

ಶ್ರೀನಿವಾಸಪುರ : ಪಟ್ಟಣವನ್ನ ಅಭಿವೃದ್ಧಿಪಡಿಸಲು ಸದಸ್ಯರ ಸಹಕಾರದೊಂದಿಗೆ ಅನೇಕ ಕಾರ್ಯಕ್ರಮಗಳನ್ನ ರೂಪಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಪೌರಕಾರ್ಮಿಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪುರಸಭೆ ವತಿಯಿಂದ ಪೌರಕಾರ್ಮಿಕರಿಗೆ 30 ವಸತಿಗಳನ್ನು ನಿರ್ಮಿಸಲು ಭೂಮಿ ಮಂಜೂರು ಆಗಿತ್ತು . ಆ ಜಾಗಕ್ಕೆ ಸಂಬಂದಿಸಿದಂತೆ ತಕರಾರು ಎದ್ದಿದ್ದು, ಅದನ್ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದೇ ವಾರದಲ್ಲಿ ಟೆಂಡರ್ ಕರೆದು.ಸಾಧ್ಯವಾದಷ್ಟು ಬೇಗ ಭೂಮಿ ಪೂಜೆ ನಡೆಸಲಾಗುವುದು.
ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಮಾತನಾಡಿ ಪೌರಕಾರ್ಮಿಕರು ದಿನ ಬೆಳಗಾದರೆ ಪಟ್ಟಣದಲ್ಲಿ ಸ್ವಚ್ಚತೆ ಮಾಡಿ ನಮ್ಮೆಲ್ಲರನ್ನೂ ಆರೋಗ್ಯ ಜೀವನವನ್ನು ನಡೆಸಲು ಕಾರಣೀಬೂತರಾಗಿರುವ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಡವಾಗಿರಬೇಕು. ಗಿಡಮರಗಳು ಆಮ್ಲಜನಕವನ್ನು ಉತ್ಪತ್ತಿ ಮಾಡಲು ಎಷ್ಟು ಮುಖ್ಯವೋ, ಪಟ್ಟಣದಲ್ಲಿ ಸ್ಚಚ್ಚತೆ ಮಾಡಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರು ಅಷ್ಟೆ ಮುಖ್ಯ ಎಂದರು.
ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಪುರಸಭೆ ಉಪಾಧ್ಯಕ್ಷೆ ಸುನಿತ, ಸದಸ್ಯರಾದ ಆಯಿಷನಯಾಜ್, ಜಯಲಕ್ಷ್ಮಿ, ಶಾಂತಮ್ಮ, ಸಂಜಯ್ಸಿಂಗ್, ಎನ್ಎನ್ಆರ್ ನಾಗರಾಜ್, ಡಿಜೆ ಫೈರೋಜ್, ಮುನಿರಾಜ್, ಸರ್ಧಾರ್, ಅಪ್ಪರೂರಾಜು, ಅನಂದರೆಡ್ಡಿ, ಕೆ.ಅನೀಸ್ಅಹ್ಮದ್, ನಾಮಿನಿ ಸದಸ್ಯರಾದ ನರಸಿಂಹಮೂರ್ತಿ, ಹೇಮಂತ್ಕುಮಾರ್ , ಶಿವರಾಜ್, ಮುಖಂಡ ಸತ್ಯನಾರಾಯಣ, ಪೌರಕಾರ್ಮಿಕ ಅಧ್ಯಕ್ಷ ಆಂಜಪ್ಪ, ಉಪಾಧ್ಯಕ್ಷ ಚಲಪತಿ, ಗೌರವಾಧ್ಯಕ್ಷ ಬಾಲಕೃಷ್ಣ , ವ್ಯವಸ್ಥಾಪಕ ನಾಗೇಶ್, ಕಂದಾಯ ಅಧಿಕಾರಿ ಎನ್.ಶಂಕರ್, ಪರಿಸರ ಲಕ್ಷ್ಮೀಶ, ಆರೋಗ್ಯ ನಿರೀಕ್ಷಕ ಸುರೇಶ್, ಎಫ್ಡಿಎ ಸಂತೋಷ, ಸಿಬ್ಬಂದಿಗಳಾದ ಪ್ರತಾಪ್, ಗೌತಮ್ ಇದ್ದರು.


