವಾಸಪುರ : ಪಟ್ಟಣದ ವಾಸವಿ ಕನ್ನಿಕಾಪರಮೇಶ್ವರಿ ದೇವಾಲಯ ಆವರಣದಲ್ಲಿ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ವಾಸವಿ ಗಂಗಾ ಆರತಿ ತಂಡದ ವತಿಯಿಂದ ಭಕ್ತರಿಗೆ ಪಾನಕ ಹಾಗೂ ಕೋಸಂಬರಿ ವಿತರಣೆ ಮಾಡುವ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಆರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರು ಭಕ್ತಿ ಶ್ರದ್ಧೆಯಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತರ ಆಗಮನ ಹೆಚ್ಚಾಗಿದ್ದು, ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು. ನಂತರ ವಾಸವಿ ಗಂಗಾ ಆರತಿ ತಂಡದ ಸದಸ್ಯರು ಭಕ್ತರಿಗೆ ತಂಪಾದ ಪಾನಕ ಮತ್ತು ಪೌಷ್ಟಿಕಾಂಶಯುಕ್ತ ಕೋಸಂಬರಿಯನ್ನು ವಿತರಿಸಿದರು.
ಬೇಸಿಗೆಯ ತಾಪಮಾನವನ್ನು ಮನಗಂಡು ತಂಪು ನೀಡುವ ಪಾನಕ ಹಾಗೂ ಆರೋಗ್ಯಕರ ಕೋಸಂಬರಿ ವಿತರಣೆ ಭಕ್ತರಿಗೆ ಉಪಯುಕ್ತವಾಯಿತು. ಈ ಸೇವಾ ಕಾರ್ಯವು ಹಬ್ಬದ ಸಾರ್ಥಕತೆಯನ್ನು ಹೆಚ್ಚಿಸುವುದರ ಜೊತೆಗೆ ಸಮಾಜ ಸೇವೆಯ ಸಂಕೇತವಾಗಿ ಪರಿಣಮಿಸಿತು.
ಸ್ಥಳೀಯರು ಹಾಗೂ ಭಕ್ತರು ತಂಡದ ಕಾರ್ಯವನ್ನು ಮೆಚ್ಚಿ ಪ್ರಶಂಸಿಸಿದರು. ಹಬ್ಬದ ಸಂದರ್ಭದಲ್ಲಿ ಇಂತಹ ಸೇವಾ ಚಟುವಟಿಕೆಗಳು ಸಮಾಜದಲ್ಲಿ ಏಕತೆ, ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.


ಶ್ರೀನಿವಾಸಪುರ : ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಸರ್ವೇಶ್ ಪರಿಶೀಲಿಸಿದರು.
ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಒಟ್ಟು 245 ಶುದ್ಧ ಕುಡಿಯುವ ನೀರು ಘಟಕಗಳಿದ್ದು, ಅವುಗಳಲ್ಲಿ 216 ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ 29 ಘಟಕಗಳಿಗೆ ದುರಸ್ತಿ ಅಗತ್ಯವಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ಸುಮಾರು 18 ಗ್ರಾಮಗಳು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಆ ಗ್ರಾಮಗಳಲ್ಲಿ ನೀರಿನ ಕೊರತೆಯನ್ನು ನೀಗಿಸಲು ಖಾಸಗಿ ಕೊಳವೆ ಬಾವಿ ಮಾಲೀಕರು ಹಾಗೂ ಟ್ಯಾಂಕರ್ ಮಾಲೀಕರನ್ನು ಈಗಾಗಲೇ ಗುರುತಿಸಲಾಗಿದೆ. ಅಗತ್ಯವಿದ್ದಲ್ಲಿ ತಕ್ಷಣ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನೀರಿನ ಸಮಸ್ಯೆ ಕುರಿತು ತಕ್ಷಣ ಮಾಹಿತಿ ಸಂಗ್ರಹಿಸಲು ಮೂವರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರು ದೂರವಾಣಿ ಮೂಲಕ ಸಮಸ್ಯೆ ತಿಳಿಸಿದಲ್ಲಿ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ, ನೀರಿನ ಕೊರತೆ ಕಂಡುಬಂದಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆದುಕೊಳ್ಳುವುದು, ಬಾವಿಗಳು ಬತ್ತಿಹೋದರೆ ಅವುಗಳ ಆಳವನ್ನು ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ರೂಪಿಸಲಾಗಿದೆ. ಜಲ್ ಜೀವನ್ ಮಿಷನ್ (JJM) ಯೋಜನೆಯಡಿ ಈಗಾಗಲೇ 170 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಉಳಿದ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಯೋಜನೆ ಕಾಮಗಾರಿಗಳ ವೇಳೆ ರಸ್ತೆಗಳನ್ನು ಅಗೆದು ಹಾನಿಗೊಳಿಸಲಾಗಿದೆ ಎಂಬ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಅವರು, ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ತೊಟ್ಟಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ತುರ್ತು ಪರಿಸ್ಥಿತಿಗೆ ಪಂಪ್ಸೆಟ್ಗಳನ್ನು ಸಿದ್ಧವಾಗಿಡಬೇಕು. ಸಾರ್ವಜನಿಕರು ನೀರಿನ ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.
