

ಶ್ರೀನಿವಾಸಪುರ :. ನಮ್ಮ ಜಿಲ್ಲೆಯನ್ನು ಸರಿಮಾಡಿ ಉಳಿದಂತೆ ರಾಜ್ಯದ್ಯಾಂತ ಮುಂದಿನ ಕ್ರಮಕೈಗೊಳ್ಳಲಾಗುವುದು . ನನ್ನ ಆಶಯಗಳಿಗೆ ಕೈಜೋಡಿಸಿ ಎಂದು ಅಧಿಕಾರಿಗಳಿಗೆ , ಸಾರ್ವಜನಿಕರಿಗೆ ಉಪಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.
ಪಟ್ಟಣ ಹೊರವಲಯದಲ್ಲಿನ ಕನಕ ಸಮುದಾಯಭವನದಲ್ಲಿ ಶುಕ್ರವಾರ ಲೋಕಾಯುಕ್ತವತಿಯಿಂದ ತಾಲೂಕಿಗೆ ಸಂಬಂದಿಸಿದ ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಂಜುಲು ಕಾಸಿ ಕೈಒಡ್ಡುವವರು ದಯವಿಟ್ಟು ನಮ್ಮ ತಾಲೂಕು, ಜಿಲ್ಲೆಯಿಂದ ವರ್ಗಾವಣೆ ಮಡಿಕೊಂಡು ಹೊರಟು ಬಿಡಿ ಎಂದರು ಹಾಗು ಗ್ರಾಮಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆ , ನೈರ್ಮಲ್ಯವನ್ನು ಕಾಪಡುವ ನಿಟ್ಟಿನಲ್ಲಿ ಹಣಮಾಡುವುದು ಬಿಡಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಪ್ರಪಂಚದಲ್ಲಿ ಭಷ್ಟ್ರಚಾರದಲ್ಲಿ ಭಾರತ 96 ನೇ ಸ್ಥಾನ, ದೇಶದಲ್ಲಿ ನಮ್ಮ ರಾಜ್ಯ 5 ನೇ ಸ್ಥಾನ ಪಡೆದಿದೆ. ಲೋಕಾಯುಕ್ತ ಸಂಸ್ಥೆ ಸರ್ಕಾರದ ಅದೀನದಲ್ಲಿ ಇಲ್ಲ. ಲೋಕಾಯುಕ್ತ ಸಂಸ್ಥೆ ಸ್ವಂತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ನಮ್ಮ ಸಂಸ್ಥೆಯ ಮೂಲ ಉದ್ದೇಶ ಹಳ್ಳಿಯಿಂದ ಡೆಲ್ಲಿಯವರೆಗೂ ಆಡಳಿತ ಚೆನ್ನಾಗಿ ಮಾಡಬೇಕೆನ್ನುವುದೇ ಉದ್ದೇಶ. ಇದೇ ಸಮಯದಲ್ಲಿ ಹಕ್ಕು , ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು.
ಕಳೆದ ಎರಡು ತಿಂಗಳ ಹಿಂದೆ ತಾಲೂಕಿಗೆ ಬೇಟಿ ನೀಡಿದ ಸಂದರ್ಭದಲ್ಲಿ ದೂರುಗಳಲ್ಲಿ ವಿವಿದ ಇಲಾಖೆಗಳ 101 ದೂರುಗಳು ವಿಲೇವಾರಿ ಆಗಿದ್ದು, ಉಳಿದಂತೆ ಬಾಕಿ ಇರುವ ದೂರುಗಳನ್ನು ಅತಿ ಶೀಘ್ರವಾಗಿ ಪರಿಹಾರ ಮಾಡಿಸುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರರವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ ಸಾರ್ವಜನಿಕರ ಸ್ಪಂದಿಸಿ , ಸಮಸ್ಯೆಗಳನ್ನು ಆಲಿಸಿ, ಆಗಿಂನ್ದಾಗೆ ಪರಿಹಾರ ಮಾಡುವ ಪಕ್ರಿಯೆ ಅಭ್ಯಾಸ ಬೆಳಸಿಕೊಳ್ಳಬೇಕು . ತಾವು ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಿದ್ದು, ಅವರ ಸಮಸ್ಯೆಗಳನ್ನು ಆಲಿಸುವಂತಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡುವುದರಲ್ಲಿ ಅಸಡ್ಡೆ ತೋರಿಸಬಾರದು ಎಂದು ಎಚ್ಚರಿಸಿದರು.
ದಲ್ಲಾಲಿಗಳನ್ನು ಬದೆಗೊಟ್ಟು , ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಳ್ಳವುದು ರೂಡಿಸಿಕೊಳ್ಳಬೇಕು. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಯ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳುವ ಅವಕಾಶವಿದೆ. ಅದನ್ನು ಬಿಟ್ಟು ಮಧ್ಯವರ್ತಿಗಳ ಬಳಿ ಹೋದರೆ ಎರಡು ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಭ್ರಷ್ಟಾಚರಕ್ಕೆ ಯಾವುದೇ ಕಾರಣಕ್ಕೂ ಕುಮ್ಮಕು ಕೊಡಬಾರದು ಎಂದು ಸಾರ್ವಜನಿಕರಿಗೆ ಕಿವಿ ಮಾತುಹೇಳಿದರು.
ಕೋಲಾರ ಜಿಲ್ಲೆಯನ್ನು ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹಾರ ಮಾಡುವದೇ ಎಲ್ಲರ ಮೊದಲ ಆದ್ಯತೆ ಆಗಬೇಕಾಗಿದೆ ಎಂದರು. ಈ ಕಾರ್ಯಕ್ರಮ ಮೂಲ ಉದ್ದೇಶ ಉಪಲೋಕಾಯುಕ್ತರು ರಾಜ್ಯದಲ್ಲಿ ನಮ್ಮ ಜಿಲ್ಲೆಯು ಎಲ್ಲಾ ರೀತಿಯಲ್ಲಿ ಉತ್ತಮವಾಗಿಸುವ ಉದ್ದೇಶವನ್ನು ಹೊಂದಿದ್ದು, ಅದಕ್ಕೆ ಸಾರ್ವಜನಿಕರು, ಅಧಿಕಾರಿಗಳು ಕೈಜೋಡಿಸಬೇಕು ಎಂದರು.
ಪಶುಇಲಾಖೆ ಜಂಟಿ ನಿರ್ದೇಶಕ ಎಸ್.ಎಂ.ಶ್ರೀನಿವಾಸ್, ಉಪವಿಭಾಗಧಿಕಾರಿ ಡಾ.ಮೈತ್ರಿ, ಮದುಗಿರಿ ತಹಶೀಲ್ದಾರ್ ಶರೀನ್ತಾಜ್, ಲೋಕಾಯುಕ್ತ ನ್ಯಾಯಮೂರ್ತಿ ಆರವಿಂದ್ ಎನ್.ವಿ, ಎಸ್ಪಿ ಆಟೋನಿಜಾನ್, ಡಿವೈಎಸ್ಪಿ ಎಸ್.ಸುದೀರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಸರ್ವೇಶ್, ಚಿಂತಾಮಣ ಇಒ ಎಸ್.ಆನಂದ್, ಬಂಗಾರಪೇಟೆ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ಶಿವಕುಮಾರಿ, ಲೋಕಾಯುಕ್ತ ಪಿಐ ಗಳಾದ ಆಂಜನಪ್ಪ, ರೇಣುಕ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಹಾಗು ವಿವಿಧ ಇಲಾಖೆಗಳ ಇಲಾಖಾಧಿಕಾರಿಗಳು ಇದ್ದರು.

